Tuesday, November 27, 2012

ಚಿಕ್ಕ ಚಿಕ್ಕ  ವಿಚಾರಗಳು, ...................

ನ ಬ್ರೂಯಾತ್ ಸತ್ಯಮಪ್ರಿಯಂ //

ಸತ್ಯವನ್ನು ಅಪ್ರಿಯವಾಗಿ ಹೇಳಬಾರದು.  ಅಂದರೆ ಕೇಳುಗನ ಮನಸ್ಸು   ವಿಕಾರಗೊಂಡು  ನೀವು ಹೇಳಿದ ಸತ್ಯವಾದ ಮಾತು ವ್ಯರ್ಥವಾದೀತು . ಹಾಗಾಗಿ ಅಪ್ರಿಯವಾದ ರೀತಿಯಲ್ಲಿ ಸತ್ಯವನ್ನು ಹೇಳಬಾರದೆಂಬ ಅಭಿಪ್ರಾಯ. ಸತ್ಯವನ್ನೆಂದೂ ಹೇಳದೆ ಇರಬಾರದು ಎಂದಲ್ಲ , ಆದರೆ ಅಪ್ರಿಯವಾಗಿ  ಹೇಳಬಾರದು ಎಂಬುದು ಈ ಮಾತಿನ ತಾತ್ಪರ್ಯ.

ನೋಡಿ ಇತ್ತೀಚೆ ನಮ್ಮ ಮನೆಯ ಪಕ್ಕದಲ್ಲಿ ಒಂದು ಕಿರಾಣಿ ಅಂಗಡಿ ಆರಂಭವಾಗಿದೆ. ನಮಗೆ ಅನುಕೂಲ. ಆದರೆ  ಅಲ್ಲಿ ನಿಂತು ಸಿಗರೇಟು ಸೇದುವವರಿಂದ ಅನಾನುಕೂಲ . ಏನು ಮಾಡುವದು ? ನೇರವಾಗಿ ಹೇಳಿದರೆ ಈ ಕಾಲದಲ್ಲಿ ಯಾರೂ ಕೇಳುವದಿಲ್ಲ. ಹಾಗೆಂದು ಸಹಿಸಲಸಾಧ್ಯವಾದ  ಹೊಗೆಯ ಅನಾನುಕುsಲ.  ನಯವಾಗಿ ಅಂಗಡಿಕಾರನಿಗೆ ಹೇಳಿದೆ. " ನೀವೇನೋ ವ್ಯಾಪಾರ ಮಾಡೋದು ಸರಿ, ನಮಗೆ ಈ ಪರಿ ಕಷ್ಟ , ಏನ ಮಾಡೋದ್ರಿ ?"  ಸರ್ , ನಾನು ಗಿರಾಕಿಗೆ ಹೇಳ್ತೀನಿ ಕೇಳೋದಿಲ್ಲ ?   ಎಂಬುದು ಅಂಗಡಿಕಾರನ ಉತ್ತರ.  ಏನ ಮಾಡೋದು ?  " ಸರಿ ನಾವು ನೀವು ಇಲ್ಲೇ ಇರೋರು ? ಸುಮ್ಮನೆ ಜಗಳ ಯಾಕೆ ? ನಿಮ್ಮ ಗಿರಾಕಿ ಸಿಗರೇಟು ಸೇದುವಾಗ ನಾನು ನಿಮಗೆ ಜೋರಾಗಿ ಹೇಳುತ್ತೇನೆ, ನೀವು ಬೇಸರ ಮಾಡಿಕೊಳ್ಳಬೇಡಿ. ಯಾವ ಸಿಗರೇಟು ಸೇದುವವನೂ ತಿರುಗಿ ದಬಾಯಿಸುವದಿಲ್ಲ. ಮುಂದೆ ನೋಡೋಣ " ಎಂದೆ.  ಸರಿ ಸರಿ , ಸರ್ ಎಂದರು ಅಂಗಡಿಯವರು. ನೀವು ಹೇಳೋದು ಹೇಳಿ, ಇಲ್ಲಿ ಸೇದಬಾರದು ಎಂದು, ಮುಂದೆ ನೋಡೋಣ ಎಂದು ತಿರುಗಿ ಬಂದೆ. ಒಂದೆರಡು ದಿವಸಗಳ ಕಾಲ ಕೀಟಲೆ ಇರಲಿಲ್ಲ. ಮತ್ತೆ ಮೊದಲಿನಂತೆ. ಅಂಗಡಿಯವರು ಯಾಕೆ ಹೇಳುತ್ತಾರೆ ? ಸಿಗರೇಟು ಮಾರಿ, ಸೇದಬೇಡ ಎನ್ನಲಾಗುತ್ತದೆಯೇ ? ಅಂತೆಯೇ ನಾವು ತೊಂದರೆ ಒಮ್ಮೆ ಎರಡು ಬಾರಿ ಆದರೆ ತಡೆದುಕೊಳ್ಳಬಹುದು. ದಿನಾಲು ಅಂಗಡಿ ತೆರೆದಿದ್ದಾಗೆಲ್ಲ  ಈ ಕೀಟಲೆ ನಮಗೆ ಇದ್ದದ್ದೇ  ?  ಯೋಚಿಸಿದೆ. ಸರಿ ಎಂದು ಮರುದಿನ ಗಿರಾಕಿಯೊಬ್ಬ ಸಿಗರೇಟು ಸೇದುತ್ತಿದ್ದಾಗ  ಹೋಗಿ , ಅಂಗಡಿಯವನ ಜೊತೆ ಏರಿದ ದ್ವನಿಯಲ್ಲಿ ಹೇಳತೊಡಗಿದೆ. " ನೀವು ಸಿಗರೇಟು ಮಾರುವವರು ನಿಮ್ಮ ಗಿರಾಕಿಗಳಿಗೆ ಹೇಳ್ಬೇಕ್ರಿ ? ನಾವು ಸಿಗರೇಟು ಸೇದದವರೆeಕೆ ತೊಂದರೆ ಅನುಭವಿಸಬೇಕು ? ನಿಮ್ಮ ಗಿರಾಕಿಗೆ ನೀವು ಹೇಳಬೇಕು . " ಎಂದು ತಿರುಗಿ ಬಂದೆನು.   ನೋಡಿ ಪರಿಣಾಮ , ಈಗ ಸಿಗರೇಟು ಕೊಂಡು ದೂರ ಹೋಗಿ ಸೇದಿ ಪುನಃ ಅಂಗಡಿಗೆ ಬಂದು ಹರಟೆ ಹರಟುತ್ತಾರೆ.

ಇದೆe ರೀತಿ ಸಿಗರೇಟು ಸೇದುವವನೊಬ್ಬ , ಕಿರುದಾಗಿ ನನ್ನ ನೋಡಿ ನಕ್ಕನು. ಇದೆ ಸಮಯ ಎಂದು ಆತನ ಪರಿಚಯ ಮಾಡಿಕೊಂಡೆನು. ಉದ್ಯೋಗ , ಸಂಸಾರ ಎಲ್ಲ ತಿಳಿದೆ. ಸಿಗರೇಟಿನ ಹೊಗೆಯಿಂದ ಸಿಗರೇಟು ಸೇದದವರಿಗೆ ಹೇಗೆ ಆರೋಗ್ಯ ಕೆಡುತ್ತದೆ ಎಂದು ವಿವರಿಸಿದೆ. ಮನೆಯಲ್ಲಿ ಚಿಕ್ಕ ಮಗು ಇದೆ ಎಂದು ತಿಳಿದು, ಮನೆಯಲ್ಲಿ ಸಿಗರೇಟು ಸೇದುವದರಿಂದ ಆ ಮಗುವಿನ ಆರೋಗ್ಯದಲ್ಲಿ ಹೇಗೆ ಏರು ಪೇರು ಆಗುವದು ಎಂದು ವಿವರಿಸಿದೆ. ದಿನವೊಂದಕ್ಕೆ   ಎಷ್ಟು ಸಿಗರೇಟು ಸೇದುತ್ತಿeರಿ ಎಂದು ಕೇಳಿದೆ ? ಹದಿನೈದರಿಂದ ಇಪ್ಪತ್ತು ಎಂದನು. ದಿನವೊಂದಕ್ಕೆ ಒಂದು ನೂರು ರುಪಾಯಿ ಸಿಗರೇಟು, ತಿಂಗಳಿಗೆ ಮುರು ಸಾವಿರ ರುಪಾಯಿ ಖರ್ಚೂ ಅಲ್ಲ ವೇಸ್ಟು , ಎಷ್ಟು ವರ್ಷ ಆತರೀ ?  ಈ ಸಿಗರೇಟು ಎಂದೆ. ಹತ್ತು, ಹನ್ನೆರಡು ವರ್ಷ, ಸರ್  ಎಂದೊಡನೆ ಒಂದು ಸ್ಕೂಟರ್ ಬರುತ್ತಿತ್ತಲ್ರಿe  ಎಂದೆ . ಏನೂ ಮಾತನಾಡಲಿಲ್ಲ ಆ ಮನುಷ್ಯ .

ಮರು ದಿನದಿಂದ ಆ ಮನುಷ್ಯ ಕಂಡಾಗೆಲ್ಲ ಕಾಫಿ ಆಯ್ತೆನ್ರ್ರಿe ? ಎಂದು ಬಿಡುತ್ತೇನೆ. ಸಂತೋಷದಿಂದ ಆಯ್ತು ಸರ್......... ಎಂದು , ನನ್ನ ಯೋಗ ಕ್ಷೇಮ ವಿಚಾರಿಸಿ ಹೋಗುತ್ತಾನೆ.  ಆಶರ್ಯ !!!!!!!!! ಒಂದು ವಾರದ ನಂತರ ಆ ಮನುಷ್ಯ ಹೇಳಿದ್ದು , "  ಸರ್ ಏನೋ ಹೇಳಿದ್ರಿ , ಯಾಕಾಗಬಾರದು ಎಂದು ಯೋಚಿಸಿ ಯೋಚಿಸಿ , ಈಗ ಸಿಗರೇಟು ಕೇವಲ ಎರಡೋ , ನಾಲ್ಕೋ ಸೇದುತ್ತಿದ್ದೇನೆ ಎಂದನು. " ನಾನು ಆತನ ಕೈ ಕುಲುಕಿ , " ಒಮ್ಮೆಲೇ ಬಿಡಲು ಹೋಗಬಾರ್ದ್ರೀ , ಬಿಟ್ಟೆ ಅಂದ್ರೆ ಮತ್ತೆ ಬಂದು ತಗಲಿಕೊಳ್ಳುತ್ತದೆ. ನಿಧಾನಕ್ಕೆ ಒಂದು , ಎರಡು  ...........  ಎಂದು ಹತ್ತಿಪ್ಪತ್ತಾಗಿದ್ದು , ಒಮ್ಮೆಲೇ  ಓಡಿಸಲಾಗುವದಿಲ್ಲ     , ನಿಧಾನಕ್ಕೆ  ಬೇಡ , ಬೇಡ, ಸಾಕು, ಬರಬೇಡ ...........  ಎಂದು ತಿಂಗಳು , ಒಂದೂವರೆ ತಿಂಗಳಲ್ಲಿ ದಿನೇ ದಿನ ಕಡಿಮೆ ಮಾಡುತ್ತಾ ಹೋಗಿರಿ. ಆಮೇಲೆ ಮತ್ತೆ ಬರುವ ಧೈರ್ಯ ಆ ಸಿಗರೆeಟಿಗಿರುವದಿಲ್ಲ. " ಎಂದು ಧೀರ್ಘವಾಗಿ ಬೋದಿಸಿದೆ     .  ಖುಷಿಯೋ, ಖುಷಿ ನೀರು ಬಿಡುವ ಆ  waterman  ಗೆ. 

ಅಂತೂ ಈಗ ಸಮಸ್ಯೆಗೊಂದು ಪರಿಹಾರ ದೊರಕಿದೆ. ಎಷ್ಟು ದಿನ ಕಾದು  ನೋಡೋದೊಂದೆ   ,  ಬೇರೆ ದಾರಿಯಿಲ್ಲ.

ಚಿಕ್ಕ ಚಿಕ್ಕ ವಿಷಯಗಳೂ , ಬಹಳ ಮಹತ್ವ ಹೊಂದಿವೆ,  ಬಹಳ ಮಹತ್ವ ಪಡೆಯುತ್ತವೆ ನಾವದನ್ನು ಅನುಭವಿಸುವಾಗ.

ಹರಿಹರ ಭಟ್, ಬೆಂಗಳೂರು.
ಶಿಕ್ಷಕ, ಚಿಂತಕ, ವಿಮರ್ಶಕ, ಫೇಸ್ ಬುಕ್ ಬರಹಗಾರ.
November 28 , 2012. 

No comments:

Post a Comment