Tuesday, May 14, 2013

ಕರ್ನಾಟಕಾ ವಿಧಾನ ಸಭೆ ಚುನಾವಣೆ 2013


ಕರ್ನಾಟಕಾ  ವಿಧಾನ ಸಭೆ ಚುನಾವಣೆ  2013


ಕರ್ಣಾಟಕ  ರಾಜ್ಯದ  ವಿಧಾನಸಭೆ  ಚುನಾವಣೆ  ಮುಗಿದು  ಕಾಂಗ್ರೆಸ್  ಪಕ್ಷ  ಅಧಿಕಾರ  ಪಡೆದಾಯಿತು . ಅಧಿಕಾರದ ಪ್ರಭಾವದಿಂದೊದಗುವ ಸಮಸ್ಯೆಗಳು ಒಂದೊಂದಾಗಿ ಇನ್ನು ತೆರೆದುಕೊಳ್ಳಲು ಆರಂಭವಾಗುತ್ತವೆ ಮತ್ತು ಆರಂಭಿಕ ಸೂಚನೆಗಳು ಅಲ್ಲಲ್ಲಿ ಗೋಚರಿಸುತ್ತಿವೆ. ಇಷ್ಟಕ್ಕೇ ಸಮಸ್ಯೆಗಳ ಸಾಲು ನಿಲ್ಲುತ್ತವೆಂದೇನಲ್ಲ, ಹೊಸ ಹೊಸ ವಿನೂತನ ಸಮಸ್ಯೆಗಳು ಉದ್ಭವವಾಗುವದು ಸರ್ವೇ ಸಾಮಾನ್ಯ.



ಅಧಿಕಾರ ಸಿಕ್ಕಿದ ಸಂತೋಷದಲ್ಲಿ ಮತದಾರ ನೀಡಿದ ಸೂಚನೆಗಳನ್ನು ಕಾಂಗ್ರೆಸ್ಸ್ ಪಕ್ಷ ವಿಮರ್ಶಿಸದೇ ಮರೆತುಬಿಡುವ ಸಾಧ್ಯತೆಗಳೇ ಹೆಚ್ಚು. ಅಧಿಕಾರ ಹಿಡಿಯಲಾಗದ ಪಕ್ಷ ಸೋಲಿನ  ವಿಮರ್ಶೆಗೆ ತೊಡಗುವದು , ಅಧಿಕಾರ ದೊರಕಿದವರು ಆಡಳಿತದೆಡೆ ಸಾಗುವದು  ಸರ್ವೇ ಸಾಮಾನ್ಯವಾಗಿ ಇರುವ ಬೆಳವಣಿಗೆಗಳು. ಆದರೆ ಈ ಚುನಾವಣೆಯ ವಿಶೇಷವೆಂದರೆ ಆಡಳಿತ ದೊರೆತ ಪಕ್ಷ ತನ್ನ ವಿಜಯವನ್ನು ತನಗೆ ದೊರೆತ ಮತಗಳ ಸಂಖ್ಯೆಯ ಆಧಾರದಲ್ಲಿ  ಕ್ಷೇತ್ರಾವಾರು  ವಿಮರ್ಶಿಸಿ ಸೂಕ್ತ ಬದಲಾವಣೆಗಳನ್ನು ಮಾಡಿಕೊಂಡು ಹೆಚ್ಚಿನ ಸಂಖ್ಯೆಯ ಮತದಾರರನ್ನು ಆಕರ್ಷಿಸುವ ಅಗತ್ಯತೆ ಕಂಡುಬರುತ್ತದೆ. ಇದೇ ಜಾಗ್ರತ ಮತದಾರ ಕಾಂಗ್ರೆಸ್ ಪಕ್ಷಕ್ಕೆ ನೀಡಿದ ಸಲಹೆಯಾಗಿದೆ.



ಹಿಂದಿನ ಚುನಾವಣೆಗೆ ಹೋಲಿಸಿದಾಗ ಕಾಂಗ್ರೆಸ್ ಪಕ್ಷ ತನ್ನ ಮತ ಗಳಿಕೆಯಲ್ಲಿ ಒಟ್ಟಾರೆ ಕೇವಲ ಶೇಕಡಾ ಎರಡು ವೃದ್ಧಿ ಸಾಧಿಸಿದೆ. ಬಿ ಜೆ ಪಿ ಹೋಳಾಗಿ, ಹಿಂದೆ ಒಂದೇ ಪಕ್ಷವಿದ್ದಾಗ ಗಳಿಸಿದ ಮತಗಳು ವಿಭಜನೆಯಾದ್ದರಿಂದ ಇಂದು ಕಾಂಗ್ರೆಸ್ಸ್ ಅಧಿಕಾರ ಹಿಡಿಯಿತು.  ಬಿ.ಜೆ.ಪಿ , ಕೆ.ಜೆ.ಪಿ ಮತ್ತು ಬಿ ಎಸ್ ಆರ್  ಕಾಂಗ್ರೆಸ್ಸ್ ಈ ಚುನಾವಣೆಯಲ್ಲಿ ಗಳಿಸಿದ ಮತಗಳನ್ನು ಒಟ್ಟು ಸೇರಿಸಿ  ತುಲನಾತ್ಮಕವಾಗಿ ನೋಡಿದರೆ , ಬಿ ಜೆ ಪಿ ಹೋಳಾಗದಿದ್ದರೆ ನಿಶ್ಚಿತವಾಗಿಯೂ ಬಿ.ಜೆ.ಪಿ ಯೇ ಅಧಿಕಾರಕ್ಕೆ ಮರಳುತ್ತಿತ್ತು ಎಂಬುದು ನಿಸ್ಸಂಶಯ. ಈ ಎಲ್ಲಾ ಅಂಶಗಳೇ ಮತದಾರ ನೀಡಿದ ಸಂದೇಶಗಳು ಮತ್ತು ಈ ಸಂದೇಶಗಳೇ ಕಾಂಗ್ರೆಸ್ಸ್ ಪಕ್ಷಕ್ಕೆ ನೀಡಿದ ಎಚ್ಚರಿಕೆ ಮತ್ತು ಬಿ.ಜೆ.ಪಿ, ಕೆ.ಜೆ.ಪಿ, ಬಿ.ಎಸ್.ಆರ್ ಕಾಂಗ್ರೆಸ್ಸಗಳಿಗೆ ನೀಡಿದ ಸೂಚನೆಗಳಾಗಿವೆ.



ಹರಿಹರ ಭಟ್, ಬೆಂಗಳೂರು.
ಶಿಕ್ಷಕ, ಚಿಂತಕ, ವಿಮರ್ಶಕ.
www.hariharbhat.blogspot.ಕಂ
May  15  , 2013 .

No comments:

Post a Comment