Tuesday, February 5, 2013

ಮಠ,ಮಸೀದಿ, ಚರ್ಚು ಗಳ ಪ್ರತಿನಿಧಿ ಸಭೆ

ನೀವೊಮ್ಮೆ ಈ ಲೇಖನ ಓದಿ. ಈ ಲೇಖನ ಓದಿ ನನಗನಿಸಿದ್ದು ಬರೆಯುತ್ತಿದ್ದೇನೆ.

ಪುಟ 8  ಕನ್ನಡ ಪ್ರಭ, ಫೆಬ್ರವರಿ 06  , 2013  " ನವ ಧಾರ್ಮಿಕ ನಾಯಕತ್ವಕ್ಕೆ ದಕ್ಕಲಿ ಪ್ರಜ್ಞಾವಂತರ ಬೆಂಬಲ " 
http://archives.kannadaprabha.com/pdf/epaper.asp?pdfdate=2/6/2013


ಈ  ದಶಕದಲ್ಲಿ ಹಿಂದೂ ಧರ್ಮದ ಎಲ್ಲ ಸ್ವಾಮೀಜಿಗಳಲ್ಲಿ ಸಮಾನ ಮನಸ್ಕ ಚರ್ಚೆಗಳು ನಡೆಯುವಂತೆ ತೋರುತ್ತಿವೆ. ಅದೇ ರೀತಿ ಸ್ವಾಮೀಜಿಗಳ ಬೆಂಬಲ ಪಡೆದು ಆಯ್ಕೆಯಾದ ಜನಪ್ರತಿನಿಧಿಗಳು ತಮ್ಮ ಸಮಾಜ ಸೇವೆಯ ಕಾರ್ಯ ಚಟುವಟಿಕೆಗಳಲ್ಲಿ ಸೋಲುತ್ತಿದ್ದಾರೆ ಮತ್ತು ವೈಯಕ್ತಿಕ ಲಾಭಗಳತ್ತ ಕೇಂದ್ರೀಕರಿಸಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಇಂದಿನ ದಿನಗಳಲ್ಲಿ ಪೀಠಾಧಿಪತಿಗಳಾಗುವವರು ಸಾಮಾನ್ಯವಾಗಿ ಆಧುನಿಕ ಶಿಕ್ಷಣದ ಜೊತೆಗೆ ಸನಾತನ ಧರ್ಮೀಯ ಶಿಕ್ಷಣದ ಜ್ಞಾನದಲ್ಲಿ ಪಳಗಿರುತ್ತಾರೆ.


ಹೀಗಿರುವಾಗ ಎಲ್ಲ ಮಠಗಳಲ್ಲಿ ಪೀಠಾಧಿಪತಿಗಳು ಪ್ರಸಕ್ತ ರಾಜಕೀಯ ವ್ಯವಸ್ಥೆಯ ಮುಂದಾಳತ್ವ ವಹಿಸಲು ಯೋಗ್ಯ ಆಧ್ಯಾತ್ಮ ಭಾವನೆಯುಳ್ಳ ಸನ್ಯಾಸಿಯೊಬ್ಬರ ನೇತ್ರತ್ವದಲ್ಲಿ ಪ್ರತಿ ಮಠವೂ ವಿಭಾಗವೊಂದನ್ನು ತೆರೆದು, ಚುನಾವಣೆಗಳಲ್ಲಿ ಸ್ಪರ್ಧಿಸಿ ರಾಜಕೀಯ ಶಕ್ತಿಯನ್ನು ನೇರವಾಗಿ ಪಡೆದು ಈ ದೇಶದ ಜನರ ಶ್ರೇಯೋಭಿವ್ರದ್ಧಿ ಕೈಗೊಳ್ಳಬಹುದಲ್ಲವೇ?  ಪ್ರಸಕ್ತ ಸನ್ನಿವೇಶದಲ್ಲಿ ಬಹುಧರ್ಮೀಯ, ಬಹು ಜಾತೀಯ ಜನಾಂಗದ ಜನರು ಈ ದೇಶದಲ್ಲಿ ವಾಸಿಸುತ್ತಿರುವದರಿಂದ , ಎಲ್ಲಾ ಧರ್ಮ, ಮತ, ಜಾತಿ ಗಳಲ್ಲಿರುವ ಆಧ್ಯಾತ್ಮಿಕ  ಗುರುಗಳನ್ನು, ಯಾವುದೇ ತೀವ್ರಗಾಮಿ , ಉಗ್ರಗಾಮಿ ವಿಚಾರ ರಹಿತವಾದ   ಮಠ,ಮಸೀದಿ, ಚರ್ಚು ಗಳ  ಪ್ರತಿನಿಧಿ ಸಭೆ ರಚಿಸಿ, ರಾಜಕೀಯ ಸಂಸ್ಥೆಗಳನ್ನು ಮುನ್ನಡೆಸಬಹುದಲ್ಲವೆ?


ಕೇವಲ ಆಧ್ಯಾತ್ಮಿಕ ಹಿನ್ನೆಲೆಯುಳ್ಳ, ಆಧ್ಯಾತ್ಮಿಕ ತತ್ವಗಳೀಗಷ್ಟೇ ಕಟ್ಟು ಬಿದ್ದಿರುವ ಹಿಂದೂ, ಮುಸ್ಲಿಂ ಕ್ರೈಸ್ತ ಇತ್ಯಾದಿ ಗುರುಗಳನ್ನು ಪಾರ್ಲಿಮೆಂಟ್ , ಅಸೆಂಬ್ಲಿಯ ಸದಸ್ಯರುಗಳನ್ನಾಗಿಸಿ ಆಡಳಿತ ನಡೆಸಿದರೆ , ಈ ದಿನಗಳಲ್ಲಿ ದೇಶ , ರಾಜ್ಯಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಮುಕ್ತಿ ಸಾಧ್ಯವೇ ಎಂದು ಪ್ರಯತ್ನಿಸಬಹುದಲ್ಲವೇ?


ಏನಂತೀರಿ? ಬರೆಯಿರಿ comments .  

ಹರಿಹರ ಭಟ್, ಬೆಂಗಳೂರು.
ಶಿಕ್ಷಕ, ಚಿಂತಕ, ವಿಮರ್ಶಕ, ಫೇಸ್ ಬುಕ್ ಬರಹಗಾರ.
hariharbhat .blogspot .com

No comments:

Post a Comment