Tuesday, February 12, 2013

Shri C.T.Ravi


ಕನ್ನಡ ಪ್ರಭ ಪುಟ 7  , February 13, 2013  ಓದಿ.  ಮಂತ್ರಿ ಸಿ.ಟಿ.ರವಿ ಹೇಳಿಕೆ.  " ಖಾಸಗಿ ವಿಶ್ವವಿದ್ಯಾಲಯಗಳ ವಿರೋಧ ಸಲ್ಲ "


ದುಡ್ಡಿದ್ದವರು ಅಪಾರ್ಟ್ ಮೆಂಟ್ ಕಟ್ಟುತ್ತಾ ರಿಯಲ್ ಎಸ್ಟೇಟ್ ಮಾಡುವ ಬದಲು ಶಿಕ್ಷಣ ಸಂಸ್ತೆಗಳನ್ನು ಕಟ್ಟಲಿ, ಸರಕಾರಕ್ಕೆ ಶೇಕಡಾ ನಲವತ್ತು ಸೀಟ್ ಗಳು ದೊರೆಯುತ್ತವೆ. ಜನಸಾಮಾನ್ಯರಿಗೆ ಅನುಕೂಲವಾಗುತ್ತವೆ.


ಸ್ವಾಮೀ ಯಾವ ಜನಸಾಮಾನ್ಯರಿಗೆ ಅನುಕೂಲವಾಗುತ್ತವೆ? ಯಾರು ಸಿರಿವಂತ ಮಧ್ಯಮ ವರ್ಗದವರಿದ್ದಾರೋ ಅವರಿಗಷ್ಟೇ ನಿಮ್ಮ ನಿರ್ಣಯಗಳು ಅನುಕೂಲವಾಗುತ್ತವೆ. ಹತ್ತು ವರ್ಷದ ಹಿಂದೆ ಹದಿನಾರು ಸಾವಿರ ರೂಪಾಯಿಗಳಿದ್ದ ಇಂಜಿನಿಯರಿಂಗ್ ಮೆರಿಟ್ ಸೀಟ್ ಸ್ಟೂಡೆಂಟ್ ಫೀಸ್ ಈಗ ಅರವತ್ತು ಸಾವಿರ ಆಗಿದೆ. ಮೆರಿಟ್ ಗವರ್ನಮೆಂಟ್ ಸೀಟ್ ಗಳು ಯಾರೂ ತೆಗೆದುಕೊಳ್ಳದೆ ಹಾಗೇ ಬಿದ್ದಿರುತ್ತವೆ. ಐವತ್ತು  ರೂಪಾಯಿ ಇದ್ದ ದಿನ ಗೂಲಿ   ಒಂದು ನೂರಾ ಇಪ್ಪತೈದು ಆಗಿದೆ ಆದರೆ ಹನ್ನೆರಡು ರೂಪಾಯಿ ಇದ್ದ ಅಕ್ಕಿ ದರ ಐವತ್ತು ರೂಪಾಯಿ ಆಗಿದೆ. ಇವುಗಳ ಜೊತೆ ನಿಮ್ಮ ಎಂ.ಎಲ್.ಎ , ಎಂ.ಪಿ ಗಳ ಗೌರವ ಧನ, ದಿನ ಭತ್ಯೆ, ಪೆಟ್ರೋಲ್ ಖರ್ಚು, ಆಚೆ ಈಚೆ ಸಹಾಯಕರ ಸಂಬಳ, ನಿಮ್ಮ ಪಿಂಚಣಿ ಮೊತ್ತ ಇವುಗಳನ್ನೊಮ್ಮೆ ಹೋಲಿಸಿ ನೋಡಿ !!!  ನಿಮಗೆಲ್ಲ ಎಲ್ಲಿ ಟೈಮ್ ಇದೆ , ಹೇಳಿ. ಇಂದಿನ ಸ್ತಿತಿ ಗತಿ, ಬದಲಾವಣೆಗಳನ್ನು ನೋಡಿದರೆ ನಿಮಗೆಲ್ಲ ಯೋಚನೆಗೆ ಟೈಮ್ ಸಿಗುವ ಕಾಲ ಬಂದಿದೆ, ಸಮೀಪದಲ್ಲೇ ವಿಶ್ರಾಂತಿ ದೊರೆಯಲಿದೆ ಎನಿಸುತ್ತಿದೆ.


ಹರಿಹರ ಭಟ್, ಬೆಂಗಳೂರು.
ಶಿಕ್ಷಕ, ಚಿಂತಕ, ವಿಮರ್ಶಕ, ಫೇಸ್ ಬುಕ್ ಬರಹಗಾರ.

No comments:

Post a Comment