Sunday, January 13, 2013

ಡಿ . ಉಮಾಪತಿಯವರೆ , ನಿಮ್ಮ ಇಂದಿನ ಲೇಖನ ಓದಿ ಈ ಪ್ರತಿಕ್ರಿಯೆ.

ಡಿ . ಉಮಾಪತಿಯವರೆ ,

ನಿಮ್ಮ ಇಂದಿನ ಲೇಖನ ಓದಿ ಈ ಪ್ರತಿಕ್ರಿಯೆ. ಇಲ್ಲಿ ಜನ್ಮಕ್ಕೆ ಬಂದ ಯಾರೊಬ್ಬರೂ ಪರಿಪೂರ್ಣರಲ್ಲ. ಸ್ವಾಮಿ ವಿವೇಕಾನಂದರೆe ಇರಲಿ, ಮದರ್ ತೆರೇಸಾ ಇರಲಿ , ಜನರೆಲ್ಲಾ ನಂಬುವ ವಿವಿಧ ಧರ್ಮಗಳ ದೇವರುಗಳೇ ಇರಲಿ ಯಾರೊಬ್ಬರೂ ಪರಿಪೂರ್ಣರಲ್ಲ ಅಥವಾ ಅವರೆಲ್ಲ ಪರಿಪೂರ್ಣರೆಂದು ಅವರೂ ಘೋಶಿಸಿಕೊಳ್ಳಲಿಲ್ಲ  .  ಇವೆಲ್ಲ ಅನುಯಾಯಿಗಳೆಂದು ಹೇಳಿಕೊಂಡು ಸ್ವಾರ್ಥ ಸಾಧಿಸುವವರ ಕಿತಾಪತಿ ಅಲ್ಲ ಲಫಂಗತನ  ಅನ್ನಿ.

ನಾವು ಹಿರಿಯರನ್ನು, ಉದಾತ್ತ ಜೀವಿಗಳನ್ನು ಸ್ಮರಿಸಿಕೊಳ್ಳುವದು ಅವರಲ್ಲಿರುವ ಒಳ್ಳೆ ಗುಣಗಳನ್ನು ನೆನಪಿಸಿಕೊಳ್ಳಲು , ಆ ಒಳ್ಳೆ ಗುಣಗಳಿಂದ ಇಂದಿನ ಯುವ ಜನಾಂಗಕ್ಕೆ ಅನುಕೂಲವಾಗಲಿ ಎಂದು. ತಾವು ಪತ್ರಕರ್ತರು , ತಿಳಿದವರು , ಜವಾಬ್ದಾರಿಯುಳ್ಳವರು ಎಂದು ಸಮಾಜ ಒಪ್ಪಿರುವಾಗ ಉದಾತ್ತ ಜೀವಿಗಳಲ್ಲಿರುವ ಒಳ್ಳೆಯ ಗುಣಗಳನ್ನು ಇಂದಿನ ಪೀಳಿಗೆಗೆ ನೀಡಬಲ್ಲ ಪುಸ್ತಕಗಳನ್ನು ಪರಿಚಯಿಸುವ ಬದಲು, ಉದಾತ್ತ ಜೀವಿಗಳಲ್ಲಿದ್ದ ನೇತ್ಯಾತ್ಮಕ ಅಂಶಗಳನ್ನೇ ಎತ್ತಿ ಹೇಳುತ್ತಾ , ಹಣ ಮಾಡಲು ಬರೆದ ಪುಸ್ತಕಗಳ ಕುರಿತು ಸಮಾಜಕ್ಕೆ ಲೇಖನ ನೀಡುತ್ತೀರಲ್ಲಾ , ಇದು ನ್ಯಾಯವೇ ? ಉಚಿತವೇ ? ನಿಮ್ಮನ್ನು ಅನುಸರಿಸುವ ಯುವ ಜನಾಂಗ ಕೇವಲ ನೇತ್ಯಾತ್ಮಕವಾಗಿ ಬೆಳೆಯಬೇಕೆ ಎಂಬ ಪ್ರಶ್ನೆಗಳು ನಿಮ್ಮ ಮನ ಕಲಕೀತು ಎಂಬ ಸದಾಷಯಗಳೊಂದಿಗೆ ಬರೆದಿದ್ದೇನೆ.      

ಮತ್ತೆ ನಾನೇನೂ ಸಂಘ ಪರಿವಾರದವನಲ್ಲ.  ಹೆಮ್ಮೆಯಿಂದಿರುವ  ಹಿಂದೂ  ಹೌದು.  ಅದೇ ರೀತಿ ಇತರ ಮತ ಧರ್ಮಗಳನ್ನೂ ಗೌರವದಿಂದ ಕಾಣುವ ಒಬ್ಬ ಭಾರತೀಯ ಪ್ರಜೆ.

ಶ್ರೀ. ಡಿ. ಉಮಾಪತಿಯವರ ಲೇಖನ ಓದಲು ಇಲ್ಲಿ ಕ್ಲಿಕ್ಕಿಸಿ:

http://vijaykarnatakaepaper.com/Details.aspx?id=2888&boxid=13715751


ಹರಿಹರ ಭಟ್, ಬೆಂಗಳೂರು.
ಶಿಕ್ಷಕ, ಚಿಂತಕ, ವಿಮರ್ಶಕ, ಫೇಸ್ ಬುಕ್ ಬರಹಗಾರ.
Jan  14  , 2013 .
hariharbhat.blogspot.in

No comments:

Post a Comment