Friday, June 21, 2013

ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ರಾಮಲಿಂಗಾ ರೆಡ್ಡಿ ಯವರಿಗೊಂದು ಕಿವಿಮಾತು.

ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ರಾಮಲಿಂಗಾ ರೆಡ್ಡಿ ಯವರಿಗೊಂದು ಕಿವಿಮಾತು.


http://epapervijayavani.in/Details.aspx?id=6667&boxid=22551156


ಎಷ್ಟೇ ಕಾರ್ಯಕ್ರಮಗಳು , ಮೀಟಿಂಗಳು ಇದ್ದರೂ ಸಹ ಬೆಂಗಳೂರಿನಲ್ಲಿದ್ದಾಗ , ದಿನಕ್ಕೆ ಎರಡು ತಾಸು ಪ್ರತ್ಯಕ್ಷ ಫಲ (direct immediate   results  ) ಕೊಡಬಹುದಾದ ಈ ಕೆಳಗಿನ ಸಲಹೆಗಳನ್ನು ಅಳವಡಿಸಿಕೊಳ್ಳಿ, ಅದರ ನೇರ ಫಲಾನುಭವಿಗಳು ತಾವು ಮತ್ತು ತಮ್ಮ ಕಾಂಗ್ರೆಸ್ ಪಕ್ಷ ಆಗಿರುತ್ತೀರಿ. ಇಂದಿನ ಪರಿಸ್ತಿತಿಗಳಲ್ಲಿ ಈ ರೀತಿ ಮಾಡಿದರೆ ಹಿಂಬಾಲಕರು ಓಡಿಹೋದಾರೆಂಬ ಭಯವಿದ್ದರೆ, ಬರುವ ಲೋಕಸಭಾ ಚುನವಣೆವರೆಗಾದರೂ ಪ್ರಯತ್ನಿಸಿ ನೋಡಿ:



೧.    ರಸ್ತೆಯಲ್ಲಿ escorts  ಜೊತೆ ಭುರ್ರ್ ಎಂದು ಓಡಿಹೋಗದೆ, ರಸ್ತೆ ಮಧ್ಯೆ ಇಳಿದು ರಸ್ತೆ ಪರಿಸ್ತಿತಿಗಳನ್ನು ಗಮನಿಸಿ. ಸೂಕ್ತ ಹಣಕಾಸಿನ ಅಧಿಕಾರ, ಆಡಳಿತ ಅಧಿಕಾರವುಳ್ಳ ಅಧಿಕಾರಿಯನ್ನು ಕೂಡಲೇ ಸ್ಥಳಕ್ಕೆ ಕರೆಯಿಸಿ , ಜನ ಸಾಮಾನ್ಯರ ಎದುರು ಅಧಿಕಾರಿಗೆ ಆಗಬೇಕಾದ ಕೆಲಸಗಳನ್ನು ಪೂರೈಸಲು ಸಮಯ ನಿಗದಿ ಪಡಿಸಿ.  ಕಾರ್ಯ ಆಗುವದನ್ನು ನಿಮ್ಮ ಅಧಿಕಾರಿ ಸಹಾಯಕರ ಮೂಲಕ ಖಾತ್ರಿ ಪಡಿಸಿಕೊಳ್ಳಿ. ನಿಮ್ಮ ಪ್ರತಿ ಆಜ್ಞೆಯನ್ನೂ ನಿಮ್ಮ ಅಧಿಕಾರಿ ಸಹಾಯಕ ಕಾರ್ಯ ರೂಪಕ್ಕೆ ತರುವಂತೆ ನೋಡಿಕೊಳ್ಳಿ. ಪ್ರತಿ ಭಾನುವಾರ ಆ ವಾರದ ನಿಮ್ಮ ಆಜ್ಞೆ ಕಾರ್ಯರೂಪಕ್ಕೆ ಬಂದಿದೆಯೋ ಎಂದು ವಿಚಾರಿಸಿಕೊಳ್ಳಿ, ಆಗಾಗ ಸ್ವತಹ ಆ ಸ್ಥಳಗಳಿಗೆ ಹೋಗಿ , ಅಲ್ಲಲ್ಲಿ ಪರಾಮರ್ಶಿಸಿ.



೨.    ಕೇವಲ ಪತ್ರಿಕೆಯವರ ಜೊತೆ ಮಾತನಾಡುವದು, ಪತ್ರಿಕಾ ಹೇಳಿಕೆ ನೀಡುವದು , ಆಗಾಗ ಮೀಟಿಂಗಳನ್ನು    ಮಾಡಿ  ಅಧಿಕಾರಿಗಳಿಗೆ ಎಚ್ಚರಿಕೆ ನೀಡುವದು ಇವೆಲ್ಲಾ ಇಂದಿನ ಪರಿಸ್ತಿತಿಯಲ್ಲಿ ಸವಕಲು ನಾಣ್ಯಗಳಿದ್ದಂತೆ , . ಅಧಿಕಾರಿ ವರ್ಗ ಸಂಪೂರ್ಣವಾಗಿ ದಪ್ಪ ಚರ್ಮ ಬೆಳೆಸಿಕೊಂಡಿದ್ದಾರೆ ಮತ್ತು ಈ ವರ್ತನೆಗಳಿಗೆ ಕಳೆದ ಮೂವತ್ತು ವರ್ಷಗಳಲ್ಲಿ ಅಧಿಕಾರ ನಡೆಸಿದ ರಾಜಕಾರಣಿಗಳೇ ಕಾರಣೀಕರ್ತೃರು . ಮಂತ್ರಿ ಖುರ್ಚಿಯಲ್ಲಿ ಕುಳಿತವರೊಡನೆ ಮೆತ್ತಗೆ ಮಾತನಾಡಿ , ಮಂತ್ರಿಗಳ ದಾರಿ ತಪ್ಪಿಸುವ ಚಾಣಕ್ಷ ? ನಡೆಗಳು ಅವರಿಗೆ ಕಾರ್ಯಗತವಾಗಿ, ಬ್ರಹ್ಮ ಬಂದರೂ ಈ ಸ್ತಿತಿ ಬದಲಾಗುವದಿಲ್ಲ ಎಂದು ಜನ ಸಾಮಾನ್ಯರು ಮಾತನಾಡುತ್ತಿದ್ದಾರೆ.  ಜನಸಾಮಾನ್ಯರಿಗೆಲ್ಲ ಗೊತ್ತಿರುವ ವಿಷಯವೆಂದರೆ, ವರ್ಗಾವಣೆಯ ಕಾಲವೆಂದರೆ ರಾಜಕೀಯದವರಿಗೆಲ್ಲಾ ಸುಗ್ಗಿಯ ಕಾಲ, ಒಂದೋ ಎರಡೋ ವರ್ಗಾವಣೆ ಆಯಕಟ್ಟಿನ ಅಂದರೆ ಹೆಚ್ಚಿನ ಲಂಚವನ್ನು ಹೊಡೆಯುವ ಅಧಿಕಾರಿ ಖುರ್ಚಿ , ಸಿಕ್ಕಿದರೆ ಆ ಮರಿ ರಾಜಕಾರಣಿ ಮುಂದೆ ಪುಡಿ ರಾಜಕಾರಣಿ, ಆರೆಂಟು ವರ್ಗ ಮಾಡಿಸುವ ಅದೃಷ್ಟ ಖುಲಾಯಿಸಿದರೆ ಆ ರಾಜಕಾರಣಿ ಮುಂದೆ ಹಿಡಿ ರಾಜಕಾರಣಿ ( ದೊಡ್ಡ ರಾಜಕಾರಣಿಗೆ ಪಾತ್ರೆ ಹಿಡಿಯುವವ ) , ಹತ್ತಾರು ವರ್ಗ ಮಾಡಿಸಬಲ್ಲವ ಲಂಚ - ಮಂಚ ದ ಚಾಕ ಚಕ್ಯತೆ ಕರಗತಮಾಡಿಕೊಂಡ " ಕೋಟಿ " ರಾಜಕಾರಣಿ ಹೀಗೆ ಸಾಗುತ್ತಿದೆ ಇಂದಿನ ಈ ಮೂವತ್ತು ವರ್ಷಗಳ ರಾಜಕಾರಣ - ರಾಜಕಾರಣಿಗಳ ಕಾರ್ಯವಿಧಾನದಿಂದ ಬಂದೊದಗಿದ ಬಿರುದು ಬಾವಲಿಗಳು.



೩.  ಹಿಂದೆಲ್ಲಾ ಊಟ , ತಿಂಡಿ ಖರ್ಚು ಮಾಡಿದರೆ ರಾಜಕಾರಣಿಗೆ ತನ್ನ ಹಿಂಬಾಲಕರನ್ನು ಹಿಡಿದಿಡಲು ಸಾಧ್ಯವಿತ್ತು,  ಈ ಮೂವತ್ತು ವರ್ಷಗಳಲ್ಲಾದ ಬದಲಾವಣೆ ನೋಡಿ.  ಅಧಿಕಾರಿಗಳ ವರ್ಗದ ವರ್ಗಾವಣೆ ಮಾಡಿ ದುಡ್ಡು ಹೊಡೆಯುವ ವ್ಯವಸ್ತೆಗೆ ಶರಣಾಗದಿದ್ದರೆ ಆರು ತಿಂಗಳು ಒಂದು ವರ್ಷದಲ್ಲೆ ಹಿಂಬಾಲಕ ಇನ್ನೊಂದೆಡೆ ಮುಖ  ಮಾಡುತ್ತಾನೆ. ಚುನಾವಣೆ ಸಮಯದಲ್ಲಂತೂ ವಾರ ವಾರ, ತಿಂಗಳುಗಳಲ್ಲಿ ಮುಖಂಡರುಗಳ ಬದಲಾವಣೆ ಕಾಣುತ್ತಿರುತ್ತೇವೆ. ಚುನಾವಣೆ ಬಂತೆಂದರೆ ಜನಗಳಿಗೆ ಸುಗ್ಗಿ ಕಾಲ. ಒಬ್ಬ ಮತವೊಂದಕ್ಕೆ ಐದು ನೂರು ಕೊಟ್ಟರೆ ಇನ್ನೊಬ್ಬ ಸಾವಿರ ಹಂಚುತ್ತಾನೆ. ಒಬ್ಬ ಟಿ.ವಿ ಕೊಡಿಸಿದರೆ ಇನ್ನೊಬ್ಬ ಫ್ರಿಜ್ಜ್  ಕೊಡಿಸುತ್ತಾನೆ, ಇವೆಲ್ಲ ಜನಸಾಮಾನ್ಯರ ಕಣ್ಣಿರೆ ರಾಚುವ ಸತ್ಯ.  ಕೋಟಿ , ಕೋಟಿ ಬೆಲೆಬಾಳುವ ಸೈಟ್ ಮಾರಿ ಹಣ ಖರ್ಚು ಮಾಡಿಯೂ ಆರಿಸಿಬರದ , ಮೂರ್ಖ  ರಾಜಕಾರಣಿಗಳು ನಮ್ಮೆಲ್ಲರ ಮಧ್ಯೆಯೇ ಓಡಾಡಿಕೊಂಡಿದ್ದಾರೆ.  ಆದರೆ ವಿಷಾದದ ಸಂಗತಿಯೆಂದರೆ ಈ ರೀತಿ ಜನಗಳು ಸುಂದರವಾದ
" ಪ್ರಜಾಪ್ರಭುತ್ವ"  ಎಂಬ ವ್ಯವಸ್ತೆಯನ್ನೇ ಹಾಳುಗೆಡವಿದ್ದಾರೆ.



೪.  ಈ ಮೇಲೆ ನೀಡಿದ ಸಲಹೆಯನ್ನೊಮ್ಮೆ ಪ್ರಯೋಗಕ್ಕೆ ತನ್ನಿ. ನೀವು ವೈಯಕ್ತಿಕವಾಗಿಯೂ ಜನಾನುರಾಗಿಯಾಗುತ್ತೀರಿ, ನಿಮ್ಮ ಪಕ್ಷಕ್ಕೂ ನಿಮ್ಮಿಂದ ಒಳ್ಳೆ ಹೆಸರು ಬರುತ್ತದೆ, ಜೊತೆಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಇದರ ಫಲವಾಗಿ ಒಳ್ಳೆ ಫಲಿತಾಂಶ ಸಹಜವಾಗಿ ಒಲಿದು ಬರುತ್ತದೆ. ವಿಧಾನಸಭಾ ಚುನಾವಣೆಯಲ್ಲಿ ಬೆವರು ಹರಿಸಿ ದುಡಿದ ನಿಮ್ಮ ಕಾರ್ಯಕರ್ತರ ಬಾಯಲ್ಲೇ,  " ಇಲ್ಲಿ ಇವರು ,ದೇಶಕ್ಕೆ ಮಾತ್ರ  ಮೋದಿ " ಎಂಬುದನ್ನು   ಕೇಳಿದ್ದೇನೆ.



ಒಮ್ಮೆ ನೀವು ಬದಲಾವಣೆ  ರೀತಿ ಕಾರ್ಯ ಶೈಲಿ ಅಳವಡಿಸಿಕೊಂಡರೆ ಮುಂದೆಂದೂ ನಿಮ್ಮ ರಾಜಕೀಯ ಜೀವನದಲ್ಲಿ ಸೋಲನ್ನು ಕಾಣುವದೇ ಇಲ್ಲ. ಜನ ಅಶಿಕ್ಷಿತನಿರಲಿ, ಸುಶಿಕ್ಷಿತನಿರಲಿ ತುಂಬಾ ಜಾಣರಿದ್ದಾರೆ, ನಿಮಗೆ ಶುಭವಾಗಲಿ.



ಹರಿಹರ ಭಟ್, ಬೆಂಗಳೂರು.
ಚಿಂತಕ, ವಿಮರ್ಶಕ,  ಹವ್ಯಾಸಿ ಪತ್ರಕರ್ತ .

www.hariharbhat.blogspot.com

June 22, 2013.

No comments:

Post a Comment