Tuesday, January 8, 2013

About Corruption.

ಇಂದಿನ ಸಮಾಜದಲ್ಲಿ ಧನವಂತರು ಬೆಳೆಯುತ್ತಿರುವದು ಅಭಿಮಾನದ ಸಂಗತಿಯಾದರೂ , ನ್ಯಾಯ ಸಂಮತವಲ್ಲದ ಮಾರ್ಗೋಪಾಯಗಳನ್ನು ಅನುಸರಿಸಿ ಸಿರಿವಂತರಾಗುತ್ತಿದ್ದಾರೆಂಬುದು   ಖೇದನೀಯ.

೧.             ಸರಕಾರ ವಿಧಿಸುವ ಟ್ಯಾಕ್ಸ್ ಗಳನ್ನು ತಪ್ಪಿಸಿ , ಕಡಿಮೆ ಬೆಲೆ ನಮೂದಿಸಿ ಸಿರಿವಂತರಾಗುತ್ತಾರೆ. ಟ್ಯಾಕ್ಸ್ ಆಫೀಸ್ ನ ಜವಾನನಿಗೂ ಒಳ್ಳೆ ಗೌರವ.   ಹಿರಿ ಕಿರಿಯ ಅಧಿಕಾರಿಗಳ ಸಂಪರ್ಕಕ್ಕೆ ಬುನಾದಿ ಹಾಕಲು ಅವರೇ ದಾರಿದೀಪ.

೨.            ಸರಕಾರೀ ಕಾಮಗಾರಿಗಳಲ್ಲಿ ಒಂದಕ್ಕೆ ನಾಲ್ಕು ಬೆಲೆ ನಮೂದಿಸಿ ಸಂಭಂದಿಸಿದವರಿಗೆಲ್ಲಾ   ಪಾಲು ಕೊಟ್ಟು , ಮಿಕ್ಕುಳಿವ ಹಣದಿಂದ ನಾಲ್ಕಾರು ವರ್ಷಗಳಲ್ಲೇ ಕೊeಟ್ಯಾಧಿಪತಿಗಳಾಗುತ್ತಾರೆ.


೩.            ಅಧಿಕಾರಿಗಳ ವರ್ಗಾವಣೆ ರಾಜಕೀಯದವರಿಗೆ ಕೋಟಿ , ಕೋಟಿ ಗಳಿಸುವ ಇನ್ನೊಂದು ಮಾರ್ಗ.  ತಮ್ಮ ಖಜಾನೆಗೆ ಹಣ ಸುರಿಯುವವರನ್ನೇ ಆಯಕಟ್ಟಿನ ಸ್ಥಳಗಳಿಗೆ ವರ್ಗಾಯಿಸುತ್ತಾರೆ.


ಈ ರೀತಿ ವಿಷ ವರ್ತುಲವೇ ನಿರ್ಮಿತಿಯಾಗಿದೆ. ಈ ವಿಷ ವರ್ತುಲ ಯಾವ ಪರಿ ಸಾಮಾಜಿಕ ವಿಶಣ್ಣತೆ ಸೃಸ್ಟಿಸಿದೆಯೆಂದರೆ  , ಐಶಾರಾಮೀ ಕಾರುಗಳಲ್ಲಿ ಓಡಾಡುವವರು, ಐಶಾರಾಮೀ ಬಂಗಲೆಗಳಲ್ಲಿ ವಾಸಿಸುವವರು , ಐಶಾರಾಮಿ ಮದುವೆ  , ಸುನ್ನತಿಗಳನ್ನು ಏರ್ಪಡಿಸುವವರನ್ನು ಕಂಡರೆ ಮನಸ್ಸಿನಲ್ಲಿಯೇ ರೇಜಿಗೆ ಹುಟ್ಟುವದು.  ರಸ್ತೆ ಬದಿಯ ದರೋಡೆಗಳಿಗೆ  ಈ ರೀತಿಯ ಗಳಿಕೆಯ ದರ್ಪದಿಂದ  ಮೋಜು ಮಾಡುತ್ತ ಜೀವನ ನಡೆಸುವವರ ಕೊಡುಗೆಯೇ ಅಧಿಕವಾಗಿದೆ. ಇದೇ ರೀತಿ ಜನ ಜೀವನದ ಸಮಾಜ ಅಸಹಾಯಕರನ್ನು ಸುಲಿಗೆ ಮಾಡುತ್ತ ಸಾಗಿದರೆ, ಒಂದೆರಡು ದಶಮಾನಗಳಲ್ಲಿ ಒಬ್ಬರು ಇನ್ನೊಬ್ಬರನ್ನು ಕೊಂದು ಬದುಕುವ ಪರಿಸ್ಥಿತಿ ನಿರ್ಮಾಣವಾದೀತು !!!.  ಕೊಲೆ ಸುಲಿಗೆಗಳನ್ನು ಮಾಡಿದವರು ಪಾರಾಗುವಂತಹ ಕಾನೂನುಗಳು , ಕಾನೂನು ನಿರ್ಮಾತೃರಲ್ಲಿ  ಕೊಲೆ , ಸುಲಿಗೆಗಳ ಆರೋಪವನ್ನು ಹೊತ್ತ ಪ್ರತಿನಿಧಿಗಳು ,  ಆಳುವವರು, ಕಾನೂನು ನಿರ್ಮಾಪಕರು, ಕಾರ್ಯ ನಿರ್ವಹಿಸುವ ಅಧಿಕಾರ ವರ್ಗ ದ ಅನೈತಿಕ ಹೊಂದಾಣಿಕೆ  ಎಲ್ಲ ಸೇರಿ,  ಇಂದಿನ ಸಮಾಜವನ್ನು ಅಧೋಗತಿಗೆ ಸಾಗಿಸುತ್ತಿವೆ.

ಈ ರೀತಿ ವಿಚಾರಗಳು ಹೊರಹೊಮ್ಮಲು ಕಾರಣ, ಈ ವರದಿ. ನೀವೂ ಒಮ್ಮೆ ಓದಿ :
http://www.vijaykarnatakaepaper.com/Details.aspx?id=2734&boxid=235227578 


ಹರಿಹರ ಭಟ್, ಬೆಂಗಳೂರು.
ಶಿಕ್ಷಕ, ಚಿಂತಕ, ವಿಮರ್ಶಕ, ಫೇಸ್ ಬುಕ್ ಬರಹಗಾರ.
January 08 , 2013.

No comments:

Post a Comment