Friday, December 7, 2012


ಇಂದಿನ ( ೦೮.೧೨.೨೦೧೨ ) ಕನ್ನಡ ಪ್ರಭ ದಿನಪತ್ರಿಕೆಯ ಪುಟ ಒಂಭತ್ತರ " ತಪ್ಪಾಯ್ತು , ತಿದ್ಕೊತಿeವಿ " ವಿಶ್ವೇಶ್ವರ ಭಟ್ ರ ಅಂಕಣ ಓದಿ.   " ಇಲ್ಲ" ಎನ್ನೋದನ್ನ ಎಷ್ಟು ಸುಂದರವಾಗಿ , ಹಿತವಾಗಿ ನುಡಿಯಬಹುದು ಎನ್ನುವದನ್ನು ನಿರೂಪಿಸಿದ್ದಾರೆ , ನಮ್ಮ ವಿ. ಭಟ್ ರು .

ನಾನು  ಬರೆದ ಈ - ಮೇಲ್ ಹೀಗಿತ್ತು :

ವಿ.ಭಟ್ ರಿಗೆ ವಂದನೆಗಳು .

ಸಾಮಾನ್ಯವಾಗಿ ಹೆಚ್ಚಿನ ಸಂವಾದ , ಪುಸ್ತಕ   ಅನಾವರಣ ಕಾರ್ಯಕ್ರಮಗಳು ವಿಜೃಂಭಣೆ ಯಿಂದ ಆಯೋಜಿಸಲ್ಪಡುತ್ತವೆ . ಅತಿಥಿಗಳು , ಕಾರ್ಯಕರ್ತರ ಹೊರತಾಗಿ , ಜನಗಳೇ ಇರದಿರುವ ಕಾರಕ್ರಮಗಳೇ ಜಾಸ್ತಿ. ಪತ್ರಿಕೆಗಳಲ್ಲಿ, ದ್ರಶ್ಯ  ಮಾಧ್ಯಮ ಗಳಲ್ಲಿ ಪುಸ್ತಕ ಅನಾವರಣ , ಸಂವಾದ ಅತಿಥಿಗಳ ಚಿತ್ರಗಳನ್ನು ಮಾತ್ರ ತೋರಿಸಿ, ಸೇರಿದ ಸಭಿಕರ ಸಂಕ್ಯೇಯನ್ನಾಗಲಿ , ಚಿತ್ರವನ್ನಾಗಲೀ ನಿಡುವದೆe ಇಲ್ಲ. ಇದು  ಸಾರ್ವಜನಿಕವಾಗಿ ಪತ್ರಿಕೆ ಓದುಗರಿಗೆ, ದ್ರಶ್ಯ ಮಾಧ್ಯಮ ವೀಕ್ಷಕರಿಗೆ ನೀಡುವ ಅಸಮಂಜಸ ಮಾಹಿತಿಯಲ್ಲವೇ ?  ಈ ರೀತಿ ತಪ್ಪು/ ಅಪರಿಪೂರ್ಣ  ಮಾಹಿತಿ / ಚಿತ್ರಣ ನೀಡುವದು ಸಾರಸ್ವತ ಲೋಕದ ಅಭಿಮಾನಿಗಳಿಗೆ ಗೊಂದಲವನ್ನುಂಟು ಮಾಡುವದಿಲ್ಲವೇ ? ನಾನು ಈ ವಿಚಿತ್ರ, ಅಸಮಂಜಸ ಪರಿಸ್ತಿತಿಗಳಿಗೆ ಹಲವು ಬಾರಿ ಸಾಕ್ಷಿಯಾಗಿದ್ದೇನೆ. ಪ್ರಸಿದ್ಧ ಕವಿ , ಕವಯಿತ್ರಿಯಯರು, ಲೇಖಕರು, ಸಾಹಿತಿಗಳು ಸಂವಾದದಲ್ಲಿ ಪಾಲ್ಗೊಳ್ಳುತ್ತಾರೆಂದು  ಕಾರ್ಯಕ್ರಮಕ್ಕೆ ಹೋದರೆ , ಸಂವಾದಗಳು ಕೇವಲ ಕೆಲವೇ ನಿಮಿಷಗಳಲ್ಲಿ ಮುಗಿದುಹೋಗುತ್ತವೆ. ಈ ರೀತಿಯ ಅನುಭವಗಳಿಂದ ಕಂಗೆಟ್ಟ ಶ್ರೀ ಸಾಮಾನ್ಯ ಪ್ರೇಕ್ಷಕ ನಿರುತ್ಸಾಹನಾಗಿರುವದರಿಂದಲೇ ಇಂದಿನ ಕಾರ್ಯಕ್ರಮಗಳಲ್ಲಿ ಸಂಘಟಕರು, ಫೋಟೋಗ್ರಾಫರ್ಸ್, ವಿಡಿಯೋಗ್ರಾಫರ್ಸ್, ಬೆರಳೆಣಿಕೆಯಷ್ಟು ಪ್ರೇಕ್ಷಕರು ಮಾತ್ರ ಕಾಣ ಬರುತ್ತಾರೆ.

ಇಂದಿನ ಪತ್ರಿಕೆಯಲ್ಲಿ ಸಂವಾದ ಕಾರ್ಯಕ್ರಮದ ವರದಿ ಓದಿದಾಗ ಈ ರೀತಿ ಅನಿಸಿಕೆಯುನ್ಟಾಯಿತು. ಇನ್ನು ಮುಂದೆ ವರದಿ ಪರಿಪೂರ್ಣ ಹಾಗು ವಾಸ್ತವಿಕತೆಯ ಪಕ್ಷಪಾತಿಯಾಗುವತ್ತ ತಾವು ಪ್ರಥಮ ಹೆಜ್ಜೆ ಯಿಡುವ ಸಾಮರ್ಥ್ಯವುಳ್ಳವರು ಎಂಬ ವಿಶ್ವಾಸದಿಂದ ಈ ಅಕ್ಷರಗಳನ್ನು ಜೋಡಿಸಿ ಇಟ್ಟಿದ್ದೇನೆ ಮತ್ತು ಪ್ರತೀಕ್ಷೆಯಲ್ಲಿದ್ದೇನೆ.

ಹರಿಹರ ಭಟ್, ಬೆಂಗಳೂರು.
ಶಿಕ್ಷಕ , ಚಿಂತಕ , ವಿಮರ್ಶಕ , ಫೇಸ್ ಬುಕ್ ಬರಹಗಾರ.

****************************

ವಿ . ಭಟ್ ರ ಲೇಖನ ವಿಷಯ ವಿಸ್ತರಿಸುತ್ತಾ , ಮುದ ನೀಡುತ್ತ , ಒದಿಸಿಕೊಂಡು ಹೋಗುತ್ತದೆ . ನಾನು ಅವರ ಪ್ರತಿಯೊಂದು ಲೇಖನವನ್ನು ಓದುವ ರೂಡಿ ಇಟ್ಟುಕೊಂಡಿದ್ದೇನೆ.

ಹರಿಹರ ಭಟ್ , ಬೆಂಗಳೂರು.

Link to Kannada Prabha page :    http://www.kannadaprabha.com/pdf/8122012/9.pdf

No comments:

Post a Comment