Tuesday, November 19, 2013

About : Shree Akhila Havyaka Mahasabha ® Bangalore.

About  :   Shree Akhila Havyaka Mahasabha ® Bangalore.


ಶ್ರೀ ಅಖಿಲ ಹವ್ಯಕ ಮಹಾಸಭಾ ಬೆಂಗಳೂರು ಇದರ ಮಲ್ಲೇಶ್ವರದಲ್ಲಿರುವ ಕಟ್ಟಡವನ್ನು ಉರುಳಿಸಿ ನೆಲಸಮ ಮಾಡಿ ಇಟ್ಟಿದ್ದು ನಿಮ್ಮೆಲ್ಲರ ಗಮನದಲ್ಲಿದೆ ತಾನೇ?


ಕಟ್ಟಡದ ಪುನರ್ ನಿರ್ಮಾಣಕ್ಕೆ ನಿಮ್ಮೆಲ್ಲರಲ್ಲಿ ಹಣದ ಸಹಾಯ ಕೇಳಲು ಬರುತ್ತಿದ್ದಾರೆ, ಬರುವವರಿದ್ದಾರೆ ತಾನೇ? ಆಗ ಪದಾಧಿಕಾರಿಗಳಿಗೆ ಈ ಪ್ರಶ್ನೆಗಳನ್ನು ಕೇಳಲು ಮರೆಯದಿರಿ:


೧. ಸಾಕಷ್ಟು ಮೊತ್ತದ  ಆದಾಯವನ್ನು ತರುತ್ತಿರುವ ಕಟ್ಟಡವನ್ನು ಪುನರನಿರ್ಮಾಣಕ್ಕೆ ಬೇಕಾದ ಹಣ ಸಂಗ್ರಹವಾಗುವ ಮುನ್ನ ಕೆಡವುವಂತಹ ಅವಶ್ಯಕತೆ ಏನಿತ್ತು?  ವಸತಿಗೃಹದಲ್ಲಿರುವ ವಿಧ್ಯಾರ್ಥಿಗಳನ್ನು ಅವಧಿಗೆ ಮುನ್ನ ತೆರವುಗೊಳಿಸುವ ಅವಶ್ಯಕತೆ ಯಾಕಿತ್ತು?



೨.  ಕಟ್ಟಡ ನಕ್ಷೆ ತಯಾರಿ ಮಾಡಿ ಪೂರ್ವಾನುಮತಿ ಪಡೆಯುವ ಹಂತದಲ್ಲಿ ಎಡವಿದ್ದೇಕೆ?  ಅಲ್ಲಲ್ಲಿ ಕೇಳಿಬಂದಂತೆ ಒಮ್ಮೆ ಅರವತ್ತೈದು ಸಾವಿರ ರೂಪಾಯಿ ಖರ್ಚು ಮಾಡಿ ಪಡೆದ ಪೂರ್ವಾನುಮತಿಯನ್ನು ಪುನಃ ಪರಿಶೀಲನೆಗೊಳಪಡಿಸಿ ಮತ್ತೆ ನಲವತ್ತೈದು ಸಾವಿರ ರೂಪಾಯಿ ಖರ್ಚು ಮಾಡುವ ಪ್ರಸಂಗವನ್ನು ತಂದಿತ್ತವರು ಯಾರು ಎಂಬುದನ್ನೇಕೆ ಸಾರ್ವಜನಿಕ ಪಡಿಸಲಿಲ್ಲ?  ಈ ರೀತಿ ಅಜಾಗರೂಕತೆಯಿಂದ ಸಮಾಜ ಬಾಂಧವರ ಹಣ ವ್ಯರ್ಥವಾದರೂ ಆ ರೀತಿಯ ಜನರನ್ನೇ ಏಕೆ ಅವಲಂಬಿಸಿ ಜವಾಬ್ದಾರಿ ಸ್ಥಾನದಲ್ಲಿ ಮುಂದುವರಿಸುತ್ತೀರಿ? ಇಲ್ಲಿ ಪದಾಧಿಕಾರಿಗಳ ಸ್ವ ಹಿತ ಅಡಗಿರುವದಾದರೂ ಏನು


೩.  ೨೦೧೩ ರಲ್ಲಿ ನಡೆದ ಚುನಾವಣೆಗೆ ಮತ್ತು ವಾರ್ಷಿಕ ಮಹಾಸಭೆಗೆ ಪೋಲಿಸ್ ರಕ್ಷಣೆ ಪಡೆಯುವಂತೆ ಸಂದರ್ಭಗಳನ್ನು ತಂದಿತ್ತ ಪದಾಧಿಕಾರಿಗಳ ಆಡಳಿತ ರೀತಿ ಹೇಸಿಗೆ ಹುಟ್ಟಿಸುವಂತಿಲ್ಲವೇ? ಜಗತ್ತಿನಲ್ಲೆಲ್ಲ ಸುಭಗರು, ಸೌಮ್ಯ ಮನೋಭಾವದ ಜನಾಂಗ , ಸುಸಂಕೃತರು, ವಿದ್ಯಾವಂತರು, ಸಹೃದಯಿಗಳು , ಶಾಂತಿಪ್ರಿಯರು ಎಂದೆಲ್ಲ ಶತಶತಮಾನಗಳಿಂದ ಹೆಸರುವಾಸಿಯಾದ ಸಮಾಜಕ್ಕೆ ಕಳಂಕ ತಂದಿರಲ್ಲವೇ


೪. ಏನಕೇನ ಪ್ರಕಾರೇಣ ಖುರ್ಚಿಯನ್ನುಳಿಸಿಕೊಳ್ಳಬೇಕು , ಗುಪ್ತ ಗುಪ್ತವಾಗಿ ಬಚ್ಚಿಟ್ಟ ಮಾಹಿತಿಗಳು ಹೊರಬರಬಾರದು ಎಂದು ತಮ್ಮ ಕೇರಿಯ, ಊರಿನ , ಯಾವುದೇ ಮೀಟಿಂಗ ಗಳಿಗೆ ಬರದ, ಬಂದರೂ ಎಲ್ಲ ಸುಮ್ಮನೆ ಹ್ನೂ ಎನ್ನಬಹುದಾದವರನ್ನೇ ಆಯ್ದು ಆಯ್ದು ಅಧಿಕಾರ ಬಲದಿಂದ ಸ್ಥಾನವನ್ನುಳಿಸಿಕೊಳ್ಳುವ ಹಪಾ ಹಪಿ ಯಿಂದ ಒಟ್ಟಾರೆ ಸಮಾಜಕ್ಕೆ ಹಾನಿಯಾಗುತ್ತಿದೆಯಲ್ಲವೇ


೫.  ಯಾವುದೇ ಸಾಮಾನ್ಯ ಸದಸ್ಯನೊಬ್ಬ ನಿಮ್ಮ ಕಾರ್ಯ ರೀತಿ ಕುರಿತು ಆಸಕ್ತಿ ವಹಿಸಿ ವಿಚಾರಿಸಿದರೆ ಸೂಕ್ತ ಮಾಹಿತಿ ನೀಡುವ ವ್ಯವಸ್ಥೆಯನ್ನೇ ಹೊಂದಿಲ್ಲ. ಕೇವಲ ಕಾನೂನಿಗೋಸ್ಕರವಾಗಿ ಕಣ್ಣುಮುಚ್ಚಾಲೆಯ ಲೆಕ್ಕ  ಪತ್ರಗಳು , ಆಂತರಿಕ ವರದಿ , ವಾರ್ಷಿಕ ಸಭೆ ಎಂದು ಅಧಿಕಾರದ ದರ್ಪವನ್ನು ತೋರ್ಪಡಿಸುತ್ತೀರಿ. ಮಾತನಾಡುವವನ ಧ್ವನಿ  ಅಡಗಿಸುವ ತಂತ್ರಗಳನ್ನೆಲ್ಲ ಕಾರ್ಯಗತ ಮಾಡಿದ್ದೀರಿ ಎಂದು ಸ್ವಾಭಾವಿಕವಾಗಿ ತೋರ್ಪಡುವದು. ನಮ್ಮ ಸಮಾಜಕ್ಕೆ ಇವೆಲ್ಲ ಶೋಭೆ ತರಬಲ್ಲುದೇ ?


೬. ಒಟ್ಟಾರೆ ದೇಶದ ಜನಸಂಖ್ಯೆಯನ್ನು ಗಮನಿಸಿದರೆ ನಮ್ಮ ಸಮಾಜ ಕಡಿಮೆ ಜನ  ಸಂಖ್ಯೆಯನ್ನು ಹೊಂದಿದೆ. ಈ ಸಮಾಜದಲ್ಲೇ ಹತ್ತಾರು ಚುರುಕಾಗಿ ಕಾರ್ಯ ನಿರ್ವಹಿಸುತ್ತಿರುವ ಸಂಘ ಸಂಸ್ಥೆಗಳಿವೆ. ಅದೇ ರೀತಿ ವಿವಿಧ ರೀತಿಯ ಶಿಕ್ಷಣ ಪಡೆದ , ವಿವಿಧ ರೀತಿಯ ಉದ್ಯೋಗ ಕೈಗೊಂಡಿರುವ ಸಮಾಜಬಾಂಧವರನ್ನು ಒಗ್ಗೂಡಿಸುವ ಯಾವ ಕಾರ್ಯಗಳೂ ಈ ಸಂಸ್ಥೆಯಿಂದ ತೋರಿಬರುತ್ತಿಲ್ಲ.  ಶಾಲೆಯೊಂದರ ಚಟುವಟಿಕೆಗಳಂತೆ ಆಟೋಟ, ವರ್ಷದಲ್ಲಿ ಹತ್ತಾರು ವಿವಾಹ ಮಾಹಿತಿ ಬೈಠಕ್ಕಗಳು , ವರ್ಷಕ್ಕೊಮ್ಮೆ ಪುಸ್ತಕಗಳನ್ನು ಕೊಳ್ಳಲೂ  ಸಾಲದಾದಂತ ವಿಧ್ಯಾರ್ಥಿ ವೇತನಗಳು ಇವುಗಳನ್ನು ನೆಚ್ಚಿ ಚಟುವಟಿಕೆಗಳನ್ನು ಕೈಗೊಳ್ಳುವ ನಿಮ್ಮ ಮುಂದಾಳತ್ವವನ್ನು ಏಕೆ ಮತ್ತು ಹೇಗೆ ಮೆಚ್ಚಬೇಕು ? ಹಣಕಾಸು ವ್ಯವಹಾರದ ಸೂಕ್ತ ರೀತಿಯ ಪಾರದರ್ಶಕತೆ , ಎಲ್ಲ ರೀತಿಯ ಔದ್ಯೋಗಿಕ  ಚಟುವಟಿಕೆಗಳಲ್ಲಿ ತೊಡಗಿಕೊಂಡ ಸಮಾಜ ಬಾಂಧವರ ಪ್ರತಿನಿಧಿತ್ವ ಆಡಳಿತ ಮಂಡಳಿಯಲ್ಲಿ ಇಲ್ಲದಿರುವಿಕೆ , ಹತ್ತಾರು ವರ್ಷಗಳಿಂದ ಅದೇ ನಿರ್ದೇಶಕರು ಮುಂದುವರಿದಿರುವಿಕೆ ಇತ್ಯಾದಿ ಅಂಷಗಳನ್ನೆಲ್ಲ ಗಣನೆಗೆ ತೆಗೆದುಕೊಂಡಾಗ ಪ್ರಸಕ್ತ ಮುಂದಾಳತ್ವದಲ್ಲಿ ಸಮಾಜ ಬಾಂಧವರಿಗೆಲ್ಲ  ವಿಶ್ವಾಸದ  ಕೊರತೆ ಸಹಜವಲ್ಲವೇ ? ಇಲ್ಲದಿದ್ದರೆ ಅರವತ್ತೆರಡು   ವರ್ಷಗಳ ಇತಿಹಾಸವಿರುವ  ಈ ಸಂಸ್ತೆ ಪ್ರವರ್ಧಮಾನಕ್ಕೆ ಬರದಿರುತ್ತಿತ್ತೇ ?


೭. ಸಮಾಜದಲ್ಲಿ ಅಸಹಾಯಕರು, ಆರ್ಥಿಕವಾಗಿ ಹಿಂದುಳಿದವರು , ಈ ರೀತಿ ಜನಗಳಿಗೆ ಸಾಮಾಜಿಕ ಸಂಸ್ಥೆಗಳಿಂದ ಸೂಕ್ತ ಸಹಾಯ ಸೌಲಭ್ಯಗಳ ಅವಶ್ಯಕತೆಯಿರುತ್ತದೆ. ಈಗ ಹಾಲಿ ನೀವು ನಡೆಸುತ್ತಿರುವ ಯಾವ ವಿಧ್ಯಾರ್ಥಿನಿಲಯಗಳಲ್ಲಿ ಎಷ್ಟು ಅಸಹಾಯಕ ಬಡ ಮಕ್ಕಳಿಗೆ ಉಚಿತ ಸೌಲಭ್ಯ  ನೀಡಿದ್ದೀರಿ? ಸಮಾಜ ಬಾಂಧವರಿಂದ ಸಂಗ್ರಹಿಸಿದ ಹಣದಿಂದ  ವಿಧ್ಯಾರ್ಥಿನಿಲಯಗಳನ್ನು ಕಟ್ಟಿ ಉಳ್ಳವರ ಮಕ್ಕಳಿಗೆ ಸೌಲಭ್ಯ  ಒದಗಿಸಿ ಆದಾಯದ ಮೂಲ ವರ್ಧಿಸಬೇಕೆಂಬ ನಿಮ್ಮ ಧೋರಣೆಯನ್ನು ನಾವ್ಯಾಕೆ ಅನುಮೋದಿಸಿ ಹಣಕಾಸಿನ ದೇಣಿಗೆ ನೀಡಬೇಕು?


  ಈ ರೀತಿ ಹತ್ತಾರು ಪ್ರಶ್ನೆಗಳನ್ನು ಕೇಳುವ ಅಧಿಕಾರ , ಜವಾಬ್ದಾರಿ ಎಲ್ಲ ಸಾಮಾನ್ಯ ಸದಸ್ಯರಿಗೆ ಇರುತ್ತದೆ. ಅದೇ ರೀತಿ ಸಾಮಾನ್ಯ ಸದಸ್ಯರು ಜಾಗ್ರತರಾಗಿದ್ದಲ್ಲಿ ಪದಾಧಿಕಾರಿಗಳು ಜವಾಬ್ದಾರಿಯಿಂದ ನಡೆದುಕೊಳ್ಳುವ ಅರಿವು ಉಂಟಾಗುತ್ತದೆ. ಸಮಾಜ ಅಭಿವೃದ್ಧಿ ಕಾಣುತ್ತದೆ. ಅಭಿವೃದ್ಧಿಯಾದ ಸಮಾಜ ಸುಖ , ನೆಮ್ಮದಿಗಳಿಂದ  ಮಿನುಗುತ್ತದೆ. ತಪ್ಪಿದಲ್ಲಿ ಪದಾಧಿಕಾರಿಗಳಷ್ಟೇ ಮಿನುಗುತ್ತಾರೆ ಮತ್ತು ಒಮ್ಮೆ ಮಿನುಗುವ ಬೆಳಕಿನ ಅಭಿಲಾಷೆ ಪಡೆದರೆ ಇನ್ಯಾರೂ ಹತ್ತಿರ ಸುಳಿಯದಂತೆ ವ್ಯೂಹ ರಚಿಸುತ್ತಿರುತ್ತಾರೆ. 


ಸದಸ್ಯರಾಗಿದ್ದವರ ಮನೆಗಳಿಗೆಲ್ಲ ಬಂದ ಹವ್ಯಕ ಪತ್ರಿಕೆ ಸಂಚಿಕೆಯಲ್ಲಿರುವ ಪದಾಧಿಕಾರಿಗಳ ಗುಣ ವಿಶೇಷತೆಗಳನ್ನು ಕಂಡುಕೊಳ್ಳಿ . ನಿಮಗೆಲ್ಲ ನನಗಿಂತ ಹೆಚ್ಚಿನ ಅರಿವು ಇದೆ. ನಿಮ್ಮ ಭೆಟ್ಟಿಗೆ ಪದಾಧಿಕಾರಿಗಳು ಬಂದಾಗ ನಮ್ಮೂರಿನವ, ನಮ್ಮ ಕೇರಿಯವ, ನಮ್ಮ ಮಗ, ನಮ್ಮ ಬಾಂಧವ ಎಂಬುದನ್ನು ನೆನಪಿಸಿಕೊಂಡು ಟೀ , ಕಾಫಿ ಯೊಂದಿಗೆ ಸತ್ಕರಿಸಿ. ದೇಣಿಗೆಯ ಆಶ್ವಾಸನೆ ನೀಡುವ ಮುನ್ನ ಈ  ಮೇಲೆ ಹೇಳಿದ ಎಲ್ಲ ವಿಚಾರಗಳನ್ನು ಅವರೊಂದಿಗೆ ಕೂಲಂಕುಶವಾಗಿ ಪ್ರಶ್ನಿಸಿ , ಸಮಾಜದಲ್ಲಿ ಸಂಘಟನೆಗೆ ಸ್ಪಂದಿಸಿ ಎಂಬ ಅರಿಕೆ. 


ನಮ್ಮ ಸಮಾಜ ಬಾಂಧವರ ಸಂಖ್ಯೆ ನಾಲ್ಕರಿಂದ ಐದು ಲಕ್ಷ ಎಂದು ಒಂದು ಅಂಬೋಣ. ಅಂದರೆ ಸಾಮಾನ್ಯವಾಗಿ ನಲವತ್ತೈದರಿಂದ ಅರವತ್ತು ಸಾವಿರ ಕುಟುಂಬಗಳಿರಬಹುದು. ಈ ಶ್ರೀ ಅಖಿಲ ಹವ್ಯಕ ಮಹಾಸಭಾ ದ ಸದಸ್ಯ ಸಂಖ್ಯೆ  ಕೇವಲ ಹದಿನಾರು , ಹದಿನೇಳು ಸಾವಿರಗಳು ಮಾತ್ರ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರಾಗಿ. ಹೆಚ್ಚು ಹೆಚ್ಚು ಸೂಕ್ತವಾದ ಪ್ರಶ್ನೆಗಳನ್ನು ಕೇಳುವ ಅಭ್ಯಾಸ ಬೆಳೆಸಿಕೊಂಡು , ಜವಾಬ್ದಾರಿಯುತ ಪದಾಧಿಕಾರಿಗಳನ್ನು ಸಂಘಟನೆಗೆ ನೀಡಿ ಎಂಬ ಬಿನ್ನಹ. 


ಈ ಅಹವಾಲನ್ನು ಎಲ್ಲ ಹವ್ಯಕರಿಗೆ, ಎಲ್ಲ ಹವ್ಯಕ ಕುಟುಂಬಗಳಿಗೆ ತಲುಪಿಸುವ  ಜವಾಬ್ದಾರಿ  ತಮ್ಮದೆಲ್ಲರದ್ದಾಗಿದೆ. ಪ್ರಯತ್ನಪೂರ್ವಕವಾಗಿ ಈ ವಿಚಾರಗಳನ್ನು ಹೆಚ್ಚು  ಹೆಚ್ಚು ಪ್ರಚಾರ ಮಾಡಿ, ಪದಾಧಿಕಾರಿಗಳನ್ನು ಪ್ರಶ್ನಿಸುವ ಮನೋಭಾವವನ್ನು ಸಮಾಜ ಬಾಂಧವರಲ್ಲೆಲ್ಲಾ ಬೆಳೆಸಿ ಎಂಬ ಅರಿಕೆಯೊಂದಿಗೆ,


ಹರಿಹರ . ಎಸ್.  ಭಟ್ , ಬೆಂಗಳೂರು. 
ಶ್ರೀ ಅಖಿಲ ಹವ್ಯಕ ಮಹಾಸಭಾ ಬೆಂಗಳೂರು ಇದರ ಸಾಮಾನ್ಯ ಸದಸ್ಯ. 

ನವೆಂಬರ್ ೨೦, ೨೦೧೩.   


Friday, October 4, 2013

Let our journalism friends introspect.

ಜನರನ್ನು  ಬೇಸ್ತು ಬೀಳಿಸುವ ಸುದ್ದಿ ಮಾಧ್ಯಮಗಳು ಮತ್ತು ಟೀ . ವಿ ವಾಹಿನಿಗಳು .


ಈ ದಿನಗಳಲ್ಲಿ ಯಾವುದೇ ಸುದ್ದಿ ಮೂಲಗಳ ಸತ್ಯಾಸತ್ಯತೆಯನ್ನು ಅರಿಯುವ ಗೋಜಿಗೆ ಹೋಗದೆ , ಟಿ. ಆರ್. ಪಿ ಹೆಚ್ಚಿಸುವ ಒಂದೇ ಉದ್ದೇಶದಿಂದ ಯಾರೋ ಪುಂಡ ಪೋಕರಿಗಳು ನೀಡುವ  ಸುದ್ದಿಯನ್ನು ಆಧರಿಸಿ ಕೂಡಲೇ ಪ್ರಸಾರ ಮಾಡುವ ತೆವಲಿನಿಂದ ಸುದ್ದಿ ಮಾಧ್ಯಮಗಳು ಹೊರ ಬರಬೆಕಾಗಿದೆ . ಅಲ್ಲದೆ ತಾವು ಮಾಡಿದ ತಪ್ಪುಗಳನ್ನು ಮುಚ್ಚಿ ಹಾಕಲು ಅನುಕೂಲವಾಗುವಂತೆ ಎರಡು ಮೂರು ಸುದ್ದಿ ವಾಹಿನಿಗಳು, ಪತ್ರಿಕೆಗಳು ಮುಂತಾದವುಗಳ ಒಡೆತನ ಹೊಂದಿ, ಒಂದೆಡೆ ನೀಡಿದ ಸುದ್ದಿ ಸುಳ್ಳೆಂದು ಜಗ ಜಾಹೀರಾದಾಗ , ಆ ಸುದ್ದಿ ಸುಳ್ಳೆಂದು ತಿಳಿದುಬಂದಿದೆಯೆಂದು ಇನ್ನೊಂದು ತಮ್ಮದೇ ಒಡೆತನದ ಸುದ್ದಿ ಮಾದ್ಯಮದಲ್ಲಿ ಪ್ರಕಟಿಸಿ , ತಮ್ಮ ಅಜಾಗರೂಕತೆಯನ್ನು ಮುಚ್ಚಿಹಾಕುವ ಪ್ರವ್ರತ್ತಿ ಜಾಸ್ತಿಯಾಗುತ್ತಿದೆ.



ಮಾಧ್ಯಮ ಮಿತ್ರರ ಈ   ಟಿ.  ಆರ್. ಪಿ  ತೆವಲುಗಳನ್ನು ದುರುಪಯೋಗಪಡಿಸಿಕೊಂಡು ಸಮಾಜ ಘಾತುಕ ವ್ಯಕ್ತಿಗಳು, ರಾಜಕೀಯ ವಿರೋಧಿಗಳ ವಿರುದ್ಧ ಪಿತೂರಿ ನಡೆಸಿ ತಮ್ಮ ಬೇಳೆ ಬೇಯ್ಸಿಕೊಳ್ಳುವ ಕುಟಿಲ ರಾಜಕಾರಣಿಗಳು........ ಇತ್ಯಾದಿ ವ್ಯವಸ್ಥೆಯ ದುರುಪಯೋಗಪಡಿಸಿಕೊಳ್ಳುತ್ತಿರುವದು ಆಘಾತಕಾರಿ ವಿಚಾರ.



ಆದರಿಂದ ತಮ್ಮ ಮೇಲೆ ಸದಾ ಸ್ವನಿಯಂತ್ರಣ ಹೊಂದಿರಲಿ, ಸಮಾಜಕ್ಕೆ ಪತ್ರಿಕಾ ಮಿತ್ರರಿಂದ ಒಳ್ಳೆಯ ಸಂದೇಶಗಳು ರವಾನಿಸಲ್ಪಡಲಿ, ಸ್ವಸ್ತ  ಸಮಾಜ ಕೆಡಲು ಪತ್ರಿಕಾ ಮಿತ್ರರ ಕೊಡುಗೆ ಇರದಿರಲಿ ಮತ್ತು ಈ ದಿಶೆಯಲ್ಲಿ  ಪತ್ರಿಕಾ ಮಿತ್ರರು  ಸ್ವ ಅವಲೋಕನ ಮಾಡಿಕೊಳ್ಳಲಿ ಎಂಬ ಸದಾಶಯ ಇಂದಿನ ಕಾಲಘಟ್ಟದಲ್ಲಿ  ಬಹು ಪ್ರಸ್ತುತವಾಗುತ್ತಿದೆ.



ಹರಿಹರ ಭಟ್, ಬೆಂಗಳೂರು .
ಶಿಕ್ಷಕ, ಚಿಂತಕ, ವಿಮರ್ಶಕ
ಸೆಪ್ಟೆಂಬರ್ ೦೫ , ೨೦೧೩
www.facebook.com/hariharsatyanarayan.bhat
www.hariharbhat.blogspot.com

Saturday, September 28, 2013

ನಿಮ್ಮ ಏ. ಟಿ . ಎಂ ಕಾರ್ಡ್ ಬಗೆಗೆ ನೀವೆಸ್ಟು ತಿಳಿದಿದ್ದೀರಿ ?

                                     ನಿಮ್ಮ ಏ. ಟಿ . ಎಂ ಕಾರ್ಡ್ ಬಗೆಗೆ ನೀವೆಸ್ಟು ತಿಳಿದಿದ್ದೀರಿ ?


ನಿಮ್ಮ ಏ. ಟಿ . ಎಂ ಕಾರ್ಡ್ ಬಗೆಗೆ ನೀವೆಸ್ಟು ತಿಳಿದಿದ್ದೀರಿ ? ಇಂದು ಎಲ್ಲರ ಕೈಲೂ ಏ. ಟಿ. ಎಂ ಕಾರ್ಡ್ ಇದ್ದೇ ಇರುತ್ತದೆ. ಸಾಧಾರಣವಾಗಿ ಪ್ರಯಾಣ ಸಮಯದಲ್ಲಿ, ಯಾವುದಾದರೂ ಶಾಪಿಂಗ್ ಮಾಡುವ ಸಂದರ್ಭದಲ್ಲಿ ಕಾರ್ಡ್ ಕಳೆಯುವ ಸಾಧ್ಯತೆಗಳಿವೆ. ಆಗ ಒಮ್ಮೆಲೇ ನಾವು ಗಾಬರಿಯಾಗುತ್ತೇವೆ. ಕೆಲವೊಮ್ಮೆ ನಮ್ಮ ಅಜಾಗರೂಕತೆಯಿಂದ ಕಾರ್ಡ್ ಎಲ್ಲೆಲ್ಲೋ ಬಿಟ್ಟಿರುತ್ತೇವೆ. ಹಾಗಾಗಿ ಏ. ಟಿ. ಎಂ ಕಾರ್ಡ್ ಬಗ್ಗೆ ನಾವು ತೆಗೆದುಕೊಳ್ಳಬೇಕಾಗ ಮುನ್ನೆಚ್ಚರಿಕೆಯ ಕ್ರಮಗಳನ್ನು ಮತ್ತು ಅವುಗಳ ಬಗೆಗಿನ ಮಾಹಿತಿ ಪಡೆಯೋಣ.


ಯಾವುದೇ ರೀತಿಯ ಎಸ್. ಎಮ್. ಎಸ್ ಗಳು , ಮೇಲ್ ಗಳು ಬಂದರೂ ನಿಮ್ಮ ಏ.ಟಿ.ಎಮ್ ಕಾರ್ಡ್ ಮಾಹಿತಿಯನ್ನು ನೀಡಬೇಡಿ. ಅಲ್ಲದೆ ಬ್ಯಾಂ ಕ್ ಸಿಬ್ಬಂಧಿ ಅಥವಾ ಇನ್ಯಾರೇ ಪರಿಚಿತರು ಕೇಳಿದರೂ ಸಹ ನಿಮ್ಮ ಏ.ಟಿ.ಎಮ್ ಕಾರ್ಡ್ ವಿವರ / ಪಿನ್ ನಂಬರ್ / ಮಾಹಿತಿ ನೀಡಬೇಡಿ.


ನೀವು ಏ.ಟಿ.ಎಮ್ ನಿಂದ ಹಣ ತೆಗೆದಾಗ ಅಥವಾ ಇನ್ನ್ಯಾರೇ ಅನಧಿಕ್ರತವಾಗಿ ನಿಮ್ಮ ಖಾತೆಯಲ್ಲಿ ವ್ಯವಹಾರ ಮಾಡಿದರೆ ಅದರ ಮಾಹಿತಿ ಎಸ್.ಎಮ್.ಎಸ್ ಮೂಲಕ ಪಡೆಯುವ ಸೌಲಭ್ಯ ಇದೆ. ಈ ಸೌಲಭ್ಯ ಪಡೆಯಲು ನಿಮ್ಮ ಬ್ಯಾಂಕ್ ನಲ್ಲಿ ನಿಮ್ಮ ಮೊಬೈಲ್ ನಂಬರ್ ನ್ನು ದಾಖಲಾತಿ ಮಾಡಿ. 



ಮೊದಲನೇ ಸಲ ಬಳಸಿದ ಪಿನ್ ಬದಲಾಯಿಸಿ ಮತ್ತು ಆ ನಂತರ ಆಗಾಗ ಪಿನ್ ಬದಲಾಯಿಸುತ್ತಿರಿ. 



ಯಾವತ್ತೇ ಆದರೂ ಪಿನ್ ಬರೆದಿರುವ ಚೀಟಿಯನ್ನು ಕಾರ್ಡ್ ಜೊತೆ ಇಡಬೇಡಿ ಅಲ್ಲದೆ ಕಾರ್ಡ್ ಮೇಲೆ ಪಿನ್ ನಂಬರ್ ಬರೆಯಬೇಡಿ.

ಪಿನ್ ನೆನಪಿನಲ್ಲಿಡುವದೇ ಉತ್ತಮ ವಿಧಾನ. 



ಏ.ಟಿ.ಏಮ್ ಅಥವಾ ಅಂಗಡಿ ಗಳಲ್ಲಿ ಖರೀದಿ ಮಾಡುವಾಗ ಕೀ ಪ್ಯಾಡ್ ಮೇಲೆ ಕೈ ಮರೆ ಮಾಡಿ ಪಿನ್ ನಂಬರ್ ಒತ್ತಿ.


ನೀವು ಏ.ಟಿ.ಏಮ್ ರೂಮ್ನಲ್ಲಿರುವಾಗ ಯಾರನ್ನು ಒಳಪ್ರವೇಶಿಸಲು ಬಿಡಬೇಡಿ. ಅಪರಿಚಿತರ ಸಹಾಯವನ್ನು ಎಂದೂ ಅಪೇಕ್ಷಿಸಬೇಡಿ.



ಹೊಸ ಏ.ಟಿ.ಏಮ್ ಕಾರ್ಡ್ ಪಡೆದರೆ , ಹಳೆ ಕಾರ್ಡ್ ನ್ನು ಬ್ಲಾಕ್ ಮಾಡಿ ಮತ್ತು ಹಳೆ ಕಾರ್ಡ್ ನ್ನು ಹರಿದು ಹಾಕಿ. 



ಅಂಗಡಿಗಳಲ್ಲಿ, ಹೋಟೆಲ್ ಗಳಲ್ಲಿ, ಮಾಲ್ ಗಳಲ್ಲಿ ಏ.ಟಿ.ಏಮ್ ಕಾರ್ಡ್ ಬಳಸುವಾಗ ನೀವು ಎದುರು ನಿಂತಿರಿ , ಇನ್ನೆಲ್ಲಿಯೋ ಒಯ್ದು ಸ್ವೈಪ್ ಮಾಡಲು ಒಪ್ಪಬೇಡಿ.


ನೀವು ಪಡೆದ ರಸೀತಿ ಯನ್ನು ಏ.ಟಿ.ಏಮ್ ರೂಮ್ ನಲ್ಲಿ ಬಿಸಾಕಬೇಡಿ. ಜೊತೆಗೆ ತೆಗೆದುಕೊಂಡು ಹೋಗಿ ಹರಿದು ಇನ್ನೆಲ್ಲೋ ಬಿಸಾಕಿರಿ. 



ಯಾವಾಗಲಾದರೂ ಏ.ಟಿ.ಎಂ ಮಷೀನ್ ಗೆ ಇನ್ನೇನಾದರೂ ಹೆಚ್ಚಿನ ಚಿಕ್ಕ ಪುಟ್ಟ ಸಲಕರಣೆ ಜೋಡಿಸಿದ್ದು ಗಮನಕ್ಕೆ ಬಂದರೆ ಆ ಏ.ಟಿ.ಎಮ್ ನಲ್ಲಿ ವ್ಯವಹರಿಸಬೇಡಿ.


ನೀವು ಮಾಡಿದ ಏ.ಟಿ.ಎಮ್ ವ್ಯವಹಾರದ ಬಗ್ಗೆ ನಿಮ್ಮ ಪಾಸ್ ಬುಕ್ ಜೊತೆ ಆಗಾಗ ತುಲನಾತ್ಮಕವಾಗಿ ಅಭ್ಯಾಸ ಮಾಡಿ. 



ನಿಮ್ಮ ಏ.ಟಿ.ಎಮ್ ಕಾರ್ಡ್ ಕಳೆದರೆ ಸಮಯ ವ್ಯತ ಮಾಡದೆ ಕೂಡಲೇ ನಿಮ್ಮ ಕಾರ್ಡನ್ನು ಹಾಟ್ ಲಿಸ್ಟ್ ಗೆ ಸೇರಿಸಿ. 



ನಿಮ್ಮ ಏ.ಟಿ.ಎಮ್ ಕಾರ್ಡ್ ಕಳೆದಾಗ ಹಾಟ್ ಲಿಸ್ಟ್ ಗೆ ಸೇರಿಸಲು ನಿಮ್ಮ ಬ್ಯಾಂಕ್ ನ ದೂರವಾಣಿ ನಂಬರ್ ನ್ನು ನಿಮ್ಮೊಡನೆ ಸದಾ ಇರಿಸಿಕೊಳ್ಳಿ . 



ಕೆಲವು ಬ್ಯಾಂಕ್ ಗಳ ದೂರವಾಣಿ ಸಂಖ್ಯೆ , ಹಾಟ್ ಲಿಸ್ಟ್ ಗೆ ಸೇರಿಸಲು ಹೀಗಿದೆ : 



State Bank of India 1800-112211



State Bank of Mysore 1800 - 425 -3800 ; 1800 - 112211 ; 080 - 26599990



Canara Bank 1800 - 425 - 6000 ; 1800 - 425 - 07000



Corporation Bank 1800 - 425 - 2407 ; 080 - 26600587 ; 080 - 26602500



Syndicate Bank 1800 - 425 - 0585 ; 09483522433 



Vijaya Bank 1800 - 425 - 9992 ; 080 - 41133500



ಈ ರೀತಿಯಲ್ಲಿ ಕಾಳಜಿ ವಹಿಸಿರಿ. ಕಾರ್ಡ್ ಕಳೆದಾಗ ಗೊಂದಲವಾಗುವದು ಸಹಜವಾದುದು. ಆದರೆ ದೃತಿ ಗೆಡಬೇಡಿ. ಕೂಡಲೇ ಕಾರ್ಯಪೃವೃತ್ತರಾಗಿ. 



ನಿಮ್ಮ ಏ.ಟಿ.ಎಮ್  ಕಾರ್ಡ್ ಕಳೆದಾಗ , ಕಾರ್ಡ್ ಬ್ಲಾಕ್ ಮಾಡಲು ತಡ ಮಾಡಿದರೆ ಕಾರ್ಡ್ ಸಿಕ್ಕವರು ಕೂಡಲೇ ಬೇರೆ ಬೇರೆ ಅಂಗಡಿಗಳಿಗೆ ಹೋಗಿ ನಿಮ್ಮ ಕಾರ್ಡ್ ಸ್ವೈಪ್ ಮಾಡಿ ವಸ್ತುಗಳನ್ನು ಖರೀದಿ ಮಾಡುವ ಸಾಧ್ಯತೆಗಳು ಜಾಸ್ತಿ.  ಆದ ಕಾರಣ ನಿಮಗೆ ಆಗುವ ಹಾನಿ ತಪ್ಪಿಸಲು ಕಾರ್ಡ್ ಕಳೆದ ಕೂಡಲೇ , ಕಾರ್ಡ್ ಬ್ಲಾಕ್ ಮಾಡಿ. ತಡ ಮಾಡಬೇಡಿ, ನೆನಪಿರಲಿ. 


                                                                  **********

Monday, September 2, 2013

ದೊಡ್ಡವರ ಸಣ್ಣತನಗಳು.

ದಿನ  ಕಳೆದಂತೆ  ದೊಡ್ಡವರು, ಪ್ರಭಾವಿಗಳು ಎನ್ನುವವರು ಅತಿ ಸಂಕುಚಿತ ಮನೋಭಾವನೆಯನ್ನು ಸಾರ್ವಜನಿಕವಾಗಿ ಪ್ರದರ್ಶಿಸುತ್ತಿದ್ದಾರೆ. ಯಾಕೋ ಎನೋ ಸಮಾಜಕ್ಕೆ ಆದರ್ಶವಾಗಿರಬೇಕಾದವರೇ ಪಾಠ ಹೇಳಿಸಿಕೊಳ್ಳುವ ಸ್ಥಿತಿ ತಲುಪುತ್ತಿರುವದು ಶೋಚನೀಯ.


ನಿನ್ನೆಯೋ ಮೊನ್ನೆಯೋ , ದಿನಪತ್ರಿಕೆಯೊಂದರ ವರದಿಯಲ್ಲಿ,  ದೀಪಬೆಳಗುತ್ತಿರುವವರಲ್ಲಿ ಒಬ್ಬರಾದ ಕರ್ನಾಟಕದ ರಾಷ್ಟ್ರಮಟ್ಟದ ನಾಯಕರ ಬಗೆಗೆ ಒಂದೇ ಒಂದು ಶಬ್ದ ಬರೆದಿಲ್ಲ. ಅವರು ಮಾಡಿದ ಭಾಷಣದ ಕುರಿತು ಒಂದು ಅಕ್ಷರವೂ ಇಲ್ಲ. ವರದಿಗಾರರೇನಾದರೂ ತಪ್ಪಿದರೇ  ಎಂದರೆ ಸುಲಭವಾಗಿ ಒಪ್ಪಲಾಗದು. ಸಂಪಾದಕರ, ಪತ್ರಿಕೆ ಮಾಲಿಕರ ಒಡಂಬಡಿಕೆಯೇ ಈ ರೀತಿ ಪತ್ರಿಕಾ ಧರ್ಮದ ವಿರೋಧೀ ನಿರ್ಣಯಗಳಿಗೆ ಹೇತುವಾಗಬಲ್ಲುದು ತಾನೇ?


ಇಂದಿನ ದಿನ ಪತ್ರಿಕೆಯೊಂದರಲ್ಲಿ, ವರದಿಯಲ್ಲಿ  ಒಬ್ಬರ ಚಿತ್ರವಿದೆ. ಟೈ ಕಟ್ಟಿ ಅತಿಥಿಗಳ ಜೊತೆ ಇರುವದನ್ನು ಚಿತ್ರದಲ್ಲಿ ನೋಡಿದಾಗ ಅತಿಥಿಗಳಲ್ಲೊಬ್ಬರೋ , ಸಂಘಟಕರಲ್ಲೊಬ್ಬರೋ ಆಗಿರಬೇಕು. ಅವರ ಕುರಿತು ವರದಿಯಲ್ಲಿ ಅಥವಾ ಚಿತ್ರದ ಅಡಿಬರಹದಲ್ಲಿ ಒಂದೇ ಒಂದು ಅಕ್ಷರವಿಲ್ಲ.  ಈ ರೀತಿ ಬೆಳವಣಿಗೆಗಳ ಹಿಂದೆ ಪತ್ರಿಕಾ ಧರ್ಮ ಮೀರಿದ ದುರುದ್ದೇಶಗಳಿರಲೇಬೇಕು.


ಇಂದು ಫೇಸ್ ಬುಕ್ ನೋಡುತ್ತಿದ್ದೆ. ಮಹಾಶಯರೊಬ್ಬರು  ತಮಗಿಷ್ಟವಿರದ  , ತಮ್ಮ ಸ್ಪರ್ಧಿಯಾಗಿರುವ ರಾಜಕಾರಣಿಯೊಬ್ಬರನ್ನು  ಖಂಡಿಸಲು  ಜನಸಾಮಾನ್ಯರು ಒಪ್ಪಿಕೊಂಡಿರುವ  ಸಂಘಟನೆಯ ಹೆಸರನ್ನು , ಮಠವೊಂದರ   ಸ್ವಾಮೀಜಿಗಳ   ಹೆಸರನ್ನು  ಬಳಸಿಕೊಂಡಿದ್ದರು.


ಈ ರೀತಿ ಸಮಾಜದಲ್ಲಿ ಬರುತ್ತಿರುವ ಬದಲಾವಣೆಗಳನ್ನು ನೋಡಿದಾಗ ಇನ್ನು ಹದಿನೈದು ಇಪ್ಪತ್ತು ವರ್ಷಗಳಲ್ಲಿ ಸಮಾಜ ಯಾವ ರೀತಿ ಅನಪೇಕ್ಷಿತ ಬದಲಾವಣೆಗಳತ್ತ ಸಾಗೀತು ಎಂಬುದು ಎಲ್ಲ ಸಮಾಜ ಜೀವಿಗಳು ಯೋಚಿಸಬೇಕಾದ ಅವಶ್ಯಕತೆ . 

Tuesday, August 27, 2013

ಒಂದು ಪತ್ರಿಕೆಯ ವರದಿಗಾರ ನೀಡಿದ ವರದಿಯನ್ನಾಧರಿಸಿ ಈ ರೀತಿ ಅಭಿಪ್ರಾಯ ಮಂಡನೆ ಸರಿಯೇ ?

ನಾನೇನೂ   ಈ ಕೃತಿ ಇನ್ನೂ ಓದಿಲ್ಲ.  ಆದರೆ ಪುಸ್ತಕ ಕುರಿತು ಇಲ್ಲಿ  ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಈ ಮಹಾಶಯರುಗಳೆಲ್ಲ ಕೃತಿ  ಓದಿ ಅಭಿಪ್ರಾಯ ವ್ಯಕ್ತಪಡಿಸಿದರೆ? ಎಂಬ ಸಂಶಯ ಉಂಟಾಗುತ್ತದೆ.  ಹೌದಾದರೆ ಕೃತಿ  ಬಿಡುಗಡೆಯಾದ ಎರಡೇ ದಿವಸಗಳಲ್ಲಿ ಈ ಎಲ್ಲ ಮಹಾಶಯರುಗಳು ಅದ್ಯಾವ ಚಮತ್ಕಾರದಿಂದ ಪುಸ್ತಕ ಪಡೆದು, ಅಲ್ಲಿರುವ ಅಂಶಗಳನ್ನು  ಜೀರ್ಣಿಸಿ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು ಎಂಬ ಜಿಜ್ಞಾಸೆ ಉಂಟಾಗುತದೆ.  ಒಂದು ಪತ್ರಿಕೆಯ ವರದಿಗಾರ ನೀಡಿದ ವರದಿಯನ್ನಾಧರಿಸಿ ಈ ರೀತಿ ಅಭಿಪ್ರಾಯ ಮಂಡನೆ ಸರಿಯೇ ?


ನಮ್ಮ ಸನಾತನ ಸಂಸ್ಕ್ರತಿ ಯಲ್ಲಿ ಚಾರ್ವಾಕನ ಉದಾಹರಣೆ ಬರುತ್ತದೆ. ಅಲ್ಲಿ ಚಾರ್ವಾಕನ ಸ್ಥಾನ ಇಂದಿನ ಎಡಬಿಡಂಗಿಗಳಂತಲೂ ಆಗಿರಲಿಲ್ಲ ಅಥವಾ ತನ್ನ ಮೂಗಿನ ನೇರಕ್ಕೆ ವ್ಯಾಖ್ಯಾನ ಮಾಡಿ ವಂಧಿ ಮಾಘಧರಿಂದ ಚಪ್ಪಾಳೆ ಗಿಟ್ಟಿಸುವ ವರ್ತಮಾನದ ಬಹುತೇಕ ವಿಧ್ವಂಸರುಗಳಂತೆಯೂ   ಇರಲಿಲ್ಲ. ಅಂತೆಯೇ ಶ್ರೀ ಶಂಕರರ ಮತ್ತು ಮಂಡನ ಮಿಶ್ರರ ಅವಿರತ ಅಹೋ ರಾತ್ರಿ ಮಂಡನೆ ಖಂಡನೆಗಳಿಂದೊಡಗೂಡಿದ ಚರ್ಚೆಯನ್ನೂ ಉದಾಹರಿಸಬಹುದು.


ಇಂದು ಜಗತ್ತು ಚಿಕ್ಕದಾಗುತ್ತಿದೆ ಅಂತೆಯೇ ಸಮಾಜದ ಗಣ್ಯರ ಮನಸ್ಸು, ಬುದ್ಧಿಗಳೂ ಆಕುಂಚನ ಹೊಂದುತ್ತಿವೆ.  ಇದು ವಿಷಾದನೀಯ ಮತ್ತು ಸಮಾಜ ವಿಕಸಿತತೆಗೆ  ಹಾನಿಕರ.

http://epapervijayavani.in/Details.aspx?id=8093&boxid=14755119


ಹರಿಹರ ಭಟ್, ಬೆಂಗಳೂರು .
ಚಿಂತಕ, ವಿಮರ್ಶಕ.

August 27 , 2013.

Friday, August 16, 2013

ಇಂದು, ಈಗಲೇ ಸಮಾಜದಲ್ಲಿ ಬರಬೇಕಾದ ಬದಲಾವಣೆ.

ಶ್ರೀ ಗುರುಭ್ಯೋ  ನಮಃ  /  ಹರಿಃ  ಓಂ   //

ಹರೇ ರಾಮ.


ಜೈ ಜೈ ಶ್ರೀ ರಾಮಕಥಾ , ಜೈ ಜೈ ಶ್ರೀ ರಾಮಕಥಾ. ಪ್ರತಿಯೊಬ್ಬರನ್ನು ಸೂಜಿಗಲ್ಲಿನಂತೆ ಹಿಡಿದಿಡುವ ರಾಮಕಥಾ.  ಎರಡನೆ ಮಾತಿಲ್ಲ. ಜೀವನದ ಕೆಲ ಸಮಯವನ್ನು ವಿಸ್ಮಯ ಲೋಕಕ್ಕೆ ಕೊಂಡೊಯ್ಯುವ ಯಶಸ್ವಿ ಪ್ರಯೋಗ. ಎರಡನೇ ಮಾತಿಲ್ಲ. ರಾಮಕಥಾ ಕಲಾವಿದರ ತಂಡಕ್ಕೂ , ರಾಮಕಥಾ ನೇತ್ರತ್ವಕ್ಕೂ , ರಾಮಕಥಾ ಪ್ರಾಯೋಜಕ ಆರ್ಥಿಕ ಬಲಾಢ್ಯ ಬಂಧುಗಳಿಗೂ ಮನಸ್ವಿ ಅಭಿನಂದನೆಗಳನ್ನು ಅಭಿವ್ಯಕ್ತಿಸುತ್ತ , ಸಮಾಜದ ವಾಸ್ತವಿಕತೆಯತ್ತ ಯೋಚಿಸೋಣ.



ಇಂದಿನ ಹವ್ಯಕ ಸಮಾಜದಲ್ಲಿ ಎಣಿಕೆಗೆ ಸಿಗುವಷ್ಟು ಹವ್ಯಕ ಬಂಧುಗಳು ಮಾತ್ರ ಆರ್ಥಿಕವಾಗಿ ಬಲಾಢ್ಯರಾದ ಗುಂಪಿನಲ್ಲಿದ್ದಾರೆ. ಇಂದಿನ ಜನಜೀವನದ ಅವಿಭಾಜ್ಯ ಅವಶ್ಯಕತೆಗಳಾದ ಕುಟುಂಬಕ್ಕೊಂದು ಸರ್ವ ಋತು ರಕ್ಷಣೆ ನೀಡುವ ಸೂರು, ಪ್ರತಿ ಮಗುವಿಗೂ ಫಲಪ್ರದವಾಗಿ ಆರ್ಥಿಕ ಅವಶ್ಯಕತೆಗಳನ್ನು ಪೂರೈಸುವಂತಹ ಶಿಕ್ಷಣ , ಅಧುನಿಕ ಬದಲಾವಣೆಗಳಿಂದ ದೂರದೂರುಗಳು ಸಾಮಿಪ್ಯ ಪಡೆದಿರುವದನ್ನು ಅವಲೋಕಿಸಿ ಭಾವನಾತ್ಮಕ   ಬಂಧನಗಳನ್ನು ಬಲಾಢ್ಯಗೊಳಿಸಲು , ಕ್ರಮಿಸಲು ಬೇಕಾದ ಸ್ವಂತ ವಾಹನ  .. ಇತ್ಯಾದಿ ಅವಶ್ಯಕತೆಗಳನ್ನು ಪೂರೈಸಲಾಗದೆ , ಜೀವನ ಜಂಜಡಗಳಲ್ಲಿ ಸಿಲುಕಿಕೊಂಡಿರುವ ಹವ್ಯಕ ಭಾಂಧವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.  ಆದರೆ ಆರ್ಥಿಕವಾಗಿ ಬಲಾಢ್ಯರಾದ ಬಂಧುಗಳ ಅಹಮಿಕೆಯ ವ್ಯಕ್ತನೆಯ ವೈಭವೋಪೇರಿತ ಮದುವೆ  , ಮುಂಜಿ, ಪಾರಾಯಣ , ರಾಮಕಥಾ.... ಇತ್ಯಾದಿ ಅಘಟಿತ ಘಟನೆಗಳಿಂದ  ಧಿಗ್ಬ್ರ್ಹಮಣೆಗೊಳಗಾಗಿ  , ಪ್ರಾಪಂಚಿಕ ವಾಸ್ತವಿಕತೆಯಿಂದ ಕೆಲ ಸಮಯ ದೂರವಾದರೂ, ತದ  ನಂತರ ವಾಸ್ತವಿಕತೆಯನ್ನು ಎದುರಿಸಲೇಬೇಕಾದ ಅನಿವಾರ್ಯತೆಯ ಭೀಕರ ದಿನ ಜೀವನಕ್ಕೆ , ಪುನಹಪ್ರವೇಶ . ಇದುವೇ ಇಂದಿನ ವಾಸ್ತವಿಕತೆಯಾಗಿದೆ.  ಆದುದರಿಂದಲೇ ಇಂದಿನ ಹೆಚ್ಚಿನ ಹವ್ಯಕ ಬಾಂಧವರು ಸಮಾಜದ ಚಟುವಟಿಕೆಗಳಿಗೆ ತಾಟಸ್ತ್ಯ ಮನೋಭಾವನೆಯಿಂದ ದೂರದಲ್ಲಿರಬಯಸುತ್ತಾರೆ. ಒಂದೆಡೆ  ಹನ್ನೆರಡು ಲಕ್ಷ ಜನಸಂಖ್ಯೆಯೆಂದೂ, ಇನ್ನೊಂದೆಡೆ  ನಾಲ್ಕಾರು ಲಕ್ಷ ಜನಸಂಖ್ಯೆಯೆಂದೂ ಪರಿಗಣಿಸಲ್ಪಟ್ಟ ಹವ್ಯಕ ಸಮಾಜ ಇಂದು ಅಲ್ಲಲ್ಲಿ  ನೂರರ ಸಂಖ್ಯೆಯಲ್ಲಿ ವಿಝ್ರಂಭಿಸುತ್ತಿರುವ ನೇತಾರರ, ಆರ್ಥಿಕ ಬಲಾಢ್ಯರ ಕೈಯಲ್ಲಿ ನೋವಿನಿಂದ ನಲುಗುತ್ತಿದೆ. ಈ ನೋವು ಆಳ ಪ್ರಪಾತಿಯಾಗಿ ( undercurrent ) ಹರಿಯುತ್ತಿದ್ದರೆ, ಅರ್ಥಿಕ ಬಲಾಢ್ಯರ , ಅವರ ಹಿಂಬಾಲಕರ ಹೇಕಾರಗಳು , ಕೇಕೆಗಳು ಸಮಾಜದ ವ್ಯಕ್ತ ಸ್ಥರದಲ್ಲಿ  ತಾರಕಕ್ಕೇರಿದ ಲಯವಾಗಿ ಹೊರಹೊಮ್ಮುತ್ತಿದೆ.


ಏನು ಮಾಡಲಾದೀತು? ದಾರಿ ಸುಗಮವಲ್ಲ.


ಹವ್ಯಕ  ಸಮಾಜದ ಶ್ರೇಷ್ಟ ಸಂಸ್ಕ್ರತಿಯನ್ನು ಮೈಗೂಡಿಸಿಕೊಂಡ, ಸಮಾಜ ಭಾಂಧವರು ಬಹುತೇಕರು ಆಧುನಿಕ  ಜೀವನ ಶೈಲಿಯ ಪ್ರಭಾವಕ್ಕೊಳಗಾಗಿ, ಆಧುನಿಕ ಜೀವನದ ಸುಖ ಲೋಲುಪತೆಯನ್ನು ಪಡೆಯಲಾಗದೆ , ಅತ್ತ ಜೀವನ ಸಾಗಿಸುವ ಅನಿವಾರ್ಯತೆಗೊಳಗಾಗಿ ಯಾವುದ್ಯಾವುದೋ ಕೆಲಸಗಳನ್ನು ನಿರ್ವಹಿಸುತ್ತಾ ಜೀವನ ಸಾಗಿಸುತ್ತಿದ್ದಾರೆ. ಆರ್ಥಿಕವಾಗಿ ಕಡು ಬಡವರಾಗಿದ್ದರೂ, ಸಮಾಜದ ಶ್ರೇಷ್ಟ ಸಂಸ್ಕೃತಿಯ ಗುಣಗಳನ್ನು  ಅವರ ಮಕ್ಕಳಲ್ಲಿ ಮೈಗೂಡಿಸಿ , ಮುಂದಿನ ಸಮಾಜಕ್ಕೆ ಒಳ್ಳೆಯ ಕೊಡುಗೆ ನೀಡಲು ಕಾತರರಾಗಿದ್ದಾರೆ. ಆದರೆ ಇಂದಿನ ಕ್ರೂರ ವಾಸ್ತವಿಕತೆಗಳಾದ ಶಾಲಾ ಡೊನೇಶನ್ನುಗಳು , ಇನ್ಫ್ಲುಯೆನ್ಸ್ ಗಳು ಸಮಾಜ ಬಾಂಧವರನ್ನು  ಅಸಹಾಯಕತೆಗೆ ತಳ್ಳುತ್ತಿವೆ. ಹೆಚ್ಚಿನ ಸಂಖ್ಯೆಯಲ್ಲಿರುವ ಆ ರೀತಿ ಸಮಾಜಬಾಂಧವರನ್ನು ಈ ವಿಷವರ್ತುಲಗಳಿಂದ ವಿಮುಕ್ತಿಗೊಳಿಸಲು ಸಮಾಜ ನೇತಾರರೆಲ್ಲ ಒಗ್ಗೂಡಿ , ಆರ್ಥಿಕವಾಗಿ ಬಲಾಢ್ಯರಾಗಿರುವ - ಸಮಾಜಕ್ಕೆ ಆರ್ಥಿಕವಾಗಿ ದಾನ ನೀಡಬಲ್ಲ ಉದಾರಿ ಹೃದಯ ಸಾಮ್ರಾಜ್ಯವನ್ನು ಹೊಂದಿದ ಸಮಾಜ ಬಾಂಧವರಿಂದ ಬರುವ ದಾನದ ಹಣವನ್ನು ಕ್ರೋಢೀಕರಿಸಿ ,  ಹೆಚ್ಚಿನ  ಸಂಖ್ಯೆಯಲ್ಲಿ   ಉಚಿತವಾದ , ಶಿಕ್ಷಣಸ್ನೇಹಿಯಾದ ಪೂರಕ ವಾತಾವರಣವುಳ್ಳ, ಗಂಡು ಮತ್ತು ಹೆಣ್ಣು ಮಕ್ಕಳಿಬ್ಬರಿಗೂ  ಅವಕಾಶಗಳುಳ್ಳ , ಸರ್ವ ರೀತಿಯ ಯೋಗ್ಯವಾದ ಖರ್ಚು ವೆಚ್ಚಗಳನ್ನು  ಹೊಂದಿಸಿ ಉಚಿತವಾಗಿ ಶಿಕ್ಷಣ , ಆರ್ಥಿಕವಾಗಿ ಹಿಂದುಳಿದ ಮಾತಾ ಪಿತೃರ ಮಕ್ಕಳಿಗೆ  ದೊರಕುವ ಸೌಲಭ್ಯವನ್ನೊದಗಿಸುವತ್ತ    ಗಮನ ಹರಿಸಬೇಕಾಗಿರುವದು ಇಂದಿನ  ತುರ್ತು ಅವಶ್ಯಕತೆಯಾಗಿದೆ.  ಗಮನವೀಯಬೇಕಾಗಿದ್ದು ಯೋಗ್ಯ ಪ್ರಚಲಿತ ಶಿಕ್ಷಣ , ಉಚಿತ ಶಿಕ್ಷಣ , ಆರ್ಥಿಕವಾಗಿ ಅತೀ ಹಿಂದುಳಿದಿರುವ ಸಮಾಜಬಾಂಧವರಿಗೆ ಮೊದಲ ಆದ್ಯತೆಯಿರಬೇಕಾಗಿದೆ.



ಈ ರೀತಿ ಬದಲಾವಣೆಯ ಮನೋಧರ್ಮ ಒಮ್ಮೆ ಸಮಾಜದಲ್ಲಿ ತೀವ್ರ ಸಂಚಲನೆ ಪಡೆದರೆ , ವರ್ತಮಾನಕಾಲದಲ್ಲಷ್ಟೇ ಅಲ್ಲ ಸರ್ವ ಕಾಲದಲ್ಲೂ, ಸಾರ್ವತ್ರಿಕವಾಗಿ ನಮ್ಮ ಸಮಾಜ ಶ್ರೇಷ್ಟ ಪರಂಪರೆಯನ್ನು ಉಳಿಸಿ, ಬೆಳೆಸಲಾದೀತು.  ಅವಕಾಶ ಕಲ್ಪಿಸದಿದ್ದರೆ " ನಮ್ಮನ್ನು ನಾವೇ ಶ್ರೇಷ್ಟರು " ಎಂದು ಡಂಗುರ ಸಾರುತ್ತಾ ಸಾಗುವ ಕಾಲ ಸದಾ ಮುಂದುವರಿದೀತು. ಬದಲಾವಣೆಗೆ ಸಕಾಲ ಇದು, ಸಮಾಜದ ನೇತಾರರು  ಮನಸ್ಸು ಮಾಡಲೇಬೇಕಾದ ಪರ್ವ ಕಾಲ ಇದು.


www.http://hareraama.in/



ಹರಿಹರ ಭಟ್, ಬೆಂಗಳೂರು.
ಶಿಕ್ಷಕ, ಚಿಂತಕ, ವಿಮರ್ಶಕ.
ಆಗಸ್ಟ್ ೧೭, ೨೦೧೩.  

Tuesday, July 2, 2013

ಸಾಮಾಜಿಕ, ಸಾಮೂಹಿಕ ಜೀವನಶೈಲಿಗಳನ್ನು ಬದಲಾಯಿಸುತ್ತಿರುವ ರಿಯಾಲಿಟಿ ಶೋಗಳು.

ಸಾಮಾಜಿಕ, ಸಾಮೂಹಿಕ  ಜೀವನಶೈಲಿಗಳನ್ನು ಬದಲಾಯಿಸುತ್ತಿರುವ ರಿಯಾಲಿಟಿ ಶೋಗಳು.



ಈಗಿನ ಸಿನೆಮಾಗಳು , ಟಿ.ವಿ ಶೋಗಳು ಜನಪ್ರಿಯತೆಯನ್ನು ಪಡೆಯಲು, ಹೆಚ್ಚು ಹಣ ಗಳಿಸಲು ಆಯ್ದುಕೊಂಡಿರುವ ದಾರಿಯೆಂದರೆ ಯಾವುದಾದರೊಂದು ಕೊಂಟ್ರೊವರ್ಸಿಯನ್ನು ಹುಟ್ಟುಹಾಕುವದು. ಇದು ಜನಸಾಮಾನ್ಯರೆಲ್ಲ ಗಮನದಲ್ಲಿರುವ ಪ್ರಸ್ತುತ ಕಾಲಘಟ್ಟದ ಬೆಳವಣಿಗೆಯಾಗಿದೆ. ಹಿಂದೆಲ್ಲ ಜನಮಾನಸದಲ್ಲಿ ದೀರ್ಘಕಾಲ   ನೆಲೆನಿಲ್ಲುವಂತಹ ಸಿನೇಮಾ, ಟಿ.ವಿ ಶೋಗಳನ್ನು ತೆಗೆಯಲು ಹೆಚ್ಚಿನ ಮುತುವರ್ಜಿ   ನೀಡಲಾಗುತ್ತಿತ್ತು.  ಇಂದಿನ ವಿಶೇಶ ಪರಿಣಿತಿಯತ್ತ ಸಾಗಿರುವ ತಂತ್ರಜ್ಞಾನದ ದಿನಗಳು ಆ ರೀತಿ ಜನಮಾನಸದಲ್ಲಿ ದೀರ್ಘಾವಧಿಗೆ ನೆನಪುಗಳಾಗಿ ನಿಲ್ಲುವಂತಹ ರಂಜನೆಯ ಜೊತೆಗೆ ಸಮಾಜಕ್ಕೆ ದಾರಿದೀಪವಾಗಬಲ್ಲ ಕಾರ್ಯಕ್ರಮಗಳನ್ನು ನೀಡಲು ಪೂರಕವಾಗಿರಬೇಕಿತ್ತು. ಆದರೆ ಇಂದು ಅಯೋಗ್ಯರೆಲ್ಲ ಯೋಗ್ಯರ ಮುಸುಕುಧಾರಿಗಳಾಗಿ ಈ ಕಾಲಮಾನಕ್ಕೆ ವರವಾಗಿರುವ ತಂತ್ರಜ್ಞಾನವನ್ನು ಶಾಪವಾಗಿಸಿ, ಸಾಮಾಜಿಕ ಜೀವನ ಶೈಲಿ, ಸಾಮಾಜಿಕ ನಿತ್ಯಜೀವನ , ಮನುಷ್ಯನ ಜೀವಿತದ ಉದ್ದೇಶ ಇವುಗಳನ್ನೆಲ್ಲಾ ತಿರುಚಿ, ಬಿಚ್ಚು - ಕಚ್ಚು,  ಕುಣಿ - ಮಿಣಿ  ಇವುಗಳನ್ನೇ ಜೀವನ ಮೌಲ್ಯಗಳಾಗಿ ಬಿಂಬಿಸುತ್ತಾ ಹೊರಟಿರುವದು ಶೋಚನೀಯ.



ಈಗಷ್ಟೇ ಅವಿರತವಾಗಿ 2 ,160  ಗಂಟೆಗಳಷ್ಟು ಮನರಂಜನೀಯ ವಾಗಿ ನಡೆದ ರಿಯಾಲಿಟಿ ಶೋ ವೊಂದನ್ನು ಪರಾಮರ್ಶಿಸಿದರೆ ಗೋಚರಿಸುವ ಅಂಶಗಳೆಂದರೆ,  ಜೀವನದಲ್ಲಿ ತಮ್ಮ ಅಚಾತುರ್ಯದಿಂದ ಕೊಂಟ್ರೊವರ್ಸಿಗಳನ್ನು ಹರಡಿಕೊಂಡು ಆ ಕೊಂಟ್ರೊವರ್ಸಿಗಳ ಸಿಕ್ಕುಗಳಿಂದ ಹೊರಬರಲು ತಮ್ಮ ಇಮೇಜ್ ಬಿಲ್ಡಿಂಗ್ ಗಾಗಿ ಒದ್ದಾಡುತ್ತಿದ್ದವರಿಗೆ , ಮುಳುಗುವವನಿಗೆ ಆಸರೆಯಾಗಿ ಹುಲ್ಲುಕಡ್ಡಿ ಬಂದಾಗ ಅದನ್ನೇ ತಬ್ಬಿ ದಂತೆ ಈ ಬಡಾ ಬಾಸನ್ನು ಅಪ್ಪಿ , ಮನ ಬಿಚ್ಚಿ , ಹುಚ್ಚುಚ್ಚಾಗಿ ದಿನಗಳೆದಂತೆ ತಬ್ಬುವದೇ ಜೀವನ, ತಬ್ಬಿ ತಬ್ಬಿ ನೋಡುಗರ ಎದೆಬಡಿತ ಹೆಚ್ಚಿಸಿದಷ್ಟೂ , ತಮ್ಮ ಕೊಂಟ್ರೊವರ್ಸಿಗಳಿಂದ ಆಚೆ ಬಂದಂತನಿಸಿ  ನೆಮ್ಮದಿ ಪಡೆಯುವದರಲ್ಲೇ ಸಾರ್ಥ್ಯಕ್ಯ  ಕಂಡ  ಮನೆ ಸೇರಿದ, ಮನೆಯಾಚೆ ಬಂದ , ಇನಾಮು ಪಡೆದ, ಕಪ್ ಎತ್ತಿದ, ಕಪ್ಪಗಾಗಿ ಜೊಲ್ಲು ಸುರಿಸಿದ, ಸೋರಿದ ಜೊಲ್ಲನ್ನು ಮರೆಮಾಚಿ ತೋರಗೊಡದ ಕೊಂಟ್ರೊವರ್ಸಿಗಳಿಗೆ, ಹಿಂದಿನ ದಶಕಗಳಲ್ಲಿ ಮೆರೆದ ಆ ರಂಜನಾ ಜಗತ್ತಿನ ಮುದಿ   ಹುಲಿ ಗಳಿಗೆ ತಾವು - ತಮ್ಮ  ಕ್ರಿಯೆಗಳು ಸಾಮಾಜಿಕ ಜೀವನಕ್ಕೆ, ಯುವಜನಾಂಗಕ್ಕೆ ಎಂತಹ ಸಂದೇಶ ನೀಡುತ್ತಿದ್ದೇವೆ , ನೀಡುತ್ತಿವೆ  ಎಂಬ ಪರಿವೆಯೇ ಇಲ್ಲದಂತಿರುವದು ಖೇದನೀಯ.    



ಈ ರೀತಿ ರಂಜನೆಯ ಬದುಕಿನ ಪರಿಣಾಮವಾಗಿ ಅಮಾಯಕ , ಅನನುಭವಿ ಯುವ ಜೀವಗಳು ಜೀವನ ಸಾರ್ಥಕತೆ ಅಥವಾ ನಿತ್ಯ ಜೀವನ ಸಾಗಿಸಲು, ಪೂರ್ಣ ಬದುಕೊಂದನ್ನು ಕಂಡುಕೊಳ್ಳಲು ವ್ಯಯಿಸಬೇಕಾದ ಕಾಲಾವಕಾಶವನ್ನು ದೂರ ಮಾಡಿ , ಸಂಪೂರ್ಣವಾಗಿ ಬಿಚ್ಚು- ಕಚ್ಚು, ಕುಣಿ - ಮಿಣಿ ಜೀವನದೆಡೆಗೆ ಆಕರ್ಷಿತರಾಗುತ್ತಿದ್ದಾರೆ. ಅತ್ತ ಆ ರೀತಿ ಗುಂಪುಗಳಲ್ಲಿ ಯಶಸ್ಸನ್ನು ಕಾಣದೆ , ಇತ್ತ ಸಹಜ ಸಿದ್ಧ ಜೀವನ ಪದ್ದತಿಯಿಂದ ದೂರಾಗಿ ಯೌವನದಲ್ಲೇ ನಿರಾಶದಾಯಕರಾಗಿ ,  ತಮ್ಮ ಜೀವನವನ್ನೆ ನಿರಾಶೆಯಿಂದ ಕೊನೆಗೊಳಿಸುವ ಹಂತ ತಲುಪುತ್ತಿರುವದು ಎಲ್ಲೆಡ ವೇದ್ಯ ಸಂಗತಿಯಾಗಿದೆ.



ಈ ನಡುವೆ ಇನ್ನೊಂದು ವಿಷಾದನೀಯ  ವಿಷಯವೆಂದರೆ ಸಾತ್ವಿಕ ಸಮಾಜದಲ್ಲೂ ಈ ರೀತಿಯ ಮನರಂಜನೆಯತ್ತ ಆಕರ್ಷಿತರಾಗುತ್ತಿರುವವರ   ಸಂಖ್ಯೆ   ಗಣನೀಯವಾಗಿ ಹೆಚ್ಚುತ್ತಿದೆ. ಇಂದಿನ ಕಾಂಚಾಣದ ಕುಣಿತ, ಜನ ಸಮೂಹದಿಂದ ಸಿಗುವ ಜನಪ್ರಿಯತೆ  ಇವುಗಳತ್ತ ಆಕರ್ಷಿತರಾಗಿ, ತಮ್ಮ ಜೀವನ ಕಾಲದಲ್ಲಿ ಬಂದೊದಗಿರದ  ಆಸ್ತಿ - ಪಾಸ್ತಿ ,  ಜನಪ್ರಿಯತೆ ತಮ್ಮ ಮಕ್ಕಳ ಕಾಲದಲ್ಲಾದರೂ, ತಮ್ಮ ಮಕ್ಕಳಿಂದಲಾದರೂ ತಮಗೆ ಬರಲಿ ಎಂಬ ಸ್ವಾರ್ಥದಿಂದ , ಅನಾನುಕೂಲದಲ್ಲೇ ಅನುಕೂಲ ಕಲ್ಪಿಸಿ , ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ - ಜುಟ್ಟಿಗೆ ಮಲ್ಲಿಗೆ ಎಂಬಂತೆ , ಮಕ್ಕಳನ್ನು ಆಧುನಿಕ ಶಾಲೆಗಳಿಗೆ ಕಳಿಸಿ, ಪಾಶ್ಚಿಮಾತ್ಯ ಸಂಸ್ಕೃತಿಯ ಅನುಕರಣೆ ಮಾಡುತ್ತ,  ಅತ್ತ ಪಾಶ್ಚಿಮಾತ್ಯರಾಗುವ ಧೈರ್ಯ - ಸ್ಥೈರ್ಯವಿಲ್ಲದೆ, ಇತ್ತ ಪೌರಾತ್ಯ ಸಂಸ್ಕಾರಗಳನ್ನು ಆಡಂಬರಾತ್ಮಕವಾಗಿ ಅನುಸರಿಸುತ್ತ , ಬಿ.ಪಿ - ಶುಗರ್ - ಹಾರ್ಟ್ ಅಟೆಕ್     ಗಳೆಂಬ ರಾಕ್ಷಸರ ಕಾಟವನ್ನು ತಾಳಲಾಗದೆ , ಅಯ್ಯೋ ಜೀವನವೇ ......... ಎಂದು ದಿನ ದೂಡುವವರೊಂದೆಡೆಯಾದರೆ, ತಮ್ಮ ಯೋಚನಾ ಶಕ್ತಿಯನ್ನೇ ಕಳೆದುಕೊಂಡು ಜೀವನಕ್ಕೇ ಅಂತ್ಯ ತಂದೊಡ್ಡಿಕೊಳ್ಳುವ ಮಂದಿ ಇನ್ನೊಂದೆಡೆ ಕಾಣಬರುತ್ತಾರೆ.

                                                *********************

Friday, June 21, 2013

ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ರಾಮಲಿಂಗಾ ರೆಡ್ಡಿ ಯವರಿಗೊಂದು ಕಿವಿಮಾತು.

ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ರಾಮಲಿಂಗಾ ರೆಡ್ಡಿ ಯವರಿಗೊಂದು ಕಿವಿಮಾತು.


http://epapervijayavani.in/Details.aspx?id=6667&boxid=22551156


ಎಷ್ಟೇ ಕಾರ್ಯಕ್ರಮಗಳು , ಮೀಟಿಂಗಳು ಇದ್ದರೂ ಸಹ ಬೆಂಗಳೂರಿನಲ್ಲಿದ್ದಾಗ , ದಿನಕ್ಕೆ ಎರಡು ತಾಸು ಪ್ರತ್ಯಕ್ಷ ಫಲ (direct immediate   results  ) ಕೊಡಬಹುದಾದ ಈ ಕೆಳಗಿನ ಸಲಹೆಗಳನ್ನು ಅಳವಡಿಸಿಕೊಳ್ಳಿ, ಅದರ ನೇರ ಫಲಾನುಭವಿಗಳು ತಾವು ಮತ್ತು ತಮ್ಮ ಕಾಂಗ್ರೆಸ್ ಪಕ್ಷ ಆಗಿರುತ್ತೀರಿ. ಇಂದಿನ ಪರಿಸ್ತಿತಿಗಳಲ್ಲಿ ಈ ರೀತಿ ಮಾಡಿದರೆ ಹಿಂಬಾಲಕರು ಓಡಿಹೋದಾರೆಂಬ ಭಯವಿದ್ದರೆ, ಬರುವ ಲೋಕಸಭಾ ಚುನವಣೆವರೆಗಾದರೂ ಪ್ರಯತ್ನಿಸಿ ನೋಡಿ:



೧.    ರಸ್ತೆಯಲ್ಲಿ escorts  ಜೊತೆ ಭುರ್ರ್ ಎಂದು ಓಡಿಹೋಗದೆ, ರಸ್ತೆ ಮಧ್ಯೆ ಇಳಿದು ರಸ್ತೆ ಪರಿಸ್ತಿತಿಗಳನ್ನು ಗಮನಿಸಿ. ಸೂಕ್ತ ಹಣಕಾಸಿನ ಅಧಿಕಾರ, ಆಡಳಿತ ಅಧಿಕಾರವುಳ್ಳ ಅಧಿಕಾರಿಯನ್ನು ಕೂಡಲೇ ಸ್ಥಳಕ್ಕೆ ಕರೆಯಿಸಿ , ಜನ ಸಾಮಾನ್ಯರ ಎದುರು ಅಧಿಕಾರಿಗೆ ಆಗಬೇಕಾದ ಕೆಲಸಗಳನ್ನು ಪೂರೈಸಲು ಸಮಯ ನಿಗದಿ ಪಡಿಸಿ.  ಕಾರ್ಯ ಆಗುವದನ್ನು ನಿಮ್ಮ ಅಧಿಕಾರಿ ಸಹಾಯಕರ ಮೂಲಕ ಖಾತ್ರಿ ಪಡಿಸಿಕೊಳ್ಳಿ. ನಿಮ್ಮ ಪ್ರತಿ ಆಜ್ಞೆಯನ್ನೂ ನಿಮ್ಮ ಅಧಿಕಾರಿ ಸಹಾಯಕ ಕಾರ್ಯ ರೂಪಕ್ಕೆ ತರುವಂತೆ ನೋಡಿಕೊಳ್ಳಿ. ಪ್ರತಿ ಭಾನುವಾರ ಆ ವಾರದ ನಿಮ್ಮ ಆಜ್ಞೆ ಕಾರ್ಯರೂಪಕ್ಕೆ ಬಂದಿದೆಯೋ ಎಂದು ವಿಚಾರಿಸಿಕೊಳ್ಳಿ, ಆಗಾಗ ಸ್ವತಹ ಆ ಸ್ಥಳಗಳಿಗೆ ಹೋಗಿ , ಅಲ್ಲಲ್ಲಿ ಪರಾಮರ್ಶಿಸಿ.



೨.    ಕೇವಲ ಪತ್ರಿಕೆಯವರ ಜೊತೆ ಮಾತನಾಡುವದು, ಪತ್ರಿಕಾ ಹೇಳಿಕೆ ನೀಡುವದು , ಆಗಾಗ ಮೀಟಿಂಗಳನ್ನು    ಮಾಡಿ  ಅಧಿಕಾರಿಗಳಿಗೆ ಎಚ್ಚರಿಕೆ ನೀಡುವದು ಇವೆಲ್ಲಾ ಇಂದಿನ ಪರಿಸ್ತಿತಿಯಲ್ಲಿ ಸವಕಲು ನಾಣ್ಯಗಳಿದ್ದಂತೆ , . ಅಧಿಕಾರಿ ವರ್ಗ ಸಂಪೂರ್ಣವಾಗಿ ದಪ್ಪ ಚರ್ಮ ಬೆಳೆಸಿಕೊಂಡಿದ್ದಾರೆ ಮತ್ತು ಈ ವರ್ತನೆಗಳಿಗೆ ಕಳೆದ ಮೂವತ್ತು ವರ್ಷಗಳಲ್ಲಿ ಅಧಿಕಾರ ನಡೆಸಿದ ರಾಜಕಾರಣಿಗಳೇ ಕಾರಣೀಕರ್ತೃರು . ಮಂತ್ರಿ ಖುರ್ಚಿಯಲ್ಲಿ ಕುಳಿತವರೊಡನೆ ಮೆತ್ತಗೆ ಮಾತನಾಡಿ , ಮಂತ್ರಿಗಳ ದಾರಿ ತಪ್ಪಿಸುವ ಚಾಣಕ್ಷ ? ನಡೆಗಳು ಅವರಿಗೆ ಕಾರ್ಯಗತವಾಗಿ, ಬ್ರಹ್ಮ ಬಂದರೂ ಈ ಸ್ತಿತಿ ಬದಲಾಗುವದಿಲ್ಲ ಎಂದು ಜನ ಸಾಮಾನ್ಯರು ಮಾತನಾಡುತ್ತಿದ್ದಾರೆ.  ಜನಸಾಮಾನ್ಯರಿಗೆಲ್ಲ ಗೊತ್ತಿರುವ ವಿಷಯವೆಂದರೆ, ವರ್ಗಾವಣೆಯ ಕಾಲವೆಂದರೆ ರಾಜಕೀಯದವರಿಗೆಲ್ಲಾ ಸುಗ್ಗಿಯ ಕಾಲ, ಒಂದೋ ಎರಡೋ ವರ್ಗಾವಣೆ ಆಯಕಟ್ಟಿನ ಅಂದರೆ ಹೆಚ್ಚಿನ ಲಂಚವನ್ನು ಹೊಡೆಯುವ ಅಧಿಕಾರಿ ಖುರ್ಚಿ , ಸಿಕ್ಕಿದರೆ ಆ ಮರಿ ರಾಜಕಾರಣಿ ಮುಂದೆ ಪುಡಿ ರಾಜಕಾರಣಿ, ಆರೆಂಟು ವರ್ಗ ಮಾಡಿಸುವ ಅದೃಷ್ಟ ಖುಲಾಯಿಸಿದರೆ ಆ ರಾಜಕಾರಣಿ ಮುಂದೆ ಹಿಡಿ ರಾಜಕಾರಣಿ ( ದೊಡ್ಡ ರಾಜಕಾರಣಿಗೆ ಪಾತ್ರೆ ಹಿಡಿಯುವವ ) , ಹತ್ತಾರು ವರ್ಗ ಮಾಡಿಸಬಲ್ಲವ ಲಂಚ - ಮಂಚ ದ ಚಾಕ ಚಕ್ಯತೆ ಕರಗತಮಾಡಿಕೊಂಡ " ಕೋಟಿ " ರಾಜಕಾರಣಿ ಹೀಗೆ ಸಾಗುತ್ತಿದೆ ಇಂದಿನ ಈ ಮೂವತ್ತು ವರ್ಷಗಳ ರಾಜಕಾರಣ - ರಾಜಕಾರಣಿಗಳ ಕಾರ್ಯವಿಧಾನದಿಂದ ಬಂದೊದಗಿದ ಬಿರುದು ಬಾವಲಿಗಳು.



೩.  ಹಿಂದೆಲ್ಲಾ ಊಟ , ತಿಂಡಿ ಖರ್ಚು ಮಾಡಿದರೆ ರಾಜಕಾರಣಿಗೆ ತನ್ನ ಹಿಂಬಾಲಕರನ್ನು ಹಿಡಿದಿಡಲು ಸಾಧ್ಯವಿತ್ತು,  ಈ ಮೂವತ್ತು ವರ್ಷಗಳಲ್ಲಾದ ಬದಲಾವಣೆ ನೋಡಿ.  ಅಧಿಕಾರಿಗಳ ವರ್ಗದ ವರ್ಗಾವಣೆ ಮಾಡಿ ದುಡ್ಡು ಹೊಡೆಯುವ ವ್ಯವಸ್ತೆಗೆ ಶರಣಾಗದಿದ್ದರೆ ಆರು ತಿಂಗಳು ಒಂದು ವರ್ಷದಲ್ಲೆ ಹಿಂಬಾಲಕ ಇನ್ನೊಂದೆಡೆ ಮುಖ  ಮಾಡುತ್ತಾನೆ. ಚುನಾವಣೆ ಸಮಯದಲ್ಲಂತೂ ವಾರ ವಾರ, ತಿಂಗಳುಗಳಲ್ಲಿ ಮುಖಂಡರುಗಳ ಬದಲಾವಣೆ ಕಾಣುತ್ತಿರುತ್ತೇವೆ. ಚುನಾವಣೆ ಬಂತೆಂದರೆ ಜನಗಳಿಗೆ ಸುಗ್ಗಿ ಕಾಲ. ಒಬ್ಬ ಮತವೊಂದಕ್ಕೆ ಐದು ನೂರು ಕೊಟ್ಟರೆ ಇನ್ನೊಬ್ಬ ಸಾವಿರ ಹಂಚುತ್ತಾನೆ. ಒಬ್ಬ ಟಿ.ವಿ ಕೊಡಿಸಿದರೆ ಇನ್ನೊಬ್ಬ ಫ್ರಿಜ್ಜ್  ಕೊಡಿಸುತ್ತಾನೆ, ಇವೆಲ್ಲ ಜನಸಾಮಾನ್ಯರ ಕಣ್ಣಿರೆ ರಾಚುವ ಸತ್ಯ.  ಕೋಟಿ , ಕೋಟಿ ಬೆಲೆಬಾಳುವ ಸೈಟ್ ಮಾರಿ ಹಣ ಖರ್ಚು ಮಾಡಿಯೂ ಆರಿಸಿಬರದ , ಮೂರ್ಖ  ರಾಜಕಾರಣಿಗಳು ನಮ್ಮೆಲ್ಲರ ಮಧ್ಯೆಯೇ ಓಡಾಡಿಕೊಂಡಿದ್ದಾರೆ.  ಆದರೆ ವಿಷಾದದ ಸಂಗತಿಯೆಂದರೆ ಈ ರೀತಿ ಜನಗಳು ಸುಂದರವಾದ
" ಪ್ರಜಾಪ್ರಭುತ್ವ"  ಎಂಬ ವ್ಯವಸ್ತೆಯನ್ನೇ ಹಾಳುಗೆಡವಿದ್ದಾರೆ.



೪.  ಈ ಮೇಲೆ ನೀಡಿದ ಸಲಹೆಯನ್ನೊಮ್ಮೆ ಪ್ರಯೋಗಕ್ಕೆ ತನ್ನಿ. ನೀವು ವೈಯಕ್ತಿಕವಾಗಿಯೂ ಜನಾನುರಾಗಿಯಾಗುತ್ತೀರಿ, ನಿಮ್ಮ ಪಕ್ಷಕ್ಕೂ ನಿಮ್ಮಿಂದ ಒಳ್ಳೆ ಹೆಸರು ಬರುತ್ತದೆ, ಜೊತೆಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಇದರ ಫಲವಾಗಿ ಒಳ್ಳೆ ಫಲಿತಾಂಶ ಸಹಜವಾಗಿ ಒಲಿದು ಬರುತ್ತದೆ. ವಿಧಾನಸಭಾ ಚುನಾವಣೆಯಲ್ಲಿ ಬೆವರು ಹರಿಸಿ ದುಡಿದ ನಿಮ್ಮ ಕಾರ್ಯಕರ್ತರ ಬಾಯಲ್ಲೇ,  " ಇಲ್ಲಿ ಇವರು ,ದೇಶಕ್ಕೆ ಮಾತ್ರ  ಮೋದಿ " ಎಂಬುದನ್ನು   ಕೇಳಿದ್ದೇನೆ.



ಒಮ್ಮೆ ನೀವು ಬದಲಾವಣೆ  ರೀತಿ ಕಾರ್ಯ ಶೈಲಿ ಅಳವಡಿಸಿಕೊಂಡರೆ ಮುಂದೆಂದೂ ನಿಮ್ಮ ರಾಜಕೀಯ ಜೀವನದಲ್ಲಿ ಸೋಲನ್ನು ಕಾಣುವದೇ ಇಲ್ಲ. ಜನ ಅಶಿಕ್ಷಿತನಿರಲಿ, ಸುಶಿಕ್ಷಿತನಿರಲಿ ತುಂಬಾ ಜಾಣರಿದ್ದಾರೆ, ನಿಮಗೆ ಶುಭವಾಗಲಿ.



ಹರಿಹರ ಭಟ್, ಬೆಂಗಳೂರು.
ಚಿಂತಕ, ವಿಮರ್ಶಕ,  ಹವ್ಯಾಸಿ ಪತ್ರಕರ್ತ .

www.hariharbhat.blogspot.com

June 22, 2013.

Monday, June 17, 2013

ರೂಪಾಯಿ ಇಪ್ಪತ್ತೈದು ಲಕ್ಷ ಘೋಷಿಸಿದ ಸಂಸದ, ಶ್ರೀ .ಎಚ್.ಎನ್.ಅನಂತಕುಮಾರ್ ಮತ್ತು ಲಕ್ಷ ಲಕ್ಷ ಕೊಡುಗೆ ಕೊಡುವತ್ತ ಮನಸ್ಸು ಇದೆ , ಪದಾಧಿಕಾರಿಗಳು ಇತ್ತ ಗಮನಹರಿಸಬೇಕೆಂದು ಸೂಚ್ಯವಾಗಿ ಅರುಹಿದ ನೂತನ ಕಾಂಗ್ರೆಸ್ ಶಾಸಕ ಶ್ರೀ. ಶಿವರಾಮ  ಹೆಬ್ಬಾರ.



ನಿನ್ನೆ ( ಜೂನ್ 17 , 2013  ) ಮಲ್ಲೇಶ್ವರದ ಹವ್ಯಕ ಸಭಾಭವನದಲ್ಲಿ ಹಬ್ಬದ ವಾತವರಣ. ಪ್ರಖರವಾದ ವಿಧ್ಯುದ್ದೀಪಾಲಂಕಾರದ ಜೊತೆಗೆ ಶುಭ್ರ , ಸ್ವಚ್ಚ, ಶ್ವೇತ ಬಣ್ಣದಿಂದ  ಕಂಗೊಳಿಸುವ . ನಮ್ಮ ನಿಮ್ಮೆಲ್ಲರ ಮನದ ಮೂಲೆಯಲ್ಲಿ ಹುದುಗಿರುವ ಸ್ವರ್ಗ ಸೌಂದರ್ಯವನ್ನು ನೆನಪಿಸುವ , ತಂಪು ಸೂಸಿ ಮನವನ್ನು ಪ್ರಫುಲ್ಲಗೊಳಿಸುವ , ಮುದ ನೀಡುವ ಮಾದಕ ಸೌಂದರ್ಯವನ್ನು ಹೊರಸೂಸುವಂತೆ ಶೃಂಗಾರಗೊಂಡ  ಸಭಾವೇದಿಕೆ. ದಾರಿಯುದ್ದಕ್ಕೂ ಬಣ್ಣ ಬಣ್ಣದ ವಸ್ತ್ರವಿನ್ಯಾಸದಿಂದೊಡಗೂಡಿದ ಶೃಂಗಾರ ಸ್ವಾಗತ. ಓಹೋ ಈ ಸಮಾಜದವರೆಲ್ಲಾ ಚಿಂತೆಯಿಂದ ವಿಮುಕ್ತಿ ಹೊಂದಿ ಸಮೃದ್ಧಿಯಲ್ಲಿ ಇಂದು ಬಾಳುತ್ತಿರುವವರೋ ಎಂಬಂತಹ ನಗು, ಕೇಕೆ  ಹೊರಸುಸುತ್ತ , ತಮ್ಮ ತಮ್ಮಲ್ಲಿ ಮಾತಿನ   ಹೊನಲು ಹಾರಿಸುತ್ತ , ಅತಿಥಿ - ಅಭ್ಯಾಗತರಿಗಾಗಿ   ಕಾದಿದ್ದ  ಸಮಯ,  ಆಗ ಸಾಯಂಕಾಲ ನಾಲ್ಕು ಗಂಟೆ.



ಹೌದು, ಹವ್ಯಕ ಸಮಾಜದವರೆಲ್ಲ ಸೇರಿ, ನೂತನ ವಿಧಾನ ಸಭೆ ಗೆ ನಡೆದ ಚುನಾವಣೆಯಲ್ಲಿ  ಆಯ್ಕೆಯಾದ ,  ವಿಪ್ರ ಜನಾಂಗದಲ್ಲಿ ಜನಿಸಿದ ಶಾಸಕರನ್ನು ಆಮಂತ್ರಿಸಿ, ಸನ್ಮಾನಿಸುವ ಈ ಕಾರ್ಯಕ್ರಮ ಅತಿ ವಿಝೃಂಬಣೆಯಿಂದ    ಸಂಪನ್ನವಾಯಿತು.  ಹವ್ಯಕ ಸಭಾಭವನ ಹವ್ಯಕ ಸಮಾಜದ ಹಿರಿಯರಿಂದ, ಗಣ್ಯರಿಂದ , ದಾನಿಗಳಿಂದ , ಚುರುಕು - ಚತುರ ಹವ್ಯಕ ಯುವ ಜನಾಂಗದಿಂದ ತುಂಬಿತ್ತು.



ಹವ್ಯಕ ಪದಾಧಿಕಾರಿಗಳಿಂದ ಪಾರಂಪರಿಕ ಆರಂಭದ   ಮಾತುಗಳು ಮುಗಿದೊಡನೆ, ಅತಿಥಿ - ಅಭ್ಯಾಗತರೆಲ್ಲ ಸೇರಿ ಜ್ಯೋತಿ ಬೆಳಗಿಸುವ ಕಾರ್ಯ ನೆರವೇರಿತು. ಸನ್ಮಾನಿತ ಶಾಸಕ ದಿನೇಶ್ ಗುಂಡುರಾವ್ ರವರು ಮಾತನಾರಂಭಿಸಿ ಈ ಕಾಲದ ಜಾತಿವ್ಯವಸ್ಥೆಯನ್ನು ನಾವು ಎಷ್ಟೇ ಅಲ್ಲಗಳೆದರೂ, ಎಲ್ಲ ನಿರ್ಧಾರಗಳಿಗೂ ಜಾತಿಯೇ ಪ್ರಧಾನವಾಗಿ ಪರಿಗಣಿಸಲ್ಪಡುತ್ತಿದೆ, ಮಂತ್ರಿಯಾಗಲೂ ಬ್ರಾಹ್ಮಣ ಗುಂಪಿನಲ್ಲೇ ಪೈಪೋಟಿ ನಡೆಸಬೇಕಾದುದು ಇಂದಿನ ಸ್ತಿತಿ , ಎಂದು ನೇರ ನುಡಿಯಿಂದ ವಾಸ್ತವಿಕತೆಯನ್ನು ಬಿಚ್ಚಿಟ್ಟರು. ಬ್ರಾಹ್ಮಣರು ಸಂಖ್ಯಾ ಬಲದಿಂದ ಆರಿಸಿಬರುವವರಲ್ಲ, ಎಲ್ಲ ಸಮಾಜದವರೊಡನೆ ಸ್ನೇಹ  ಸಂಪರ್ಕ, ಉತ್ತಮ ಸೇವಾ ಮನೋಭಾವ ಇಟ್ಟು ಮುನ್ನಡೆಯುವದರಿಂದ ಪುನಃ ಪುನಃ ಶಾಸನ ಸಭೆಗೆ ಆಯ್ಕೆಯಾಗಿ  ಬರುತ್ತಾರೆ  , ಈ ರೀತಿ ಆಯ್ಕೆಯಾಗಿ ಬಂದು ಎಲ್ಲ ಸಮಾಜದ ಸೇವೆ ಮಾಡುವದರ ಜೊತೆ , ತನ್ನ ಸಮಾಜದ ಬಗೆಗೂ ಕಾಳಜಿ ವಹಿಸುವ ಅವಶ್ಯಕತೆ ಇದೆ ಎಂದು ತಮ್ಮ ನೇರ , ವಾಸ್ತವಿಕ ನುಡಿಗಳಿಂದ ಸಭಿಕರೆಲ್ಲ ತಲೆದೂಗುವಂತೆ ಮಾಡಿದರು.



ನನ್ನ ಕ್ಷೇತ್ರ ಕಡೂರಿನಲ್ಲಿ ಇರುವದು ಐದು ನೂರು ಬ್ರಾಹ್ಮಣ ಮತದಾರರು ಮಾತ್ರ .  ನಲವತ್ತ್ಮೂರು ಸಾವಿರಕ್ಕೂ ಅಧಿಕ ಮತಗಳಿಂದ ಆಯ್ಕೆಯಾದ , ಬ್ರಾಹ್ಮಣನಾದ ನಾನೇ ನಿಜವಾದ  ಜಾತ್ಯಾತೀತವಾದದ   ಹರಿಕಾರ , ಪ್ರತಿನಿಧಿ ಎಂದು ಅತಿ ಅಭಿಮಾನದಿಂದ ನುಡಿದರು. ಆರಂಭದಲ್ಲಿ ತನ್ನ ಗೋತ್ರ ಪ್ರವರವನ್ನು ಹೇಳಿ ಎಲ್ಲರಿಗೂ ಅಭಿವಾದಯೇ ಎನ್ನುತ್ತಾ  , ಈ ಆರಂಭದ ವಿಶ್ಲೇಷಣೆ ಮಾಡಿದರು. ಅನಂತಕುಮಾರರಾದಿಯಾಗಿ ಎಲ್ಲರು ತಾನು ಬ್ರಾಹ್ಮಣನೆಂದು ಹೇಳಿಕೊಳ್ಳಬೇಕಾಗಿಲ್ಲ , ಪಕ್ಷವೇ ಗುರುತನ್ನು ಪ್ರತಿನಿಧಿಸುವದು ಸಾಮಾನ್ಯರ ಅರಿವು, ಆದರೆ ನಾನೊಬ್ಬ ಬ್ರಾಹ್ಮಣ, ಬ್ರಾಹ್ಮಣವಾದಿ ಅಲ್ಲವೆಂಬ ರೀತಿ ಸಮಾಜದಲ್ಲಿ ತೋರಿಸಿಕೊಂಡಿರುವ  ಪಕ್ಷವೊಂದರಲ್ಲಿದ್ದರೂ ಬ್ರಾಹ್ಮಣನಾಗಿ , ಬ್ರಾಹ್ಮಣ್ಯ ಬಲದಿಂದಲೇ , ಬ್ರಾಹ್ಮಣೇತರರ ಬೆಂಬಲದಿಂದ ಆಯ್ಕೆಯಾಗಿ ಬಂದಿರುವ ಶಾಸಕ.  ನಾನೂ ಯಾವ ಬ್ರಾಹ್ಮಣ ಶಾಸಕರಿಗೂ  ಬ್ರಹ್ಮ ಹಿತ, ಬ್ರಾಹ್ಮಣ ಚೇತೊಹಾರಿಕೆಯಲ್ಲಿ ಕಮ್ಮಿಯಿಲ್ಲ , ನನ್ನ ಬೆಂಬಲ ಸದಾನಿಮ್ಮೊಡನಿರುತ್ತದೆ ಎಂದು, ಸ್ವರ್ಣವಲ್ಲಿ ಗುರುಗಳು , ಆ ಪ್ರದೇಶಗಳೂ ತಮ್ಮೊಡನೆ ಇರುವ ಸಂಭಂದಹಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟು ಜನರ ಅಭಿಮಾನ ಗಳಿಸಿದರು.


ನಮ್ಮ ಕಾಗೇರಿಯವರು ನಮ್ಮ ಹವ್ಯಕ ಭಾಷೆಯಲ್ಲಿ ಮಾತನಾಡಿ ಕೃಷಿಯನ್ನು ಅವಲಂಬಿಸಿ, ಬ್ರಾಹ್ಮಣ್ಯವನ್ನು ಕಾಪಿಟ್ಟು , ಗೋ ಸಂರಕ್ಷಣೆ , ಗೀತಾ ಪಠಣ , ಯಕ್ಷಗಾನ ಕಲೆ ಉಳಿಸುತ್ತ , ಬೆಳೆಸುತ್ತ ಬಂದ ಹವ್ಯಕರು ಬ್ರಾಹ್ಮಣರಲ್ಲೇ   ವೈಶಿಷ್ಠ್ಯತೆ ಹೊಂದಿದವರು,   ಈ ಕಾಲ ಘಟ್ಟದಲ್ಲಿ ಕೈಗೊಳ್ಳುತ್ತಿರುವ ನೂತನ ಕಟ್ಟಡ ಯೋಜನೆಗೆ ತಮ್ಮೆಲ್ಲರಿಂದ ಹೆಚ್ಚಿನ ಧನ ಸಹಾಯ ಅಪೇಕ್ಷಿಸುತ್ತಿದ್ದಾರೆ    ಎಂದು  ಅಹವಾಲನ್ನಿತ್ತರು.


ನಂತರ ಮಾತನಾಡಿದ ಯಲ್ಲಾಪುರದ ಶಾಸಕ ಶ್ರೀ ಶಿವರಾಮ ಹೆಬ್ಬಾರ, ಅರಬೈಲು ಹವ್ಯಕ ಸಮಾಜದ ಈ ಕಾಲಮಾನದ ಸ್ತಿತಿ ಗತಿಗಳನ್ನು ಬಹಳ ಸೂಕ್ಷ್ಮವಾಗಿ ಅಭ್ಯಸಿಸಿದಂತೆ ಕಂಡುಬಂದಿದ್ದು ವಿಶೇಷವಾಗಿ ಉಲ್ಲೇಖನೀಯ. ಹವ್ಯಕ ಸಮಾಜ ಮುಂದುವರಿದ ಸಮಾಜ, ಅವರಿಗೆ ಯಾವುದೇ ಆಸರೆಯ ಅವಶ್ಯಕತೆಗಳಿಲ್ಲ ಎಂಬಂತೆ ಇತರೆ ಸಮಾಜದವರು ಅಭಿಪ್ರಾಯ ಹೊಂದಿದ್ದಾರೆ, ಆದರೆ ಇದು   ವಸ್ತವಿಕತೆಯಿಂದ ಬಹು ದೂರ. ಹವ್ಯಕರಲ್ಲಿ ಅತಿ ಕಡು ಬಡವರಿದ್ದಾರೆ, ಇಂದೂ ಗುಡಿಸಲುಗಳಲ್ಲಿ ಗುಡ್ಡಗಾಡಿನಂತಹ ಪ್ರದೇಶಗಳಲ್ಲಿ ಅತಿ ಹೀನಾಯ ಸ್ತಿತಿಗಳಲ್ಲಿ ಬದುಕುತ್ತಿದ್ದವರಿದ್ದಾರೆ,  " ನಾನು ಮತ್ತು ಕಾಗೇರಿ ಆ ರೀತಿ ಬದುಕುತ್ತಿರುವವರನ್ನು ದತ್ತು ತೆಗೆದುಕೊಂಡು ಐಎಎಸ್, ಐಪಿಎಸ್........  ಇತರೆ ಉದ್ಯೋಗಗಳಿಗೆ ತಯ್ಯಾರು ಮಾಡಬೇಕು " ಎಂಬ   ಮನದಾಳದ ಮಾತುಗಳಿಂದ ಪ್ರತಿಯೊಬ್ಬ ಹವ್ಯಕನ ಹೃದಯ ತಟ್ಟಿದರು.  ಹೆಬ್ಬಾರರು ಮುಂದುವರಿದು, ಸಭೆಯಲ್ಲಿ ಎದುರು ಆಸೀನರಾಗಿದ್ದ  ಶ್ರೀ ಎಂ.ಎನ್ .ಭಟ್ , ಮದ್ಗುಣಿಯವರ ಕಾರ್ಯಶೈಲಿಯನ್ನು ಮೆಚ್ಚುತ್ತ , ಹಿಂದೊಮ್ಮೆ ಬಡವಿಧ್ಯಾರ್ಥಿಗಳ ಆರ್ಥಿಕ ಸಹಾಯಕ್ಕೆ ದೇಣಿಗೆ ಪಡೆಯಲು ಸುಮಾರು ಎರಡು ನೂರು ಸಲ ಬೆಂಬಿಡದೆ ಫೋನ್ ಸಂಪರ್ಕ ಮಾಡಿ ಆ ಕಾಲದಲ್ಲೇ ತನ್ನಿಂದ ಹವ್ಯಕ ಮಹಾಸಭೆಗೆ ಎರಡೂ ವರೆ ಲಕ್ಷ ರೂಪಾಯಿಗಳಷ್ಟು ದೇಣಿಗೆ ಪಡೆದಿದ್ದನ್ನು ಸ್ಮರಿಸಿಕೊಂಡರು.  ಇಲ್ಲೇ ಮಜಾ ಇದ್ದಡ....... ಮತ್ತೆ ,......... ಅಲ್ದಾ ನೋಡಿ.  ಸೂಚ್ಯವಾಗಿ, ಸೂಕ್ಷ್ಮವಾಗಿ ಹೆಬ್ಬಾರರು ನಮ್ಮ ಮಹಾಸಭೆಯ ಈಗಿನ ಪದಾಧಿಕಾರಿಗಳಿಗೆ ನೀಡಿದ ಸಂದೇಶ - "  ಆಗಿನ ಕಾಲದಲ್ಲೇ ಎರಡುವರೆ ಲಕ್ಷದಷ್ಟು ಮೊತ್ತ ನೀಡಿದ ನಾನು ( ಹೆಬ್ಬಾರರು ), ಇಂದು ಶಾಸಕನಾಗಿ, ಆಡಳಿತ ಪಕ್ಷದ ಶಾಸಕನಾಗಿ ನಿಂತಿದ್ದೇನೆ, ದಾನ ನೀಡುವ ಮನಸ್ಸುಳ್ಳವನೆಂಬ ಹಂಬಲವನ್ನು ಆಗಲೇ ಪೂರೈಸಿದ್ದೇನೆ, ಈ ಕಾಲಮಾನದಲ್ಲಿ ನೀವು ( ಮಹಾಸಭೆಯವರು ) ಸಂಪರ್ಕವನ್ನು ಸಮಂಜಸವಾಗಿ ಸಾಧಿಸಿದರೆ ನನ್ನಿಂದ, ನನ್ನ ಸಂಪರ್ಕ ಸಾಧ್ಯತೆಗಳಿಂದ ಲಕ್ಷವೇಕೆ ಕೋಟಿಯನ್ನೇ ಸೇರಿಸಬಹುದು. "  ಇದಲ್ಲವೇ ಸಮಾಜ ಸ್ಪಂದನೆ?


ಕಲಶಕ್ಕೆ ಕಿರೀಟವಿಟ್ಟಂತೆ, ಸಾಂದರ್ಭಿಕವಾಗಿ, ಸಮಯೋಚಿತವಾಗಿ, ಸಾಮಾನ್ಯವಾಗಿ ಸ್ವಲ್ಪ ಜಾಸ್ತಿ ಎಮೋಷನಲ್ ಆಗಿ , ಹಿಯಣ್ಣನಂತೆ, ಹಿತಚಿಂತಕನಂತೆ ಯಾವುದೇ ಸಮಾಜದ ಯಾವುದೇ ಕಾರ್ಯಕ್ರಮದಲ್ಲಿರಲಿ , ಎಷ್ಟೇ ಕೆಲಸದ ಭರಾಟೆಯಿರಲಿ ಮುಗ್ಧವಾಗಿ   ಎಲ್ಲರೊಡನೆ ಬೆರೆಯುತ್ತಾ , ಹೊರಸೂಸುವ ನಗುವಿನೊಂದಿಗೆ ಇರುವ ಚೈತನ್ಯಶೀಲ ಅನಂತಕುಮಾರರವರು   ಮಾತನಾಡುತ್ತಾ, ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ಬದುಕುವ ಹವ್ಯಕರ ಬದುಕು ಪಶ್ಚಿಮ ಘಟ್ಟಗಳ ರಕ್ಷಣೆ, ಅಡಿಕೆ ಬೆಳೆಯ ರಕ್ಷಣೆಗಳಲ್ಲಡಗಿದೆ. ಅಡಿಕೆ ಮತ್ತು ತಾಂಬೂಲ ಹಾನಿಕಾರಕ ಎಂಬುದು ಸಂಸ್ಕೃತಿಗೆ ಮಾಡುವ ಅಪಮಾನ, ಗುಟ್ಕಾ ಮತ್ತು ಅಡಿಕೆ ಬೆಳೆಗೆ ಸಂಭಂಧ ಕಲ್ಪಿಸಿ, ಅಡಿಕೆ ಬೆಳೆಗಾರರಿಗಾಗುವ ಹಾನಿ ತಪ್ಪಿಸಲು ಕೇಂದ್ರ ಸರಕಾರ ಮುಂದಾಗಬೇಕು, ಈ ಕುರಿತು ಅಡಿಕೆ ಬೆಳೆಗಾರರ ಒತ್ತಾಸೆಯಾಗಿ ನಿಲ್ಲುವದಾಗಿ ಬರವಸೆ ನೀಡಿದರು. "ಪಶ್ಚಿಮ ಘಟ್ಟ ಉಳಿಸಿ " ಎಂದು ಅಭಿಯಾನ ಹವ್ಯಕ ಮಹಾಸಭೆಯಿಂದ ಆರಂಭವಾಗಬೇಕು, ಈ ದಿಶೆಯಲ್ಲಿ ಮೂರು ದಿವಸದ ಕಮ್ಮಟವೊಂದನ್ನು ಮಾಡಿ ಎಂದು ಸಲಹೆ ನೀಡಿದರು. ಹವ್ಯಕ ಮಹಾಸಭೆ ನನ್ನ ಸಂಸದ  ಕ್ಷೇತ್ರದಲ್ಲಿರದೆ ಇರುವದರಿಂದ ಸಂಸದ ನಿಧಿಯಿಂದ ಹಣ ನೀಡಲಾಗುವದಿಲ್ಲ ಆದರೆ ತನ್ನ ಮಿತ್ರ ರಾಜ್ಯಸಭಾ ಸದಸ್ಯರಿಂದ , ಮಹಾಸಭೆಯ ನೂತನ ಕಟ್ಟಡಕ್ಕೆ ಇಪ್ಪತ್ತೈದು ಲಕ್ಷ ರೂಪಾಯಿಗಳನ್ನು ಕೊಡಿಸುವದಾಗಿ ಆಶ್ವಾಸನೆಯಿತ್ತರು .  


ಸಭಾ ಕಾರ್ಯಕ್ರಮದ ಮಧ್ಯೆ ಸ್ಥಳೀಯ  ಶಾಸಕ ಡಾ. ಅಶ್ವತ್ಥನಾರಾಯಣ ರವರಿಂದ ಮಹಾಸಭೆಗೆ ಸಿಗುತ್ತಿರುವ ಪ್ರೋತ್ಸಾಹ, ಸಹಕಾರ ಕುರಿತು ಶ್ಲಾಘಿಸಲಾಯಿತು ಮತ್ತು ಮುಂದೆಯೂ ಇದೇ ರೀತಿ ಸಹಕಾರ ಕೋರಲಾಯಿತು,    


ಮಹಾಸಭೆಯ ಎಲ್ಲ ಕಾರ್ಯಕರ್ತರ ಶ್ರಮ, ಕಾರ್ಯಕ್ಷಮತೆಯಿಂದ ಈ ಕಾರ್ಯಕ್ರಮ ನೆನಪಿನಲ್ಲುಳಿಯುವಂತೆ ಸಂಪನ್ನಗೊಂಡಿತು.



ಹರಿಹರ ಭಟ್, ಬೆಂಗಳೂರು.
www.hariharbhat.blogspot.com
ಜೂನ್ 17 , 2013 .

 

Sunday, June 2, 2013

ಸರಕಾರಕ್ಕೆ ಇಚ್ಚಾ ಶಕ್ತಿ ಇದ್ದರೆ......

ಸರಕಾರಕ್ಕೆ ಇಚ್ಚಾ ಶಕ್ತಿ ಇದ್ದರೆ......


ಬೆಂಗಳೂರಿನ ರಾಜಕಾಲುವೆ ಮತ್ತು ಬದಿಯಲ್ಲಿರುವ ಶೋಲ್ಡರ್ ಡ್ರೈನ್ ಅಂದರೆ ಸುತ್ತಲಿನ ನೀರು ಹೋಗಿ ರಾಜಕಾಲುವೆ ಸೇರುವ ವ್ಯವಸ್ಥೆ  ಗೆ ಧೀರ್ಘ ಕಾಲದ ಇತಿಹಾಸ ಇದೆ. ಪ್ರತಿ ಬಾರಿ ಮಳೆ ಸುರಿದಾಗಲೂ ಈ ರಾಜಕಾಲುವೆ ಹಾಗು ಅದರ ತಮ್ಮಂದಿರು ಸುದ್ದಿಯಲ್ಲಿರುತ್ತಾರೆ. ಈ ಅವಕಾಶವನ್ನು ಸದುಪಯೋಗ ??? ಪಡಿಸಿಕೊಳ್ಳುವ ನಮ್ಮ ರಾಜಕೀಯ ನೇತಾರರು , ಕಾಲುವೆಗೆ ಚೆಲ್ಲುವ ಹಣದಿಂದಲೇ ತಾರಸಿ ಮನೆಗಳನ್ನು ಕಟ್ಟಿಕೊಂಡು ಸುಖವಾಗಿರುವ ಉದಾಹರಣೆಗಳು ಜನಸಾಮಾನ್ಯರ ಕಣ್ಣಿಗೆ ಕೋರೈಸುತ್ತಿವೆ. ಅದೇ ರೀತಿ   ಈ ರಾಜಕಾಲುವೆ ಸಮಸ್ಯೆಗಳು ಪರಿಹಾರ ಕಂಡರೆ ಮುಂದೆಲ್ಲಿ ಹಣ ಹೊಡೆಯುವ ಯೋಜನೆ ರೂಪಿಸುವದು  ಎಂಬ ಧೀರ್ಘ ಚಿಂತೆಗಳಿಂದ ಪರಿಹಾರ ಕಾಣದೆ , ಹದಿನೈದು ಇಪ್ಪತ್ತು ವರ್ಷಗಳಿಂದ ಈ ಸಮಸ್ಯೆಯನ್ನು ಜೀವಂತವಾಗಿರಿಸಿಕೊಂಡು ಬಂದಿದ್ದಾರೆ.



ಆಡಳಿತದಲ್ಲಿರುವ ಪಕ್ಷ ಯಾವುದಾದರೇನು, ಸಮಸ್ಯೆ ಸದಾ ಜೀವಂತವಾಗಿದೆ. ಅಷ್ಟೇಕೆ ಸದಾ ರಾಮ, ಕೃಷ್ಣ ಜಪಿಸುವ ಚುನಾವಣೆ ಬಂದೊಡನೆ ರಥವೇರುವ ನೇತಾರರು ಆಡಳಿತಕ್ಕೆ ಬಂದರೂ , ರಾಜ ಕಾಲುವೆಯ ಕೊಚ್ಚೆ  ಗಾಳಿ ಆಂಜನೇಯನ ಪದ ತಳದಲ್ಲೇ ಬಂದು ತನ್ನ ಸಮಸ್ಯೆಯ ಭೀಕರ ಮುಖವನ್ನು ಜನಸಾಮಾನ್ಯರಿಗೆ ತೋರ್ಪಡಿಸಿದರೂ ಪರಿಹಾರ ಕಾಣದ ಸಮಸ್ಯೆ ಇದಾಗಿದೆ.



ಈಗ ಮತ್ತೆ ಮಳೆಸುರಿಯುತಿದೆ. ರಾಜಕಾಲುವೆ ತನ್ನ ಸಹೋದರರೊಂದಿಗೆ ಮತ್ತೆ ಎದ್ದು ನಿಂತಿದೆ. ಮನೆಗಳು ಜಲಾವೃತವಾಗುತ್ತಿವೆ . ನುಗ್ಗಿ ಬಂದ ನೀರನ್ನು ಓಡಿಸುತ್ತಾ ಓಡಿಸುತ್ತಾ ಮುಗ್ಧ ಜೀವಿಯೊಬ್ಬರ ಜೀವ ಹರಣವಾಗಿದೆ. ಶಾಲೆಗಳು ಪುನರಾರಂಭವಾಗುವ ಕಾಲವಿದು. ಮಳೆ ಸುರಿಯತೊಡಗಿದರೆ ಆಶ್ರಯಕ್ಕಾಗಿ ಅಲ್ಲಲ್ಲಿ ಓಡುವ ಮುಗ್ಧ   ಬಾಲಕರು, ಬಾಲಕಿಯರು, ಮನೆಯಲ್ಲಿ ಗಾಬರಿಯಿಂದ ಕಾಯುತ್ತಿರುವ ಪಾಲಕರು , ರಸ್ತೆ ಮಧ್ಯೆ ಬೇಜವಾಬ್ಧಾರಿಯಿಂದ  ವಾಹನಗಳನು ಓಡಿಸಿ ಜೀವಹರಣ ಮಾಡುವ ವಾಹನಸವಾರರು ........... ಇವರೆಲ್ಲರ ಜೊತೆ ನಮ್ಮ ಬೆಂಗಳೂರು ಸದಾ ಓಡುತ್ತಿದೆ. ಜಗತ್ತಿನ ಎಲ್ಲಾ ಜನಾಂಗದ ಜನರನ್ನು ಕೈ ಬೀಸಿ ಕರೆಯುತ್ತಿದೆ. ಈಗಾಗಲೇ ತನ್ನ ಒಡಲಲ್ಲಿ ಆರು ಕೋಟಿ ಹತ್ತು ಲಕ್ಷ   ಜನರನ್ನು ಪೊರೆಯಬೇಕಾಗಿದೆ.  ಈ ಕೋಟಿ, ಕೋಟಿ ಜನರ ಜೀವ , ಐಶಾರಾಮಿ ಬಂಗಲೆಗಳಲ್ಲಿ ಬದುಕುತ್ತಿರುವ ಸಾವಿರಾರು ಜನರ ಕೈಲಿದೆ.



ವರ್ಷದಿಂದ ವರ್ಷಕ್ಕೆ ಹಣ ವ್ಯಯವಾಗುತ್ತಿದೆ ಪುಸ್ತಕದ ಭಾಷೆಯಲ್ಲಿ.......... ಹಣ ಪೋಲಾಗುತ್ತಿದೆ  ಜನರ ಭಾಷೆಯಲ್ಲಿ.  ಈ ಮಧ್ಯೆ ಆಶಾದಾಯಕ ಸುದ್ದಿಯೊಂದು ಬಂದಿದೆ. ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯನವರು " ಒಂದು ತಿಂಗಳಿನಲ್ಲಿ ರಾಜಕಾಲುವೆ ಸಮಸ್ಯೆ ಬಗೆಹರಿಸುವಂತೆ ಬಿ ಬಿ ಎಂ ಪಿ ಹೊಸ ಆಯುಕ್ತರಿಗೆ ಆದೇಶಿಸಿದ್ದಾರೆ".  ಅಧಿಕಾರಿ ವಲಯದಲ್ಲಿ ಕುಚೋದ್ಯದ ಪ್ರಶ್ನೆ ತೇಲುತ್ತಿದೆ, ಒಂದು ತಿಂಗಳು 2013  ರಲ್ಲೋ, 2014  ರಲ್ಲೋ..............2020  ರಲ್ಲೋ ............. 2030  ರಲ್ಲೋ...............ರಲ್ಲೋ  .......     ??????????



ಆದರೂ ಸರಕಾರಕ್ಕೆ ಇಚ್ಚಾ ಶಕ್ತಿ ಇದ್ದರೆ , ಎಲ್ಲವೂ ಸಾಧ್ಯ. ಕಾಯೋಣ.



ಹರಿಹರ ಭಟ್, ಬೆಂಗಳೂರು.
www.hariharbhat.blogspot.com
June  02 , 2013 .

Friday, May 31, 2013

ನೀರಿನ ಸಮಸ್ಯೆ - ಪರಿಹಾರಕ್ಕೆ ಸಲಹೆ.

ಸರಕಾರಕ್ಕೆ ಇಚ್ಚಾ ಶಕ್ತಿ ಇದ್ದರೆ, ಬೆಂಗಳೂರು ನಗರವೊಂದನ್ನು    ಪ್ರಾಯೋಗಿಕವಾಗಿ   ಆಯ್ಕೆ  ಮಾಡಿಕೊಂಡು  ಎಲ್ಲಾ ಬಡಾವಣೆಗಳಲ್ಲಿರುವ   CA  site  ಗಳಲ್ಲಿ  ಒಂದು ಸಾವಿರ ಅಡಿ ಆಳದ ಎಂಭತ್ತರಿಂದ ನೂರು ಅಡಿ ಅಗಲದ ನೆಲ ಬಾವಿಗಳನ್ನು ತೋಡಿ , ಸೂಕ್ತವಾದ ರಕ್ಷಣಾ ಗೋಡೆಯನ್ನು ಕಟ್ಟಿ  ಮಳೆಗಾಲದ ನೀರು ಸಂಗ್ರಹ ಮಾಡಬಹುದು.


ಈಗಿನ ದ್ಯತ್ಯ ಯಂತ್ರಗಳನ್ನು ಬಳಸಿಕೊಂಡು ಹದಿನೈದು ಇಪ್ಪತ್ತು ದಿವಸಗಳಲ್ಲಿ ಈ ಬಾವಿಗಳನ್ನು ತೋಡಿ ಇನ್ನೊಂದು ಹತ್ತು ಹದಿನೈದು ದಿವಸಗಳಲ್ಲಿ ಜನ, ಜಾನುವಾರುಗಳು ಬೀಳದಂತೆ ತಡೆಗೋಡೆಗಳನ್ನು ಕಟ್ಟಬಹುದು. ಹಿಂದೆ ರಾಜ ಮಹಾರಾಜರ ಕಾಲದಲ್ಲಿ ನಿರ್ಮಿಸಿದ ಹಲವು ನೆಲ ಬಾವಿಗಳು ಇನ್ನೂ ನೀರು ಸಂಗ್ರಹಿಸಿ ಅಲ್ಲಲ್ಲಿ ಸಮೃದ್ಧಿಯಾಗಿರುವದು ಕಂಡುಬರುವದು.


ಸರಕಾರ ಸಮರೋಪಾದಿಯಲ್ಲಿ ಕೆಲಸ ಕೈಗೊಳ್ಳಬೇಕು. ಶೃದ್ಧೆಯುಳ್ಳ  ಅಧಿಕಾರಿ, ಕಂಟ್ರಾಕ್ಟರ್ ಸಮೂಹ ಗುರುತಿಸಿ ಕೆಲಸ ಕೈಗೊಳ್ಳಬೇಕು. ಅವಶ್ಯವಿದ್ದರೆ ಟಾಸ್ಕ್ ಫೋರ್ಸ್ ರಚಿಸಿ ವಿಶೇಶ ಅಧಿಕಾರ ಕೊಡಬೇಕು. ಕೆಲಸ ಮುಗಿದೊಡನೆ ಈ ಕಾರ್ಯದ ಶುಭಾಶುಭ ಗಳನ್ನು ಅಭ್ಯಸಿಸಲು ಪರಿಣಿತರ ತಂಡವೊಂದನ್ನು ರಚಿಸಬೇಕು. ಈ ಎಲ್ಲ ಕಾರ್ಯಗಳಾಗಲು ಮುಖ್ಯಮಂತ್ರಿಯವರ ನೇತ್ರತ್ವದಲ್ಲಿ ಎಲ್ಲ ಅಧಿಕಾರವುಳ್ಳ ಸಮಿತಿಯೊಂದನ್ನು ಕೂಡಲೆ ರಚಿಸಿ, ಕಾರ್ಯಪೃವ್ರತ್ತರಾಗಬೇಕು.


ಆದೀತಲ್ಲವೇ ಸಿದ್ಧರಾಮಯ್ಯನವರೇ ?  ನೀರಿನ ಸಿದ್ದರಾಮಯ್ಯ ಎಂದು ಹೆಸರು ಗಳಿಸಿ ಚರಿತ್ರೆಯಲ್ಲಿ ಶಾಶ್ವತವಾಗಿರಬಹುದಲ್ಲವೇ, ನಜೀರ ಸಾಬರಂತೆ.


ಆಗದು ಎಂದು ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಎಂದೆಂದೂ ,/
ಎಲ್ಲರಂತೆ ನಡೆದರೆ ಸಿದ್ಧರಾಮಯ್ಯ , ಆಗುವರು ಹತ್ತರಲಿ ಹನ್ನೊಂದು,//
ಸಿಕ್ಕಿದ ಅವಕಾಶ ಬಳಸದೆ ಇದ್ದರೆ , ಸಿಗದು ಅವಕಾಶ ಇನ್ನೆಂದೂ,/
ನಾಳೆ, ನಾಡಿದ್ದು ಎನ್ನದೆ, ಇಂದೇ ನಡೆಯಲಿ ಪ್ರಜಾಹಿತ ಎಂದೆಂದೂ.//




ಹರಿಹರ ಭಟ್, ಬೆಂಗಳೂರು.

Saturday, May 25, 2013

ನಾಗೇಶ್ ಹೆಗಡೆಯವರು ಮಂಡಿಸಿದ ಅಭಿಪ್ರಾಯಗಳಿಗೆ ಇಂದಿನ ಸಮಾಜದಲ್ಲಿ ಗೋ ರಕ್ಷಕರು,

ನೋಡಿ  ನಾವೀಗ ಬದುಕುತ್ತಿರುವದು ಪ್ರಜಾಪ್ರಭುತ್ವದಲ್ಲಿ. ಇಷ್ಟವೋ , ಅನಿಷ್ಟವೋ ಪ್ರಜಾಪ್ರಭುತ್ವದ ನೀತಿ ನಿಯಮಗಳಿಗೆ ಅನುಸಾರವಾಗಿ ಬದುಕಬೇಕು. ಒಬ್ಬರ ವಾದ ಇನ್ನೊಬ್ಬರ ದೃಷ್ಟಿಯಲ್ಲಿ ಶುಷ್ಕವೆನಿಸಿದರೂ ಸಹ ಆ ವಾದಗಳಿಗೆ ತಮ್ಮ ಅಭಿಪ್ರಾಯ ರೂಪದಲ್ಲಿ ಪ್ರತಿವಾದ ನೀಡಿ ಸಹಕರಿಸಬೇಕಾದುದು ಸುಸಂಸ್ಕೃತ ಮನುಕುಲದ  ಮೂಲ ರೀತಿ , ನೀತಿ.  ಪ್ರತಿಯಾಗಿ ಹೊಣೆಗೇಡಿ ಉಗ್ರಗಾಮಿ ನಡೆಗಳತ್ತ ವಾಲುವದು ಮನುಕುಲಕ್ಕೆ ಧೀರ್ಘಾವಧಿಯಲ್ಲಿ ಮಾಡುವ ಅಪಚಾರ.


ನಾಗೇಶ್ ಹೆಗಡೆಯವರು ಮಂಡಿಸಿದ ಅಭಿಪ್ರಾಯಗಳಿಗೆ ಇಂದಿನ ಸಮಾಜದಲ್ಲಿ ಗೋ ರಕ್ಷಕರು, ಗೋ ರಕ್ಷಕರ ಅನುಸರಿಸುವವರು ಎಂದು ತಮ್ಮನ್ನು ಗುರುತಿಸಿಕೊಂಡವರು ಈ ಅವಕಾಶದಲ್ಲಿ ತಮ್ಮ ಮರು ಅಭಿಪ್ರಾಯಗಳನ್ನು ಹಂಚಿಕೊಳ್ಳಬೇಕು. ಜನ ಜಾಗ್ರತಿ ಎಂದರೆ ಊರಿಂದ ಊರಿಗೆ ಹೋಗಿ ಭಾಷಣ  , ಉಪನ್ಯಾಸಗಳನ್ನು ಮಾಡುವದು , ಆ  ಉಪನ್ಯಾಸಗಳಿಂದ   ಪ್ರೆರೇಪಿತರಾಗಿ ಒಂದು ವಿಲಕ್ಷಣ   ಉಗ್ರಗಾಮಿ ನೀತಿಗಳನ್ನು ಪ್ರಸರಿಸುವದು , ಪರಿಣಾಮವಾಗಿ ಸಮಾಜದ ಶಾಂತಿ ಕದಡಿದಾಗ ತಮ್ಮ ಸ್ವಾರ್ಥ ಅಂದರೆ hidden  agenda ಸಾಧಿಸುವದು ಆಗಬಾರದು.  ಸಮಾಜದಲ್ಲಿ  , ಅಭಿಪ್ರಾಯಗಳಿಂದ ವಿಭಾಗಿಸಲ್ಪಟ್ಟ ಜನಸಮೂಹದ ಹೊರತಾಗಿ, ಸ್ವತಂತ್ರ ಅಭಿಪ್ರಾಯಗಳನ್ನು ಹೊಂದಿ  ತಟಸ್ಥವಾಗಿ ಬದುಕುವ ಜನಸಂಖ್ಯೆ   ಅಪಾರವಾಗಿದೆ.  ಸನಾತನ ಧರ್ಮ ಅನುಸರಿಸುವವರಲ್ಲಿಯೂ ಯಾವುದೇ ಮಠ , ಮಂದಿರಗಳ ಚಟುವಟಿಕೆಗಳಲ್ಲಿ ಗುರುತಿಸಿಕೊಳ್ಳದೆ, ತಮ್ಮ ಸಂಸಾರ - ಜೀವನವನ್ನು ಸನಾತನ ಧರ್ಮ ಸೂತ್ರಗಳಿಗನುಗುಣವಾಗಿ ನಡೆಸಿಕೊಂಡು ನೆಮ್ಮದಿಯಿಂದ ಜೀವನ ಸಾಗಿಸುವವರ ಸಂಖ್ಯೆಯೇ ಜಾಸ್ತ್ಗಿ ಇದೆ.


ಇಂದಿನ ಜೀವನ ಕ್ರಮದಲ್ಲಿ ನಾಗೇಶ್ ಹೆಗಡೆಯವರು ಎತ್ತಿದ ಪ್ರತಿಯೊಂದು ಅಂಶವೂ ಪ್ರಸ್ತುತತೆ ಹೊಂದಿದೆ. ಶಾಸ್ತ್ರ, ವೇದ ಉಪನಿಷತ್ ಗಳಲ್ಲಿ ಪಾಂಡಿತ್ಯವಿಲ್ಲದಿದ್ದರೂ , ಒಬ್ಬರ ಅಭಿಪ್ರಾಯಗಳಿಗೆ ಇನ್ನೊಬ್ಬರು ನೀಡುವ ಪ್ರತಿವಾದಗಳನ್ನು ಅವಲೋಕಿಸಿ , ಹಂಸ ಕ್ಷೀರ ನ್ಯಾಯದಂತೆ ಯೋಗ್ಯವಾದುದನ್ನು ಆಯ್ಕೆ ಮಾಡಿಕೊಳ್ಳಲು ಇಂದಿನ ಜನಸಾಮಾನ್ಯನು ಪ್ರಭುದ್ಧತೆ ಹೊಂದಿದ್ದಾನೆ.  ಸರ್ವರಿಗೂ ಸಮಪಾಲು, ಸಹಬಾಳ್ವೆ ಎಂಬ ಇಂದಿನ   ಸಮಾಜ ಜೀವನದ  ಘೋಷಣೆಯನುಸಾರ,  ಹೆಗಡೆಯವರ ಈ ವಾದಗಳಿಗೆ ಎಲ್ಲಾ ಮಠ , ಮಂದಿರಗಳ ಪ್ರಮುಖರು ಸೂಕ್ತವಾದ ಅಭಿಪ್ರಾಯ, ಪ್ರತಿವಾದ, ಗೋ ರಕ್ಷಣೆ ಇಂದಿನ ಸಮಾಜ ಜೀವನದಲ್ಲಿ ಹೇಗೆ ಕಾರ್ಯ ಸಾಧು ಎಂಬುದನ್ನು ವ್ಯಕ್ತ ಪಡಿಸಬೇಕಾಗಿದೆ.  ಅದಿಲ್ಲದಿದ್ದರೆ ಮಠ , ಮಂದಿರಗಳ ಅನುಸರಿಸುವವರೂ ನಿಧಾನವಾಗಿ ದೂರಾಗುವದರಲ್ಲಿ ಯಾವುದೇ ಅನುಮಾನ ಕಾಣುವದಿಲ್ಲ.  ಈ ಮೂವತ್ತು ವರ್ಷಗಳ ಬದಲಾವಣೆಗಳಿಂದ ನಮ್ಮ   ಅರಿವಿಗೆ ಬಂದಿದ್ದೆಂದರೆ , ಈ ಕಾಲಘಟ್ಟದಲ್ಲಿ ಮಠ , ಮಂದಿರಗಳಿಗೆ ಹಣ ಕಾಸು , ಆಸ್ತಿ ಪಾಸ್ತಿಗಳ ಕೊರತೆಯಿಲ್ಲ, ನಿಜವಾದ ಕೊರತೆಯಿರುವದು ಭಕ್ತರ - ಸನಾತನೀಯ ಕುಟುಂಬಗಳ ಶಿಷ್ಯರ ಹಾಜರಾತಿ ಕೊರತೆ. ಈ ಬೆಳವಣಿಗೆಗಳು ಸೂಚಿಸುವ ಭಯಂಕರ ಅಷ್ಟೇ ಸತ್ಯವಾದ ವಿಷಯವೆಂದರೆ ಸನಾತನ ಧರ್ಮದ ತಿರುಳನ್ನು ಅರಿತ ಜನಾಂಗಗಳು ಇಂದಿನ   ಮಠ , ಮಂದಿರಗಳಿಂದ    ದೂರವಾಗುತ್ತಿದ್ದಾರೆ ಹಾಗೂ  ಮಠ , ಮಂದಿರಗಳಲ್ಲಿ ಸದಾಕಾಲ ತೋರಿಬರುವ ಜನರಲ್ಲಿ ಅವರದೇ ಆದ ಸ್ವಹಿತಾಸಕ್ತಿಗಳು, ರಾಜಕೀಯ ಹಿತಾಸಕ್ತಿಗಳು , ವಿವಿಧ ಸೋಗಿನಲ್ಲಿ ವಾಂಛೆ ಗಳನ್ನು ಹುದುಗಿಟ್ಟ ಮಂದಿ ಕಾಣಬರುತ್ತಾರೆ.  ಸನಾತನ ಧರ್ಮಕ್ಕೆ ಹಾಗೂ ಗೋ ರಕ್ಷಣೆ, ಗೋ ಹಿತ್ತಸಕ್ತಿಗಳಿಗೆ ನಿಜವಾದ ಅನಾಹುತಗಳಾಗುತ್ತಿರುವದು ಈ ರೀತಿ ಸ್ವಹಿತಕ್ಕಾಗಿ, ಸಾಮಾಜಿಕ ವ್ಯವಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ದಿನೇ ದಿನೇ ಪ್ರಭಾವಿ ಗುಂಪುಗಳಾಗಿ ಮಾರ್ಪಡುತ್ತಿರುವ ಜನಸಮೂಹದಿಂದ ಮಾತ್ರ.


ಇನ್ನು ನಾಗೇಶ ಹೆಗಡೆಯವರಲ್ಲಿ ನನ್ನದೊಂದು ಪ್ರಶ್ನೆಯಿದೆ. ನೈಸರ್ಗಿಕ ನಿಯಮವೇ ಒಬ್ಬರನ್ನು ತಿಂದು ಇನ್ನೊಬ್ಬರು ಬದುಕುವದು ಎಂಬ ನೀತಿ ಪಾಠ. ಡಾರ್ವಿನ್ನನ ವಿಕಾಸವಾದದಂತೆ, ಅರಣ್ಯಗಳಲ್ಲಿ ಅಂಡಲೆಯುವ ಮಾನವನ ಇತಿಹಾಸದಂತೆ , ಇನ್ನೂ ಪ್ರಚಲಿತವಿರುವ ಆಫ್ರಿಕಾ ದೇಶದಲ್ಲಿ  ಮನುಷ್ಯನ ಮಾಂಸವನ್ನೇ ತಿಂದು ಹಸಿವನ್ನು ಇಂಗಿಸಿಕೊಳ್ಳುವ ಜನಾಂಗ Cannibals ಗಳಂತೆ ಬದುಕುವ ವ್ಯವಸ್ಥೆಗೆ ನಮ್ಮ ಇಂದಿನ ಸಮಾಜ ಹಿಂಬಡ್ತಿ ಪಡೆಯಬೇಕೆ  ?  ಪ್ರಾಣಿಸಮೂಹಕ್ಕೆ ಅನ್ವಯವಾಗುವ ಈ ನೈಸರ್ಗಿಕ ಕಾನೂನನ್ನು ಮಾನವ ಜನಾಂಗಕ್ಕೂ ಅನ್ವಯಿಸಿ ತಮ್ಮ ವಾದವನ್ನು ಪುಷ್ಟೀಕರಿಸಬೇಕಾದ , ಬೌದ್ಧಿಕ ಕೊರತೆ - ದೌರ್ಬಲ್ಯ ತಮ್ಮಲ್ಲಿಲ್ಲದಿದ್ದರೂ  ಆ ಪ್ರಲೋಭನೆಗೇಕೆ ಒಳಗಾಗುತ್ತೀರೀ ? ಆ ರೀತಿಯ ಮಾನಸಿಕ,  ಬೌದ್ಧಿಕ ಪ್ರಲೋಭನೆಗೊಳಗಾದ ನಮ್ಮ ರಾಜಾಕೀಯ   ನೇತಾರರು, ಧಾರ್ಮಿಕ ನೇತಾರರು , ಸಾಮಾಜಿಕ ನೇತಾರರು ನಮ್ಮ ನಿತ್ಯ ಜೀವನವನ್ನು ಅಂದರೆ ಬಹುತೇಕ ಜನಸಾಮಾನ್ಯರ ನಿತ್ಯ ಜೀವನವನ್ನು ನರಕ ಸದೃಶವಾಗಿ ಬದಲಾಯಿಸಿರುವದು ತಮ್ಮ ಗಮನಕ್ಕೆ ಬಂದೇ ಬಂದಿರುತ್ತದೆ.  ಈ ದುರದೃಷ್ಟಕರ   ಬೆಳವಣಿಗೆಗಳಿಗೆ ಸ್ಪಂದಿಸದಿರುವ ಜಾಣ ಕುರುಡುತನ ಪ್ರದರ್ಶನವೇ, ತಮ್ಮಿಂದ ?


ನನ್ನ ತಿಳುವಳಿಕೆ ಪ್ರಕಾರ ತಾವು ಇನ್ನೊಂದು   ಅಂಶವನ್ನು ಗಮನಿಸಿಲ್ಲ, ಚರ್ಚಿಸಿಲ್ಲ ಅಥವಾ ಮತ್ತೆ ಜಾಣ ಕುರುಡುತನ ಕಾರಣವೋ ತಿಳಿಯುತ್ತಿಲ್ಲ. ನಮ್ಮ ಸುತ್ತ ಮುತ್ತ ನಾವು ವಾಸಿಸುವ ಈ ಭೂಮಿಯಲ್ಲಿ ಸಾವಿರಾರು ಏಕೆ ಸೂಕ್ಷ್ಮವಾಗಿ ಯೋಚಿಸಿದರೆ ಲಕ್ಷಗಟ್ಟಲೆ ಮಾನವ ಪ್ರಭೇದಗಳನ್ನು(ವಿಚಾರ ಸರಣಿ, ಬದುಕುವ ರೀತಿ ) ಕಾಣುತ್ತೇವೆ.  ಅದೇ ರೀತಿ ದೇಶ ದೇಶ, ಪ್ರದೇಶ ಪ್ರದೇಶಗಳಲ್ಲಿ ವಾಸಿಸುವ ಜನಗಳಲ್ಲಿ ವಿಚಾರ ಭೇಧ, ಪ್ರಭೇದ ಗಳನ್ನು ಕಾಣುತ್ತಿದ್ದೇವೆ, ಅರಿತಿದ್ದೇವೆ. ಒಬ್ಬರಿಗೆ ಸರಿಯಾಗಿ ಅನಿಸಿದ್ದು ಇನ್ನೊಬ್ಬರಿಗೆ ಸರಿ ಎನಿಸುವದಿಲ್ಲ ಅಥವಾ ತಪ್ಪು ಎಂದೇ ಅನಿಸುತ್ತದೆ.  ವೈಜ್ಞಾನಿಕವಾಗಿ , ದೇಹದ ಜೈವಿಕ ಬೆಳವಣಿಗೆಗನುಸಾರವಾಗಿ ಇರುವ ಮೆದುಳು ಈ ರೀತಿ ವಿಚಾರ ಪ್ರಭೇದಗಳಿಗೆ ಕಾರಣ ಎಂಬುದು   ಸರ್ವೇ ಸಾಮಾನ್ಯವಾಗಿ ಒಪ್ಪಿಕೊಂಡ ವಿಚಾರ.  ಈ ರೀತಿ ಜೈವಿಕ ಬೆಳವಣಿಗೆಗಳಿಗೆ ಆಹಾರ ಪದ್ಧತಿ , ನೇರವಾಗಿ ಹೇಳುವದಾದರೆ ಗೋ ಮಾಂಸ ಭಕ್ಷಣೆ ಯಾವ ರೀತಿ ಅನುಕೂಲ ಅಥವಾ ಅನಾನುಕೂಲ , ಪ್ರತಿಕೂಲ ಸ್ಥಿತಿ ನಿರ್ಮಿಸುವದೆಂಬುದರ   ಕುರಿತು ಇರುವ ಅಭ್ಯಾಸವೇನಾದರೂ ತಮ್ಮ ಗಮನದಲ್ಲಿದೆಯೇ?


ನಾಗೇಶ್ ಹೆಗಡೆಯವರಲ್ಲಿ ಒಂದು ವಿನಂತಿ. ನನ್ನ ಈ ವಿಚಾರಗಳನ್ನು ಓದಿ ನನ್ನನ್ನು ಯಾವುದೇ ರೀತಿ brand  ಆಗಿಸಬೇಡಿ.  ನಾನು ಯಾವುದೇ brand  ನ ವಿಚಾರಗಳಿಗೆ ಕಟ್ಟುಬಿದ್ದಿರುವವನಲ್ಲ.   ಸದ್ವಿಚಾರ, ಜೀವನಕ್ಕೆ ಉಪಯೋಗಿಯಾಗಬಲ್ಲ  ಯಾವುದೇ ವಿಚಾರಗಳಿದ್ದರೆ  ಸ್ವಾಗತಿಸುವ ನಿಲುವು ಹೊಂದಿದವನಾಗಿದ್ದೇನೆ.


ತಮ್ಮ ಅಭಿಪ್ರಾಯಗಳನ್ನು ನಿರೀಕ್ಷಿಸುತ್ತಿದ್ದೇನೆ.


ಹರಿಹರ ಭಟ್, ಬೆಂಗಳೂರು.
ಶಿಕ್ಷಕ, ಚಿಂತಕ, ವಿಮರ್ಶಕ, ಹವ್ಯಾಸಿ ಪತ್ರಕರ್ತ / ಬರಹಗಾರ.
www.hariharbhat.blogspot.com
May 26 , 2013.


ನಾಗೇಶ ಹೆಗಡೆ: ಗೋಹತ್ಯೆ ಗೋಜಲು! ಒಂದಿಷ್ಟು ವಾಸ್ತವ, ಒಂದಿಷ್ಟು ವಿಜ್ಞಾನ, ಒಂದಿಷ್ಟು ವಿವೇಕ

ಕರ್ನಾಟಕದಲ್ಲಿ ಗೋಹತ್ಯೆಯನ್ನು ನಿಷೇಧಿಸಬೇಕೆಂದು ಬಿಜೆಪಿ ಸರಕಾರ ನಿರ್ಧರಿಸಿರುವಾಗ ಅದನ್ನು ಏಕೆ ವಿಚಾರವಾದಿಗಳು ವಿರೋಧಿಸುತ್ತಿದ್ದಾರೆ? ರೈತರ ಹೆಸರಿನಲ್ಲೇ ಪ್ರಮಾಣ ಮಾಡಿ ಅಧಿಕಾರಕ್ಕೆ ಬಂದು ‘ರೈತಪರ’ ಸರಕಾರ ಎಂದು ಹೇಳಿಕೊಳ್ಳುವವರು ರೈತರ ಹಿತಾಸಕ್ತಿಗೆ ಧಕ್ಕೆ ತರುವಂಥ ಕೆಲಸವನ್ನು ಎಂದಾದರೂ ಮಾಡುತ್ತಾರೆಯೆ?
ಮೊದಲನೆಯದಾಗಿ ಇದರಲ್ಲಿ ರೈತರ ಹಿತಾಸಕ್ತಿ ಒಂದೇ ಅಲ್ಲ, ಇಡೀ ಸಮಾಜದ ಹಿತಾಸಕ್ತಿಯ ಪ್ರಶ್ನೆಯಿದೆ. ಅವನ್ನು ಮುಂದೆ ನೋಡೋಣ. ಸದ್ಯಕ್ಕೆ ರೈತರ ವಿಚಾರವನ್ನೇ ಮೊದಲು ಚರ್ಚಿಸೋಣ. ರೈತರಿಗೆ ಪಶು ಎಂದರೆ ಕೇವಲ ದನ ಅಲ್ಲ, ಅದು ಪಶು’ಧನ’ ಎನ್ನಿಸಿತ್ತು. ರೈತ ಸಮುದಾಯಕ್ಕೆ ಜಮೀನು-ಮನೆ ಇವು ಶಾಶ್ವತ ಆಸ್ತಿ ಆಗಿದ್ದಂತೆ, ಗಿಡಮರ ಮತ್ತು ಸಾಕುಪ್ರಾಣಿಗಳು ಚರಾಸ್ಥಿ (ಲಿಕ್ವಿಡ್ ಅಸೆಟ್) ಎನಿಸಿದ್ದವು. ಕಷ್ಟ ಬಂದಾಗ, ಇವನ್ನು ಮಾರಿ ನಂತರ ಕಷ್ಟಗಳೆಲ್ಲ ನೀಗಿದ ಮೇಲೆ ಮತ್ತೆ ಅವನ್ನು ಗಳಿಸಿ, ಬೆಳೆಸಿಕೊಳ್ಳುವ ಒಂದು ಸುಭದ್ರ ವ್ಯವಸ್ಥೆ ಇದಾಗಿತ್ತು. ತಾನು ಬೆಳೆಸಿದ ಮರಗಳ ಬಗ್ಗೆ ಅಥವಾ ಹಸು-ಹೋರಿಗಳ ಬಗ್ಗೆ ಅದೆಷ್ಟೇ ಪ್ರೀತಿ ಇದ್ದರೂ ಅನಿವಾರ್ಯ ಪ್ರಸಂಗಗಳಲ್ಲಿ ಅವುಗಳಿಗೆ ವಿದಾಯ ಹೇಳುವ ಒಂದು ಸುಸ್ಥಿರ ವ್ಯವಸ್ಥೆಯನ್ನು ರೈತ ಸಮುದಾಯ ರೂಢಿಸಿಕೊಂಡಿತ್ತು. ದಯೆ, ಪ್ರೀತಿ, ಮಮಕಾರದ ಬಂಧನಗಳ ನಡುವೆಯೇ ವಾಸ್ತವದ ಅರಿವೂ ಅವರಿಗಿತ್ತು. ಕಾಯಿಲೆ ಬಿದ್ದ ಪತ್ನಿಯನ್ನು ಉಳಿಸಿಕೊಳ್ಳುವುದು ಮುಖ್ಯವೊ ಅಥವಾ ಕೊಟ್ಟಿಗೆಯ ಪ್ರೀತಿಯ ದನ ಮುಖ್ಯವೊ ಎಂಬ ಪ್ರಶ್ನೆ ಎದುರಾದಾಗ ದನವನ್ನು ಮಾರಿ ಪತ್ನಿಗೆ ಚಿಕಿತ್ಸೆ ಕೊಡುವ ಸ್ವಾತಂತ್ರ್ಯ ರೈತನಿಗಿತ್ತು. ಈಗಿನ ಸರಕಾರ ಅವನ ಆ ಮೂಲಭೂತ ಸ್ವಾತಂತ್ರ್ಯವನ್ನೇ ಪರೋಕ್ಷವಾಗಿ ಕಿತ್ತುಕೊಳ್ಳುತ್ತಿದೆ.
ಹಾಗೇನಿಲ್ಲವಲ್ಲ? ಹಸು ಅಥವಾ ಎತ್ತನ್ನು ಈಗಲೂ ಮಾರಬಹುದು. ಆದರೆ ಕಟುಕರಿಗೆ ಮಾರಬಾರದು….
ಐದನೇ ಸೂಲು ಮುಗಿದ ಹಸುವನ್ನು ಬೇರೆ ಯಾರು ಯಾಕೆ ಕೊಳ್ಳುತ್ತಾರೆ? ರೈತನ ಕೊಟ್ಟಿಗೆಯಲ್ಲೇ ಅದು ಮುದಿಯಾಗಬೇಕು. ಹಾಲು ಕೊಡದಿದ್ದರೂ ಬದುಕಿದ್ದಷ್ಟು ದಿನವೂ ಅದಕ್ಕೆ ಮೇವು ಹಾಕಬೇಕು. ಕಾಯಿಲೆ ಬಿದ್ದರೆ ಪಶುವೈದ್ಯರನ್ನು ಕರೆಸಬೇಕು. ದಿನವೂ ಅದರ ಸೆಗಣಿ ಗಂಜಳ ಬಾಚಬೇಕು. ಮೈ ತೊಳೆಸಬೇಕು. ಬಿಸಿಲಲ್ಲಿ ಓಡಾಡಿಸಬೇಕು. ಪ್ರತಿ ತಿಂಗಳು ಕನಿಷ್ಠ ಸಾವಿರ ರೂಪಾಯಿಗಳನ್ನು ಅದಕ್ಕೆಂದು ವೆಚ್ಚ ಮಾಡಬೇಕು.
ಸೆಗಣಿ-ಗಂಜಳ ಗೊಬ್ಬರವನ್ನು ಮಾರಿದರೆ ಹಣ ಬರುತ್ತದಲ್ಲ?
ಹಿಂದೆಲ್ಲ ಅದು ಸಾಧ್ಯವಿತ್ತು. ಹಗಲೆಲ್ಲ ಅದು ತನ್ನ ಪಾಡಿಗೆ ಗುಡ್ಡಬೆಟ್ಟ ಮೇಯ್ದು ಬಂದು ರಾತ್ರಿ ತಂಗಿದರೂ ತುಸುಮಟ್ಟಿಗೆ ಲಾಭದಾಯಕವೇ ಆಗಿತ್ತು. ಆದರೆ ಈಗ ಮೇಯಲು ಏನಿದೆ? ಗೋಮಾಳ ಎಲ್ಲಿ ಉಳಿದಿವೆ? ಇತ್ತ ಹೋದರೆ ಅಕೇಶಿಯಾ, ಅತ್ತ ಹೋದರೆ ನೀಲಗಿರಿ. ಹಾಗಾಗಿ ಕಟ್ಟಿಯೇ ಮೇವು ಸಾಕಬೇಕು. ಹಣಕೊಟ್ಟು ಖರೀದಿಸಿದ ಮೇವು ಹಾಕಬೇಕು. ಒಂದು ದಿನ ಆ ಹಸು ಸತ್ತು ಹೋಗುತ್ತದೆ. ಏನು ಮಾಡುವುದು? ಅದನ್ನು ಎಳೆದು ದೂರ ಬಿಸಾಕಲು ಹಳ್ಳಿಯಲ್ಲಿ ನಾಲ್ಕು ಜನ ಸಹಾಯಕರು ಸಿಗುವುದಿಲ್ಲ. ಹಿಂದಿನ ಕಾಲದಲ್ಲಿ ಹೆಣವನ್ನು ರಣಹದ್ದುಗಳು, ನರಿ-ಕಿರುಬಗಳು ಎರಡೇ ದಿನದಲ್ಲಿ ಖಾಲಿ ಮಾಡುತ್ತಿದ್ದವು. ಈಗ ಅವು ಯಾವವೂ ಇಲ್ಲ. ಕೊಳೆತ ಭಾಗಗಳು ನಾರುವುದಲ್ಲದೇ ರೋಗಗಳನ್ನು ಹಬ್ಬಿಸುತ್ತವೆ. ಅಂಥ್ರಾಕ್ಸ್ ವಿಷಾಣುಗಳು ಮನುಷ್ಯರಿಗೆ ಪ್ರಾಣಾಪಾಯ ಉಂಟುಮಾಡುತ್ತವೆ. ಊರ ನಾಯಿಗಳು ರೋಗಗ್ರಸ್ತ ಕೊಳೆತ ಬಿಡಿಭಾಗಗಳನ್ನು ಎಳೆದಾಡಿ, ಊರಿನೊಳಕ್ಕೂ ತಂದು ರಗಳೆ ಆಗುತ್ತದೆ. ಇವೆಲ್ಲವನ್ನು ಅನುಭವಿಸಿದಿ ಊರಿನ ಜನರು ಸತ್ತ ದನವನ್ನು ಸಮೀಪವೆಲ್ಲೂ ಬಿಸಾಕಲು ಬಿಡುವುದಿಲ್ಲ. ಹತ್ತಿರದಲ್ಲೇ ಎಲ್ಲಾದರೂ ಗುಂಡಿ ತೋಡಿ ಹೂಣಬೇಕೆಂದರೆ ಆರಡಿ ಉದ್ದದ, ನಾಲ್ಕಡಿ ಆಳದ ಗುಂಡಿ ತೋಡಲು ಜನರು ಸಿಗುವುದಿಲ್ಲ. ‘ಜೆಸಿಬಿ ತರಿಸಿ’ ಎನ್ನುತ್ತಾರೆ. ಅವರಿವರನ್ನು ಬೇಡಿಕೊಂಡು ಜೆಸಿಬಿ ತರಿಸಿದರೆ ಕನಿಷ್ಠ ಅದು ಬೇಸಿಗೆಯ ಕಾಲವಾಗಿದ್ದರೆ ಎರಡು ಸಾವಿರ ರೂಪಾಯಿ ತೆರಬೇಕು. ಸೆಗಣಿ ಗಂಜಳದಿಂದ ಗಳಿಸಿದ ಹಣವೆಲ್ಲ ಅದರ ಸಂಸ್ಕಾರಕ್ಕೇ ಹೋಗುತ್ತದೆ. ಅಂತೂ ಒಂದು ಮುದಿ ದನ ಮನೆಯಲ್ಲಿದ್ದರೂ ಕಷ್ಟ, ಸತ್ತರೆ ಇನ್ನೂ ಕಷ್ಟ ಎಂಬ ಸ್ಥಿತಿ ಬರುತ್ತದೆ.
ಸತ್ತ ದನವನ್ನು ಮಾರಬಹುದಲ್ಲ? ಅದಕ್ಕೆ ಹೊಸ ಕಾನೂನಿನಲ್ಲಿ ಅವಕಾಶ ಇದ್ದೇ ಇರುತ್ತದೆ.
ಮಾರುವುದು ಸುಲಭವೆ? ದನವೊಂದು ಸತ್ತ ತಕ್ಷಣ ಪಶುವೈದ್ಯರನ್ನು ಕರೆಸಿ, (ಅವರು ತುರ್ತಾಗಿ ಬಂದರೆ) ದನ ಸತ್ತಿದೆ ಎಂದು ಪ್ರಮಾಣಪತ್ರವನ್ನು ಅವರಿಂದ ಬರೆಸಿಕೊಂಡು ಅದರ ದ್ವಿಪ್ರತಿ ಮಾಡಿಸಿ, ಕಳೇವರವನ್ನು ಖರೀದಿಸುವವರಿಗೆ ಒಂದು ಪ್ರತಿಯನ್ನು ಕೊಡಬೇಕು. ಇನ್ನೊಂದು ಪ್ರತಿಯನ್ನು ತಾನು ಕಾದಿರಿಸಬೇಕು. ಹೆಣ ದುರ್ವಾಸನೆ ಸೂಸುವ ಮುನ್ನ ಅವೆಲ್ಲ ಆಗಿಬಿಡಬೇಕು. ಅಷ್ಟೆಲ್ಲ ಮಾಡಿದರೂ ಸತ್ತ ದನವನ್ನು ಖರೀದಿ ಮಾಡಲು ಯಾರೂ ಬರದೇ ಇರಬಹುದು. ಏಕೆಂದರೆ ದನ ತಾನಾಗಿ ಸತ್ತಿದ್ದರೂ, ಪ್ರಮಾಣ ಪತ್ರದ ಪ್ರತಿ ತನ್ನ ಬಳಿ ಇದ್ದರೂ ಪೊಲೀಸರ ತನಿಖೆ, ದಬ್ಬಾಳಿಕೆ ಎಲ್ಲ ಇದ್ದೇ ಇರುತ್ತದೆ. ರಗಳೆ ಯಾರಿಗೆ ಬೇಕು ಎಂದೆಲ್ಲ ಹಿಂದಿನ ಕಹಿ ಅನುಭವಗಳು ನೆನಪಾಗಿ, ಆತ ಖರೀದಿಗೆ ಬರಲು ನಿರಾಕರಿಸಬಹುದು. ಪಶುವೈದ್ಯರು ಸಮಯಕ್ಕೆ ಸರಿಯಾಗಿ ಬರದೇ ಇದ್ದರಂತೂ ಮೂಗು ಮುಚ್ಚಿಕೊಂಡು ಎಲ್ಲವನ್ನೂ ಸಹಿಸಿಕೊಳ್ಳಬೇಕು.
ದನ ಸಾಯುವ ದಿನ ಮನೆಯಲ್ಲಿ ಯುವಕರು ಯಾರೂ ಇಲ್ಲದಿದ್ದರೆ (ಈಗಂತೂ ಬಹಳಷ್ಟು ಹಳ್ಳಿಗಳಲ್ಲಿ ಯುವಕರೆಲ್ಲ ಪಟ್ಟಣ ಸೇರಿದ್ದಾರೆ) ವಯಸ್ಸಾದ ಹಿರಿಯರಿಗೆ ದೊಡ್ಡ ಸಂಕಟವೇ ಎದುರಾಗುತ್ತದೆ. ಮೈಯಲ್ಲಿ ತಾಕತ್ತಿಲ್ಲದಿದ್ದರೂ ಆತ ಜೀವಂತ ಇದ್ದಷ್ಟು ದಿನ ಮುದಿ ಹಸುವನ್ನು ಹೇಗೋ ಸಾಕಿಕೊಂಡಾನು ಆದರೆ ಅದು ಸತ್ತರೆ ಅವನ ಕಷ್ಟಗಳು ಬೆಟ್ಟದಷ್ಟಾಗುತ್ತವೆ.
ಅಲ್ಲಲ್ಲಿ ಗೋಶಾಲೆಗಳನ್ನು ತೆರೆದು, ಮುದಿ ದನಗಳನ್ನು ಸರಕಾರವೇ ಸಾಕಿಕೊಳ್ಳುತ್ತದಂತಲ್ಲ?
ಸರಕಾರ? ಅದು ನಡೆಸುವ ವೃದ್ಧಾಶ್ರಮಗಳ ಸ್ಥಿತಿಗತಿ ನೋಡಿದ್ದೀರಾ? ಅಲ್ಲಿ ಅನಿವಾರ್ಯ ವಾಸಿಸುವ ಹಿರಿಯರ ನೋವು-ಸಂಕಟಗಳಿಗೆ ಸ್ಪಂದಿಸುವುದು ಹಾಗಿರಲಿ, ಅವರ ಪಾಲಿನ ಗಂಜಿಯನ್ನೂ ಕೊಳ್ಳೆ ಹೊಡೆದು ಮುಕ್ಕುವ ಅದೆಷ್ಟು ಉದಾಹರಣೆಗಳು ನಿಮಗೆ ಬೇಕು? ಇನ್ನು ಮೂಕಪ್ರಾಣಿಗಳನ್ನು ಒಂದೆಡೆ ಸಾಕುವುದೆಂದರೆ ಸುಲಭದ ಮಾತೆ? ಸಹೃದಯೀ ದಾನಿಗಳು ನಡೆಸುವ ‘ಗೋಶಾಲೆ’ಗಳಲ್ಲೇ ಮೇವು ನೀರಿಗೆ ತತ್ವಾರ ಇರುತ್ತದೆ. ಶುಚಿತ್ವದ ಅಭಾವ, ತುರ್ತು ಔಷಧಗಳ ಅಭಾವ, ವೈದ್ಯರ ಕಾಳಜಿಯ ಅಭಾವ ಇರುತ್ತದೆ. ಹಾಗಿರುವಾಗ ಇನ್ನು ಸರಕಾರಿ ಇಲಾಖೆಗಳು ಗೋಶಾಲೆಗಳನ್ನು ನಡೆಸುತ್ತವೆಂದರೆ ಮೇಲ್ವಿಚಾರಣೆ ಸುಲಭವೆ?
ಮೇಲ್ವಿಚಾರಣೆಗೆ ಮಠಾಧೀಶರು, ಧರ್ಮಾಧಿಕಾರಿಗಳು, ಹಿಂದೂ ಸ್ವಯಂಸೇವಕರು ಇರುತ್ತಾರಲ್ಲ? ಗೊಡ್ಡು ಗೋವುಗಳನ್ನು ಜೋಪಾನವಾಗಿ ರಕ್ಷಿಸುತ್ತೇವೆಂದು ಮಠಗಳು ಹೇಳುತ್ತಿವೆಯಲ್ಲ?
ಇಂದಿನ ಬಹುಪಾಲು ಮಠಗಳು ಗೊಡ್ಡು ಸಂಪ್ರದಾಯಗಳನ್ನಷ್ಟೇ ಜೋಪಾನವಾಗಿ ಕಾಪಾಡಿಕೊಂಡಿವೆ. ಅವು ಹಿಂದಿನ ಕಾಲದ ನೀತಿ, ನ್ಯಾಯ, ಧರ್ಮಗಳನ್ನಾಗಲೀ ಪರಂಪರೆಯನ್ನಾಗಲೀ ಪಾವಿತ್ರ್ಯವನ್ನಾಗಲೀ ಉಳಿಸಿಕೊಂಡಿಲ್ಲ. ಹಿಂದಿನ ಮೌಲ್ಯಗಳನ್ನಂತೂ ಉಳಿಸಿಕೊಂಡಿಲ್ಲ, ಇಂದಿನ ವೈಜ್ಞಾನಿಕ ದೃಷ್ಟಿಕೋನವನ್ನೂ ಬೆಳೆಸಿಕೊಂಡಿಲ್ಲ.
ಗೋರಕ್ಷಣೆ ಎಂಬುದು ಹಿಂದಿನ ಕಾಲದ ಮೌಲ್ಯವೇ ಆಗಿತ್ತಲ್ಲವೆ? ಅಂಥ ಸಭ್ಯ ಪ್ರಾಣಿಗಳನ್ನು ಹಿಂಸಿಸುವುದಾಗಲೀ ಕೊಲ್ಲುವುದಾಗಲೀ ಹಿಂದೂ ಸಂಪ್ರದಾಯಕ್ಕೆ ವಿರುದ್ಧವಲ್ಲವೆ?
ಇಲ್ಲಿ ಸಾಕಷ್ಟು ತಪ್ಪುಕಲ್ಪನೆಗಳಿವೆ. ಹಿಂದಿನವರು ಗೋವುಗಳನ್ನು ಸಾಕುತ್ತಿದ್ದರು ನಿಜ. ಹಾಲು ಹೈನಕ್ಕಾಗಿಯೂ ಸಾಕುತ್ತಿದ್ದರು. ಮಾಂಸಕ್ಕಾಗಿಯೂ ಸಾಕುತ್ತಿದ್ದರು. ವೇದಕಾಲದಲ್ಲಿ ಔತಣಕೂಟಗಳಲ್ಲಷ್ಟೇ ಅಲ್ಲ, ಯಾಗ-ಯಜ್ಞಗಳಂಥ ಪವಿತ್ರ ಕಾರ್ಯಗಳಲ್ಲೂ ಗೋವಧೆ, ಗೋಮಾಂಸ ನೈವೇದ್ಯ ಮತ್ತು ಭಕ್ಷಣೆಯಲ್ಲಿ ಋತ್ವಿಜರೂ ಪಾಲ್ಗೊಳ್ಳುತ್ತಿದ್ದರು. ಗೋಮಾಂಸವನ್ನು ಬೇಯಿಸುವಾಗಿನ ಪರಿಮಳ ಅದೆಷ್ಟು ದೂರ ಪಸರಿಸುತ್ತಿತ್ತು ಎಂಬುದರ ಬಗ್ಗೆ ವೇದಗಳಲ್ಲೇ ವಿವರ ವರ್ಣನೆಗಳಿವೆ. ಅಷ್ಟೇಕೆ, ಕಾಳಿದಾಸನ ಮೇಘದೂತದಲ್ಲಿ ರಂತಿದೇವನ ಸಾಮ್ರಾಜ್ಯದ ವರ್ಣನೆ ಬರುತ್ತದೆ. ರಾಜ ಆಗಾಗ ಏರ್ಪಡಿಸುತ್ತಿದ್ದ ಮೋಜಿನ ಕೂಟದಲ್ಲಿ ದನಗಳ ಮಾಂಸ ತೆಗೆದ ನಂತರ ಉಳಿಯುವ ಚರ್ಮವನ್ನು ನದಿಗಳಲ್ಲಿ ತೇಲಬಿಡುತ್ತಿದ್ದರಂತೆ. ಹಾಸುಹಾಸು ಚರ್ಮಗಳು ತೇಲಾಡುವ ‘ಚರ್ಮಣ್ವತೀ’ ನದಿಯನ್ನು ಎತ್ತರದಿಂದಲೇ ಗುರುತಿಸಬಹುದು ಎಂದು ಅದರಲ್ಲಿ ವಿವರಗಳಿವೆ. ಕಾಲ ಬದಲಾದಂತೆ ಕ್ರಮೇಣ ಕೆಲವು ವರ್ಗದ ಜನರು ಮಾಂಸಭಕ್ಷಣೆಯನ್ನು ತ್ಯಜಿಸಿದರು. ಅವಕ್ಕೆ ಕಾರಣಗಳು ಅನೇಕ ಇರಬಹುದು. ಚಿಕ್ಕ ಸಮುದಾಯಗಳಲ್ಲಿ ಗೋವಧೆ ಮಾಡಿದರೆ ತಿಂದು ಮುಗಿಸುವುದು ಕಷ್ಟ. ಜಾಸ್ತಿ ತಿಂದರೂ ಕಷ್ಟ; ಎರಡು ಮೂರು ದಿನಗಳವರೆಗೆ ಅದನ್ನೇ ತಿನ್ನುತ್ತಿದರೆ ಇನ್ನೂ ಕಷ್ಟ. ಅದರಿಂದುಂಟಾಗುವ ರೋಗರುಜಿನೆಗಳ ಭಯ ಇರಬಹುದು. ಅಥವಾ ಶ್ರೇಷ್ಠತೆಯ ವ್ಯಸನವೂ ಇರಬಹುದು. ತಾನು ಇತರರಿಗಿಂತ ಶ್ರೇಷ್ಠನೆಂದು ತೋರಿಸಿಕೊಳ್ಳುವವರು ಕೆಲವು ನಿತ್ಯಸುಖಗಳನ್ನು ತ್ಯಾಗ ಮಾಡಬೇಕಾಗುತ್ತದೆ. ಕಟ್ಟಳೆಗಳನ್ನು ಕಟ್ಟಿಕೊಂಡು ಕ್ರಮೇಣ ಅದೇ ಒಂದು ಸಂಪ್ರದಾಯವಾಗಿ ಬೆಳೆದು ಬಂದಿರಬಹುದು. ಅದೇನೇ ಇರಲಿ, ಅವರ ಪಾಡಿಗೆ ಅವರಿರಲಿ. ಚಿಂತಕ ಜಿ. ರಾಮಕೃಷ್ಟ ಹೇಳುವ ಹಾಗೆ, ‘ತಾನೇ ಶ್ರೇಷ್ಠ, ತನಗೆ ವರ್ಜ್ಯವಾದುದನ್ನು ಇತರರೂ ವರ್ಜಿಸಬೇಕು’ ಎನ್ನುವುದು ಸರಿಯಲ್ಲ. ಗೋಮಾಂಸವನ್ನು ತ್ಯಜಿಸಿದವರು ತಮ್ಮ ಬಳಿ ಬಂದರೆ ಮೇಲ್ಜಾತಿಯ ‘ದೀಕ್ಷೆ ಕೊಡಿಸುತ್ತೇನೆ’ ಎಂದು ಮಠಾಧೀಶರೊಬ್ಬರು ಹೇಳಿದ್ದಾಗಿ ವರದಿಯಾಗಿದೆ. ಅವರಿಗೂ ಅದೇ ಮಾತನ್ನು ಅನ್ವಯಿಸಬಹುದಲ್ಲ; ‘ಸ್ವಾಮೀಜಿ, ನೀವು ಮಾಂಸ ತಿನ್ನಲು ಆರಂಭಿಸಿದರೆ, ಬನ್ನಿ ನಾವೇ ನಿಮಗೆ ದೀಕ್ಷೆ ಕೊಟ್ಟು ದಲಿತ ಸಮುದಾಯಕ್ಕೆ ಸೇರಿಸಿಕೊಳ್ಳುತ್ತೇವೆ’ ಎನ್ನಬಹುದಲ್ಲ? ತಮ್ಮ ಕಟ್ಟಳೆಗಳನ್ನೇ ಇತರರ ಮೇಲೂ ಹೇರಬೇಕು, ಅದೂ ಕಾನೂನಿನ ಮೂಲಕ ಹೇರಬೇಕು ಎನ್ನುವುದು ಸರಿಯಲ್ಲ.
ಅದೇನೇ ಇರಲಿ, ಮಠಾಧೀಶರೆನ್ನಿಸಿಕೊಂಡವರು ಹಿಂದೂ ಧರ್ಮದ ಮೂಲತತ್ವಗಳನ್ನು ಕಾಪಾಡಿಕೊಂಡು ಬರಬೇಕಲ್ಲವೆ? ಅವರದ್ದು ತಪ್ಪೆಂದು ಹೇಗೆ ಹೇಳುತ್ತೀರಿ?
ಬೇರೆಯವರ ಊಟವನ್ನು ಕಸಿಯುವುದು ಎಂದಿಗೂ ಯಾವ ಧರ್ಮದ್ದೂ ಮೂಲತತ್ವ ಆಗಿರಲು ಸಾಧ್ಯವಿಲ್ಲ. ಹಿಂದೂ ಧರ್ಮದ್ದಂತೂ ಅಲ್ಲವೇ ಅಲ್ಲ. ಮೇಲಾಗಿ ಹಿಂದೂ ಧರ್ಮದಲ್ಲೂ ವೈವಿಧ್ಯಮಯ ಆಹಾರ ಸೇವನೆ ಇದೆ. ಕೆಲವರು ಮಾತ್ರ ಮಾಂಸ ಭಕ್ಷಣೆ ಮಾಡುವುದಿಲ್ಲ; ಕೆಲವರು ಕುರಿ-ಕೋಳಿ ತಿನ್ನುತ್ತಾರೆ; ಕೆಲವರು ಹಂದಿಮಾಂಸ ಭಕ್ಷಣೆ ಮಾಡುತ್ತಾರೆ. ಇನ್ನು ಕೆಲವರು ಗೋಮಾಂಸ ಭಕ್ಷಣೆ ಮಾಡುತ್ತಾರೆ. ಅವರೆಲ್ಲರನ್ನೊಳಗೊಂಡ ಧರ್ಮ ಇದು.
ಆದರೂ ಬುದ್ಧ-ಗಾಂಧೀಜಿಯವರಂಥ ಅಹಿಂಸಾವಾದಿಗಳ ನಾಡಿನಲ್ಲಿ ಗೋವಧೆ ಸರಿಯಲ್ಲ ತಾನೆ?
ಎಲ್ಲಿದ್ದೀರಿ? ಬುದ್ಧನ ಅನುಯಾಯಿಗಳು ಬಿಡುಬೀಸಾಗಿ ಗೋಮಾಂಸ ಭಕ್ಷಣೆ ಮಾಡುತ್ತಾರೆ! ಥಾಯ್ಲೆಂಡ್, ಜಪಾನ್, ಕೊರಿಯಾಗಳಲ್ಲಷ್ಟೇ ಅಲ್ಲ, ನಮ್ಮ ನಾಡಿನಲ್ಲೇ ಇರುವ ಟಿಬೆಟನ್ ಜನರು ನಿತ್ಯ ಊಟದಲ್ಲಿ ಗೋಮಾಂಸ ಬಳಸುತ್ತಾರೆ. ಅವರು ಗೋವುಗಳನ್ನು ಪ್ರೀತಿಯಿಂದಲೇ ಸಾಕುತ್ತಾರೆ ಕೂಡ. ಮಹಾತ್ಮಾ ಗಾಂಧಿಯವರು ಮಾಂಸಾಹಾರ ಸೇವನೆ ಮಾಡುತ್ತಿರಲಿಲ್ಲ. ಆದರೆ ಎಂದೂ ಅವರು ಇತರ ಧರ್ಮೀಯರ ಮೇಲೆ ತಮ್ಮ ಕಟ್ಟುಪಾಡುಗಳನ್ನು ಹೇರುತ್ತಿರಲಿಲ್ಲ.
ಇನ್ನು ಹಿಂಸೆಯ ಪ್ರಶ್ನೆ ಬಂದಾಗ, ನಾವು ತುಸು ಕಣ್ತೆರೆದು ವಾಸ್ತವದ, ಅಂದರೆ ನೈಸರ್ಗಿಕ ಜಗತ್ತನ್ನು ನೋಡಬೇಕಾಗುತ್ತದೆ. ಒಂದು ಜೀವಿ ಇನ್ನೊಂದಕ್ಕೆ ಆಹಾರವಾಗಿರುವುದೇ ನಿಸರ್ಗದ ಮೂಲಧರ್ಮ. ಅಲ್ಲಿ ಹಿಂಸೆ ಅಥವಾ ಅಹಿಂಸೆ ಎಂಬ ಪದಗಳೇ ಇಲ್ಲ. ಹಲ್ಲು, ಉಗುರು, ವಿಷ, ಉರುಳು ಎಲ್ಲವೂ ಅಲ್ಲಿವೆ. ಊಜಿನೊಣವೊಂದು ರೇಷ್ಮೆಹುಳದ ಬೆನ್ನಮೇಲೆ ರಂಧ್ರ ಮಾಡಿ ಮೊಟ್ಟೆ ಇಟ್ಟು ಹೋಗುತ್ತದೆ. ಊಜಿಮೊಟ್ಟೆಯಿಂದ ಹೊರಬಿದ್ದ ಲಾರ್ವಾ ಹುಳ ಮೆಲ್ಲಗೆ ರೇಷ್ಮೆಹುಳುವಿನ ಬೆನ್ನನ್ನು, ನಂತರ ಹೊಟ್ಟೆಯನ್ನು, ಭುಜವನ್ನು ಹಂತಹಂತವಾಗಿ ಮೂರು ದಿನಗಳವರೆಗೆ ತಿನ್ನುತ್ತ, ಅದುವರೆಗೂ ತನ್ನ ಬಲಿಯನ್ನು ಜೀವಂತ ಇಟ್ಟು ಕೊನೆಗೆ ತಿನ್ನಲು ಇನ್ನೇನೂ ಉಳಿದಿಲ್ಲ ಎನ್ನವಾಗ ರೇಷ್ಮೆಹುಳದ ಹೃದಯ, ಶ್ವಾಸಕೋಶ ಮತ್ತು ಮಿದುಳನ್ನು ತಿಂದು ಮುಗಿಸುತ್ತದೆ. ಅಲ್ಲಿ ಕರುಣೆ, ದಯೆ ಎಂಬ ಪದಗಳೂ ಇಲ್ಲ. ಇದ್ದಿದ್ದರೆ ಮೊದಲ ದಿನವೇ ಮಿದುಳನ್ನು ತಿಂದು, ರೇಷ್ಮೆ ಹುಳಕ್ಕೆ ನೋವೇ ಗೊತ್ತಾಗದಂತೆ ಅದನ್ನು ಪ್ರಜ್ಞಾಶೂನ್ಯ ಮಾಡಿ ನಂತರ ನಂತರವೇ ಊಜಿಲಾರ್ವಾ ತನ್ನ ಊಟವನ್ನು ಮುಂದುವರೆಸಬಹುದಿತ್ತು. ‘ಬೆಕ್ಕು ಇಲಿಯನ್ನು ಅತ್ತ ಇತ್ತ ತಿರುಗಿಸಿ ಗೋಳಾಡಿಸಿದಂತೆ ಅನ್ನಿಸಿದರೂ ಇಲಿಗೆ ನೋವಿನ ಅನುಭವ ಆಗುವುದಿಲ್ಲ’ ಎಂದು ಹೆಸರಾಂತ ವೈದ್ಯ-ಚಿಂತಕ ಡಾ. ಲೀವಿಸ್ ಥಾಮಸ್ ಹೇಳುತ್ತಾರೆ. ಅದಕ್ಕೆ ಕಾರಣವನ್ನು ಕೊಡುತ್ತಾರೆ: ನೋವಿನ ಅನುಭವ ಮಿದುಳಿಗೆ ಏಕೆ ರವಾನೆ ಆಗುತ್ತದೆಂದರೆ ಶರೀರವನ್ನು ಬಚಾವು ಮಾಡಲಿಕ್ಕೆ ಮಾತ್ರ. ಶರೀರಕ್ಕೆ ಪೆಟ್ಟು ಬಿದ್ದರೆ ಓಡಬೇಕು, ಇಲ್ಲವೆ ಎದುರಾಳಿಯ ಜತೆ ಹೋರಾಡಿ ಆತನನ್ನು ಓಡಿಸಬೇಕು. ಅಂತೂ ಬಚಾವಾಗಬೇಕು. ಓಟ ಇಲ್ಲವೆ ಹೋರಾಟ ಎರಡೂ ಸಾಧ್ಯವಿಲ್ಲ ಎಂಬಂಥ ‘ಶರಣಾಗತ’ ಸ್ಥಿತಿಗೆ ತಲುಪಿದಾಗ ಇಲಿಯ ಮಿದುಳಿಗೆ ನೋವನ್ನು ರವಾನಿಸುವ ರಸಸಂಜ್ಞೆ ಸ್ವಿಚಾಫ್ ಆಗುತ್ತದೆ. ಏಕೆಂದರೆ ಚಿತ್ರಹಿಂಸೆ ಅನುಭವಿಸುವುದರಿಂದ ಜೀವಿಗೆ ಯಾವ ಲಾಭವೂ ಇಲ್ಲ, ಪುರುಷಾರ್ಥವೂ ಇಲ್ಲ. ಹಾಗಾಗಿ ಅಲ್ಲಿ ನೋವಿನ ಪ್ರಶ್ನೆ ಬರುವುದೇ ಇಲ್ಲ.
ಆದರೆ ಹಸುವನ್ನು ಹಿಂಸಿಸಿದಾಗ ನಮ್ಮ ಮನಸ್ಸಿಗೇ ನೋವಾಗುತ್ತದಲ್ಲ?
ಒಪ್ಪೋಣ. ಹಿಂಸೆ ಕೊಡಬಾರದು. ಸಾಕುಪ್ರಾಣಿಗಳಿಗೆ ಛಡಿ ಏಟು ಕೊಡುವುದು, ಬರೆ ಹಾಕುವುದು, ನೊಗ ಹೊತ್ತು ಹುಣ್ಣಾದ ಹೆಗಲಿಗೇ ಮತ್ತೆ ನೊಗ ಹೇರುವುದು… ಹೀಗೆ ನಿಸರ್ಗದಲ್ಲಿ ಇಲ್ಲದಂಥ ಚಿತ್ರಹಿಂಸೆಗಳನ್ನು ನಾವು ಕೊಡುತ್ತೇವೆ. ಮನುಷ್ಯಪ್ರಾಣಿಯನ್ನು ಯಾರಾದರೂ ಕಟ್ಟಿ ಹಾಕಿ ಈ ರೀತಿ ಹಿಂಸೆ ಕೊಟ್ಟರೆ ಆತ, ‘ನನ್ನನ್ನು ಕೊಂದುಬಿಡ್ರಪ್ಪಾ’ ಎಂದು ಬೇಡಿಕೊಳ್ಳಬಹುದು. ರಾಸುಗಳಿಗೆ ನಾವು ಅಂಥ ಮುಕ್ತಿಯನ್ನೂ ಕೊಡುವುದಿಲ್ಲ. ಇನ್ನು ಕರುವಿಗೆ ಹಾಲೂಡಿಸುತ್ತಿರುವಾಗ ತಾಯಿಯಿಂದ ಕರುವನ್ನು ಹಿಂದಕ್ಕೆಳೆದು ಗೂಟಕ್ಕೆ ಕಟ್ಟಿ, ನಮ್ಮ ಸ್ವಾರ್ಥಕ್ಕಾಗಿ ನಾವು ಹಾಲು ಹಿಂಡಲುತೊಡಗಿದರೆ ಅದೂ ಮಾನಸಿಕ ಹಿಂಸೆಯ ಕೃತ್ಯವೇ ಆಗುತ್ತದೆ. ಹೋರಿಕರು ಹುಟ್ಟಿದರೆ ಅದನ್ನೂ ಎಳೆಗರುವಾಗಿದ್ದಾಗಲೇ ತಾಯಿಯಿಂದ ಶಾಶ್ವತವಾಗಿ ಬೇರ್ಪಡಿಸಿ ದೂರ ಸಾಗಿಸುವುದೂ ಕ್ರೌರ್ಯವೇ ಆಗುತ್ತದೆ. ಅಷ್ಟೇಕೆ, ಕೆಲವು ಗೋಪ್ರೇಮಿಗಳು ವಾರಕ್ಕೊಮ್ಮೆ ಗೋಶಾಲೆಗಳಿಗೆ ಹೋಗಿ ಪ್ರೀತಿಯಿಂದಲೇ ಅವಕ್ಕೆ ತುಪ್ಪದಲ್ಲಿ ತಯಾರಿಸಿ ಲಡ್ಡೂ, ಒಬ್ಬಟ್ಟು ತಿನ್ನಿಸಿ ಅವು ಗ್ಯಾಸ್‌ಟ್ರಬಲ್, ಹೊಟ್ಟೆನೋವಿನಿಂದ ಸಂಕಟ ಪಟ್ಟು ಒದ್ದಾಡುವ, ಸಾಯುವ ಉದಾಹರಣೆಗಳೂ ಇವೆ. ಆದರೆ ನಾವು ಅವನ್ನೆಲ್ಲ ಒಪ್ಪಿಕೊಂಡಿದ್ದೇವೆ. ಹೀಗೆ, ‘ಬದುಕಿರುವಾಗ ಹಿಂಸೆ ಕೊಟ್ಟು ಕೊಟ್ಟು ಜೀವಂತ ಇಟ್ಟಿರುವುದು ಸರಿ, ಆದರೆ ಸಾವಿನ ಮುಂಚಿನ ಕ್ಷಣಗಳಲ್ಲಿ ಹಿಂಸೆ ಮಾತ್ರ ಬೇಡ’ ಎನ್ನುವುದು ಅದೆಷ್ಟು ಸರಿ? ಅಥವಾ, ‘ಆಡು-ಕುರಿ-ಹಂದಿ- ಕೋಳಿಗಳನ್ನು ಕೊಂದರೆ ಸರಿ, ದನಗಳನ್ನು ಮಾತ್ರ ಕೊಲ್ಲವುದು ಸಲ್ಲ’ ಎಂದು ವಾದಿಸುವುದೂ ಅದೆಷ್ಟು ತಾರ್ಕಿಕ? ಗೋವಿನ ಶರೀರದಲ್ಲಿ ೩೩ ಕೋಟಿ ದೇವತೆಗಳಿರುವುದೇ ನಿಜವಾದರೆ ಮೇಕೆಯ ಶರೀರದಲ್ಲಿ ೨೨ ಕೋಟಿಯಾದರೂ ಇರಬಹುದಲ್ಲ? ದೊಡ್ಡ ಜೀವಿಗಳಿಗೆ ಮಾತ್ರ ನೋವಿನ ಸಂವೇದನೆ ಇರುತ್ತದೆ ಎಂದು ಹೇಳಲು ಯಾವ ಆಧಾರ ಇದೆ? ಇಷ್ಟಕ್ಕೂ ಆಧುನಿಕ ಕಸಾಯಿಖಾನೆಗಳಲ್ಲಿ ದನದ ಕೆನ್ನೆಗಳಿಗೆ ವಿದ್ಯುತ್ ದಂಡವನ್ನು ಒತ್ತಿ ಆಘಾತ ಕೊಟ್ಟು ಪ್ರಜ್ಞೆ ತಪ್ಪಿಸಿ ಕೊಲ್ಲುವ ವ್ಯವಸ್ಥೆ ಇದೆ. ಧಾರ್ಮಿಕ ನಂಬುಗೆಗಳಿಗೆ ಅಡ್ಡಗಾಲು ಹಾಕದಂತೆ ನೋಡಿಕೊಂಡು, ಸಾಧ್ಯವಿದ್ದಲ್ಲೆಲ್ಲ ಹಿಂಸೆಯನ್ನು ಸಾಧ್ಯವಿದ್ದಷ್ಟೂ ಕಡಿಮೆ ಮಾಡಬಲ್ಲ ವ್ಯವಸ್ಥೆ ಎಲ್ಲೆಡೆ ಜಾರಿಗೆ ಬರಲೆಂದು ಒತ್ತಾಯಿಸೋಣ. ಸುಧಾರಿತ ದೇಶಗಳಲ್ಲಿ ದೃಶ್ಯಮಾಲಿನ್ಯವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಅದು ನಮ್ಮಲ್ಲೂ ಜಾರಿಗೆ ಬರಬೇಕೆಂದು ಒತ್ತಾಯಿಸೋಣ. ಬೀದಿಯ ಕೊಳಕು ಸಂದುಗೊಂದುಗಳಲ್ಲಿ ಎಲ್ಲರಿಗೂ ಕಾಣುವಂತೆ ಪ್ರಾಣಿವಧೆ ಮಾಡಕೂಡದು. ಕತ್ತರಿಸಿದ ರುಂಡ- ಮುಂಡ ಕಾಲು ಗೊರಸುಗಳನ್ನು (ಅದು ಕುರಿ-ಮೇಕೆಗಳದ್ದಾದರೂ) ಬೀದಿಬದಿಯಲ್ಲಿ ಇಲ್ಲವೆ ಅಂಗಡಿ ಮುಂಗಟ್ಟುಗಳಲ್ಲಿ ಪ್ರದರ್ಶಿಸಬಾರದು ಎಂದು ಒತ್ತಾಯಿಸೋಣ. ಕಂತೆಕಂತೆ ತರಕಾರಿಯ ಹಾಗೆ ಕೋಳಿಗಳನ್ನು ತಲೆಕೆಳಗಾಗಿ ತೂಗಾಡಿಸುತ್ತ ದ್ವಿಚಕ್ರ ವಾಹನಗಳಲ್ಲಿ ಬಹಿರಂಗವಾಗಿ ಸಾಗಿಸುವುದನ್ನು ನಿಷೇಧಿಸಬೇಕೆಂದು ಒತ್ತಾಯಿಸೋಣ. ಅಂಥ ಅನಾಗರಿಕ ಕೃತ್ಯಗಳು ನಡೆಯಕೂಡದು.
ತಥಾಕಥಿತ ಸುಧಾರಿತ ದೇಶಗಳಲ್ಲಿ ಬಹುಪಾಲು ಧಾನ್ಯವೆಲ್ಲ ಪಶು ಆಹಾರಕ್ಕೆಂದೇ ಬಳಕೆಯಾಗುತ್ತದೆ. ಜನರು ಕಾಳುಕಡಿ ತಿನ್ನುವ ಬದಲು ಮಾಂಸವನ್ನೇ ತಿನ್ನುತ್ತಾರೆ. ಒಂದು ಕಿಲೊ ಮಾಂಸ ಬೆಳೆಸಲು ೧೫೦ ಕಿಲೊ ಧಾನ್ಯವನ್ನು ವ್ಯಯಿಸಬೇಕಾಗುತ್ತದೆ. ನಮ್ಮಲ್ಲೂ ಅದೇ ಸಂಸ್ಕೃತಿ ರೂಢಿಗೆ ಬಂದರೆ ಧಾನ್ಯದ ಅಭಾವ ತಲೆದೋರೀತಲ್ಲವೆ? ಭಾರತದ ಕೃಷಿಭೂಮಿಗೆ ಅಷ್ಟೊಂದು ಧಾರಣ ಸಾಮರ್ಥ್ಯ ಇದೆಯೆ?
ನಮ್ಮ ಚರ್ಚೆ ಈಗ ಆರ್ಥಿಕ ರಂಗದತ್ತ ತಿರುಗುತ್ತಿದೆ. ಔದ್ಯಮಿಕ ಮಾದರಿಯ ಪಶುಸಂಗೋಪನೆ ಎಂಬುದು ಇಡೀ ಭೂಮಿಗೆ ಅತಿ ದೊಡ್ಡ ಹೊರೆಯಾಗುತ್ತಿದೆ, ನಿಜ. ಜಗತ್ತಿನ ಒಟ್ಟು ಕೃಷಿಭೂಮಿಯ ಶೇಕಡಾ ೭೦ ಭಾಗ ಬರೀ ಪಶುಗಳ ಆಹಾರ ಬೆಳೆಯುವ ಉದ್ದೇಶಕ್ಕೇ ಮೀಸಲಾಗಿದೆ. ಪ್ರತಿವರ್ಷ ಸರಾಸರಿ ೫೦ ಲಕ್ಷ ಅರಣ್ಯಪ್ರದೇಶ ಹೊಸದಾಗಿ ಪಶುಸಂಗೋಪನೆಗೆಂದು ಬಲಿಯಾಗುತ್ತಿದೆ. ಅಂದಾಜು ೮೪ ಕೋಟಿ ಟನ್ ಆಹಾರಧಾನ್ಯ ಅವುಗಳಿಗೆಂದೇ ಧ್ವಂಸವಾಗುತ್ತಿದೆ. ಸೋಯಾ ಅವರೆಯದ್ದಂತೂ ಇನ್ನೂ ದೊಡ್ಡ ಕತೆ. ಅದರ ಜಾಗತಿಕ ಉತ್ಪಾದನೆ ೨೪ ಕೋಟಿ ಟನ್ ಇದ್ದು ಅದರ ಶೇಕಡಾ ೯೫ ಭಾಗ ಪಶುಆಹಾರಕ್ಕೆಂದೇ ಹೋಗುತ್ತಿದೆ. ಇನ್ನು ನೀರು? ಪ್ರಪಂಚದ ಪ್ರತಿವ್ಯಕ್ತಿ ದಿನಕ್ಕೆ ಎಂಟು ಬಾರಿ ಸ್ನಾನ ಮಾಡಿದರೆ ಬೇಕಾಗುವಷ್ಟು ನೀರು (ಪ್ರತಿ ಸೆಕೆಂಡ್‌ಗೆ ೨೮ ಲಕ್ಷ ಲೀಟರ್) ಪಶುಸಂಗೋಪನೆಗೆ ವ್ಯಯವಾಗುತ್ತಿದೆ ಎಂದು ಅಂಕಿಸಂಖ್ಯೆಗಳು ಹೇಳುತ್ತಿವೆ. ಒಂದು ಲೀಟರ್ ಹಾಲಿನ ಉತ್ಪಾದನೆಗೆ ಸರಾಸರಿ ೯೦೦ ಲೀಟರ್ ನೀರು ವ್ಯಯವಾಗುತ್ತಿದೆ.
ನಮ್ಮ ದೇಶದ ಪಶುಸಂಗೋಪನೆಯ ಚಿತ್ರ ತುಸು ಭಿನ್ನವಾಗಿದೆ. ಇಲ್ಲಿ ಮಾಂಸಕ್ಕೆಂದು ದನಗಳನ್ನು ಬೆಳೆಸುವುದಿಲ್ಲ. ಆದರೆ ಹೈನು ಉದ್ಯಮವೇ ದೇಶಕ್ಕೆ ಬಹುದೊಡ್ಡ ಹೊರೆಯಾಗಿ ಪರಿಣಮಿಸುತ್ತಿದೆ. ಕರ್ನಾಟಕವಂತೂ ಇಡೀ ದೇಶದಲ್ಲೇ ಹೈನು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ. ಸರಕಾರ ಹೈನುಕ್ರಾಂತಿಗೆ ಅಷ್ಟೆಲ್ಲ ಒತ್ತುಕೊಟ್ಟಿದ್ದರಿಂದ ಹಳ್ಳಿ ಹಳ್ಳಿಗಳಲ್ಲಿ ಡೇರಿ ಉದ್ಯಮ ವಿಕಾಸವಾಗಿದೆ. ಐದು ವರ್ಷಗಳ ಹಿಂದೆ ಬ್ರಿಟನ್ನಿನ ಹೆಸರಾಂತ ‘ನ್ಯೂ ಸೈಂಟಿಸ್ಟ್’ ಪತ್ರಿಕೆಯ ವರದಿಗಾರ ಫ್ರೆಡ್ ಪಿಯರ್ಸ್ ಎಂಬಾತ ಗುಜರಾತಿಗೆ ಭೇಟಿಕೊಟ್ಟಿದ್ದ. ಅಮುಲ್ ಡೇರಿ ಇರುವ ಆನಂದ್ ಪಟ್ಟಣದ ಸುತ್ತಮುತ್ತ ಅಡ್ಡಾಡಿ ‘ಇಲ್ಲಿ ಪ್ರತಿ ಲೀಟರ್ ಹಾಲಿನ ಉತ್ಪಾದನೆಗೆ ಎರಡು ಸಾವಿರ ಲೀಟರ್ ನೀರನ್ನು ಬಳಸುತ್ತಾರೆ’ ಎಂದು ಖಚಿತ ಲೆಕ್ಕಾಚಾರಗಳ ಮೂಲಕ ವರದಿ ಮಾಡಿದ್ದ. ನೀರು ಅವಿನಾಶಿ ನಿಜ. ಆದರೆ ಪ್ರತಿ ಬಾರಿ ಕೊಳವೆ ಬಾವಿಯಿಂದ ನೀರನ್ನು ಎತ್ತಿ ಬಳಸಿದಾಗಲೂ ಒಂದಿಷ್ಟು ನೀರು ಆವಿಯಾಗಿ ಆಕಾಶಕ್ಕೆ ಹೋಗುತ್ತದೆ. ನಾವು ಅಗಾಧ ಪ್ರಮಾಣದಲ್ಲಿ ಹಾಲಿಗಾಗಿ ನೀರನ್ನು ಎತ್ತಿ ಬಳಸುತ್ತ ಋತುಮಾನದ ಅಸಮತೋಲಕ್ಕೆ ಕಾರಣರಾಗುತ್ತಿದ್ದೇವೆ.
ಹೈನುಗಾರಿಕೆಗೆ ಅತಿ ಆದ್ಯತೆ ಕೊಟ್ಟಿದ್ದರಿಂದ ಇನ್ನೂ ಅನೇಕ ಬಗೆಯ ಅಸಮತೋಲನ ಕಾಣಿಸಿಕೊಳ್ಳುತ್ತಿದೆ. ಹಿಂದೆಲ್ಲ ಪಶುಸಂಗೋಪನೆ ಎಂಬುದು ಒಟ್ಟಾರೆ ಗ್ರಾಮೀಣ ಬದುಕಿನ ಭಾಗವಾಗಿತ್ತು. ಸ್ಥಳೀಯ ತಳಿಗಳಿದ್ದವು. ಗೋಮಾಳವಿತ್ತು. ಕೆರೆಗಳಿದ್ದವು. ಹೊಲದಲ್ಲಿ, ಬೆಟ್ಟದಲ್ಲಿ ಮೇವಿರುತಿತ್ತು. ಹೋರಿಗಳಿಗೆ ಹೊಲದಲ್ಲಿ ಕೆಲಸವಿರುತ್ತಿತ್ತು. ಈಗ ಎಲ್ಲವೂ ಏರುಪೇರಾಗಿವೆ. ಸ್ಥಳೀಯ ಗೋ-ತಳಿಗಳು ಕಣ್ಮರೆಯಾಗುತ್ತಿವೆ. ಹೊಲಗಳಿಗೆ ಟ್ರ್ಯಾಕ್ಟರ್, ಟಿಲ್ಲರ್‌ಗಳು ಬಂದಿವೆ. ಜರ್ಸಿ ಅಥವಾ ಎಚ್‌ಎಫ್ ಹಸುಗಳಿಗೆ ಹೋರಿಕರು ಹುಟ್ಟಿದರೆ ಅದನ್ನು ಇಟ್ಟುಕೊಳ್ಳುವಂತಿಲ್ಲ. ಏಕೆಂದರೆ ಚಕ್ಕಡಿಗೆ ಕಟ್ಟುವಂತಿಲ್ಲ, ನೇಗಿಲಿಗೆ ಹಚ್ಚುವಂತಿಲ್ಲ. ಇನ್ನು ಇತ್ತ ಗೋಮಾಳವೂ ಇಲ್ಲ. ಬೆಟ್ಟಗಳಲ್ಲಿ ಅಕೇಶಿಯಾ, ಲಂಟಾನಾ ತುಂಬಿದೆ. ಇಂಥ ಸ್ಥಿತಿಯಲ್ಲಿ ಹೈನುಗಾರಿಕೆಗೆ ನಾವು ಅತಿ ಹೆಚ್ಚಿನ ಪ್ರಾಶಸ್ತ್ಯ ಕೊಟ್ಟಿದ್ದೇವೆ. ಅವುಗಳಿಗೆ ನೀಡುವ ಮೇವು ಎಂಥದ್ದು? ಹೊಲದ ಭತ್ತ-ರಾಗಿಯ ಹುಲ್ಲಿನಲ್ಲಿ ಯೂರಿಯಾ, ಡಿಎಪಿ ಮತ್ತು ಪೀಡೆನಾಶಕ ವಿಷ ಸಂಚಯವಾಗಿರುತ್ತದೆ. ಸರಕಾರಿ ಗೋದಾಮುಗಳಲ್ಲಿ ಕೊಳೆಯುತ್ತಿರುವ ಕಾಳುಕಡಿಗೆ ಕಸಾಯಿಖಾನೆಯ ತ್ಯಾಜ್ಯಗಳನ್ನು ಸೇರಿಸಿ ಫ್ಯಾಕ್ಟರಿಗಳಲ್ಲಿ ತಯಾರಿಸಿದ ಪಶು ಆಹಾರವನ್ನು ಹಸುಗಳಿಗೆ ತಿನ್ನಿಸಿ, ಆಗಾಗ ಹಾರ್ಮೋನ್ ಚುಚ್ಚುಮದ್ದು ಕೊಟ್ಟು, ಕೃತಕ ಗರ್ಭಧಾರಣೆ ಮಾಡಿಸಿ ಹಾಲು ಉತ್ಪಾದನೆ ಮಾಡುತ್ತಿದ್ದೇವೆ. ಹಾಲನ್ನು ತಾಜಾ ಇಡಲೆಂದು ಹೈಡ್ರೊಜನ್ ಪೆರಾಕ್ಸೈಡ್ ಸೇರಿಸಿ, ಯೂರಿಯಾ ಬೆರೆಸಿ, ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿ…. ಅಂಥ ಅನೈಸರ್ಗಿಕ ಹಾಲು ಹೈನು ಸೇವಿಸಿ ನಗರವಾಸಿಗಳ ಯಾರ ಆರೋಗ್ಯ ಎಷ್ಟು ಸುಧಾರಿಸಿತೊ ಗೊತ್ತಿಲ್ಲ. ಆದರೆ ಗ್ರಾಮೀಣ ಜನರಿಗೂ ಈಗ ದಪ್ಪ ಹೊಟ್ಟೆ, ಬಿಪಿ, ಡಯಾಬಿಟೀಸ್, ಹೃದ್ರೋಗ, ಲಕ್ವ, ಕಿಡ್ನಿ ವೈಫಲ್ಯ, ಎಲ್ಲ ಕಾಯಿಲೆಗಳೂ ಅಮರಿಕೊಳ್ಳುತ್ತಿವೆ.
ಲಯತಪ್ಪಿದ ಗ್ರಾಮೀಣ ಅರ್ಥವ್ಯವಸ್ಥೆಯಲ್ಲಿ ವಿದೇಶೀ ದನಗಳಿಗೆ, ಅದರಲ್ಲೂ ಹಸುಗಳಿಗೆ ಮಾತ್ರ ಅತಿಯಾದ ಆದ್ಯತೆ ನೀಡಿದ್ದರಿಂದ ಹಳ್ಳಿಯ ಸಮಗ್ರ ಬದುಕಿನ ಸಮತೋಲವೇ ಏರುಪೇರಾಗಿದೆ. ಇಂಥ ಅಸಮತೋಲ ಸ್ಥಿತಿಯಲ್ಲಿ ನಿರುಪಯುಕ್ತ ದನಗಳ ಸಂಖ್ಯೆಯನ್ನು ಕಡಿಮೆ ಮಾಡುವುದೇ ಸೂಕ್ತವೆಂದು ದೇಶದ ಹೆಸರಾಂತ ಅರ್ಥತಜ್ಞ ವಿ.ಎಮ್. ದಾಂಡೇಕರ್ ಇಪ್ಪತ್ತು ವರ್ಷಗಳ ಹಿಂದೆಯೇ ಹೇಳಿದ್ದರು. ಇದ್ದುದರಲ್ಲಿ ಒಂದು ನೆಮ್ಮದಿಯ ಸಂಗತಿ ಏನಿತ್ತೆಂದರೆ ಯಾರಿಗೂ ಬೇಡವಾದ ಹೋರಿಗಳ ಮತ್ತು ಕರಾವು ಮುಗಿದಿರುವ ಹಸುಗಳ ವಿಲೆವಾರಿ ತಂತಾನೆ ನಡೆದು ಹೋಗುತ್ತಿತ್ತು. ಅವು ಮಾಂಸಾಹಾರಿಗಳ ಹೊಟ್ಟೆಗೆ ಹೋಗುತ್ತಿದ್ದವು. ‘ನಮ್ಮ ದೇಶದಲ್ಲಿ ಮಾರಾಟಕ್ಕೆ ಲಭಿಸುವ ಮಾಂಸದಲ್ಲಿ ಶೇಕಡಾ ೬೦ಕ್ಕೂ ಹೆಚ್ಚು ಪಾಲು ರಾಸುಗಳಿಂದಲೇ (ಅಂದರೆ ಎತ್ತು, ಆಕಳು, ಎಮ್ಮೆ, ಕೋಣ) ಬರುತ್ತಿದೆ’ ಎಂದು ಐಸೆಕ್‌ನ ಇಕಾಲಜಿ ಅರ್ಥತಜ್ಞ ಡಾ. ಸಯ್ಯದ್ ಪಾಷಾ ಹೇಳುತ್ತಾರೆ. ನಾವು ವಿದೇಶಗಳಿಗೆ ರಫ್ತು ಮಾಡುವ ಒಟ್ಟೂ ಕೃಷಿ ಉತ್ಪನ್ನಗಳಲ್ಲಿ ರಾಸುಮಾಂಸದ ಪ್ರಮಾಣ ಶೇಕಡಾ ೨೦ರಷ್ಟಿದೆ. ಇದು ತುಂಬ ಮಹತ್ವದ ಸಂಗತಿ. ಗೋಹತ್ಯೆಯನ್ನು ನಿಷೇಧಿಸಿದರೆ, ಇಷ್ಟು ದೊಡ್ಡ ಪ್ರಮಾಣದ ಆಹಾರಮೂಲವನ್ನು, ಡಾಲರ್ ಗಳಿಸುವ ಸಂಪನ್ಮೂಲವನ್ನು ನಾವು ವ್ಯರ್ಥವಾಗಿ ಹೂಳಬೇಕಾಗುತ್ತದೆ. ಅದೂ ಸುಲಭದ ಕೆಲಸವಲ್ಲ. ರಾಸುಗಳು ನಿರುಪಯುಕ್ತವಾಗಿ ಬದುಕಿರುವಷ್ಟು ವರ್ಷವೂ ಅವಕ್ಕೆ ಮೇವು ನೀರು ಒದಗಿಸುತ್ತಿರಬೇಕಾಗುತ್ತದೆ. (ಅವುಗಳನ್ನು ಹಾಗೇ ಸುತ್ತಾಡಲು ಬಿಟ್ಟರೆ ‘ಊರೂರಲ್ಲಿ ಬೀದಿ ಬೀದಿಗಳಲ್ಲಿ ಎಲ್ಲೆಂದರಲ್ಲಿ ಬಡಕಲು ದನಗಳೇ ಕಾಣುತ್ತವೆ ಕಣ್ರೀ’ ಎಂದು ತೇಜಸ್ವಿ ಒಮ್ಮೆ ಹೇಳಿದ್ದರು) ಹಾಗೆ ವ್ಯರ್ಥ ವ್ಯಯವಾಗುವ ರಾಸುಮಾಂಸಕ್ಕೆ ಬದಲಿಯಾಗಿ, ಅಷ್ಟೇ ದೊಡ್ಡ ಪ್ರಮಾಣದ ಮಾಂಸವನ್ನು ಬೇರೆ ಮೂಲಗಳಿಂದ ಒದಗಿಸಬೇಕಾಗುತ್ತದೆ. ಬೇರೆ ಮೂಲ ಎಂದರೆ ಮತ್ತೇನಲ್ಲ, ಆಡು-ಕುರಿಗಳನ್ನು ಬೆಳೆಸುವುದು.
ದನದ ಮಾಂಸಕ್ಕೆ ಬದಲಿಯಾಗಿ ಆಡು-ಕುರಿಗಳ ಮಾಂಸವನ್ನು ದೇಶಕ್ಕೆಲ್ಲ ಒದಗಿಸಬೇಕೆಂದರೆ ನಿಸರ್ಗ ಸಮತೋಲ ಇನ್ನಷ್ಟು ಹದಗೆಡುತ್ತದೆ. ಏಕೆಂದರೆ ಅವುಗಳನ್ನು ಕಟ್ಟಿ ಬೆಳೆಸುವ ಪರಿಪಾಠ ನಮ್ಮಲ್ಲಿಲ್ಲ. ಗುಡ್ಡಬೆಟ್ಟಗಳಲ್ಲಿ ಆಡು-ಮೇಕೆಗಳು ಲಂಗು ಲಗಾಮಿಲ್ಲದೆ ಓಡಾಡುವುದರಿಂದಲೇ ನಮ್ಮ ಬಹುಪಾಲು ಸಸ್ಯಸಂಪತ್ತು ಹೇಳಹೆಸರಿಲ್ಲದೆ ನಾಶವಾಗಿದೆ. ಅವು ಚಲಿಸಿದಲ್ಲೆಲ್ಲ ಮಣ್ಣು ಸವಕಳಿಯಾಗಿ, ಕೆಂದೂಳೆದ್ದು ಬರಸದೃಶ ಪ್ರದೇಶ ನಿರ್ಮಾಣಗೊಳ್ಳುತ್ತದೆ. ಇನ್ನು ಗೋಹತ್ಯೆ ನಿಲ್ಲಿಸಿದರೆ ಆ ಪ್ರಮಾಣದ ಮಾಂಸಕ್ಕಾಗಿ ಇವುಗಳನ್ನು ಬೆಳೆಸಬೇಕೆಂದರೆ ಈಗಿಗಿಂತ ಆರು ಪಟ್ಟು ಹೆಚ್ಚು ಕುರಿಮೇಕೆಗಳಿಗೆ ಬೇಡಿಕೆ ಬರುತ್ತದೆ. ಆಗ ದೇಶದ ಇದ್ದಬದ್ದ ಧಾರಣ ಸಾಮರ್ಥ್ಯವೂ ಕುಸಿಯುತ್ತದೆ. ಹಸಿರುಕವಚದ ಸ್ಥಿತಿ ಏನಾದೀತೆಂದು ಯಾರೂ ಊಹಿಸಬಹುದು. ಇದು ಜೀವಜಾಲದ (ಇಕಾಲಜಿ) ಪ್ರಶ್ನೆಯಾದರೆ, ಇದರೊಟ್ಟಿಗೆ ಅರ್ಥವ್ಯವಸ್ಥೆ (ಇಕಾನಮಿ) ಕೂಡ ಬಿಗಡಾಯಿಸುತ್ತದೆ. ದನ-ಎಮ್ಮೆಗಳ ಮಾಂಸದ ಬೆಲೆಗೆ ಹೋಲಿಸಿದರೆ ಈಗ ಆಡುಕುರಿಗಳ ಮಾಂಸದ ಬೆಲೆ ಐದು ಪಟ್ಟು ಹೆಚ್ಚಿಗೆ ಇದೆ. ಅದು ಸಾಮಾನ್ಯರಿಗೆ ಎಟಕುವಂಥದ್ದಲ್ಲ. ಮಾಂಸಾಹಾರಿಗಳಿಗೆಲ್ಲ ಕಡ್ಡಾಯವಾಗಿ ದುಬಾರಿಯ ಕುರಿಕೋಳಿಗಳನ್ನು ತಿನ್ನಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ಅಣಕವಾಗುತ್ತದೆ. ಇದರ ಪರಿಣಾಮ ಏನೆಂದರೆ ವನ್ಯಜೀವಿಗಳ ಮೇಲೆ ಇನ್ನಷ್ಟು ಒತ್ತಡ ಬೀಳುತ್ತದೆ. ದೇಶದ ಮೃಗಾಲಯಗಳಲ್ಲಿರುವ ಮಾಂಸಾಹಾರಿ ಪ್ರಾಣಿಗಳಿಗೆ ಇಷ್ಟು ದಿನ ದನದ ಮಾಂಸವನ್ನೇ ಕೊಡಲಾಗುತ್ತಿತ್ತು -ಅದು ಅಗ್ಗದ್ದೆಂಬ ಕಾರಣದಿಂದ. ಆದರೆ ಇನ್ನುಮೇಲೆ ಅಲ್ಲಿಗೂ ಹಂದಿ ಮಾಂಸವನ್ನೋ, ಆಡುಕುರಿಗಳ ಮಾಂಸವನ್ನೋ ನೀಡಲು ಹೊರಟರೆ ಅದರ ವೆಚ್ಚವೂ ನಾಲ್ಕಾರು ಪಟ್ಟು ಹೆಚ್ಚಾಗುತ್ತದೆ.
ಅಂಥದ್ದೇನೂ ಆಗುವುದಿಲ್ಲ; ದನಕರುಗಳು ಶಾಶ್ವತವೇನಲ್ಲವಲ್ಲ! ಅವು ಸಹಜವಾಗಿ ಸಾಯುತ್ತಿರುತ್ತವೆ. ಈಗಿನಷ್ಟೇ ಸಂಖ್ಯೆಯಲ್ಲಿ ಆಗಲೂ ಸಾಯುತ್ತಿರುತ್ತವೆ. ಅವುಗಳ ಮಾಂಸ ತೆಗೆದು ಮಾರಲು ಅಥವಾ ಮೃಗಾಲಯಕ್ಕೆ ಸಾಗಿಸಲು ಅನುಮತಿ ಸಿಕ್ಕೇ ಸಿಗುತ್ತದೆ. ನೀವು ಉತ್ಪ್ರೇಕ್ಷೆ ಮಾಡಬೇಡಿ.
ಉತ್ಪ್ರೇಕ್ಷೆ ಅಲ್ಲ. ಈಗಿನ ವ್ಯವಸ್ಥೆಯಲ್ಲಿ ಅಲ್ಲಲ್ಲಿ ಕೇಂದ್ರೀಕೃತ ಕಸಾಯಿಖಾನೆಗಳಲ್ಲಿ ದಿನವೂ ಇಷ್ಟಿಷ್ಟೆಂಬಂತೆ ಮಾಂಸ ಲಭಿಸುತ್ತಿದೆ. ಎಲ್ಲೆಲ್ಲಿ ಎಂದೆಂದು ಎಷ್ಟೆಷ್ಟು ಡಿಮಾಂಡ್ ಇದೆಯೊ ಅಂದಂದು ಅಷ್ಟಷ್ಟು ಪೂರೈಕೆ ಆಗುತ್ತಿದೆ. ಗೋಹತ್ಯೆ ನಿಷೇಧಿಸಿದರೆ ಈ ಸಪ್ಲೈ ಚೇನ್‌ನಲ್ಲಿ ಅವ್ಯವಸ್ಥೆ ಉಂಟಾಗುತ್ತದೆ. ಏಕೆಂದರೆ ಎಲ್ಲಿ, ಯಾವ ದಿನ ಎಷ್ಟು ದನಕರುಗಳು ಸಾಯಲಿವೆ ಎಂಬುದು ಯಾರಿಗೂ ಗೊತ್ತಾಗಲು ಸಾಧ್ಯವಿಲ್ಲ. ದನಗಳ ಕಳೇವರದ ಸಾಗಾಣಿಕೆಗೆ ಸಂಬಂಧಿಸಿದಂತೆ ಪೊಲೀಸ್ ಕಿರುಕುಳ ಹೆಚ್ಚುವುದರಿಂದ, ಇಂಥ ರಗಳೆಯೇ ಬೇಡವೆಂದು ರೈತರು ತಮ್ಮ ದನ ಸತ್ತಾಗ ಯಾರಿಗೂ ತಿಳಿಸದೇ ಮಣ್ಣು ಮಾಡುವ ಸಾಧ್ಯತೆ ಹೆಚ್ಚುತ್ತದೆ. ಹೀಗಾದರೆ ಚರ್ಮೋದ್ಯಮವೂ ತತ್ತರಿಸಬಹುದು. ಪಶು ಆಹಾರ, ಔಷಧ ಉತ್ಪಾದನೆ ಮತ್ತು ಔದ್ಯಮಿಕ ಕಚ್ಚಾಪದಾರ್ಥ, ಸೌಂದರ್ಯ ವರ್ಧಕ ರಸವಸ್ತುಗಳ ತಯಾರಿಕೆ ಹೀಗೆ ಎಲ್ಲಕ್ಕೂ ನಾವು ವಿದೇಶೀ ಆಮದನ್ನೇ ಅವಲಂಬಿಸಬೇಕಾಗುತ್ತದೆ. ನಾಡಿನುದ್ದಕ್ಕೂ ಹಳ್ಳಿಗಳಲ್ಲಿ ಅಲ್ಲಲ್ಲಿ ಆಗಾಗ ಒಂದೋ ಎರಡೋ ರಾಸುಗಳು ಸತ್ತಿದ್ದು ಗೊತ್ತಾದರೂ ಅದರ ಮಾಂಸವನ್ನು ಸಾಗಿಸಿ ತಂದು ಆಹಾರವಾಗಿ ವಿಲೆವಾರಿ ಮಾಡುವುದಾದರೆ ಗುಣಮಟ್ಟ ಕೆಟ್ಟು ರೋಗರುಜಿನೆ ಹಬ್ಬಲು ಕಾರಣವಾಗಬಹುದು. ಬನ್ನೇರು ಘಟ್ಟದಲ್ಲಿ ಐದು ಹುಲಿಗಳು ‘ಸಾಲ್ಮೊನೆಲ್ಲಾ’ ವಿಷಾಣು ಸೇರಿದ್ದ ರೋಗಗ್ರಸ್ತ ಮಾಂಸವನ್ನು ತಿಂದೇ ಸತ್ತಿವೆ.
ಔಷಧ ಮತ್ತು ರಸವಸ್ತುಗಳ ಉತ್ಪಾದನೆಗೆ ಗೋಹತ್ಯೆ ನಿಷೇಧದಿಂದ ಹೇಗೆ ಧಕ್ಕೆ ಬರಲು ಸಾಧ್ಯ? ವೈದ್ಯಕೀಯಕ್ಕೂ ದನಕರುಗಳಿಗೂ ಅದೆಂಥ ಸಂಬಂಧ?
ವೈದ್ಯಕೀಯ ರಂಗಕ್ಕಷ್ಟೇ ಅಲ್ಲ, ಉದ್ಯಮರಂಗಕ್ಕೆ ಮತ್ತು ನಮ್ಮ ದಿನಬಳಕೆಯ ಸಾವಿರಾರು ವಸ್ತುಗಳಿಗೆ ಬೇಕಾದ ಕಚ್ಚಾ ಪದಾರ್ಥಗಳು ಕಸಾಯಿಖಾನೆಗಳಿಂದಲೇ ಲಭಿಸುತ್ತವೆ. ಅದರ ವ್ಯಾಪ್ತಿ ಜನಸಾಮಾನ್ಯರ ಊಹೆಗೂ ಮೀರಿದ್ದಾಗಿದೆ. ಅದನ್ನು ತುಸು ವಿವರವಾಗಿ ನೋಡೋಣ:
ಒಂದು ಹಸು, ಎತ್ತು ಅಥವಾ ಎಮ್ಮೆ ಸತ್ತರೆ ಅದರ ಚರ್ಮವನ್ನು ಸುಲಿದು ಯಾರೋ ಪಾದರಕ್ಷೆ, ಬೆಲ್ಟ್ ಇತ್ಯಾದಿ ಮಾಡಲೆಂದು ಒಯ್ಯುತ್ತಾರೆ. ಮಾಂಸದ ಆಯ್ದ ಭಾಗಗಳನ್ನು ಕೆಲವರು ಆಹಾರಕ್ಕೆ ಬಳಸುತ್ತಾರೆ. ದನಗಳ ಗೊರಸು, ಕೋಡುಗಳಿಂದಲೇ ‘ಜೆಲ್ಲಿ’ ಎಂಬ ಅಂಟು ಪದಾರ್ಥವನ್ನು ತಯಾರಿಸುತ್ತಾರೆ ಅನ್ನೋದು ಗೊತ್ತಿತ್ತು. ಪುಡಿ ಮಾಡಿದ ಮೂಳೆಗಳನ್ನು ಸಕ್ಕರೆಯನ್ನು ಬಿಳಿ ಮಾಡಲೆಂದು ಮೂಳೆಪುಡಿಯನ್ನು ಬಳಸುತ್ತಾರೆ. ರಸಗೊಬ್ಬರಕ್ಕೆ ಬೇಕಾದ ಕ್ಯಾಲ್ಸಿಯಂ ಮತ್ತು ರಂಜಕವನ್ನು ‘ಬೋನ್‌ಮೀಲ್’ ಫ್ಯಾಕ್ಟರಿಗಳಿಂದಲೇ ಪೂರೈಸಲಾಗುತ್ತದೆ. ಇದರಾಚಿನ ಗೋಪುರಾಣ ಹೀಗಿದೆ:
ಉದಾಹರಣೆಗೆ, ದನಗಳ ಶ್ವಾಸಕೋಶ ಮತ್ತು ಶ್ವಾಸನಾಳದ ಒಳ ಪೊರೆಯಿಂದ ಹೆಪಾರಿನ್ ಎಂಬ ಔಷಧವನ್ನು ತಯಾರಿಸುತ್ತಾರೆ. ಮನುಷ್ಯರ ಸರ್ಜರಿ ಮಾಡುತವಾಗ ರಕ್ತ ಗರಣೆಗಟ್ಟದ ಹಾಗೆ ತಡೆಯಲು, ವಿಶೇಷವಾಗಿ ಗ್ಯಾಂಗ್ರೀನ್ ಆಗದಂತೆ ತಡೆಯಲು ಈ ಔಷಧ ಬಳಕೆಯಾಗುತ್ತದೆ. ದನದ ಅಡ್ರಿನಾಲಿನ್ ಗ್ರಂಥಿಗಳಿಂದ ಸ್ಟಿರಾಯಿಡ್‌ಗಳನ್ನು ತೀವ್ರ ಅಸ್ತಮಾದಂಥ ಕಾಯಿಲೆಗಳ ಉಪಶಮನಕ್ಕೆ ಬಳಸುತ್ತಾರೆ. ಇದೇ ಗ್ರಂಥಿಗಳಿಂದ ಎಪಿನೆಫ್ರಿನ್ ಎಂಬ ಔಷಧವನ್ನು ಉತ್ಪಾದಿಸಿ ಅದನ್ನು ರಕ್ತದ ಒತ್ತಡವನ್ನು ಹೆಚ್ಚಿಸಲು ಬಳಸುತ್ತಾರೆ. ಹೃದ್ರೋಗ ಚಿಕಿತ್ಸೆಗಂತೂ ಇದು ಬೇಕೇ ಬೇಕು. ದನದ ಯಕೃತ್ತಿನಿಂದ ಬಿ-೧೨, ಲಿವರ್ ಎಕ್ಸ್‌ಟ್ರ್ಯಾಕ್ಟ್ ಔಷಧಗಳು ತಯಾರಾಗುತ್ತವೆ. ಹಾಗೆಯೇ ಮಧುಮೇಹಿಗಳಿಗೆ ಬೇಕಾದ ಇನ್ಸೂಲಿನ್ನನ್ನು ದನಗಳ ಮೇಧೋಜೀರಕ ಗ್ರಂಥಿಗಳಿಂದ ಪಡೆಯಲಾಗುತ್ತದೆ. ಇನ್ನು ಕೀಲುನೋವು, ಸಂಧಿವಾತದಿಂದ ಬಳಲುವವರಿಗೆ ಕೊಡುವ ಕೊಂಡ್ರಾಯಿಟಿನ್ ಸಲ್ಫೇಟ್ ಎಂಬ ಔಷಧವನ್ನು ದನದ ಮೂಗಿನ ಹೊರಳೆಗಳ ನಡುವಣ ಮೃದ್ವಸ್ಥಿಯಿಂದಲೇ ತಯಾರಿಸುತ್ತಾರೆ. ದನದ ಮಿದುಳಿನ ದಟ್ಟ ನಾರಿನಂಥ ಹೊರಗವಚವನ್ನು (ಡ್ಯುರಾ ಮೇಟರ್) ಮನುಷ್ಯರ ಮಿದುಳಿನ ಶಸ್ತ್ರಚಿಕಿತ್ಸೆ ಮಾಡುವಾಗ ತಲೆಬುರುಡೆಯ ಖಾಲಿ ಜಾಗವನ್ನು ತುಂಬಲು ಬಳಸಲಾಗುತ್ತದೆ.
ದನದ ಕರುಳನ್ನು ಉಪ್ಪಿನಲ್ಲಿ ಒಣಗಿಸಿ ಕೊಳವೆಯಂತೆ ಕತ್ತರಿಸಿ ಅದರಲ್ಲಿ ಮಸಾಲೆ ಮಾಂಸ ತುಂಬಿ ಕರಿದು ‘ಸಾಸೇಜ್’ ಎಂಬ ತಿಂಡಿಯನ್ನು ತಯಾರಿಸಲಾಗುತ್ತದೆ. ಕರುಳನ್ನು ದಾರದಂತೆ ಸೀಳಿ, ಗಾಯಕ್ಕೆ ಹೊಲಿಗೆ ಹಾಕುವ ದಾರವನ್ನಾಗಿ ಬಳಸಲಾಗುತ್ತದೆ.
ದನಗಳ ಪಿತ್ತಕೋಶದ ಕಲ್ಲುಗಳನ್ನು ಪಾಲಿಶ್ ಮಾಡಿ ಆಭರಣ ತಯಾರಕರು ಹರಳುಗಳಂತೆ ಕೂರಿಸುತ್ತಾರೆ. ಪ್ಲೈವುಡ್‌ನಲ್ಲಿ ಕಟ್ಟಿಗೆಯ ತೆಳು ಹಾಳೆಗಳನ್ನು ಅಂಟಿಸಲು ದನಗಳ ರಕ್ತವನ್ನು ಗೋಂದಿನಂತೆ ಸಾಂದ್ರೀಕರಿಸಿ ಬಳಸುತ್ತಾರೆ. ಕಟ್ಟಡಗಳಿಗೆ ಬೆಂಕಿ ಬಿದ್ದಾಗ ಉಪಯೋಗಿಸುವ ಅಗ್ನಿಶಾಮಕ ನೊರೆಯನ್ನೂ ದನಗಳ ರಕ್ತದ ಪುಡಿಯಿಂದಲೇ ತಯಾರಿಸಲಾಗುತ್ತದೆ. ಮಿಕ್ಕಿದ ರಕ್ತಪುಡಿ ರಸಗೊಬ್ಬರದ ಉತ್ಪಾದನೆಗೆ ಹೋಗುತ್ತದೆ. ಕೃಷಿ ಕೆಲಸದಲ್ಲಿ ದುಡಿಯುವ ಮಹಿಳೆ ತೀರ ದುರ್ಬಲಳಾಗಿದ್ದರೆ ಅನೀಮಿಯಾ ಕಾಯಿಲೆ ಇದೆಯೆಂದು ಡಾಕ್ಟರು ಬರೆದುಕೊಡುವ ಐರನ್ ಟ್ಯಾಬ್ಲೆಟ್‌ಗೂ ದನದ ರಕ್ತವೇ ಮೂಲದ್ರವ್ಯ. ಇಡೀ ದೇಶದ ಗ್ರಾಮೀಣ ಗರ್ಭಿಣಿಯರಿಗೆ ಇಂದು ವಿತರಣೆಯಾಗುವ ಐರನ್ ಟ್ಯಾಬ್ಲೆಟ್‌ಗಳಿಗೆ ಇದೇ ಮೂಲವಸ್ತು.
ದನಗಳ ಎಲುಬಿನ ಪುಡಿಯಿಂದಲೇ ಸಕ್ಕರೆಗೆ ಅಚ್ಚ ಬಿಳಿಬಣ್ಣ ಬರುತ್ತದೆ. ಪಿಂಗಾಣಿ ವಸ್ತುಗಳ ತಯಾರಿಕೆಯಲ್ಲೂ ಇದು ಬೇಕೇ ಬೇಕು. ಅತ್ಯಚ್ಚ ಗುಣಮಟ್ಟದ ವಿಶೇಷ ಉಕ್ಕಿನ ತಯಾರಿಕೆಗೆ ಮೂಳೆಪುಡಿಯನ್ನು ಸೇರಿಸಬೇಕಾಗುತ್ತದೆ. ಎಲುಬಿನಿಂದ ತಯಾರಿಸಲಾದ ಬಟನ್‌ಗಳಿಗೆ ಈ ಪ್ಲಾಸ್ಟಿಕ್ ಯುಗದಲ್ಲೂ ಬೇಡಿಕೆ ಇದೆ.
ದನಗಳ ಎಲುಬು ಮತ್ತು ಕೊಬ್ಬು ಎರಡರಿಂದಲೂ ‘ಟ್ಯಾಲೊ’ ಎಂಬ ವಿಶೇಷ ಬಗೆಯ ಎಣ್ಣೆಯನ್ನು ತೆಗೆಯುತ್ತಾರೆ. ಭಕ್ಷಣೆಗೆ ಯೋಗ್ಯವಲ್ಲದ ಟ್ಯಾಲೊ ಎಣ್ಣೆಯನ್ನು ಬ್ರೇಕ್ ದ್ರವ ಮತ್ತು ಜೆಟ್ ವಿಮಾನಗಳ ಕೀಲೆಣ್ಣೆಯನ್ನು ಉತ್ಪಾದನೆಗೆ ಕಚ್ಚಾ ಪದಾರ್ಥವಾಗಿ ಬಳಸುತ್ತಾರೆ. ಬಸ್ಸು, ಲಾರಿ, ಕಾರುಗಳ ಹೈಡ್ರಾಲಿಕ್ ಬ್ರೇಕ್‌ಗಳಿಗೆ ದನದ ಎಣ್ಣೆ ಬಳಕೆಯಾಗುತ್ತದೆ. ಬಸ್ ನಿಂತಾಗ ಅಟೊಮೆಟಿಕ್ ಬಾಗಿಲು ತೆರೆಯಲಿಕ್ಕೂ ಇದೇ ದ್ರವ ಬೇಕು. ಮೋಂಬತ್ತಿಗೆ ಇದೇ ಮೂಲವಸ್ತು. ನಟನಟಿಯರು ಕೃತಕ ಕಣ್ಣೀರು ಹರಿಸಲೆಂದು ಬಳಿದುಕೊಳ್ಳುವ ಗ್ಲಿಸರೀನ್ ಕೂಡ ಇದೇ ಟ್ಯಾಲೊದಿಂದಲೇ ಬರುತ್ತದೆ. ಇದರಿಂದ ಸಾಬೂನು, ಡಿಟರ್ಜಂಟ್‌ಗಳೂ ತಯಾರಾಗುತ್ತವೆ. ವಿವಿಧ ಬಗೆಯ ಕಿವಿಗೆ ಹಾಕುವ ಹನಿಗಳು, ಕಣ್ಣಿಗೆ ಹಾಕುವ ಹನಿಗಳು, ಕೆಮ್ಮಿನ ಔಷಧಗಳು, ಹೇರ್ ಕಂಡೀಶನರ್‌ಗಳು, ಶಾಂಪೂಗಳು ಎಲ್ಲವಕ್ಕೂ ಗ್ಲಿಸರೀನೇ ಮೂಲದ್ರವ್ಯ. ಇದರಿಂದಲೇ ಬಣ್ಣ ಬಣ್ಣದ ಇಂಕು, ಕಾರುಗಳ ಪೇಂಟ್ ಮೇಲೆ ಹಚ್ಚುವ ಪಾಲಿಶ್‌ಗಳು, ಕಾರಿನ ಇಂಧನ ಚಳಿಯಲ್ಲೂ ಹೆಪ್ಪುಗಟ್ಟದಂತೆ ನೋಡಿಕೊಳ್ಳುವ ಆಂಟಿಫ್ರೀಝ್ ಮಿಶ್ರಣಗಳು ಎಲ್ಲವಕ್ಕೂ ಗ್ಲಿಸರೀನ್ ಬೇಕು.
ಸೂರಿನಿಂದ ಮಳೆನೀರು ಸೋರುವುದನ್ನು ತಡೆಗಟ್ಟಬಲ್ಲ ‘ವಾಟರ್ ಪ್ರೂಫಿಂಗ್’ ಅಂಟುಗಳ ತಯಾರಿಕೆಗೂ ಕಚ್ಚಾ ಟ್ಯಾಲೊ ಬಳಕೆಯಾಗುತ್ತದೆ. ಆಹಾರವಸ್ತುಗಳನ್ನು ಪ್ಯಾಕಿಂಗ್ ಮಾಡಲು ಬೇಕಾದ ವಿಶೇಷ ಬಗೆಯ ಎಣ್ಣೆಕಾಗದವೂ ಇದರಿಂದಲೇ ತಯಾರಾಗುತ್ತದೆ. ನಾನಾ ಬಗೆಯ ಆಂಟಿಬಯಾಟಿಕ್ ಔಷಧಗಳೂ ಕೂಡ.
ಇನ್ನು ಮೂಳೆ, ಗೊರಸು ಮತ್ತು ಕೊಂಬುಗಳನ್ನು ಕಾಯಿಸಿದಾಗ ಭಕ್ಷ್ಯಯೋಗ್ಯ ಟ್ಯಾಲೊ ಎಣ್ಣೆ ದೊರಕುತ್ತದೆ. ಇದು ಚ್ಯೂಯಿಂಗ್ ಗಮ್, ಬೇಕರಿ ಖಾದ್ಯಗಳಲ್ಲಿ ಬಳಕೆಯಾಗುತ್ತದೆ.
ದನಗಳ ಅಂಗಾಂಶಗಳನ್ನು ಜೋಡಿಸುವ ‘ಕೊಲಾಜೆನ್’ ಎಂಬ ದ್ರವ್ಯಕ್ಕೆ ಭಾರೀ ಬೇಡಿಕೆ ಇದೆ. ಚರ್ಮವನ್ನು ಹಿಂಡಿದಾಗಲೂ ಕೊಲಾಜೆನ್ ಸಿಗುತ್ತದೆ. ಇದರ ವೈದ್ಯಕೀಯ ಉಪಯೋಗದ ಪಟ್ಟಿಯೇ ಸಾಕಷ್ಟು ದೀರ್ಘವಿದೆ. ಹಿರಿಯ ನಾಗರಿಕರಿಗೆ ಮೂತ್ರ ವಿಸರ್ಜನೆ ಅನಿಯಂತ್ರಿತವಾದಾಗ ಇದನ್ನೇ ಚುಚ್ಚುಮದ್ದಿನ ಔಷಧವಾಗಿ ಕೊಡುತ್ತಾರೆ. ಗಾಯಗಳಿಗೆ ಸುತ್ತಲೆಂದು ನಂಜುನಿರೋಧಕ ಬ್ಯಾಂಡೇಜ್‌ಗಳ ತಯಾರಿಕೆಗೆ ಇದೇ ಬೇಕು. ಗಾಯ ಒಣಗಿದ ನಂತರ ಆಳವಾದ ಗೀರು ಬಿದ್ದಿದ್ದರೆ, ಸುರೂಪ ಚಿಕಿತ್ಸಕರು ಅದನ್ನು ಮರೆಮಾಚಲೆಂದು ಕೊಲಾಜೆನ್ ತುಂಬುತ್ತಾರೆ. ಕಣ್ಣಿನ ಪೊರೆ ನಿವಾರಣೆಗೆ ಪಾಪೆ ಕವಚವಾಗಿ ಕೂಡ ಇದು ನೆರವಿಗೆ ಬರುತ್ತದೆ. ಇನ್ನು ಖಾದ್ಯ ಉದ್ಯಮದಲ್ಲಂತೂ ಇದೇ ಕೊಲಾಜೆನ್ ಪಾತ್ರವನ್ನು ಹೇಳುವುದೇ ಬೇಡ. ಜಿಲೆಟಿನ್ ಪುಡಿ ಇದರಿಂದಲೇ ತಯಾರಾಗುತ್ತದೆ. ಜೆಲ್ಲಿ, ಜಾಮ್‌ಗಳಿಗೆ ಇದಿಲ್ಲದಿದ್ದರೆ ಆಗುವುದಿಲ್ಲ. ಬಹಳಷ್ಟು ಸೌಂದರ್ಯ ವರ್ಧಕ ದ್ರವ್ಯಗಳಲ್ಲಿ ಕೊಲಾಜೆನ್ ಕ್ರೀಮ್ ಇದ್ದೇ ಇರುತ್ತದೆ. ಜತೆಗೆ ತರಾವರಿ ಮುಲಾಮು, ನೋವು ನಿವಾರಕ ಎಣ್ಣೆಗೆಲ್ಲ ಇದೇ ಬೇಕು. ಫೊಟೊಗ್ರಫಿ, ಸಿನಿಮಾ ಫಿಲ್ಮ್ ತಯಾರಿಕೆಗೂ ಇದು ಕಚ್ಚಾವಸ್ತುವಾಗಿ ಬಳಕೆಯಾಗುತ್ತದೆ. ಸಿನೆಮಾ ನಟ ನಟಿಯರ ಮುಖದಲ್ಲಿ ಸುಕ್ಕುಗಳು ಕಾಣಿಸದಂತೆ ಬಳಸುವ ವೃದ್ಧಾಪ್ಯನಿರೋಧಕ ಕ್ರೀಮ್ ಕೂಡ ಇದರಿಂದಲೇ ತಯಾರಾಗುತವೆ.
ಮಲಿನ ಗಾಳಿಯನ್ನು ಸೋಸಲು ಇಂದು ಬಳಕೆಯಾಗುತ್ತಿರುವ ವಿಧವಿಧದ ಫಿಲ್ಟರ್‌ಗಳನ್ನು ದನಗಳ ಕೂದಲಿನಿಂದ ತಯಾರಿಸಲಾಗುತ್ತದೆ. ಸ್ವಾಮೀಜಿಗಳು, ರಾಜಕಾರಣಿಗಳು ಮತ್ತು ಔದ್ಯಮಿಕ ಅಧಿಪತಿಗಳು ಬಳಸುವ ಅತಿ ದುಬಾರಿ ಸೋಫಾ ಮತ್ತು ಕಾರಿನ ಕುಶನ್‌ಗಳಿಗೆ ವಿಶೇಷವಾಗಿ ಸಂಸ್ಕರಿಸಿದ ದನದ ಚರ್ಮವೇ ಬಳಕೆಯಾಗುತ್ತದೆ….
ಸಾಕು, ಸಾಕು ಈ ಗೋಪುರಾಣ! ದನಗಳು ತಾವಾಗಿ ಸಾವಪ್ಪಿದ ನಂತರವೂ ಅವುಗಳ ದೇಹದಿಂದ ಇವೆಲ್ಲ ಉಪಯುಕ್ತ ವಸ್ತುಗಳನ್ನು ಪಡೆಯಲು ಸಾಧ್ಯವಿದೆ, ಏನಂತೀರಿ?
ಅಲ್ಲೊಂದು ಇಲ್ಲೊಂದು ದನ ಸತ್ತರೆ ಈ ಯಾವ ಉತ್ಪಾದನೆಗೂ ಅವಕಾಶವಿಲ್ಲ. ಹಿಂದೆ ಹೇಳಿದಂತೆ, ಇವನ್ನೆಲ್ಲ ಕಸಾಯಿಖಾನೆಗಳಲ್ಲಿ ಸಂಸ್ಕರಣೆ ಮಾಡಿದರಷ್ಟೇ ಉದ್ಯಮಗಳಿಗೆ ಬೇಕಾದ ಪ್ರಮಾಣದಲ್ಲಿ ಅವು ಲಭ್ಯವಾಗುತ್ತವೆ. ಗೋಹತ್ಯೆ ನಿಷೇಧಿಸಿದರೆ ಮನುಷ್ಯರ ಕಾಯಿಲೆಗಳ ಚಿಕಿತ್ಸೆಗೆ ಬೇಕಾದ ಔಷಧಗಳನ್ನೆಲ್ಲ ವಿದೇಶಗಳಿಂದಲೇ ತರಿಸಬೇಕಾಗುತ್ತದೆ. ವೆಚ್ಚ ಅತಿಯಾಗುತ್ತದೆ. ಅಷ್ಟೇ ಅಲ್ಲ, ದನಗಳ ಕಾಯಿಲೆಗಳಿಗೂ ಔಷಧ ವೆಚ್ಚ ಹೆಚ್ಚುತ್ತದೆ!
ಹಾಗಿದ್ದರೆ, ಪಶುಸಂಗೋಪನೆ ಈಗಿನ ಸ್ಥಿತಿಯಲ್ಲೇ ಮುಂದುವರೆಯಬೇಕೆನ್ನುತ್ತೀರಾ? ಸಭ್ಯ ಪ್ರಾಣಿ ಗೋವಿನ ಬಗ್ಗೆ ದಯೆ, ಪ್ರೀತಿಯನ್ನೆಲ್ಲ ಕಳೆದುಕೊಂಡ ನಾವು ಮನುಷ್ಯತ್ವವನ್ನೇ ಕಳೆದುಕೊಂಡಂತೆ ಅಲ್ಲವೆ?
ಅದು ಹಾಗಲ್ಲ. ಗೋವುಗಳ ಸ್ಥಿತಿ ಈಗಿಗಿಂತ ಉತ್ತಮವಾಗಬೇಕೆಂದು ನಾವು ವಾದಿಸುತ್ತೇವೆ. ವ್ಯವಸ್ಥಿತ, ವೈಜ್ಞಾನಿಕ ಪಶುಸಂಗೋಪನೆ ಮತ್ತು ಸಂಸ್ಕರಣೆ ನಡೆಯಬೇಕು. ಗೋ-ಕುಲವನ್ನು ಕೇಂದ್ರವಾಗಿಟ್ಟುಕೊಂಡು ಇಡೀ ಜೀವಜಾಲ ಮತ್ತೆ ಸಮತೋಲ ಸ್ಥಿತಿಗೆ ಬರಬೇಕು. ನಮ್ಮದು ಸಮೃದ್ಧ, ಸುಸಂಸ್ಕೃತ ದೇಶ ಎಂಬುದು ಬಿಂಬಿತವಾಗಬೇಕು. ಹಾಗಾಗಬೇಕಾದರೆ ಗೋಹತ್ಯೆ ನಿಷೇಧವೆಂಬ ಬುಡುಬುಡಿಕೆ ಬಾರಿಸುವ ಬದಲು ಈ ಮುಂದೆ ಹೇಳಿದ ಕ್ರಮಗಳನ್ನು ಕೈಗೊಂಡು ನಮ್ಮ ಮಾನವೀಯ ಕಳಕಳಿಯನ್ನು ಮೆರೆಯಬೇಕು.
ಗೋವುಗಳಿಗೆ ಸಾಕಷ್ಟು ಸಾವಯವ ಆಹಾರ, ಶುದ್ಧ ಮೇವು, ಶುದ್ಧ ನೀರು ಸಿಗುವಂತಾಗಬೇಕು. ಈಗಂತೂ ಕೆಮಿಕಲ್ ಮೇವು ತಿಂದು, ನೈಟ್ರೇಟ್ ಲವಣಗಳಿರುವ ಬೋರ್‌ವೆಲ್ ನೀರು ಕುಡಿದು ಇಡೀ ಹೈನು ಉದ್ಯಮ ಇಂದು ಕಾಯಿಲೆಗಳ ಸರಮಾಲೆಯನ್ನೇ ಸೃಷ್ಟಿಸುತ್ತಿದೆ. ಅದನ್ನು ತಪ್ಪಿಸಬೇಕೆಂದರೆ ಸಾಧ್ಯವಿದ್ದಷ್ಟೂ ಗೋಮಾಳಗಳ ಸಂವರ್ಧನೆ ಆಗಬೇಕು. ಗುಡ್ಡಬೆಟ್ಟಗಳಲ್ಲಿ ಲಂಟಾನಾ, ಪಾರ್ಥೇನಿಯಂ, ಯುಪಟೋರಿಯಂ ಬದಲಿಗೆ ನಮ್ಮ ನಾಡಿಗೆ ಸಹಜವೆನಿಸಿದ ಹುಲ್ಲುಮೇವು ಬೆಳೆಯುವಂತಾಗಬೇಕು. ಕೃಷಿಭೂಮಿಯಿಂದ ಸಿಗುವ ಬೇಹುಲ್ಲಿನ ವಿಷ ರಸಗಳ ಪತ್ತೆಗೆ ಸರಳ ಸಾಧನಗಳು ಹೈನುಗಾರರಿಗೆ ಲಭಿಸಬೇಕು. ಹಾಲಿನಲ್ಲಿರುವ ಕೆಮಿಕಲ್ ವಸ್ತುಗಳ ಪತ್ತೆಗೆ ಉಪಕರಣಗಳು ಸಿಗಬೇಕು (ನಮ್ಮ ಈಗಿನ ಮೇವಿನಲ್ಲಿ ಎಂಡೊಸಲ್ಪಾನ್ ವಿಷದ ಪ್ರಮಾಣ ತೀರ ಜಾಸ್ತಿ ಇರುವುದರಿಂದ, ವಿದೇಶಗಳಿಗೆ ಹೈನು ಉತ್ಪನ್ನಗಳನ್ನು ರಫ್ತು ಮಾಡುವ ‘ಡೈನಾಮಿಕ್ಸ್’ ನಂಥ ಕಂಪನಿಗಳು ಕರ್ನಾಟಕದ ಹಾಲನ್ನು ಖರೀದಿಸುತ್ತಿಲ್ಲ. ನಮ್ಮ ಕಾಮಧೇನುವಿನ ವಿಷವನ್ನು ನಾವೇ ಸೇವನೆ ಮಾಡಬೇಕಾಗಿದೆ). ಈ ಕ್ರಮಗಳನ್ನು ಕೈಗೊಂಡರೆ ನಮ್ಮ ಗುಡ್ಡಬೆಟ್ಟ ಕೆರೆಕಟ್ಟೆಗಳ ಜೀವಸಮೃದ್ಧಿಯೂ ಹೆಚ್ಚುತ್ತದೆ. ಪರಿಸರವೂ ಶುದ್ಧವಾಗುತ್ತದೆ. ಇಂಥ ಪರಿಶುದ್ಧ ಸ್ಥಿತಿಯಲ್ಲಿ ಸಿದ್ಧವಾಗುವ ಸಾವಯವ ಹೈನು ಉತ್ಪನ್ನಗಳಿಗೆ ಹೆಚ್ಚಿನ ಬೆಲೆ ಇರುವುದರಿಂದ ಗ್ರಾಮೀಣ ಜನರ ಆರ್ಥಿಕ ಬಲದ್ದೂ ಸಂವರ್ಧನೆಯಾಗುತ್ತದೆ.
ಪಶುಸಂಗೋಪನೆಯಲ್ಲಿ ಅಸಮತೋಲ ನಿವಾರಣೆಯಾಗಬೇಕು. ಅಂದರೆ, ಹೋರಿ, ಎತ್ತು, ಎಮ್ಮೆ, ಕೋಣಗಳನ್ನೂ ಬೆಳೆಸಬೇಕು. ಅವನ್ನು ಪುಷ್ಟಿಗೊಳಿಸಲು ಬೇಕಾದ ಅಗಸೆ, ಹಾಲಿವಾಣ, ಸುಬಾಬುಲ್, ವೆಲ್ವೆಟ್ ಅವರೆ, ಕಾಡು ಅಲಸಂದೆ ಮುಂತಾದವುಗಳಿಗೆ ವಿಶೇಷ ಆದ್ಯತೆ ನೀಡಿ ಹೊಲದ ಬದುಗಳಲ್ಲಿ, ಬರಡುಭೂಮಿಯಲ್ಲಿ ಬೆಳೆಸಿದರೆ, ಅವೇ ಹಣದ ಬೆಳೆಯಾಗುತ್ತವೆ. ಅಷ್ಟೇ ಅಲ್ಲ, ಅಂತರ್ಜಲವನ್ನು ಹೆಚ್ಚಿಸುತ್ತವೆ. ಮಣ್ಣಿನ ಸವಕಳಿ ತಡೆಗಟ್ಟುತ್ತವೆ. ಕೆರೆಗಳಲ್ಲಿ ಹೂಳು ಶೇಖರವಾಗದಂತೆ ತಡೆಯುತ್ತವೆ. ಕೆರೆಕೊಳ್ಳ ಮತ್ತು ಸುತ್ತಲಿನ ಇಡೀ ಪರಿಸರ ಸಮೃದ್ಧ ಜೀವವೈವಿಧ್ಯದ ನೆಲೆದಾಣವಾಗುತ್ತದೆ. ಸಾಕುಪ್ರಾಣಿಗಳ ಬದುಕಿನ ಗುಣಮಟ್ಟವನ್ನು ಹೆಚಿಸ್ಚುವತ್ತ ಗಮನವಿರಬೇಕೇ ವಿನಾ ಕೃಶವಾಗಿದ್ದರೂ ಸರಿ ‘ಸಹಜ ಸಾವೇ ಬರಲಿ’ ಎಂದು ವಾದಿಸುವುದು ಸರಿಯಲ್ಲ. ಸಹಜ ಪರಿಸರದಲ್ಲಿ ಓಡಾಡುತ್ತ, ಉತ್ತಮ ಪೋಷಕಾಂಶ ಸೇವಿಸುತ್ತ ಅವು ನೆಮ್ಮದಿಯಿಂದ ಗರಿಷ್ಠ ಬೆಳೆವಣಿಗೆಯ ಹಂತ ತಲುಪಲು ಅವಕಾಶ ಕೊಟ್ಟು ನಂತರ ಪ್ರೀತಿಯಿಂದಲೇ ಅವನ್ನು ಕಸಾಯಿಖಾನೆಗೆ ಕಳಿಸಿಕೊಡಲು ಸಾಧ್ಯವಿದೆ. ನಿಸರ್ಗದಲ್ಲಿ ಹುಲಿ, ಸಿಂಹ, ಮೊಸಳೆಗಳ ಬಾಯಿಗೆ ಸಿಕ್ಕು ಸಾವಪ್ಪುತ್ತವೆ ತಾನೆ? ಅದು ಪ್ರಕೃತಿ ನಿಯಮಕ್ಕೆ ಅತಿ ಹತ್ತಿರದ ಪಶುಸಂಖ್ಯಾ ನಿಯಂತ್ರಣ ಕ್ರಮವೂ ಹೌದು.
ಸರಕಾರಿ ನೆರವು ಪಡೆಯುವ ಹೈನುಗಾರಿಕೆಯಲ್ಲಿ ಗೋಬರ್ ಅನಿಲ ಉತ್ಪಾದನೆಯನ್ನು ಕಡ್ಡಾಯಗೊಳಿಸಬೇಕು. ಈಗಿನ ವ್ಯವಸ್ಥೆಯಲ್ಲಿ ಸೆಗಣಿಯ ರಾಶಿಯಿಂದ ಹೊರಬೀಳುವ ಮೀಥೇನ್ ಅನಿಲ ನಿರುಪಯುಕ್ತವಾಗಿ ಹೋಗುತ್ತಿದೆ ಅಷ್ಟೆ ಅಲ್ಲ, ವಾತಾವರಣಕ್ಕೆ ಸೇರಿ ಭೂಮಿಯ ತಾಪಮಾನವನ್ನು ಹೆಚ್ಚಿಸುತ್ತಿದೆ. ಸುಧಾರಿತ ದೇಶಗಳು ನಮ್ಮ ಪಶುಸಂಪತ್ತಿನ ದುರ್ವ್ಯಯದ ಬಗ್ಗೆ ಟೀಕೆ ಮಾಡಲು ಅವಕಾಶವಿರಕೂಡದು. ಸೆಗಣಿ ಅನಿಲದ ಬಾಟಲೀಕರಣ ಸಾಧ್ಯವಾದರೆ ಅದರಿಂದ ಟ್ರ್ಯಾಕ್ಟರ್ ಟಿಲ್ಲರ್ ಓಡಿಸಬಹುದು. ನೀರೆತ್ತುವ ಪಂಪ್‌ಗಳಿಗೆ ಶಕ್ತಿ ಸಿಗುತ್ತದೆ. ಆಗ ಪಶುಸಂಗೋಪನೆ ಮತ್ತೆ ಸಮತೋಲಕ್ಕೆ ಬರುತ್ತದೆ; ಮತ್ತೊಮ್ಮೆ ನಿಜವಾದ ಅರ್ಥದಲ್ಲಿ ಕೃಷಿ ಎಂಬುದು ಪಶುಕೇಂದ್ರಿತವಾಗಿ ಗ್ರಾಮವಾಸಿಗಳ ಆರ್ಥಿಕಬಲವನ್ನು ಹೆಚ್ಚಿಸಲು ಸಹಾಯಕವಾಗುತ್ತದೆ.
ಕಸಾಯಿಖಾನೆಗಳ ಆಧುನೀಕರಣವಾಗಬೇಕು. ಧಾರ್ಮಿಕ ವಿಧಿಗಳಿಗೆ ಚ್ಯುತಿ ಬಾರದ ಹಾಗೆ ಸಾಧ್ಯವಾದಷ್ಟೂ ನೋವಿಲ್ಲದ ಸ್ಟನ್ನಿಂಗ್ ವಿಧಾನದಲ್ಲೇ ಪಶುವಧೆ ನಡೆಯಬೇಕು. ನಂತರದ ಸಂಸ್ಕರಣೆಯ ಪ್ರತಿ ಹಂತದಲ್ಲೂ ಕಟ್ಟುನಿಟ್ಟಾಗಿ ಶುಚಿತ್ವವನ್ನು ಕಾಪಾಡಿಕೊಳ್ಳಬೇಕು.
ಗಲ್ಲಿ ಮೊಹಲ್ಲಾಗಳ ಸಂದುಗೊಂದಿನಲ್ಲಿ ಪಶುವಧೆಗೆ ಅವಕಾಶ ಕೊಡಬಾರದು. ಈಗಿನ ಸ್ಥಿತಿಯಲ್ಲಿ ಅದಕ್ಕೆ ನಿರ್ಬಂಧ ಹೇರುವುದು ಕಷ್ಟಸಾಧ್ಯ; ಏಕೆಂದರೆ ಕಸಾಯಿಖಾನೆಗಳು ತೀರಾ ದೂರದಲ್ಲಿವೆ. ಅಚ್ಚುಕಟ್ಟಾದ, ಮಾಲಿನ್ಯದ ಲವಲೇಶವೂ ಇಲ್ಲದ ಚಿಕ್ಕ ಚಿಕ್ಕ ಕಸಾಯಿಖಾನೆಗಳನ್ನು ಸ್ಥಾಪಿಸಲು ಸಾಧ್ಯವಿದೆ. ಅಂಥವು ಸೂಕ್ತ ಸ್ಥಳಗಳಲ್ಲಿ ಸ್ಥಳಗಳಲ್ಲಿ ಸ್ಥಾಪಿಸಬೇಕು. ಅಲ್ಲಿಂದ ಹೊರಬರುವ ಶೇಷದ್ರವ್ಯಗಳು ಚರಂಡಿಗೆ ಸೇರದಂತೆ ಪ್ರತ್ಯೇಕ ಸಾಗಿಸಬೇಕು. ಅಲ್ಲೆಲ್ಲ ಶಿಸ್ತಿನ ಮೇಲ್ವಿಚಾರಣೆ ನಡೆಯುತ್ತಿರಬೇಕು.
ಬೀದಿಬದಿಗಳಲ್ಲಿ, ತೆರೆದ ಅಂಗಡಿಗಳಲ್ಲಿ ಮಾಂಸದ ಪ್ರಾಣಿಗಳ ವಿವಿಧ ಅಂಗಗಳ ಪ್ರದರ್ಶನವನ್ನು ಕಡ್ಡಾಯವಾಗಿ ನಿಲ್ಲಿಸಬೇಕು. ಯಾವ ಸಂದರ್ಭದಲ್ಲೂ ಸೈಕಲ್‌ಗಳ ಮೇಲೆ, ದ್ವಿಚಕ್ರ ವಾಹನಗಳ ಮೇಲೆ ಮೂಕಪ್ರಾಣಿ-ಪಕ್ಷಿಗಳ ಸಾಗಾಟಕ್ಕೆ ಅವಕಾಶ ಕೊಡಬಾರದು.
ಇಂಥ ವ್ಯವಸ್ಥೆಯಲ್ಲಿ ಸಾಮಾಜಿಕ ನೆಮ್ಮದಿ ನೆಲೆಸುತ್ತದೆ. ವಾಸ್ತವದ ನೆಲೆಗಟ್ಟಿನಲ್ಲೇ ಈಗಿರುವ ಲೋಪಗಳನ್ನು ಸರಿಪಡಿಸಲು ಸಾಧ್ಯವಾಗುತ್ತದೆ. ಗೋವುಗಳೂ ಸೇರಿದಂತೆ ಎಲ್ಲ ಜೀವಿಗಳ ಮೇಲೆ ನಮಗಿರುವ ಮಾನವೀಯ ಅನುಕಂಪ, ಅಂತಃಕರಣ ಹಾಗೂ ಸಂವೇದನೆಗಳಿಗೆ ಭಂಗ ಬರುವುದಿಲ್ಲ.
ಇದಕ್ಕೆ ವ್ಯತಿರಿಕ್ತವಾಗಿ, ಗೋಹತ್ಯೆ ನಿಷೇಧ ಕಾನೂನು ಜಾರಿಗೆ ಬಂದಿದ್ದೇ ಆದರೆ ಕೆಲವು ಗಂಭೀರ ಪ್ರಶ್ನೆಗಳು ಏಳುತ್ತವೆ. ಯಾವುದೇ ಕಾನೂನು ನಮ್ಮಲ್ಲಿ ಜಾರಿಗೆ ಬಂದರೂ ಈಗಿನ ಚಟುವಟಿಕೆಗಳು ಹೆಚ್ಚೆಂದರೆ ಭೂಗತವಾಗುತ್ತವೆ, ಕಾನೂನುಬಾಹಿರ ಕೃತ್ಯದ ಸಾಮಾಜಿಕ ವೆಚ್ಚ ಹೆಚ್ಚುತ್ತದೆ. ಗೋವಧೆ ಆಗದಂತೆ ಊರೂರಲ್ಲಿ ನಿಗಾ ಇಡಬೇಕಾದವರು ಯಾರು? ಪೊಲೀಸರಿಗೆ ಈಗಾಗಲೇ ಹೊರೆಯಷ್ಟು ಕೆಲಸಗಳಿವೆ. ಕೊಲೆ, ದರೋಡೆ, ಕಳ್ಳಸಾಗಣೆಯಂಥ ಕುಕೃತ್ಯಗಳ ಮೇಲೆ ನಿಗಾ ಇಡವ ಬದಲು ಅವರು ಅರೆಹೊಟ್ಟೆಯ ಗೋವುಗಳ ಸಂರಕ್ಷಣೆಗೆ ಹೊರಡಬೇಕೆ? ಅವರಿಂದ ಅದು ಸಾಧ್ಯವಿಲ್ಲವೆಂದು ಸಂಘ ಪರಿವಾರದ ಉತ್ಸಾಹಿಗಳಿಗೆ ಅಥವಾ ಖಾಸಗಿ ಜನರಿಗೆ ಇಂಥ ಅಧಿಕಾರವನ್ನು ಕೊಟ್ಟರೆ ಅದು ಇನ್ನಷ್ಟು ಕ್ಷೆಭೆಗೆ ಕಾರಣವಾಗಬಹುದು. ಬಿಹಾರ, ಝಾರ್‌ಖಂಡ್‌ಗಳಲ್ಲಿ ಸರಕಾರವೇ ಹಳ್ಳಿಯವರಿಗೆ ಬಂದೂಕು ಕೊಟ್ಟು ‘ಸಲ್ವಾ ಝುಡೂಮ್’ ಹೆಸರಿನಲ್ಲಿ ಅರಾಜಕತೆ ಉಂಟು ಮಾಡಿದಾಗಿನ ಪರಿಸ್ಥಿತಿಯೇ ಇಲ್ಲಿ ತಲೆದೋರಬಹುದು. ದ್ವೇಷ, ಸೇಡು, ಅಸೂಯೆ, ಕ್ರೌರ್ಯಗಳ ರಕ್ತಬೀಜಾಸುರ ಸಂತಾನವನ್ನೇ ನಾವು ಸೃಷ್ಟಿ ಮಾಡಿದಂತಾಗುತ್ತದೆ. ರಾಸುಗಳನ್ನು ರಸ್ತೆಯಲ್ಲಿ ಒಯ್ಯುವುದೇ ಹಿಂಸಾಕೃತ್ಯಗಳಿಗೆ, ಕೋಮುಗಲಭೆಗಳಿಗೆ ಕಾರಣವಾಗಬಹುದು.
ಇಂಥ ಸಂವಿಧಾನಬಾಹಿರ ‘ಜಂಗಲ್‌ರಾಜ್’ ನಮಗೆ ಬೇಕೆ? ಅದರಿಂದಾಗಿ ತಲೆದೋರುವ ಸಾಂಕ್ರಾಮಿಕ ತ್ವೇಷಗಳು ಬೇಕೆ? ಅಥವಾ ಪ್ರೀತಿಯಿಂದ ಗೋವುಗಳನ್ನು ಸಾವಯವ ವಿಧಾನದಲ್ಲಿ ಪಾಲನೆ ಪೋಷಣೆ ಮಾಡುತ್ತಲೇ ಅದರ ಜತೆಜತೆಗೇ ನಿಸರ್ಗ ಸಂವರ್ಧನೆ, ಆರ್ಥಿಕ ಸುಧಾರಣೆ ಹಾಗೂ ಸಮುದಾಯದ ನೆಮ್ಮದಿ ಕಾಪಾಡುವ ಕ್ರಮಗಳು ಬೇಕೆ?