Wednesday, January 9, 2013

ಮಿತ್ರರೇ,


ನಾವು ಯಾರನ್ನು ಸಮಾಜದಲ್ಲಿ ದೊಡ್ಡವರು , ಜೀವನದಲ್ಲಿ ಮೇಲೆ ಬಂದವರು ಎಂದು ಒಪ್ಪಿರುತ್ತೆeವೆಯೋ ಅವರೆಲ್ಲ ನೂರಕ್ಕೆ ನೂರು ದೊಡ್ಡವರಾಗಿರುವದಿಲ್ಲ. ಮಾಂಸ ಮಜ್ಜೆಯಿಂದ ಕೂಡಿದ ಈ ದೇಹದಲ್ಲಿ ಅರಿಶಡ್ವೈರಗಳು  ಸುಮ್ಮನಿರುತ್ತವೆ ಅಂದರೆ ಸುಪ್ತವಾಗಿ ಅಡಗಿರುತ್ತವೆ ಎಂದರ್ಥ. ಆಚೆ  ನೈಜ ಸ್ಥಿತಿ ತೋರ್ಪಡಿಸದಂತೆ ಮನಸ್ಸಿನ ಮೇಲೆ,  ಬುದ್ಧಿ ಹಿಡಿತ ಹೊಂದಿರುತ್ತದೆ. ಆ ಅರಿಶಡ್ವೈರಗಳು  ಬುದ್ಧಿಯ ಹಿಡಿತ ತಪ್ಪಿಸಿಕೊಂಡು ಪ್ರದರ್ಶಿತವಾಗಲು ಸಮಯೋಚಿತ ಸಂಧರ್ಭಗಳು ಒದಗಿ ಬಂದಾಗ ತಮ್ಮತನ ತೋರ್ಪಡಿಸುತ್ತವೆ.  ಒಮ್ಮೆ ಆ ರೀತಿಯ ಸಂಧರ್ಭಗಳು ಒಮ್ಮೆಯಲ್ಲ , ಆಗಾಗ ಒದಗಿ ಬಂದರೂ ಅರಿಶಡ್ವೈರಗಳ  ಮುಷ್ಠಿಯಲ್ಲಿ  ಸಿಗಲಿಲ್ಲ ಎಂದರೆ ಆ ಮಹನೀಯರು , ಪ್ರತಿಶತ ನೂರರಸ್ಟೂ ದೊಡ್ಡವರು ಎಂದು ಒಪ್ಪಿಕೊಳ್ಳಲಡ್ಡಿಯಿಲ್ಲ.   


ಬಾಹ್ಯ ಸೌಂದರ್ಯ, ಸಾರ್ವಜನಿಕವಾಗಿ ತೋರಿಬರುವ ವ್ಯಕ್ತಿತ್ವದ ಮುಖ , ಬಹುಪಾಲು ಅಡಗಿಸಿಕೊಂಡಿರುವ ನಿಜವ್ಯಕ್ತಿತ್ವ ಅನಾವರಣಗೊಳ್ಳದಂತೆ  ಕಾಳಜಿವಹಿಸುವ  ಪರಿಯಷ್ಟೇ.  ಈ ರೀತಿ ನಿಜವ್ಯಕ್ತಿತ್ವ ಅನಾವರಣಗೊಳ್ಳದಂತೆ ಜತನದಿಂದ ಹೊರವ್ಯಕ್ತಿತ್ವ ಕಾಪಿಟ್ಟುಕೊಂಡವರೇ , ದ್ವಿಮುಖ ವ್ಯಕ್ತಿತ್ವದ ನಾಯಕರ, ಮುಂದಾಳುಗಳ ಹಿಂಬಾಲಕರು.  ದ್ವಿಮುಖವ್ಯಕ್ತಿತ್ವ ಹೊಂದಿರದಿದ್ದರೆ ಇಂದಿನ ಜನ ಜೀವನದಲ್ಲಿ ಶೀಘ್ರವಾಗಿ ದುಡ್ಡು ಮಾಡಲು ಅಸಾಧ್ಯ.  ಒಮ್ಮೆ ಬಹು ಪ್ರಯತ್ನದಿಂದ ದುಡ್ಡುಮಾಡಿದರೆ , ದ್ವಿಮುಖ ವ್ಯಕ್ತಿತ್ವದ ಜನರು ಸುತ್ತ ಸೇರಿ, ದ್ವಿಮುಖ ವ್ಯಕ್ತಿತ್ವದ ಜಾಲದಲ್ಲಿ ಅವರನ್ನು ಸೇರಿಸಿಕೊಂಡುಬಿಡುತ್ತಾರೆ  . ಒಮ್ಮೆ ಆ ಜಾಲದ ಪರಿಧಿಯ ಒಳಸೇರದಿದ್ದರೆ ಇಂದಿನ ಜನ ಜೀವನದಲ್ಲಿ ಜನಪ್ರಿಯರಾಗದೆ, ಸಾರ್ವಜನಿಕವಾಗಿ ಗುರುತಿಸಲ್ಪಡದೇ ಉಳಿದುಬಿಡುತ್ತಾರೆ. ಹೀಗೆಂದು ಆ ಪರಿಧಿಯೊಳಸೇರಿದರೆ  ಕ್ರಮೇಣ ತನ್ನತನ ಕಳೆದುಹೋಗಿ , ಸಾರ್ವಜನಿಕ ಜೀವನದ ಉತ್ತುಂಗಕ್ಕೇರಿದರೂ , ವೈಯಕ್ತಿಕ ಜೀವನದಲ್ಲಿ ನಿರಾಸೆಹೊಂದುತ್ತಾರೆ.  ಈ ರೀತಿಯ ಜೀವನದ ಉತ್ತುಂಗ  ಹಂತ ತಲುಪಿದಾಗ , ಸುಪ್ತವಾಗಿದ್ದ ಅರಿಶಡ್ವೈರಗಳು ಜಾಗ್ರತವಾಗಿ ಉನ್ಮತ್ತನಾಗಿ denotify  ಹಗರಣಗಳು,  rape the known  and  unknown   ಅಂತಹ ನೀಚ ಪ್ರವ್ರತ್ತಿಗೆ ಉದ್ಯುಕ್ತನಾಗುತ್ತಾನೆ.  ಒಮ್ಮೆ ಈ ನೀಚ ಪ್ರವೃತ್ತಿಗಳು   ಜಾಹೀರಾದಾಗ ತನ್ನನ್ನು ಸುಭಗನಂತೆ ತೋರ್ಪಡಿಸಲು ಅಧಿಕಾರದ ಮದ, ತಾನೇ ಬೆಳೆಸಿದ ಹಿಂಬಾಲಕರು, ಅಸಮರ್ಪಕ ವಿಧಾನಗಳಿಂದ ಗಳಿಸಿದ ಸಂಪತ್ತು ಎಲ್ಲ ಉಪಯೋಗಿಸಿ ಆಪತ್ತುಗಳಿಂದ ಪಾರಾಗಲು ಕಾರ್ಯ ಪ್ರವೃತ್ತನಾಗುತ್ತಾನೆ .ಈ ವರ್ತುಲದಿಂದ ಹೊರ ಬರಲಿ , ಬರದಿರಲಿ ಕಾಲ ಕ್ರಮೇಣ ಸಮಾಜದಲ್ಲಿ  ಸ್ಥಾನ ಬ್ರಷ್ಠನಾಗುತ್ತಾನೆ .   


ವಾನಪ್ರಸ್ಥದ ಹಂತ ತಲುಪಿರುವ ಹಿರಿಯರ ಜೊತೆ ಆತ್ಮೀಯವಾಗಿ ಹರಟಿದರೆ ಇಂತಹ ನೂರಾರು ಜನರ ಇತಿಹಾಸ ಬೆಳಕಿಗೆ ಬರುತ್ತದೆ. ಇತಿಹಾಸ ರಚಿಸಿದವರಸ್ಟೇ ಅಲ್ಲ, ಪ್ರಸಕ್ತ ಕಾಲದಲ್ಲೂ ಇತಿಹಾಸ ರಚಿಸುತ್ತಿರುವವರ ನಿಜ ಮುಖಗಳ ಅರಿವಾಗುತ್ತವೆ. ಆದ್ದರಿಂದಲೇ ಇಂದಿನ ದಿನಗಳಲ್ಲಿ ಸಾರ್ವಜನಿಕ ಜೀವನದಲ್ಲಿ   ವ್ಯವಹಾರಗಳ   ಜವಾಬ್ದಾರಿತನ  ( Accountability  ),   ಪಾರದರ್ಶಕತೆ
 ( Transperancy  )  ಕುರಿತು ಎಲ್ಲೆಡೆ ಹೆಚ್ಚಿನ ಕೂಗು ಕೇಳಿ ಬರುತ್ತಿರುವದು. ಇಂದಿನ ಈ ಕಾಲ ಮಾನದಲ್ಲಿ  ಈ ಬೆಳವಣಿಗೆಗಳು ಸಮಾಜದ ಯಾವ ವಿಭಾಗಗಳನ್ನೂ  ಬಿಟ್ಟಿಲ್ಲ.  ನಾನು ಇಲ್ಲಿ ಒಂದೊಂದಾಗಿ ಹೆಸರಿಸಬಹುದು, ಹೆಸರಿಸಿದರೆ ಮುಜುಗರವುಂಟಾದೀತು. ಆ ಮುಜುಗರದಿಂದ ತಪ್ಪಿಸಿಕೊಳ್ಳಲು  ಅಲ್ಲದೆ   ನೀವೆಲ್ಲ   ಆ ರೀತಿಯ   ಮುಖಂಡರುಗಳು,  ಸಮಾಜವನ್ನು ಮುನ್ನಡೆಸುವವರುಗಳ ಮಧ್ಯೆಯೇ ಬದುಕುತ್ತಿರುವದರಿಂದ , ಹತ್ತಾರು ಕಡೆ ಹತ್ತಾರು ಸಲ ಈ ರೀತಿಯ ಘಟನೆಗಳ ಮಾಹಿತಿವುಳ್ಳವರಾಗಿರುತ್ತೀರಿ.


ಯಾವುದೋ ಒಂದು ಘಟನೆಯ ಸುತ್ತ ಚರ್ಚೆಯಲ್ಲಿ ಭಾಗಿಯಾದಾಗ ಈ ಎಲ್ಲ ವಿಚಾರಗಳು ಮನಸ್ಸಿನಲ್ಲಿ ಸುಳಿದವು. ನಿಮ್ಮೊಡನೆ ಹಂಚಿಕೊಂಡೆನು.



ಹರಿಹರ ಭಟ್, ಬೆಂಗಳೂರು.
ಶಿಕ್ಷಕ, ಚಿಂತಕ , ವಿಮರ್ಶಕ, ಫೇಸ್ ಬುಕ್ ಬರಹಗಾರ.
Jan 10, 2013.

No comments:

Post a Comment