Friday, May 31, 2013

ನೀರಿನ ಸಮಸ್ಯೆ - ಪರಿಹಾರಕ್ಕೆ ಸಲಹೆ.

ಸರಕಾರಕ್ಕೆ ಇಚ್ಚಾ ಶಕ್ತಿ ಇದ್ದರೆ, ಬೆಂಗಳೂರು ನಗರವೊಂದನ್ನು    ಪ್ರಾಯೋಗಿಕವಾಗಿ   ಆಯ್ಕೆ  ಮಾಡಿಕೊಂಡು  ಎಲ್ಲಾ ಬಡಾವಣೆಗಳಲ್ಲಿರುವ   CA  site  ಗಳಲ್ಲಿ  ಒಂದು ಸಾವಿರ ಅಡಿ ಆಳದ ಎಂಭತ್ತರಿಂದ ನೂರು ಅಡಿ ಅಗಲದ ನೆಲ ಬಾವಿಗಳನ್ನು ತೋಡಿ , ಸೂಕ್ತವಾದ ರಕ್ಷಣಾ ಗೋಡೆಯನ್ನು ಕಟ್ಟಿ  ಮಳೆಗಾಲದ ನೀರು ಸಂಗ್ರಹ ಮಾಡಬಹುದು.


ಈಗಿನ ದ್ಯತ್ಯ ಯಂತ್ರಗಳನ್ನು ಬಳಸಿಕೊಂಡು ಹದಿನೈದು ಇಪ್ಪತ್ತು ದಿವಸಗಳಲ್ಲಿ ಈ ಬಾವಿಗಳನ್ನು ತೋಡಿ ಇನ್ನೊಂದು ಹತ್ತು ಹದಿನೈದು ದಿವಸಗಳಲ್ಲಿ ಜನ, ಜಾನುವಾರುಗಳು ಬೀಳದಂತೆ ತಡೆಗೋಡೆಗಳನ್ನು ಕಟ್ಟಬಹುದು. ಹಿಂದೆ ರಾಜ ಮಹಾರಾಜರ ಕಾಲದಲ್ಲಿ ನಿರ್ಮಿಸಿದ ಹಲವು ನೆಲ ಬಾವಿಗಳು ಇನ್ನೂ ನೀರು ಸಂಗ್ರಹಿಸಿ ಅಲ್ಲಲ್ಲಿ ಸಮೃದ್ಧಿಯಾಗಿರುವದು ಕಂಡುಬರುವದು.


ಸರಕಾರ ಸಮರೋಪಾದಿಯಲ್ಲಿ ಕೆಲಸ ಕೈಗೊಳ್ಳಬೇಕು. ಶೃದ್ಧೆಯುಳ್ಳ  ಅಧಿಕಾರಿ, ಕಂಟ್ರಾಕ್ಟರ್ ಸಮೂಹ ಗುರುತಿಸಿ ಕೆಲಸ ಕೈಗೊಳ್ಳಬೇಕು. ಅವಶ್ಯವಿದ್ದರೆ ಟಾಸ್ಕ್ ಫೋರ್ಸ್ ರಚಿಸಿ ವಿಶೇಶ ಅಧಿಕಾರ ಕೊಡಬೇಕು. ಕೆಲಸ ಮುಗಿದೊಡನೆ ಈ ಕಾರ್ಯದ ಶುಭಾಶುಭ ಗಳನ್ನು ಅಭ್ಯಸಿಸಲು ಪರಿಣಿತರ ತಂಡವೊಂದನ್ನು ರಚಿಸಬೇಕು. ಈ ಎಲ್ಲ ಕಾರ್ಯಗಳಾಗಲು ಮುಖ್ಯಮಂತ್ರಿಯವರ ನೇತ್ರತ್ವದಲ್ಲಿ ಎಲ್ಲ ಅಧಿಕಾರವುಳ್ಳ ಸಮಿತಿಯೊಂದನ್ನು ಕೂಡಲೆ ರಚಿಸಿ, ಕಾರ್ಯಪೃವ್ರತ್ತರಾಗಬೇಕು.


ಆದೀತಲ್ಲವೇ ಸಿದ್ಧರಾಮಯ್ಯನವರೇ ?  ನೀರಿನ ಸಿದ್ದರಾಮಯ್ಯ ಎಂದು ಹೆಸರು ಗಳಿಸಿ ಚರಿತ್ರೆಯಲ್ಲಿ ಶಾಶ್ವತವಾಗಿರಬಹುದಲ್ಲವೇ, ನಜೀರ ಸಾಬರಂತೆ.


ಆಗದು ಎಂದು ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಎಂದೆಂದೂ ,/
ಎಲ್ಲರಂತೆ ನಡೆದರೆ ಸಿದ್ಧರಾಮಯ್ಯ , ಆಗುವರು ಹತ್ತರಲಿ ಹನ್ನೊಂದು,//
ಸಿಕ್ಕಿದ ಅವಕಾಶ ಬಳಸದೆ ಇದ್ದರೆ , ಸಿಗದು ಅವಕಾಶ ಇನ್ನೆಂದೂ,/
ನಾಳೆ, ನಾಡಿದ್ದು ಎನ್ನದೆ, ಇಂದೇ ನಡೆಯಲಿ ಪ್ರಜಾಹಿತ ಎಂದೆಂದೂ.//




ಹರಿಹರ ಭಟ್, ಬೆಂಗಳೂರು.

No comments:

Post a Comment