Saturday, November 24, 2012

October 16, 2012.

ನೋಡಿ ,

ನಮ್ಮ ಯುವ ಜನಾಂಗದಲ್ಲಿ ಎಂತಹ ಅದ್ಭುತವಾದ ಶಕ್ತಿ ಇದೆ. facebook page ಗಳನ್ನು ನೋಡಿದರೆ

ಹವ್ಯಕ ಕುಡಿಗಳ " ಕಾವ್ಯ, ಚುಟುಕು, ಹಾಸ್ಯ, ಘೋಸ್ಟಿ , ಅಧುನಿಕ ಪ್ರಪಂಚ ವಿಜ್ಞಾನದ ಜ್ಞಾನ, ಮಿತ್ರ

ಭಾವನೆ, ಸಹ ಜೀವನದ ತುಡಿತ " ಎದ್ದು ಕಾಣುವದು. ನಮ್ಮ ಅಭಿಮಾನದ ಕುಡಿಗಳ ಯುವಶಕ್ತಿ ನಮ್ಮ

ಸಮಾಜಕ್ಕೆ ಪ್ರಪ್ರಥಮವಾಗಿ ಸಲ್ಲಬೇಕಾಗಿದ್ದು. ಇಂದಿನ ವಾಸ್ತವಿಕತೆ ಎಂದರೆ ನಮ್ಮ ಕುಡಿಗಳು

ವಿಶಾಲವಾದ ಮಾನವ ಸಮಾಜದಲ್ಲಿ ಎಲ್ಲೆಡೆಯೂ ಸಲ್ಲುತ್ತ , ಬೆಳಗುತ್ತಿದ್ದಾರೆ. ಎಲ್ಲೆಡೆ ಗೌರವ

ಸಂಪಾದಿಸುತ್ತ ಧನಿಕರಾಗುತ್ತಿದ್ದಾರೆ. ಸಂತೋಷದ ವಿಷಯ.

ಈ ಹವ್ಯಕ ಕುಡಿಗಳನ್ನು ಒಂದೆಡೆ ಸೇರಿಸಿ , ಅವರ ಶಕ್ತಿ ಸಂಚಯವನ್ನು ಸಮಾಜಕ್ಕೆ

ವಿನಿಯೋಗಿಸಬೇಕಲ್ಲವೇ? ಸ್ತ್ರೀ ಶಕ್ತಿ ಒಂದು ಪ್ರಮಾಣದಲ್ಲಿ " ಶ್ರೀ ಅಖಿಲ ಹವ್ಯಕ ಮಹಾಸಭೆ " ಯಲ್ಲಿ

ಹೊರ ಹೊಮ್ಮುತ್ತಿರುವದು ಸಂತೋಷದ ವಿಷಯ. ಅದರಂತೆ ಯುವಶಕ್ತಿ ಒಂದೆಡೆ ಸೇರಿ, ಸಮಾಜಕ್ಕೆ -

ವೈಯಕ್ತಿಕ ಏಳಿಗೆಗೆ , ಸಹಕಾರವಾಗುವಂತಹ ಒಂದು ಕ್ರಿಯಾಶೀಲ ವೇದಿಕೆ ರಚನೆಗೊಳ್ಳುವದು ಮತ್ತು

ಆ ವೇದಿಕೆ ಕ್ರಿಯಾಶೀಲವಾಗಿರುವದು ಇಂದಿನ ಅವಶ್ಯಕತೆಯೆನಿಸುತ್ತದೆ.

ಹವ್ಯಕ್ ಕುಡಿಗಳೆಲ್ಲ ಈ ದಿಶೆಯಲ್ಲಿ ಯೋಚಿಸಿರಿ.

ಹರಿಹರ ಭಟ್, ಬೆಂಗಳೂರು.
October 16, 2012.

No comments:

Post a Comment