Friday, February 15, 2013

ಅಗ್ನಿ ಶ್ರೀಧರ್ ರವರ " ಅಫ್ಜಲ್ ಗುರು : ದೇಶ ರಕ್ಷಕರ ಕುತಂತ್ರ


ಪ್ರತಿಯೊಂದು ವಿಷಯದಲ್ಲೂ ನಾವು ನಮ್ಮದೇ ಆದ ಅಭಿಪ್ರಾಯ ರೂಢಿಸಿಕೊಳ್ಳಬೇಕು . ನಮ್ಮ ಅಭಿಪ್ರಾಯಗಳಿಗೆ ಸರಿಹೊಂದದ ಅಥವಾ ಬೇರೆ ರೀತಿಯ ಅಭಿಪ್ರಾಯಗಳು ಬಂದಾಗ ತುಲನಾತ್ಮಕವಾಗಿ ಅಭಿಪ್ರಾಯಗಳನ್ನು ಅಭ್ಯಸಿಸುವ ಮನೋಭಾವ ಹೊಂದಿರಬೇಕು . ಆದಾಗ ಮಾತ್ರ ನಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಅನುಕೂಲ. ನಾವು ಅಭ್ಯಾಸಿ ಮನೋಭಾನೆಯನ್ನು ರೂಢಿಸಿಕೊಳ್ಳದಿದ್ದರೆ , ಕಾಲ ಕ್ರಮೇಣ ಮೂಲಭೂತವಾದಿಗಳಾಗಿ ನಮಗರಿವಿಲ್ಲದೆ ಪರಿವರ್ತಿತವಾಗುತ್ತೇವೆ . ಜೊತೆಗೆ ನಿಂತ ನೀರಾದ ನಮ್ಮ ಮನಸ್ಸು, ಬುದ್ಧಿ ಯೋಚನಾಶಕ್ತಿಯನ್ನೇ  ಕಳೆದುಕೊಂಡು ಮೊಂಡುವಾದಿಗಳಾಗುತ್ತೇವೆ.

 

ನಾನೊಂದು ಲೇಖನವನ್ನು ಹೆಸರಿಸುತ್ತೇನೆ. ನೀವು ಆ ಲೇಖನದ ಪಾತ್ರಗಳ ಹೆಸರುಗಳನ್ನು ಅ ,ಬ, ಕ, ಡ .... ( A, B, C, D ............... ) ಎಂದು ಬದಲಾಯಿಸಿ ಯಾವುದೇ ಪೂರ್ವಾನುಗ್ರಹಗಳಿಲ್ಲದೆ ಓದಿ. ಚರ್ಚಿಸಿರುವ ವಿಷಯ, ಚರ್ಚೆಯ ವಿಧಾನ ನಿಮಗೆ ತುಂಬಾ ಹಿಡಿಸೀತು ಎಂಬ ಅಭಿಪ್ರಾಯ ಎನಗೆ.  ನಾನು ಎಲ್ಲಾ ರೀತಿಯ ವಿಷಯಗಳ , ಎಲ್ಲಾ ಮನೋಭಾವದ ಲೇಖಕರ ಲೇಖನಗಳನ್ನು ಪೂರ್ವಾಗ್ರಹವಿಲ್ಲದೇ ಓದುತ್ತೇನೆ. ನನ್ನದೇ ಆದ ಸ್ವಂತ ಅಭಿಪ್ರಾಯವನ್ನು  ಮೂಡಿಸಿಕೊಳ್ಳುತ್ತೇನೆ.



ಇಂದಿನ ಕನ್ನಡ ಪ್ರಭ ದಿನ ಪತ್ರಿಕೆಯ ಪುಟ 9  ರಲ್ಲಿರುವ  ಅಗ್ನಿ ಶ್ರೀಧರ್ ರವರ " ಅಫ್ಜಲ್  ಗುರು : ದೇಶ ರಕ್ಷಕರ ಕುತಂತ್ರ " ಓದಿದಾಗ , ನಿಮಗೂ ಓದುವಂತೆ ಕೇಳಿಕೊಳ್ಳಬೇಕೆನಿಸಿ ಬರೆದಿದ್ದೇನೆ.



ಇಲ್ಲಿ ಲೇಖನದಲ್ಲಿರುವ ಅಭಿಪ್ರಾಯ ನಾನು ಅನುಮೋದಿಸುತ್ತಿದ್ದೇನೆ ಅಥವಾ ಅನುಮೋದಿಸುತ್ತಿಲ್ಲ ಎಂದುಕೊಳ್ಳಬೇಕಿಲ್ಲ.  

No comments:

Post a Comment