Monday, January 7, 2013

Vijaya Karnataka - Shri D Umapati Article

ಇಂದಿನ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ ( January  07 , 2013 )  ಶ್ರೀ  ಡಿ . ಉಮಾಪತಿ ಯವರು ಒಂದು ಲೇಖನ ಬರೆದಿದ್ದಾರೆ. ಎಲ್ಲರೂ  ಓದಿ ಪ್ರತಿಕ್ರಿಯಿಸಬೇಕಾದ ಲೇಖನ.

http://www.vijaykarnatakaepaper.com/Details.aspx?id=2715&boxid=1249515


ನಾನು ಓದಿದಾಗ ನನಗೆ ಅನ್ನಿಸಿದ್ದು:


೧.           ಈ ಲೇಖಕರೆಲ್ಲ ಸಾಮಾಜಿಕ ಅಭಿಪ್ರಾಯವನ್ನು ರೂಪಿಸುವವರು. ಯಾವುದೇ ಹಳೆಯ ಗ್ರಂಥಗಳಲ್ಲಿ ಇರಬಹುದಾದ ವಿಷಯಗಳನ್ನು ಅಧಿಕೃತವಾಗಿ ಟೀಕಿಸುವಾಗ , ಈ ಮಹನೀಯರು ಆ ಗ್ರಂಥಗಳನ್ನು ಓದಿರಬಹುದೇ   ಎಂಬ ಸಂಶಯ ಉಂಟಾಗುತ್ತದೆ. ಅಧಿಕೃತವಾಗಿ ಗ್ರಂಥದ ಯಾವುದೋ ಒಂದು ಘಟನೆಯನ್ನೋ , ಪರಿಚ್ಚೆeಧವನ್ನೋ ಉದಾಹರಿಸಿ , ಈ ಮಹನೀಯರು ವಿಶ್ಲೆeಶಿಸಿದಂತೆ  ಆ ಗ್ರಂಥದ ಅರ್ಥ ಎಂದು, ಜನಸಾಮಾನ್ಯ ಓದುಗರ ಅಭಿಪ್ರಾಯ ಮೂಡಿಸಲು ನ್ಯಾಯಯುತವಾಗಿ ಇವರು ಸಮರ್ಥರೆ ?


೨.           ದಿನಪತ್ರಿಕೆ ಲೇಖನ ಬರೆಯುವವರು ಇಂದು ಶೀಲಾಪಹರಣ ಎಂದೊಡನೆ ದ್ರೌಪದಿಗೋ  , ಸ್ತ್ರೀ ಶೋಷಣೆ ಎಂದೊಡನೆ ಶೂರ್ಫನಖಿಗೊe   ಅಣ್ಣ ತಮ್ಮಂದಿರೊ  ಎಂಬಂತೆ ಕಣ್ಣಿಗೆ ಕಟ್ಟುವಂತೆ ಅಕ್ಷರಗಳಿಂದ ಚಿತ್ರಿಸಿ , ಜನ ಸಾಮಾನ್ಯರ ಅಭಿಪ್ರಾಯ ರೂಪಿಸುತ್ತಾರಲ್ಲ ? ಇದು ಸಮಂಜಸವೇ ?



೩.         ಉದಾಹರಣೆಗೆ ನನ್ನಂಥವರು  ಕುರಾನನ್ನೋ, ಬೈಬಲ್ಲನ್ನೋ ಸರಿಯಾಗಿ ನಾಲ್ಕು ಪುಟಗಳನ್ನೂ ಓದದೆ , ಅಲ್ಲಿಇಲ್ಲಿ ಯಾವುದೋ ಮಹಾಶಯರ ಲೇಖನಗಳನ್ನೋ,  ಇಲ್ಲ ಭಾಸಣಗಳನ್ನೊe  ಕೇಳಿ , ನನ್ನ ಅಕ್ಷರ ಸಾಮರ್ಥ್ಯದಿಂದ ಕುರಾನಿನ ಯಾವುದೋ ಭಾಗವನ್ನೋ, ಬೈಬಲ್ಲಿನ ಯಾವುದೋ ಘಟನೆಯನ್ನೋ ಟೀಕಿಸಿದರೆ ಅದು ಸಮಂಜಸವೇ ?



ಹೀಗೆ ಬರೆದೆ ಎಂದು ಮತಾಂಧ ದುರಭಿಮಾನಿಗಳೇನೂ  ನನ್ನ ಪಕ್ಷ ವಹಿಸಬೇಕಾಗಿಲ್ಲ. ನನ್ನಂಥವರು  ಎಲ್ಲೂ ಸಲ್ಲುವವರಲ್ಲ. ಮುಚ್ಚು ಮರೆಯಿಲ್ಲದೆ ಬರೆದುಬಿಡುವವರು, ಮಾತನಾಡಿಬಿಡುವವರು ನಾವು. ನಿನ್ನೆ ಒಂದು ಅಸ್ಠಾವಧಾನ ಕಾರ್ಯಕ್ರಮಕ್ಕೆ ಹೋಗಿದ್ದೆ.  ಅಲ್ಲಿ  ಜ್ಞಾನಿ  ಅವಧಾನಿಗಳು,  ಪ್ರೇಕ್ಷಕರು ಅವಧಾನಿಗಳಿಗೆ ಯಾವುದೇ ಪ್ರಶ್ನೆಯನ್ನು  ಕೇಳಬಹುದು ಎಂದು ವಿಷಯದ ಮಡಿ ಮೈಲಿಗೆಯಿಲ್ಲದೆ ಉತ್ತರಿಸುತ್ತಿದ್ದರೆ , ಅಪ್ರಸ್ತುತ ಪ್ರಸಂಗಿ ಮಡಿ ಮೈಲಿಗೆಯಿಂದ ಪ್ರಶ್ನೆಗಳನ್ನು ಆಯ್ಕೆ ಮಾಡಿ , ಈ ಅಪ್ರಸ್ತುತ ಪ್ರಸಂಗಿಯೇ ನಮಗೆಲ್ಲ ಅಪ್ರಸ್ತುತನಾದನಲ್ಲ ಎಂಬ ವಿಷಾದವಾಯಿತು.  ಅಂದ ಹಾಗೆ ನಾ ಕಳಿಸಿದ ಪ್ರಶ್ನೆ ಹೀಗಿತ್ತು :   " ಆರ್ಎಸ್ಎಸ್  ಮುಸ್ಲಿಂ ವಿಭಾಗವೊಂದನ್ನು ತೆರೆದರೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದೀತೆ ? " .    ಪ್ರಶ್ನೆಗೆ ಅವಕಾಶ ಸಿಗದೇ ಉತ್ತರ ಕುತೂಹಲವಾಗಿಯೆe
ಉಳಿಯಿತು.


ಹರಿಹರ ಭಟ್, ಬೆಂಗಳೂರು,
ಶಿಕ್ಷಕ, ಚಿಂತಕ, ವಿಮರ್ಶಕ, ಫೇಸ್ ಬುಕ್ ಬರಹಗಾರ. 

1 comment:

  1. Umapati is a obsessed anti bjp , anti Hindu columnist, who uses each and every opportunity to degrade bjp/ singh thoughts.recently , last week he spoke about growing intolerance under bjp rule and concluded the country is moving fasicm. In the process he even tried to defend the banning of Dr. Zivago by Russia way back.he
    felt under bjp , communists would be first victims of growing fasicm! This great
    liberal has never uttered word about the ban on Bangladesh writer Taslima, not a
    word about Malala who fought Talibans, no reference to shahbano case where law was twisted to appease fanatics, no tears for the exodus of Kashmir pandits! It is a pity such people pose as defenders of free thought!!

    ReplyDelete