Tuesday, February 26, 2013

ಎಲ್ಲಿದೆ ಪಗಡೆ , ಕಿರಿಟಗಳ ಚಿತ್ತಾರಗಳು ?


ಈ ಚಿತ್ರ ನೋಡಿ.


http://epapervijayavani.in/Details.aspx?id=4188&boxid=33651421



ಯಕ್ಷಗಾನದ ಎರಡು ಕಣ್ಣುಗಳು - ತೆಂಕು, ಬಡಗು ಪ್ರಕಾರಗಳು. ಈ ಸಭೆಯ ಹಿನ್ನೆಲೆಯಲ್ಲಿ ಪ್ರಸ್ತುತ ಪಡಿಸಿರುವ ವರ್ಣಿಕೆ ಈ ಎರಡು ಪ್ರಕಾರಗಳನ್ನು ಪ್ರತಿನಿಧಿಸುತ್ತಿದೆಯೇ?



ಎಲ್ಲಿದೆ   ಪಗಡೆ , ಕಿರಿಟಗಳ ಚಿತ್ತಾರಗಳು ?



ಕಲೆಯ ವ್ಯಕ್ತನೆಗಳಲ್ಲೂ ರಾಜಕೀಯವೇ? ಇಲ್ಲೂ ಸ್ವಹಿತ ಪ್ರಭಾವಳಿಯೇ ? ಮನುಷ್ಯ ಇಂದು ಈ ಮಟ್ಟಕ್ಕೆ ಇಳಿದಿದ್ದಾನೆಯೆ ? ಅದರಲ್ಲೂ ಗಂಡುಮೆಟ್ಟಿನ ಕಲೆ ಎಂದೆಲ್ಲ ಕೊಂಡಾಡುವ ಕಲಾಭಿಮಾನಿಗಳಲ್ಲಿ ಅಭಿಮಾನವೆಂಬುದು ಬತ್ತಿ ಹೋಗಿದೆಯೇ ?



ಅಧ್ಯಕ್ಷ   ಎಂ.ಎಲ್.ಸಾಮಗ ರಂತವರಿಗೆ ಈ ವಿಚಾರಗಳು ಹೊಳೆಯುವದಿಲ್ಲವೇ?  ಇಲ್ಲ ದೊಡ್ಡ ಖುರ್ಚಿ ಏರಿದಂತೆಲ್ಲ ಸಣ್ಣತನಗಳು ಕಾಡಿ ಕಾಡಿ ಜೊತೆ ಬಿಡದೆ ಈ ರೀತಿ ಭೇಧ ಭಾವ ತೋರುವದೇ? ಸಭೆ ಸಮಾರಂಭಗಳಲ್ಲಿ ಭಾಷಣಗಳಲ್ಲಷ್ಟೇ ಎಲ್ಲರೂ ಒಂದಾಗಿ, ಯಕ್ಷಗಾನ ಕಲೆ ಉಳಿಸಿ , ಬೆಳೆಸಿ ಎಂದು ಭಾವಾವೇಶದ ಭಾಷಣ   ಮಾಡಿ , ಕೆಲಸಗಳಲ್ಲಿ ಸಣ್ಣತನ ತೋರುವದೇ ಇಂದಿನ ಮುಂದಾಳುಗಳ ಜಾಯಮಾನವಾಗಿದೆಯೇ?



ಇದು ಕೇವಲ ಚಿತ್ರವೊಂದನ್ನು ನೋಡಿ ಬಂದ ಭಾವನೆಗಳ ವ್ಯಕ್ತನೆ. ಇನ್ನು ನಿನ್ನೆಯ ಸಭೆಗೆ ಹೋಗಿದ್ದರೆ ಎಂತೆಂತಹ ವಿಪರ್ಯಾಸಗಳು ಗಮನಕ್ಕೆ ಬರುತ್ತಿದ್ದವೋ ?



ಹರಿಹರ ಭಟ್, ಬೆಂಗಳೂರು.
ಶಿಕ್ಷಕ, ಚಿಂತಕ, ವಿಮರ್ಶಕ, ಫೇಸ್ ಬುಕ್ ಬರಹಗಾರ.
www.hariharbhat.blogspot.com
February 27, 2013.


No comments:

Post a Comment