Monday, September 2, 2013

ದೊಡ್ಡವರ ಸಣ್ಣತನಗಳು.

ದಿನ  ಕಳೆದಂತೆ  ದೊಡ್ಡವರು, ಪ್ರಭಾವಿಗಳು ಎನ್ನುವವರು ಅತಿ ಸಂಕುಚಿತ ಮನೋಭಾವನೆಯನ್ನು ಸಾರ್ವಜನಿಕವಾಗಿ ಪ್ರದರ್ಶಿಸುತ್ತಿದ್ದಾರೆ. ಯಾಕೋ ಎನೋ ಸಮಾಜಕ್ಕೆ ಆದರ್ಶವಾಗಿರಬೇಕಾದವರೇ ಪಾಠ ಹೇಳಿಸಿಕೊಳ್ಳುವ ಸ್ಥಿತಿ ತಲುಪುತ್ತಿರುವದು ಶೋಚನೀಯ.


ನಿನ್ನೆಯೋ ಮೊನ್ನೆಯೋ , ದಿನಪತ್ರಿಕೆಯೊಂದರ ವರದಿಯಲ್ಲಿ,  ದೀಪಬೆಳಗುತ್ತಿರುವವರಲ್ಲಿ ಒಬ್ಬರಾದ ಕರ್ನಾಟಕದ ರಾಷ್ಟ್ರಮಟ್ಟದ ನಾಯಕರ ಬಗೆಗೆ ಒಂದೇ ಒಂದು ಶಬ್ದ ಬರೆದಿಲ್ಲ. ಅವರು ಮಾಡಿದ ಭಾಷಣದ ಕುರಿತು ಒಂದು ಅಕ್ಷರವೂ ಇಲ್ಲ. ವರದಿಗಾರರೇನಾದರೂ ತಪ್ಪಿದರೇ  ಎಂದರೆ ಸುಲಭವಾಗಿ ಒಪ್ಪಲಾಗದು. ಸಂಪಾದಕರ, ಪತ್ರಿಕೆ ಮಾಲಿಕರ ಒಡಂಬಡಿಕೆಯೇ ಈ ರೀತಿ ಪತ್ರಿಕಾ ಧರ್ಮದ ವಿರೋಧೀ ನಿರ್ಣಯಗಳಿಗೆ ಹೇತುವಾಗಬಲ್ಲುದು ತಾನೇ?


ಇಂದಿನ ದಿನ ಪತ್ರಿಕೆಯೊಂದರಲ್ಲಿ, ವರದಿಯಲ್ಲಿ  ಒಬ್ಬರ ಚಿತ್ರವಿದೆ. ಟೈ ಕಟ್ಟಿ ಅತಿಥಿಗಳ ಜೊತೆ ಇರುವದನ್ನು ಚಿತ್ರದಲ್ಲಿ ನೋಡಿದಾಗ ಅತಿಥಿಗಳಲ್ಲೊಬ್ಬರೋ , ಸಂಘಟಕರಲ್ಲೊಬ್ಬರೋ ಆಗಿರಬೇಕು. ಅವರ ಕುರಿತು ವರದಿಯಲ್ಲಿ ಅಥವಾ ಚಿತ್ರದ ಅಡಿಬರಹದಲ್ಲಿ ಒಂದೇ ಒಂದು ಅಕ್ಷರವಿಲ್ಲ.  ಈ ರೀತಿ ಬೆಳವಣಿಗೆಗಳ ಹಿಂದೆ ಪತ್ರಿಕಾ ಧರ್ಮ ಮೀರಿದ ದುರುದ್ದೇಶಗಳಿರಲೇಬೇಕು.


ಇಂದು ಫೇಸ್ ಬುಕ್ ನೋಡುತ್ತಿದ್ದೆ. ಮಹಾಶಯರೊಬ್ಬರು  ತಮಗಿಷ್ಟವಿರದ  , ತಮ್ಮ ಸ್ಪರ್ಧಿಯಾಗಿರುವ ರಾಜಕಾರಣಿಯೊಬ್ಬರನ್ನು  ಖಂಡಿಸಲು  ಜನಸಾಮಾನ್ಯರು ಒಪ್ಪಿಕೊಂಡಿರುವ  ಸಂಘಟನೆಯ ಹೆಸರನ್ನು , ಮಠವೊಂದರ   ಸ್ವಾಮೀಜಿಗಳ   ಹೆಸರನ್ನು  ಬಳಸಿಕೊಂಡಿದ್ದರು.


ಈ ರೀತಿ ಸಮಾಜದಲ್ಲಿ ಬರುತ್ತಿರುವ ಬದಲಾವಣೆಗಳನ್ನು ನೋಡಿದಾಗ ಇನ್ನು ಹದಿನೈದು ಇಪ್ಪತ್ತು ವರ್ಷಗಳಲ್ಲಿ ಸಮಾಜ ಯಾವ ರೀತಿ ಅನಪೇಕ್ಷಿತ ಬದಲಾವಣೆಗಳತ್ತ ಸಾಗೀತು ಎಂಬುದು ಎಲ್ಲ ಸಮಾಜ ಜೀವಿಗಳು ಯೋಚಿಸಬೇಕಾದ ಅವಶ್ಯಕತೆ . 

No comments:

Post a Comment