Saturday, September 28, 2013

ನಿಮ್ಮ ಏ. ಟಿ . ಎಂ ಕಾರ್ಡ್ ಬಗೆಗೆ ನೀವೆಸ್ಟು ತಿಳಿದಿದ್ದೀರಿ ?

                                     ನಿಮ್ಮ ಏ. ಟಿ . ಎಂ ಕಾರ್ಡ್ ಬಗೆಗೆ ನೀವೆಸ್ಟು ತಿಳಿದಿದ್ದೀರಿ ?


ನಿಮ್ಮ ಏ. ಟಿ . ಎಂ ಕಾರ್ಡ್ ಬಗೆಗೆ ನೀವೆಸ್ಟು ತಿಳಿದಿದ್ದೀರಿ ? ಇಂದು ಎಲ್ಲರ ಕೈಲೂ ಏ. ಟಿ. ಎಂ ಕಾರ್ಡ್ ಇದ್ದೇ ಇರುತ್ತದೆ. ಸಾಧಾರಣವಾಗಿ ಪ್ರಯಾಣ ಸಮಯದಲ್ಲಿ, ಯಾವುದಾದರೂ ಶಾಪಿಂಗ್ ಮಾಡುವ ಸಂದರ್ಭದಲ್ಲಿ ಕಾರ್ಡ್ ಕಳೆಯುವ ಸಾಧ್ಯತೆಗಳಿವೆ. ಆಗ ಒಮ್ಮೆಲೇ ನಾವು ಗಾಬರಿಯಾಗುತ್ತೇವೆ. ಕೆಲವೊಮ್ಮೆ ನಮ್ಮ ಅಜಾಗರೂಕತೆಯಿಂದ ಕಾರ್ಡ್ ಎಲ್ಲೆಲ್ಲೋ ಬಿಟ್ಟಿರುತ್ತೇವೆ. ಹಾಗಾಗಿ ಏ. ಟಿ. ಎಂ ಕಾರ್ಡ್ ಬಗ್ಗೆ ನಾವು ತೆಗೆದುಕೊಳ್ಳಬೇಕಾಗ ಮುನ್ನೆಚ್ಚರಿಕೆಯ ಕ್ರಮಗಳನ್ನು ಮತ್ತು ಅವುಗಳ ಬಗೆಗಿನ ಮಾಹಿತಿ ಪಡೆಯೋಣ.


ಯಾವುದೇ ರೀತಿಯ ಎಸ್. ಎಮ್. ಎಸ್ ಗಳು , ಮೇಲ್ ಗಳು ಬಂದರೂ ನಿಮ್ಮ ಏ.ಟಿ.ಎಮ್ ಕಾರ್ಡ್ ಮಾಹಿತಿಯನ್ನು ನೀಡಬೇಡಿ. ಅಲ್ಲದೆ ಬ್ಯಾಂ ಕ್ ಸಿಬ್ಬಂಧಿ ಅಥವಾ ಇನ್ಯಾರೇ ಪರಿಚಿತರು ಕೇಳಿದರೂ ಸಹ ನಿಮ್ಮ ಏ.ಟಿ.ಎಮ್ ಕಾರ್ಡ್ ವಿವರ / ಪಿನ್ ನಂಬರ್ / ಮಾಹಿತಿ ನೀಡಬೇಡಿ.


ನೀವು ಏ.ಟಿ.ಎಮ್ ನಿಂದ ಹಣ ತೆಗೆದಾಗ ಅಥವಾ ಇನ್ನ್ಯಾರೇ ಅನಧಿಕ್ರತವಾಗಿ ನಿಮ್ಮ ಖಾತೆಯಲ್ಲಿ ವ್ಯವಹಾರ ಮಾಡಿದರೆ ಅದರ ಮಾಹಿತಿ ಎಸ್.ಎಮ್.ಎಸ್ ಮೂಲಕ ಪಡೆಯುವ ಸೌಲಭ್ಯ ಇದೆ. ಈ ಸೌಲಭ್ಯ ಪಡೆಯಲು ನಿಮ್ಮ ಬ್ಯಾಂಕ್ ನಲ್ಲಿ ನಿಮ್ಮ ಮೊಬೈಲ್ ನಂಬರ್ ನ್ನು ದಾಖಲಾತಿ ಮಾಡಿ. 



ಮೊದಲನೇ ಸಲ ಬಳಸಿದ ಪಿನ್ ಬದಲಾಯಿಸಿ ಮತ್ತು ಆ ನಂತರ ಆಗಾಗ ಪಿನ್ ಬದಲಾಯಿಸುತ್ತಿರಿ. 



ಯಾವತ್ತೇ ಆದರೂ ಪಿನ್ ಬರೆದಿರುವ ಚೀಟಿಯನ್ನು ಕಾರ್ಡ್ ಜೊತೆ ಇಡಬೇಡಿ ಅಲ್ಲದೆ ಕಾರ್ಡ್ ಮೇಲೆ ಪಿನ್ ನಂಬರ್ ಬರೆಯಬೇಡಿ.

ಪಿನ್ ನೆನಪಿನಲ್ಲಿಡುವದೇ ಉತ್ತಮ ವಿಧಾನ. 



ಏ.ಟಿ.ಏಮ್ ಅಥವಾ ಅಂಗಡಿ ಗಳಲ್ಲಿ ಖರೀದಿ ಮಾಡುವಾಗ ಕೀ ಪ್ಯಾಡ್ ಮೇಲೆ ಕೈ ಮರೆ ಮಾಡಿ ಪಿನ್ ನಂಬರ್ ಒತ್ತಿ.


ನೀವು ಏ.ಟಿ.ಏಮ್ ರೂಮ್ನಲ್ಲಿರುವಾಗ ಯಾರನ್ನು ಒಳಪ್ರವೇಶಿಸಲು ಬಿಡಬೇಡಿ. ಅಪರಿಚಿತರ ಸಹಾಯವನ್ನು ಎಂದೂ ಅಪೇಕ್ಷಿಸಬೇಡಿ.



ಹೊಸ ಏ.ಟಿ.ಏಮ್ ಕಾರ್ಡ್ ಪಡೆದರೆ , ಹಳೆ ಕಾರ್ಡ್ ನ್ನು ಬ್ಲಾಕ್ ಮಾಡಿ ಮತ್ತು ಹಳೆ ಕಾರ್ಡ್ ನ್ನು ಹರಿದು ಹಾಕಿ. 



ಅಂಗಡಿಗಳಲ್ಲಿ, ಹೋಟೆಲ್ ಗಳಲ್ಲಿ, ಮಾಲ್ ಗಳಲ್ಲಿ ಏ.ಟಿ.ಏಮ್ ಕಾರ್ಡ್ ಬಳಸುವಾಗ ನೀವು ಎದುರು ನಿಂತಿರಿ , ಇನ್ನೆಲ್ಲಿಯೋ ಒಯ್ದು ಸ್ವೈಪ್ ಮಾಡಲು ಒಪ್ಪಬೇಡಿ.


ನೀವು ಪಡೆದ ರಸೀತಿ ಯನ್ನು ಏ.ಟಿ.ಏಮ್ ರೂಮ್ ನಲ್ಲಿ ಬಿಸಾಕಬೇಡಿ. ಜೊತೆಗೆ ತೆಗೆದುಕೊಂಡು ಹೋಗಿ ಹರಿದು ಇನ್ನೆಲ್ಲೋ ಬಿಸಾಕಿರಿ. 



ಯಾವಾಗಲಾದರೂ ಏ.ಟಿ.ಎಂ ಮಷೀನ್ ಗೆ ಇನ್ನೇನಾದರೂ ಹೆಚ್ಚಿನ ಚಿಕ್ಕ ಪುಟ್ಟ ಸಲಕರಣೆ ಜೋಡಿಸಿದ್ದು ಗಮನಕ್ಕೆ ಬಂದರೆ ಆ ಏ.ಟಿ.ಎಮ್ ನಲ್ಲಿ ವ್ಯವಹರಿಸಬೇಡಿ.


ನೀವು ಮಾಡಿದ ಏ.ಟಿ.ಎಮ್ ವ್ಯವಹಾರದ ಬಗ್ಗೆ ನಿಮ್ಮ ಪಾಸ್ ಬುಕ್ ಜೊತೆ ಆಗಾಗ ತುಲನಾತ್ಮಕವಾಗಿ ಅಭ್ಯಾಸ ಮಾಡಿ. 



ನಿಮ್ಮ ಏ.ಟಿ.ಎಮ್ ಕಾರ್ಡ್ ಕಳೆದರೆ ಸಮಯ ವ್ಯತ ಮಾಡದೆ ಕೂಡಲೇ ನಿಮ್ಮ ಕಾರ್ಡನ್ನು ಹಾಟ್ ಲಿಸ್ಟ್ ಗೆ ಸೇರಿಸಿ. 



ನಿಮ್ಮ ಏ.ಟಿ.ಎಮ್ ಕಾರ್ಡ್ ಕಳೆದಾಗ ಹಾಟ್ ಲಿಸ್ಟ್ ಗೆ ಸೇರಿಸಲು ನಿಮ್ಮ ಬ್ಯಾಂಕ್ ನ ದೂರವಾಣಿ ನಂಬರ್ ನ್ನು ನಿಮ್ಮೊಡನೆ ಸದಾ ಇರಿಸಿಕೊಳ್ಳಿ . 



ಕೆಲವು ಬ್ಯಾಂಕ್ ಗಳ ದೂರವಾಣಿ ಸಂಖ್ಯೆ , ಹಾಟ್ ಲಿಸ್ಟ್ ಗೆ ಸೇರಿಸಲು ಹೀಗಿದೆ : 



State Bank of India 1800-112211



State Bank of Mysore 1800 - 425 -3800 ; 1800 - 112211 ; 080 - 26599990



Canara Bank 1800 - 425 - 6000 ; 1800 - 425 - 07000



Corporation Bank 1800 - 425 - 2407 ; 080 - 26600587 ; 080 - 26602500



Syndicate Bank 1800 - 425 - 0585 ; 09483522433 



Vijaya Bank 1800 - 425 - 9992 ; 080 - 41133500



ಈ ರೀತಿಯಲ್ಲಿ ಕಾಳಜಿ ವಹಿಸಿರಿ. ಕಾರ್ಡ್ ಕಳೆದಾಗ ಗೊಂದಲವಾಗುವದು ಸಹಜವಾದುದು. ಆದರೆ ದೃತಿ ಗೆಡಬೇಡಿ. ಕೂಡಲೇ ಕಾರ್ಯಪೃವೃತ್ತರಾಗಿ. 



ನಿಮ್ಮ ಏ.ಟಿ.ಎಮ್  ಕಾರ್ಡ್ ಕಳೆದಾಗ , ಕಾರ್ಡ್ ಬ್ಲಾಕ್ ಮಾಡಲು ತಡ ಮಾಡಿದರೆ ಕಾರ್ಡ್ ಸಿಕ್ಕವರು ಕೂಡಲೇ ಬೇರೆ ಬೇರೆ ಅಂಗಡಿಗಳಿಗೆ ಹೋಗಿ ನಿಮ್ಮ ಕಾರ್ಡ್ ಸ್ವೈಪ್ ಮಾಡಿ ವಸ್ತುಗಳನ್ನು ಖರೀದಿ ಮಾಡುವ ಸಾಧ್ಯತೆಗಳು ಜಾಸ್ತಿ.  ಆದ ಕಾರಣ ನಿಮಗೆ ಆಗುವ ಹಾನಿ ತಪ್ಪಿಸಲು ಕಾರ್ಡ್ ಕಳೆದ ಕೂಡಲೇ , ಕಾರ್ಡ್ ಬ್ಲಾಕ್ ಮಾಡಿ. ತಡ ಮಾಡಬೇಡಿ, ನೆನಪಿರಲಿ. 


                                                                  **********

Monday, September 2, 2013

ದೊಡ್ಡವರ ಸಣ್ಣತನಗಳು.

ದಿನ  ಕಳೆದಂತೆ  ದೊಡ್ಡವರು, ಪ್ರಭಾವಿಗಳು ಎನ್ನುವವರು ಅತಿ ಸಂಕುಚಿತ ಮನೋಭಾವನೆಯನ್ನು ಸಾರ್ವಜನಿಕವಾಗಿ ಪ್ರದರ್ಶಿಸುತ್ತಿದ್ದಾರೆ. ಯಾಕೋ ಎನೋ ಸಮಾಜಕ್ಕೆ ಆದರ್ಶವಾಗಿರಬೇಕಾದವರೇ ಪಾಠ ಹೇಳಿಸಿಕೊಳ್ಳುವ ಸ್ಥಿತಿ ತಲುಪುತ್ತಿರುವದು ಶೋಚನೀಯ.


ನಿನ್ನೆಯೋ ಮೊನ್ನೆಯೋ , ದಿನಪತ್ರಿಕೆಯೊಂದರ ವರದಿಯಲ್ಲಿ,  ದೀಪಬೆಳಗುತ್ತಿರುವವರಲ್ಲಿ ಒಬ್ಬರಾದ ಕರ್ನಾಟಕದ ರಾಷ್ಟ್ರಮಟ್ಟದ ನಾಯಕರ ಬಗೆಗೆ ಒಂದೇ ಒಂದು ಶಬ್ದ ಬರೆದಿಲ್ಲ. ಅವರು ಮಾಡಿದ ಭಾಷಣದ ಕುರಿತು ಒಂದು ಅಕ್ಷರವೂ ಇಲ್ಲ. ವರದಿಗಾರರೇನಾದರೂ ತಪ್ಪಿದರೇ  ಎಂದರೆ ಸುಲಭವಾಗಿ ಒಪ್ಪಲಾಗದು. ಸಂಪಾದಕರ, ಪತ್ರಿಕೆ ಮಾಲಿಕರ ಒಡಂಬಡಿಕೆಯೇ ಈ ರೀತಿ ಪತ್ರಿಕಾ ಧರ್ಮದ ವಿರೋಧೀ ನಿರ್ಣಯಗಳಿಗೆ ಹೇತುವಾಗಬಲ್ಲುದು ತಾನೇ?


ಇಂದಿನ ದಿನ ಪತ್ರಿಕೆಯೊಂದರಲ್ಲಿ, ವರದಿಯಲ್ಲಿ  ಒಬ್ಬರ ಚಿತ್ರವಿದೆ. ಟೈ ಕಟ್ಟಿ ಅತಿಥಿಗಳ ಜೊತೆ ಇರುವದನ್ನು ಚಿತ್ರದಲ್ಲಿ ನೋಡಿದಾಗ ಅತಿಥಿಗಳಲ್ಲೊಬ್ಬರೋ , ಸಂಘಟಕರಲ್ಲೊಬ್ಬರೋ ಆಗಿರಬೇಕು. ಅವರ ಕುರಿತು ವರದಿಯಲ್ಲಿ ಅಥವಾ ಚಿತ್ರದ ಅಡಿಬರಹದಲ್ಲಿ ಒಂದೇ ಒಂದು ಅಕ್ಷರವಿಲ್ಲ.  ಈ ರೀತಿ ಬೆಳವಣಿಗೆಗಳ ಹಿಂದೆ ಪತ್ರಿಕಾ ಧರ್ಮ ಮೀರಿದ ದುರುದ್ದೇಶಗಳಿರಲೇಬೇಕು.


ಇಂದು ಫೇಸ್ ಬುಕ್ ನೋಡುತ್ತಿದ್ದೆ. ಮಹಾಶಯರೊಬ್ಬರು  ತಮಗಿಷ್ಟವಿರದ  , ತಮ್ಮ ಸ್ಪರ್ಧಿಯಾಗಿರುವ ರಾಜಕಾರಣಿಯೊಬ್ಬರನ್ನು  ಖಂಡಿಸಲು  ಜನಸಾಮಾನ್ಯರು ಒಪ್ಪಿಕೊಂಡಿರುವ  ಸಂಘಟನೆಯ ಹೆಸರನ್ನು , ಮಠವೊಂದರ   ಸ್ವಾಮೀಜಿಗಳ   ಹೆಸರನ್ನು  ಬಳಸಿಕೊಂಡಿದ್ದರು.


ಈ ರೀತಿ ಸಮಾಜದಲ್ಲಿ ಬರುತ್ತಿರುವ ಬದಲಾವಣೆಗಳನ್ನು ನೋಡಿದಾಗ ಇನ್ನು ಹದಿನೈದು ಇಪ್ಪತ್ತು ವರ್ಷಗಳಲ್ಲಿ ಸಮಾಜ ಯಾವ ರೀತಿ ಅನಪೇಕ್ಷಿತ ಬದಲಾವಣೆಗಳತ್ತ ಸಾಗೀತು ಎಂಬುದು ಎಲ್ಲ ಸಮಾಜ ಜೀವಿಗಳು ಯೋಚಿಸಬೇಕಾದ ಅವಶ್ಯಕತೆ .