Wednesday, January 2, 2013

" ಪತ್ರಿಕಾ ಗೋಷ್ಠಿಯಲ್ಲಿ ಪತ್ರಕರ್ತರೇ ಕಾಣೆಯಾಗುತ್ತಿದ್ದಾರಾ ?!"

ವಿ. ಭಟ್ ರಿಗೆ ವಂದನೆಗಳು.

ತಮ್ಮ ಲೇಖನ  " ಪತ್ರಿಕಾ ಗೋಷ್ಠಿಯಲ್ಲಿ ಪತ್ರಕರ್ತರೇ ಕಾಣೆಯಾಗುತ್ತಿದ್ದಾರಾ ?!"  ಓದಿದೆ.

ನಿಜಕ್ಕೂ ಸತ್ಯ ,  ಪತ್ರಿಕಾ ಗೋಷ್ಠಿಯಲ್ಲಿ  ಹಾಜರಾತಿ  ಸಂಖ್ಯೆ ಜಾಸ್ತಿಯಾಗುತ್ತಿದೆ. ಪತ್ರಿಕಾಕರ್ತರು ಕಾಣೆಯಾಗುತ್ತಿದ್ದಾರೆ.  ಇಂದಿನ ಸಮಾಜ ಬೇರೆ ಬೇರೆ ಇಸಂ ಗಳಲ್ಲಿ ಹಂಚಿ ಹೋದಂತೆ ಪತ್ರಿಕಾ ಪ್ರಪಂಚದಲ್ಲೂ ನವ ನವೀನ , ತರಾ ತರಿ -  ತಾರೆ  ವಾರೆ   ಪಂಗಡಗಳು ಹುಟ್ಟಿಕೊಂಡು, ಮೇಲಾಟಕ್ಕೆ ತೊಡಗಿಕೊಂಡಿವೆ.

ಇಲ್ಲೂ ಬಾಕ್ಸ್ ಥಾಟ್ ( box  thoughts )ಗಳೇ ದಿನದ ಆಟಗಳಾಗಿವೆ.  ಬಾಕ್ಸ್ ಆಚೆ ಯೋಚಿಸುವವರಿಗೆ ಉಳಿಗಾಲವಿಲ್ಲದ ( survival  ) ವಾತಾವರಣ ನಿರ್ಮಾಣವಾಗಿದೆ.  ಜಾತಿ - ಧರ್ಮ ಪಂಗಡಗಳ ಕಪಿ ಮುಷ್ಟಿಯಲ್ಲಿ  ಸಿಕ್ಕಿರುವ ಪತ್ರಿಕಾರಂಗ , ಅದೇ ರೀತಿಯ ವಿಚಾರಧಾರೆಯಲ್ಲಿ ಹಂಚಿ ಹೋಗಿರುವ ಓದುಗ ಸಮಾಜದಿಂದ ಪ್ರೋತ್ಸಾಹಿತವಾಗುವದರಿಂದ ಪತ್ರಿಕೆಯೊಂದರ ಪ್ರಸಾರ ಸಂಖ್ಯೆಯಲ್ಲೂ  ಹೇಳಿಕೊಳ್ಳುವಂತಹ  ಬದಲಾವಣೆ ನಿರೀಕ್ಷಿಸುವದು ಅಸಾಧ್ಯ.  ಬದಲಾವಣೆಗಳೆeನಿದ್ದರೂ ಸ್ವಲ್ಪ ಪ್ರಮಾಣದಲ್ಲಾದಿತೆe ವಿನಃ, ಅಗಾಧ ಬದಲಾವಣೆ ಅಸಾಧ್ಯ.      

ಹರಿಹರ ಭಟ್, ಬೆಂಗಳೂರು.
ಶಿಕ್ಷಕ, ಚಿಂತಕ, ವಿಮರ್ಶಕ, ಫೇಸ್ ಬುಕ್ ಬರಹಗಾರ. 
Jan 03 , 2013.

No comments:

Post a Comment