Monday, December 31, 2012

About Newspaper Editors.

ಮಾನ್ಯರೇ,

ಜಗತ್ತಿನ ಎಲ್ಲ ಆಗು ಹೋಗುಗಳನ್ನು ಜನತೆಗೆ ತಿಳಿಸ ಬಯಸುವ ಜನ ತಾವು. ಯಾವುದೇ ಪೂರ್ವಾಗ್ರಹವಿಲ್ಲದೆ ಘಟನೆಗಳನ್ನು, ಘಟನೆಯ ವಿಶ್ಲೇಷಣೆಗಳನ್ನು ಸಾರ್ವಜನಿಕರಿಗೆ ತಿಳಿಸಬೇಕಾದುದು ತಮ್ಮೆಲ್ಲರ  ಕರ್ತವ್ಯದ ಒಂದು ಅಂಶ.  ತಮ್ಮ ಹಿರಿಯ ಸಹೋದ್ಯೋಗಿಗಳನ್ನು , ಕಾರ್ಯ ಕ್ಷೇತ್ರ ಬಳಗದ ಹಿರಿಯರನ್ನು ಗುರುತಿಸಿ, ಅವರನ್ನು ಸ೦ಮಾನಿಸಿದಾಗ   ಅವರ ಹೆಸರುಗಳನ್ನೂ ಪ್ರಕಟಿಸದಷ್ಟು  ಸಣ್ಣತನ ಪತ್ರಿಕೋದ್ಯಮವನ್ನು ಆವರಿಸಿದೆಯೇ ಎಂಬ ಸಂಶಯ , ಇಂದಿನ ( ಡಿಸೆಂಬರ್ ೩೧, ೨೦೧೨ )ಪತ್ರಿಕೆಗಳ ವರದಿ  -  ಮುಖ್ಯಮಂತ್ರಿಗಳಿಂದ  ಪತ್ರಿಕಾರಂಗದ ಹಿರಿಯರ ಸ೦ಮಾನ ,  ಓದಿದಾಗ ಅನಿಸಿತು.

ವೈಯಕ್ತಿಕ ಜೀವನದಲ್ಲಿ ದಾಯಾದಿ ಕಲಹ ಸುಧಾರಿಸಲಸಾಧ್ಯವಾದರೂ, ಎಲ್ಲ
ಸುಶಿಕ್ಷಿತರಿ೦ದೊಡಗೂಡಿರುವ  ಪತ್ರಿಕಾ ರಂಗದಲ್ಲಿ  ದಾಯಾದಿ ಕಲಹ  ಅಪೆeಕ್ಷಣೀಯವೂ  ಅಲ್ಲ, ಸಮರ್ಥನೀಯವೂ   ಅಲ್ಲ .  ಅಲ್ಲದೆ  ಹಿರಿಯ  , ಅನುಭವಿಕ  ಪತ್ರಕರ್ತರ  ಸ೦ಮಾನ ಕಾರ್ಯಕ್ರಮಗಳ ವರದಿಯಲ್ಲಿ ಅವರ ಹೆಸರು, ಚಿತ್ರ ಹಾಕುವದರಿಂದ ಅವರು ಕೆಲಸ ಮಾಡುವ ಪತ್ರಿಕೆಗಾಗಲೀ, ವೈಯಕ್ತಿಕವಾಗಿ ಅವರಿಗಾಗಲೀ ಹೆಚ್ಚಿನ ಪ್ರಚಾರದ ಅನುಕೂಲತೆಯೊದಗಿಬರುವ  ಹಂತವನ್ನು ಆಗಲೇ ಆ ಮಹನೀಯರುಗಳು ದಾಟಿರುತ್ತಾರೆ. ಸಮಾಜದ ಆದರಣೀಯ ಸ್ಥಾನದಲ್ಲಿರುವ ಪತ್ರಕರ್ತರೆಲ್ಲರೂ ಈ ದಿಶೆಯಲ್ಲಿ ಯೋಚಿಸುವಿರಾಗಿ ಆಶಾಭಾವನೆ ಹೊಂದಿದ್ದೇನೆ.

ಹರಿಹರ ಭಟ್, ಬೆಂಗಳೂರು.
ಶಿಕ್ಷಕ, ಚಿಂತಕ, ವಿಮರ್ಶಕ, ಫೇಸ್ ಬುಕ್ ಬರಹಗಾರ.
ಡಿಸೆಂಬರ್ ೩೧,೨೦೧೨.


ಗೆ,
ಎಲ್ಲ ಗೌರವಾನ್ವಿತ ಪತ್ರಕರ್ತರಿಗೆ.

ದಯಮಾಡಿ ಎಲ್ಲ ಪತ್ರಕರ್ತರ ಗಮನಕ್ಕೆ ತನ್ನಿ.

Saturday, December 29, 2012

ವಿಶ್ವೇಶ್ವರ ಭಟ್  ರಿಗೊಂದು ಪತ್ರ ಬರೆದಿದ್ದೇನೆ. ನಿಮ್ಮೊಡನೆ ಅದನ್ನು ಹಂಚಿಕೊಂಡಿದ್ದೇನೆ.

                                               ***************


 "  ತಪ್ಪಾಯ್ತು ತಿದ್ಕೋತೀವಿ  "  ಕೊನೆಯಿಲ್ಲದ ( perpetual ) ಅಂಕಣಾನಾ ??????


ಪಕ್ಕದ ಮನೆಯಲ್ಲಿ ಗಂಡ ಹೆ೦ಡತಿ ಜಗಳ ಮಾಡಿ ಕೊಳ್ಳುತ್ತಿದ್ದಾರೆ ಎಂದಾದರೆ ಅದನ್ನು ನೋಡಿ ಮಜಾ ತೆಗೆದುಕೊಳ್ಳುವ ಜನಗಳಿಗೆ ತಮ್ಮ ಮನೆಯ ಮಗ ಸೊಸೆ ಏರು ದ್ವನಿಯಲ್ಲಿ ಮಾತನಾಡಿದಾಗ   ಕರುಳು ಚುರ್ ಎಂದು ಸಮಾಧಾನ ಹೇಳಲು ಮುಂದಾಗುತ್ತಾರೆ. ಎಲ್ಲಿ ಭಾವನಾತ್ಮಕ ಸ೦ಬ೦ಧ   ಇರುತ್ತದೆಯೋ ಅಲ್ಲಿ ಕೂಡಲೇ ಪ್ರತಿಕ್ರಿಯಿಸುವದು ಮಾನವ ಸಹಜ ಸ್ವಭಾವ. ಬೆಳಿಗ್ಗೆ ವಾಯುವಿಹಾರಕ್ಕೆ ಹೋಗುವ ಜನ ನಾಲ್ಕಾರು ಸಲ ಮುಖ ನೋಡಿದೊಡನೆ , ಮುಂದೆ ಶುಭಾಷಯ ವಿನಿಮಯ ಮಾಡಿಕೊಳ್ಳುವದು ಮನುಷ್ಯನ    ಸಹಜ ಸ್ವಭಾವ. ಈ ರೀತಿಯ ಸಹಜ ಮನುಷ್ಯ ಸಂಬಂಧಗಳು , ಒಂದು ಪತ್ರಿಕೆಯನ್ನೂ, ಲೇಖಕರ ಹಲವಾರು ಲೇಖನಗಳನ್ನೂ , ಸಾಹಿತಿಗಳ ಪುಸ್ತಕಗಳನ್ನೂ ಓದಿದಾಗ, ಹಲವಾರು ವರ್ಷಗಳ ಕಾಲ ಓದಿದಾಗ ಒಂದು ಅವಿನಾಭಾವ ಸ೦ಬ೦ಧ   ಏರ್ಪಡುತ್ತದೆ. ಸಂಪಾದಕರು ಬದಲಾದರೂ , ಲೇಖಕರು , ಸಾಹಿತಿಗಳು ತಮ್ಮ ಇಹ ಜೀವನ ಮುಗಿಸಿದರೂ ಈ ಸ೦ಬ೦ಧ   ಮುಗಿಯುವದಿಲ್ಲ. ಬಹುಷಃ ಇ೦ತಹ ಸ೦ಬ೦ಧಗಳನ್ನೇ ಕರುಳ ಸ೦ಬ೦ಧ   ಎಂದು ಜೀವನಾನುಭವಿಗಳು  ವಿಶ್ಲೇಷಿಸಿದ್ದಾರೆ .


ಈ ರೀತಿ ವಿಚಾರಧಾರೆಗಳೇಕೆ ಇ೦ದು ಮನಸ್ಸಿನಲ್ಲಿ ಸ್ಪುರಿಸುತ್ತಿವೆ ಎ೦ದು  ವಿಮರ್ಶಿಸಿದಾಗ  ಈ ತಾದಾತ್ಮ್ಯ ಸ೦ಬ೦ಧದ   ಹೊಳವು  ಹರಿಯಿತು. ನಮ್ಮ ವಿಶ್ವೇಶ್ವರ ಭಟ್ ರು ಆರಂಭಿಸಿದ ಅ೦ಕಣ "ತಪ್ಪಾಯ್ತು   ತಿದ್ಕೊeತೀವಿ"  ಓದಿ  ಓದಿ , ಇ೦ದು ಏನೆನಿಸುತ್ತಿದೆ ಎ೦ದರೆ ನಮ್ಮ ಅಭಿಮಾನದ ಪತ್ರಿಕೆಗಳಲ್ಲಿ ಅಕ್ಷರ ಜೋಡಣೆಯ ತಪ್ಪುಗಳು ,  ನಿವಾರಿಸಲು ಸಾಧ್ಯವಿಲ್ಲದ ಸಮಸ್ಯೆಯೇ ? ವಿಷಯ  ನೀರೂಪಣೆಗಳಲ್ಲಿ ಮೇಲ್ನೋಟಕ್ಕೇ ಕಂಡು ಬರುವ ವ್ಯಾಕರಣ ದೋಷಗಳು ತಿದ್ದಲಾಗದ೦ತಹ ಸಮಸ್ಯೆಯೇ ? ಪ್ರಥಮ ಹ೦ತದಲ್ಲಿಯೆe ( at the outset )  ತೋಚಿದ್ದು ಸರಿ ಎಂದು ಒಪ್ಪಿ ಕರಡು ತಿದ್ದುಪಡಿ ಪೂರೈಸುವ ಉಪಸಂಪಾದಕರುಗಳು   ಪುನರ್ಯೋಚನೆ ಮಾಡಿ , ಪತ್ರಿಕೆ ಹಿಡಿದೊಡನೆ ಧುತ್ತೆಂದು ಎರಗುವ ಅತಿಸಾಮಾನ್ಯ ತಪ್ಪುಗಳು ನಿವಾರಿಸಲಾಗದ೦ತಹ ಸಮಸ್ಯೆಗಳೇ ?    ಎ೦ಬ ಇತ್ಯಾದಿ ವಿಚಾರಗಳು ಮನ ಕಲುಕುತ್ತವೆ.


ಒಗ್ಗಟ್ಟೇ ಬಲ ಎ೦ಬ ಉಕ್ತಿಯು ಇ೦ದು ಎಲ್ಲೆಡೆ ಪ್ರಯೋಗಗೊಂಡು  ವಿಪರೀತಗಳಿಗೆಡೆಮಾಡಿರುವಾಗ   ಈ ರೀತಿ ತಪ್ಪುಗಳಾಗದಂತೆ ಸ೦ಬ೦ಧಿಸಿದ   ವ್ಯಕ್ತಿಗಳನ್ನು ವಿಚಾರಿಸಿಕೊಳ್ಳಲು ಸ೦ಪಾದಕರು ,
ಆಡಳಿತ ಮ೦ಡಳಿ ಅಸಹಾಯಕರಾಗಿರುತ್ತಾರೆ ಎನ್ನುವದು ವಾಸ್ತವಿಕ ಸತ್ಯವಾದರೂ , ಕಾರ್ಯಕ್ಷಮತೆಯನ್ನು   ಹೆಚ್ಚಿಸುವತ್ತ  ಕೈಗೊಳ್ಳಬಹುದಾದ  ಹಲವಾರು  ಉಪಾಯಗಳಿವೆ , ಪರಿಹಾರಗಳಿವೆ ಎಂಬುದನ್ನು ಅರಿಯದವರಾಗಿರುವದಿಲ್ಲ ಈ ಸ೦ಪಾದಕರು ಮತ್ತು ಆಡಳಿತ
ಮ೦ಡಳಿ. ಇ೦ತಿಪ್ಪಾಗ ಬದಲಾವಣೆಗೆ ಅವಶ್ಯವಿರುವ ಕಾಲ ( breathing time ) ಮುಗಿದಿದ್ದರೂ , ತಪ್ಪುಗಳಾಗದಂತೆ ಮತ್ತು ಘಟಿಸಿದ ತಪ್ಪುಗಳು ಪುನರಾವರ್ತನೆಯಾಗದಂತೆ ಕೈಗೊಳ್ಳಬೇಕಾದ ಕ್ರಮಗಳು ಕೈಗೊಂಡಂತೆ ಮೇಲ್ನೋಟಕ್ಕ೦ತೂ ಕಾಣಿಸುತ್ತಿಲ್ಲ ಅನ್ನುವದು ನಿರ್ವಿವಾದ.


ವ್ಯಕ್ತಿತ್ವದ ಪರಿಪೂರ್ಣತೆಯತ್ತ   ಪಕ್ವವಾಗಿರುವ  ವಿ.ಭಟ್ ರು  ನನ್ನ ಈ ಅಕ್ಷರ ವ್ಯಕ್ತನೆಗಳನ್ನು ಓದಿ , ನನ್ನನ್ನು  ಬ್ಲಾಕ್  ಲಿಸ್ಟ್ ( black list )ಗೆ ಸೇರಿಸ್ಲಿಕ್ಕಿಲ್ಲವೆಂಬ ವಿಶ್ವಾಸದಿಂದ ಬರೆಯುತ್ತಿದ್ದೇನೆ.


ಹಿಮಾಲಯವನ್ನೇರುತ್ತೇನೆ ಎಂಬವರಿಂದ ಹಿಮಾಲಯದ ತುದಿ ತಲುಪುವದನ್ನು ನಿರಿeಕ್ಷಿಸುತ್ತಾರೆ ವಿನಃ  ಕಾಂಚನಗಂಗಾ ತುದಿಯಲ್ಲಿದ್ದೇನೆ ಎಂದರೆ ಅಭಿಮಾನಿಗಳು ಸಂತಸಪಡುವದಿಲ್ಲ  . ಅಲ್ಲದೆ ಹಿಮಾಲಯವನ್ನೇರುವ ಸಾಧ್ಯತೆಯಿರುವವರು ಹಿಮಾಲಯದ ತುದಿ ತಲುಪದಿದ್ದರೆ ಅನುಭಾವಿಕರಿಗೆ ನಿರಾಸೆ ಸಹಜವಾಗುವದು ಹಾಗು ಸ೦ಬ೦ಧಿಸಿದವರು ಅದನ್ನು ಅರಿಯದಿದ್ದರೆ ಅಭಿಮಾನಿಗಳು ನಿರಾಸೆಗೊಳ್ಳುತ್ತಾರೆ.  ನಮ್ಮ ವಿ.ಭಟ್ ರು, ಯಾವುದೇ ರೀತಿಯ ಅನೈಸರ್ಗಿಕ ಸ೦ಕಷ್ಟಗಳು ಜೀವನದಲ್ಲಿ ಎದುರಾದರೂ ಅವೆಲ್ಲವುಗಳನ್ನು ಸೂಕ್ತವಾಗಿ ಹಿಂದಿಕ್ಕಿ ಯಶಸ್ಸನ್ನು ಕಾಣಬಲ್ಲವರು ಎಂಬುದಾಗಿ ಪತ್ರಿಕೆಯೊಂದರ  ಸಂಪಾದಕತ್ವ ದಿಂದ  ಹೊರಬಂದು , ಇನ್ನೊಂದು ಸಂಪಾದಕ ಖುರ್ಚಿಯಲ್ಲಿ ಕೂತ ಮಧ್ಯದ ಅವಧಿಯಲ್ಲೇ ನಿರೂಪಿಸಿದ್ದಾರೆ.   ವ್ಯಕ್ತಿತ್ವವನ್ನೊಮ್ಮೆ  ರೂಡ್ಹಿಸಿಕೊಂಡರೆ  , ಆವ್ಹಾನಿಹಿಸಿಕೊಂಡರೆ ಆ ವ್ಯಕ್ತಿಯನ್ನು ಅನುಸರಿಸುವವರು   , ವ್ಯಕ್ತಿಯ ಅಭಿಮಾನಿಗಳು  , ವ್ಯಕ್ತಿಯು ಜೀವಿಸುವ ಸಮಾಜ ಅವರಿಂದ ನೀರಿಕ್ಷೆಗಳನ್ನಿಟ್ಟುಕೊಳ್ಳುವದು ಸಹಜ ತಾನೇ ?  ನ್ಯಾಯ ತಾನೇ ?  ಅಂತೆಯೇ ಪತ್ರಿಕೆಯ ತಪ್ಪುಗಳ ಮನನ , ಪುನರ್ಮನನಗಳಿಗೆ  ಸಾಕಷ್ಟು ಸಮಯ ಸಂದಿದೆ. ತಪ್ಪುಗಳು ಆಗದಂತೆ, ಕನಿಷ್ಠ  ಪುನರಾವರ್ತನೆಯಾಗದ೦ತಾದರೂ  ದ್ಹ್ರಡ  ಸಂಕಲ್ಪದೊಂದಿಗೆ ಕಾರ್ಯಪ್ರವ್ರತ್ತರಾಗಲು ಇದು ಸೂಕ್ತ ಕಾಲ ಎಂದೆನಿಸುತ್ತಿದೆ. 

ಹರಿಹರ ಭಟ್, ಬೆಂಗಳೂರು
ಶಿಕ್ಷಕ , ಚಿಂತಕ, ವಿಮರ್ಶಕ, ಫೇಸ್ ಬುಕ್ ಬರಹಗಾರ.

                                           *************

ಮಿತ್ರರೇ ,

ನಿಮ್ಮ ಮಾತುಗಳಿಗೆ ಕಾಯ್ದಿದ್ದೇನೆ.
December 30 , 2012. 

Friday, December 28, 2012



ಅತ್ಯಾಚಾರ ಯಾಕಿಂದು ಹೆಚ್ಚು ?


ಬಯಕೆ ( ಕಾಮ ) ಪ್ರಕೃತಿಯಲ್ಲಿ ಸಹಜ ಕ್ರಿಯೆ ಎಂಬುದನ್ನು ಒಪ್ಪಿಕೊಳ್ಳಬೇಕು . ಬಯಕೆ ಎಂದರೇನು ? ತನ್ನಲ್ಲಿಲ್ಲದ್ದನ್ನು ಪಡೆಯುವ ಇಚ್ಛೆಯೇ ಬಯಕೆ.   ಗಂಡಿನ ದೇಹದಲ್ಲಿದ್ದದ್ದು   ಪಡೆಯುವ ಬಯಕೆ ಹೆಣ್ಣಿಗೆ, ಹೆಣ್ಣಿನ ದೇಹದಲ್ಲಿದ್ದದ್ದು  ಪಡೆಯುವ ಬಯಕೆ ಗಂಡಿಗೆ ಸಹಜವಾದುದು. ಅದೇ ಕಾಮ. ಈ ಕಾಮ ಯಾವ ಪರಿ ಹುದುಗಿರುವದೆಂದರೆ ಅನುಭವಸ್ಥ ವಿದ್ವಾ೦ಸರು ಅನುಮಾನಕ್ಕೆಡೆಯಿಲ್ಲದಂತೆ , "ಕಾಮಾತುರಾಣಾ0  ನ ಭಯಂ ನ ಲಜ್ಜಾ ........ "  ಎಂದಿದ್ದಾರೆ.  ಇಂತಿರುವ ಸ್ಥಿತಿಯಲ್ಲಿ  ಹಾಗಾದರೆ ಯೋಚನಾಶಕ್ತಿಯುಳ್ಳ ಮಾನವನು ಅಮಾನುಷವಾಗಿ ಮೃಗೀಯ ರೀತಿಯಲ್ಲಿ , ತನ್ನ ಕಾಮ ತ್ರಷೆ ತೀರಿಸಿಕೊಳ್ಳಲು ಆಕ್ರಮಣಕಾರಿಯಾಗಬೇಕೆ ?  ಹಿಂದೆ ರಾಜ ಮಹಾರಾಜರು ತಮ್ಮ ಪೌರುಷ ಶಕ್ತಿಯನ್ನುಪಯೋಗಿಸಿ , ನಿರುಪದ್ರವಿ,   ಅಮಾಯಕ ಹೆಣ್ಣನ್ನು ಭೋಗಿಸಿದಂತೆ , ಇಂದಿನ ಪ್ರಜಾಪ್ರಭುತ್ವದಲ್ಲೂ  ಅಧಿಕಾರದಲ್ಲಿರುವವರು, ಅವರ ಚೇಲಾಗಳು ರಾಜ ಮಹಾರಾಜರ ಮನ ಸ್ಥಿತಿಗಳಂತೆ ವರ್ತಿಸಲು ಅವಕಾಶವೀಯಬೇಕೆ ? ಖಂಡಿತ   ಇಲ್ಲ. ಖಂಡಿತ ಇಲ್ಲ ಎಂದು ಸುಮ್ಮನೆ ಕುಳಿತರೆ ಬದಲಾವಣೆ ತನ್ನಿ೦ದ ತಾನೇ ಬರುವದೇ ?  ಸಾಧ್ಯವಿಲ್ಲ.  ಅಂದರೆ ಪರಿಹಾರವೇನು ?

ವ್ಯಕ್ತಿಯಿಂದ ಸಮಾಜ. ವ್ಯಕ್ತಿಯ ಮಾನವೀಯ ನಡೆ, ನುಡಿ, ಗುಣ ಗಳಲ್ಲಿ ಇತ್ಯಾತ್ಮಕ ಬದಲಾವಣೆಗಳು ಬಂದರೆ ಎಲ್ಲ ಸಮಸ್ಯೆಗಳಿಗೂ ಸುಲಭ ಪರಿಹಾರ ಸಾಧ್ಯ. ಹಾಗೆಂದು ಹೀಗೇ ಇರಬೇಕು ಎಂಬ ಚೌಕಟ್ಟಿನೊಳಗಿನ ವಿಚಾರ ( box  thought ) ಕೇಳಲು ಚೆನ್ನಾಗಿ ಇರುವದೇ ವಿನಃ ಅನುಸರಿಸಲಲ್ಲ .  ಆದರೆ ಈ ಬಾಕ್ಸ್ ಥಾಟ್ಸ್ ಗಳನ್ನೂ ಹೆಚ್ಚು ಹೆಚ್ಚು ಅನುಸರಿಸಿದಸ್ಟೂ   ಸ್ವಾಸ್ಥ್ಯ ಸಮಾಜಕ್ಕೆ ದಾರಿ ಎಂಬುದು ನಿರ್ವಿವಾದ ವಿಚಾರ.

" ಮನೆಯೇ ಮೊದಲ ಪಾಠಶಾಲೆ , ಜನನಿ ತಾನೇ ಮೊದಲ ಗುರುವು ...... " ಎಂದು ನಾವೆಲ್ಲಾ ಓದಿದ್ದೇವೆ, ಕೇಳಿದ್ದೇವೆ, ತಿಳಿದೂ ತಿಳಿದಿದ್ದೇವೆ. ಆ ಜನನಿ ಸಮಯವನ್ನು ಮೀಸಲಿಡಿಸಿ ತನ್ನ ಮಕ್ಕಳನ್ನು ಅನಿಷ್ಟ   ಪರಂಪರೆಗಳಿಂದ ರಕ್ಷಿಸಬೇಕಾದ ಸಮಯ ಬಂದೊದಗಿದೆ. ತಾಯಿ ಚಿಕ್ಕವಳಿದ್ದಾಗ ಆಧುನಿಕತೆಯ ಗಾಳಿಗೆ ಸೋ೦ಕಲಾಗದೇ  , ಕೈಗೂಡದ ಬಯಕೆಯೇ ಇಂದು ಬಹು ತಾಯಂದಿರನ್ನು " ತಮ್ಮ ಮಗಳಾದರೂ ಹಾಗಿರಲಿ " ಎಂದು ಚಿಕ್ಕ ಮಗುವು ಆರಂಭದಿಂದಲೇ ತುಂಡುಡುಗೆಯತ್ತ  ಆಕರ್ಶಿತವಾಗುವದನ್ನು ತಡೆಯಲು ಪ್ರಯತ್ನಿಸುವದಿಲ್ಲ. ಇನ್ನೆಷ್ಟೋ   ಸನಾತನ ಪ್ರಜ್ಞೆಯ ಕೌಟುಂಬಿಕ ಹಿನ್ನೆಲೆಯಿಂದ ಬಂದ ತಾಯಂದಿರು ಮಠಕ್ಕೆ , ಮಂದಿರಕ್ಕೆ ಹೋಗಲು ತುಂಬು ತೋಳಿನ ರವಿಕೆ , ಮಾರ್ಕೆಟ್ಟಿಗೆ, ಸಿನೆಮಾ ಥಿಯೇಟರ್ ಗೆ ಹೋಗಲು ಕಿರು ದಾರದ , ದೇಹ ಸಿರಿಯನ್ನು ಅಖಂಡವಾಗಿ ತೋರ್ಪಡಿಸುವ , ಮೈ ಮಾಟಕ್ಕೊಪ್ಪುವ ರಂಗು ರಂಗಾದ ಕಿರು ಗಾತ್ರದ ಬಟ್ಟೆ , ಎಂಬ ಜಾಣ ನಡೆಯವರಾಗಿದ್ದಾರೆ.  " ಬೇಕಾದ ಡ್ರೆಸ್ ಹಾಕಿಕೊಳ್ಳುವದು ನನ್ನ ಆಯ್ಕೆ, ನನ್ನ ಡ್ರೆಸ್ ಆಯ್ಕೆಯ ಹಕ್ಕನ್ನು ನಿನಗ್ಯಾರು ಕೊಟ್ಟವರು ಗಂಡೇ ? " ಎಂದು ಎದೆಯುಬ್ಬಿಸಿ ತಿರುಗ ಹೊರಟರೆ , ಪ್ರತಿಯಾಗಿ " ನನಗೇಕೆ ಡ್ರೆಸ್ಸು, ಬೇಕಿಲ್ಲ ಡ್ರೆಸ್ಸು " ಎಂದು ಗಂಡು ಸೆಟೆಸಿ ನಡೆದರೆ , ಸಮಾಜದ ನಾಳೆಗಳು ಏನಾದಾವು ? ಎಂದೂ ಯೋಚಿಸಬೇಕಲ್ಲವೇ ?

ಇಂತಿರುವಾಗ ಹೆಣ್ಣಿಗಷ್ಟೇ   ಜವಾಬ್ದಾರಿಯೇ , ಗಂಡಿಗಿಲ್ಲವೇ ಈ ಜವಾಬ್ದಾರಿಗಳು ? ಎಂಬ ಸಹಜ ಪ್ರಶ್ನೆಯನ್ನು   ವಿಶ್ಲೇಷಿಸಬೇಕಾಗುತ್ತದೆ.  ಗಂಡಿಗೆ ಜವಾಬ್ದಾರಿ ಹೆಣ್ಣಿಗಿಂತ ಜಾಸ್ತಿ ಇದೆ , ಇರಬೇಕು . ಆದರೆ ಪ್ರಕೃತಿಯಲ್ಲಿ ಸಹಜವಾಗಿ ಹೆಣ್ಣಿಗೆ ನಾಚಿಕೆ ಜಾಸ್ತಿ. ಗಂಡು ಸುಲಭವಾಗಿ ನಾಚಿಕೆ ಬಿಡಬಲ್ಲ ಪ್ರಾಣಿ.ಹೆಣ್ಣು ಹಾಗಲ್ಲ. ಸುಲಭವಾಗಿ ನಾಚಿಕೆ ಬಿಡದಂತಹ ನೈಸರ್ಗಿಕ ದೇಣಿಗೆ ಅವಳಿಗಿದೆ.ಆದರೆ ಹೆಣ್ಣು ನಾಚಿಕೆ ಬಿಟ್ಟರೆ ಏನಾದೀತು ಎನ್ನಲು ನಮ್ಮ ಇಂದಿನ ಸಿನೆಮಾಗಳ ನೃತ್ಯ, ಉಡುಗೆ - ತೊಡುಗೆಗಳೇ ಸಾಕ್ಷಿ . ಹಿಂದೆಲ್ಲ ನಾವು ಪಾಶ್ಚಿಮಾತ್ಯರನ್ನು ಉದಾಹರಿಸಿ ನಾಚಿಕೆ ಬಿಟ್ಟವರು ಎನ್ನುವ ಉಧ್ಗಾರಗಳನ್ನೂ  ಮೀರಿ ಇಂದಿನ ಸಿನೆಮಾ ಜಗತ್ತು ಬೆಳೆದಿದೆ. ಆದರೂ ಇಂದಿನ ತಾಯಂದಿರ ಪ್ರಭಲವಾದ ಆಸೆ ತನ್ನ ಮಗಳು ಸಿನೆಮಾ ತಾರೆಯಾಗಲಿ ಎಂಬುದಾಗಿದೆ.

ಯೋಚಿಸಿ .  ಇಂದಿನ ಈ ಎಲ್ಲಾ ವಿಷಮ ಜೀವನ ಬೆಳವಣಿಗೆಗೆ  ಕಾರಣೀಕರ್ತರು  ಸಮಾಜದ ಎಲ್ಲಾ ಸ್ತ್ರೀ - ಪುರುಷರಲ್ಲ.  ಒಟ್ಟಾರೆ ಈ ರೀತಿ ವಿಷಮ  ಮನೋಧರ್ಮದವರು ಹೆಚ್ಚೆಂದರೆ ಶೇಕಡಾ ಹದಿನೈದು ಈಪ್ಪತ್ತು ಇರಬಹುದು ಎಂಬ ಆಶಯ.  ಹೀಗಿರುವಾಗ ನಾವು ದೇಶದ ಎಲ್ಲೆಡೆ ಅತಿ ಭೀಕರ , ಭಯಾನಕ ಅತ್ಯಾಚಾರ ಪ್ರಕರಣಗಳನ್ನು  ಕಾಣುತ್ತಿದ್ದೇವೆ. ಇನ್ನು ಭವಿಷ್ಯದಲ್ಲಿ ನಿಧಾನವಾಗಿ ಈ ವಿಷಮ ಮನೋಭಾವದವರೇ ಹೆಚ್ಚಾದಾಗ ಸಮಾಜದ ಪರಿಸ್ಥಿತಿ ಏನಾದೀತು ?  ಉಡುಗೆ  ತೊಡುಗೆಗಳೇ   ಇಲ್ಲದೆ ಶತ ಶತ ಮಾನಗಳು ಸಾಮಾಜಿಕ ನಿರ್ಭಂಧಗಳಿಂದ ಅತ್ಯಾಚಾರಗಳಿಲ್ಲದೆ ಬದುಕಿದ ಮಾನವ ಇತಿಹಾಸವನ್ನು ನಾವು ಓದುತ್ತೇವೆ ಅಲ್ಲದೆ ಇಂದಿನ ದಿನಗಳಲ್ಲೂ ಪ್ರಪಂಚದ ಕೆಲವಡೆ ಇಂದಿನ ನವ ಜೀವನದ ಸೊಂeಕಿಲ್ಲದೆ ಬದುಕುವ ಉದಾಹರಣೆಗಳನ್ನು ಕಾಣುತ್ತೇವೆ. ಹಾಗಿರುವಾಗ ನವೀನ ರೀತಿಯ ಅಭಿವೃದ್ಧಿಯ ಆವಿಷ್ಕಾರಗಳೇ ಇಂದಿನ ಮಾನವನಿಗೆ ಶಾಪವಾಗಿ ಪರಿವರ್ತಿತವಾಗುತ್ತಿದೆಯೇ ?

ಏನಂತೀರಿ ? ಪ್ರತಿಕ್ರಿಯಿಸಿ.


ಹರಿಹರ ಭಟ್, ಬೆಂಗಳೂರು 
ಶಿಕ್ಷಕ, ಚಿಂತಕ, ವಿಮರ್ಶಕ, ಫೇಸ್ ಬುಕ್ ಬರಹಗಾರ .
December 28 , 2012. 

Tuesday, December 25, 2012


                            ಸ೦ಮ್ಮಾನ ಕಾರ್ಯಕ್ರಮ  ಡಿಸೆಂಬರ್ ೨೫ , ೨೦೧೨ .


"ನಮಗೆ ಈ ಗುರುಗಳ ಸ೦ಬ೦ಧ ಒದಗಿ ಬ೦ದಿದ್ದು ನಮ್ಮ ಸುಕೃತ   ಫಲ. ನಮಗೆ ಸ೦ಮಾನವಲ್ಲ , ಇದು ಗುರು ಆಶೀರ್ವಾದ , ಪ್ರೇರಣೆಯಾಗಿದೆ , ಸೇವೆ ಮಾಡಿದ್ದೇವೆ , ಮಾಡುತ್ತಿದ್ದೇವೆ ಅಂತೆಯೇ ನಮ್ಮ ಸೇವೆ ಮುಂದುವರಿಯುತ್ತಿರುತ್ತದೆ."  ಈ ರೀತಿ ವಿನೀತ ಭಾವದಿಂದ ,  ಭಾವನಾತ್ಮಕವಾಗಿ ನುಡಿದವರು
2011 -12  ರಲ್ಲಿ  1 ,454  ಕೋಟಿ ರೂಪಾಯಿ ವ್ಯವಹಾರ ಮಾಡಿದ, ಸರಕಾರಕ್ಕೆ ಸೂಕ್ತ ಟ್ಯಾಕ್ಸ್ ಗಳನ್ನೆಲ್ಲ ನೀಡಿದ ನ೦ತರ  259  ಕೋಟಿ ರೂಪಾಯಿ ಒಂದು ವರ್ಷದಲ್ಲಿ ಲಾಭ ಗಳಿಸಿದ , 31  ಮಾರ್ಚ್ 2012  ರ೦ದು ಮೂಲ ಬಂಡವಾಳ ಮಾರುಕಟ್ಟೆ ದರದಲ್ಲಿ  6 ,100  ಕೋಟಿ ಗೆeರಿಸಿದ ಇಮಾಮಿ ಲಿಮಿಟೆಡ್ ಕಂಪನಿಯ ರಾಧೆಶ್ಯಾಮ್ ಅಗರ್ವಾಲ್ ಮತ್ತು ರಾಧೆಶ್ಯಾಮ್ ಗೋಯೆಂಕಾ.  ಈ ಮಹನೀಯರ ಕುರಿತು ಎರಡು ಮಾತು.

ರಾಧೆಶ್ಯಾಮ್ ಅಗರ್ವಾಲ್ ಇಮಾಮಿ ಕಂಪನಿಯ ಛೇರ್ಮನ್ ಮತ್ತು ರಾಧೆಶ್ಯಾಮ್ ಗೋಯೆಂಕಾ ಇದೇ ಕಂಪನಿಯ ಡೈರೆಕ್ಟರ್ . ಇಮಾಮಿ ಕಂಪನಿಯನ್ನು ಹುಟ್ಟು ಹಾಕಿದ ಈ ಪ್ರಮುಖರು ಇಂದು ದೇಶದಲ್ಲಿ ಹೆಸರುವಾಸಿ ಕರೋಡ್ಪತಿಗಳಾಗಿದ್ದಾರೆ. ದೇಶದಲ್ಲಿ ಕರೋಡ್ಪತಿಗಳು ತುಂಬಾ ಜನ ಇದ್ದಾರೆ. ಈ ಕರೋಡ್ಪತಿಗಳ   ವಿಶೇಷವೆಂದರೆ ಇವರು ಆಧ್ಯಾತ್ಮಿಕ ಉನ್ನತಿ ಹೊಂದಿದ್ದಾರೆ. ಶ್ರೀ ಕೃಷ್ಣ  ಗೋವರ್ಧನ ಗಿರಿಯನ್ನೆತ್ತಿದ ಎಂದು ನಾವು , ನೀವೆಲ್ಲ ಹೇಳಿದರೆ ಈ ಭಾವನಾ ಜೀವಿ ಕರೋಡಪತಿಗಳು ಆ ಗೋವರ್ಧನ ಗಿರಿಯ ಕಣ ಕಣ ಗಳನ್ನೂ ಶ್ರೀ ಕೃಷ್ಣ ನನ್ನೇ ಕಾಣುತ್ತಾರೆ , ಅಷ್ಟೇ ಅಲ್ಲದೆ ತಮ್ಮ ನುಡಿ ಆಲಿಸುವವರನ್ನು ಅದೇ ಪ್ರಪ೦ಚಕ್ಕೆ   ಒಯ್ಯುತ್ತಾರೆ.  ಭಾರತೀಯ ಕಂಪನಿ ಕಾನೂನಿನಲ್ಲಿ ವಾರ್ಷಿಕ ಶೇಕಡಾ ಲಾಭದ ಎರಡು ಅ೦ಶವನ್ನು ದಾನ ಧರ್ಮಗಳಿಗೆ ನೀಡುವಂತಹ ಅವಕಾಶವಿದೆ, ಈ ಅವಕಾಶವನ್ನು ಸದುಪಯೋಗಪಡಿಸಿ , ರಾಮಚಂದ್ರಾಪುರದ ಗುರುಗಳಂತಹ ಸತ್ಕಾರ್ಯದಲ್ಲಿ ತೊಡಗಿರುವವರ ಜೊತೆ ಕೈ ಜೋಡಿಸಲು ಅವಕಾಶ ಮಾಡುವಂತೆ ನಿಮ್ಮ ಪರಿಚಯದವರನ್ನು ಪ್ರಚೋದಿಸಿ ಎಂದು ಸಾರ್ವಜನಿಕ ಕರೆ ನೀಡುತ್ತಾರೆ.

ಈಚೆ ಆರೆಂಟು ವರ್ಷಗಳ ಹಿಂದೆ ತಾವೆಲ್ಲ ತು೦ಬ ಕಷ್ಟದ  ದಿನಗಳಲ್ಲಿದ್ದಾಗ , ಈ ಗುರುಗಳ ಸಂಪರ್ಕದಲ್ಲಿ ಬಂದೆವು. ಗುರು ಕರುಣೆಯಿಂದ ಕಷ್ಟ ಗಳೆಲ್ಲ ಪರಿಹಾರವಾಗಿ ವೃದ್ಧಿಯ    ಈ ದಿನಗಳನ್ನು ಕಾಣುತ್ತಿದ್ದೇವೆ. ನಮ್ಮ ಸೇವೆ ಸದಾ ಈ ಗುರುಗಳಿಗೆ ಮೀಸಲಿದೆ. ಗುರುಗಳೊಡನೆ ವಿನೋದವಾಗಿ ಮಾತನಾಡುವ ಸಮ್ಮ೦ದವನ್ನು ನಾವು ಹೊಂದಿದ್ದೇವೆ ಜೊತೆ ಜೊತೆಗೆ  ಅದೇ ರೀತಿಯ ಗುರು - ಶಿಷ್ಯ ಆಧ್ಯಾತ್ಮಿಕ ನಂಟು ನಮ್ಮಲ್ಲಿದೆ , ಇದು ನಮ್ಮ ಭಾಗ್ಯ ಎಂದು ಯಾವುದೇ ಹಮ್ಮು - ಬಿಮ್ಮು ಗಳಿಲ್ಲದೆ ಸರಳವಾಗಿ , ಸಹಜವಾಗಿ,  ಕಣ್ಣಾಲಿಗಳನ್ನುತುಂಬಿಕೊಂಡು  ನುಡಿ ನಮನಗಳನ್ನು ಸಲ್ಲಿಸಿದ ಈ ಸಂದರ್ಭಕ್ಕೆ ಸಾಕ್ಷಿಯಾದವರು  ತುಮಕೂರ್ ಯೂನಿವರ್ಸಿಟಿ ವೈಸ್ ಚಾನ್ಸಲರ್  ಡಾ.ಎಸ್.ಸಿ .ಶರ್ಮಾ ಮತ್ತು ಕರ್ನಾಟಕ ಸಂಸ್ಕೃತ ಯೂನಿವರ್ಸಿಟಿ ವೈಸ್ ಚಾನ್ಸಲರ್ ಶ್ರೀ ಮಲ್ಲೇಪುರಂ ವೆಂಕಟೇಶ್.

ದಿನಾ೦ಕ 25.12.2012 ರಂದು ಈ ಕಾರ್ಯಕ್ರಮ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಉಪಸ್ಥಿತಿಯಲ್ಲಿ   , ಶ್ರೀ ಗುರುಗಳ ಆಶಿeರ್ವಚನದೊಂದಿಗೆ ಸಂಪನ್ನಗೊಂಡಿತು.


ಹರಿಹರ ಭಟ್, ಬೆಂಗಳೂರು.
ಶಿಕ್ಷಕ , ಚಿಂತಕ , ವಿಮರ್ಶಕ, ಫೇಸ್ ಬುಕ್ ಬರಹಗಾರ.
December 26 , 2012.

Wednesday, December 19, 2012

ಹೆಣ್ಣಿನ ಮೇಲೆ ಕ್ರೌರ್ಯ - ಮಿಡಿದ ಕಂಬನಿ


                                              ಹೆಣ್ಣಿನ ಮೇಲೆ ಕ್ರೌರ್ಯ -  ಮಿಡಿದ ಕಂಬನಿ




photo , courtesy: Internet



ವ್ಯಕ್ತಿಯಿಂದ ಸಮಾಜ. ಯಾವ ಸಮಾಜದಲ್ಲಿ ಶುದ್ಧ ಚಾರಿತ್ಯದ ವ್ಯಕ್ತಿಗಳಿರುತ್ತಾರೋ ಅಂತಹ ಸಮಾಜದಲ್ಲಿ ಅತಿಯಾದ ಆಚಾರ ಅಂದರೆ ಅತ್ಯಾಚಾರಗಳಿಗೆ ಆಸ್ಪದವೇ ಇರುವದಿಲ್ಲ. ಇಂದಿನ ಭಾಷೆ ಯಲ್ಲಿ ಹೇಳುವದಾದರೆ  ಪೋಲಿಸ್ ಟ್ಹಾಣೆಗಳ   ಅವಶ್ಯಕತೆಯೇ ಇರುವದಿಲ್ಲ.  ವ್ಯಕ್ತಿಯಿಂದ ಸಮಾಜ ಅಂದರೆ ಆ ರೀತಿ ಸುಖಮಯವಾದ ಸಮಾಜ ಒಮ್ಮೆಲೇ ನಿರ್ಮಿತಿಗೊಳ್ಳುವದಿಲ್ಲ  . ವ್ಯಕ್ತಿ , ಸಮಾಜ ಎಂಬ ಈ ಪದ ಪುಂಜದ ಮಧ್ಯೆ ಕುಟುಂಬ ಎಂಬುದೊಂದಿದೆ. ಯಾವುದೇ ಕುಟುಂಬದಲ್ಲಿ ಕೆಟ್ಟ ವ್ಯಕ್ತಿಯೇ ಇಲ್ಲದಿದ್ದರೆ ಸಮಾಜದಲ್ಲಿ ಕೆಟ್ಟ ವ್ಯಕ್ತಿಗಳೇ ಇರುವದಿಲ್ಲ. ಕೆಟ್ಟ ವ್ಯಕ್ತಿಯೇ ಇಲ್ಲದಿರುವಲ್ಲಿ ಕೆಟ್ಟ ಕುಟುಂಬ, ಕೆಟ್ಟ ಸಮಾಜದ ಪ್ರಶ್ನೆಯೇ ಉದ್ಭವಿಸುವದಿಲ್ಲ.  ಇನ್ನು ಸರಳವಾಗಿ ಹೇಳುವದಾದರೆ ಸಿಂಗಪುರ್ ನಂತಹ ಶಹರದಲ್ಲಿ ಹೋಗಿ , " ವಾಟ್ ಇಸ್ ಲಿಟರಿಂಗ್ " ಎಂದರೆ  "ಸೀ ದಿ ಡಿಕ್ಷನರಿ " ಎಂದಾರು , ಅದೇ ಬೆಂಗಳೂರಿನಲ್ಲಾದರೆ    "  ಲಿಟರಿಂಗ್  ಇಸ್ ಲೈಫ್ "  ಎಂದಾರು.



ಶಿಷ್ಣಗಳನ್ನು , ಸ್ತನಗಳನ್ನು, ಪ್ರಸ್ಟಗಳನ್ನೂ   ತಮ್ಮ ವಿಕ್ರತ ಮನೋ ಕಾಮನೆಗಳನ್ನು ತೀರಿಸುವ ಮಾಧ್ಯಮವಾಗಿ ಬಳಸಿಕೊಳ್ಳುವ ಹಾಗು ಆ ರೀತಿಯ ಚಟುವಟಿಕೆಗಳತ್ತ ಆಕರ್ಶಿತವಾಗುವಂತೆ ಪ್ರಚೋದಿಸುವ ,  ನವ ಜನಾಂಗದ ಮುಚ್ಚುಮರೆಯಿಲ್ಲದ ಕ್ರಿಯೆಗಳನ್ನು ಕಂಡೂ ಕಾಣದಂತೆ ಬದುಕುವ ಗೌರವಯುಕ್ತ ಸ್ತಾನಗಳಲ್ಲಿ ವಿಜ್ರಮ್ಭಿಸಿರುವ  ವಯೋಭೆeದವಿಲ್ಲದ ,ಜ್ನಾನ , ಸುಜ್ಞಾನ , ವಿದ್ವಾಂಸ , ದೈವಿe  ಸಂಭೂತ   , ವಿದ್ವತ್ ಪರಂಪರೆಯ ಅಪ್ರತ್ಯಕ್ಷ ಕೊಡುಗೆಯೇ ಇಂದಿನ ದಿನಗಳಲ್ಲಿ ಓಡುವ ವಾಹನಗಳಲ್ಲಿ, ಜನ ನಿಬಿಡ  ರಸ್ತೆಗಳಲ್ಲಿ, ಸಮಾಜದ ಅರ್ಥಿಕ ಬಲಶಾಲಿ  ಸುಂದರ - ಸುಂದರಿಯರಲ್ಲಿ ಮೋಜು ಮಸ್ತಿ ಹೆಸರಿನಲ್ಲಿ ನಡೆಯುವ ಅನಾಚಾರಗಳಿಗೆ ಹೆಚ್ಚಿನ ಕೊಡುಗೆಯೆಂದರೆ ಅತಿಶಯೋಕ್ತಿಯಲ್ಲ.




ಒಮ್ಮೆ ಯೋಚಿಸಿ. ನಮ್ಮ ಕರ್ನಾಟಕವನ್ನೇ ತೆಗೆದುಕೊಳ್ಳಿ. ಆರು ಕೋಟಿ ಕನ್ನಡಿಗರೆಲ್ಲ ಸಬ್ಯ, ಸಹನಶೀಲ, ಸದಾಚಾರದ ವ್ಯಕ್ತಿಗಳಾದರೆ ಸುಖಿ ಸಮಾಜದ ಕಲ್ಪನೆ ಒಮ್ಮೆಲೇ ಸಾಕಾರಗೊಳ್ಳುವದು ತಾನೇ ? ಎಲ್ಲ ಸ್ತ್ರೀ ಪುರುಷರು ಪರಸ್ಪರ ಸೋದರ - ಸೋದರೀ ಭಾವದಿಂದ ನೋಡುವಂತಾದರೆ , ಸ್ತ್ರೀ ಶೋಷಣೆಯ ರಾಕ್ಷಸೀ   ಕ್ರತ್ಯವಾದ  ದೈಹಿಕ ಅತ್ಯಾಚಾರಕ್ಕೆಲ್ಲಿ  ಆಸ್ಪದ ?  ಎಲ್ಲ ಸ್ತ್ರೀ - ಪುರುಷರಲ್ಲಿ ಏಕೋ ಭಾವದಿಂದ ಪರಸೊತ್ತು ಅಪಹರಣದ ವಾಂಚೆಯೇ ಬರದಿದ್ದರೆ  ಅನಾಚಾರಕ್ಕೆಲ್ಲಿ   ಸ್ತಳವಿದೆ ?




ಯಾಕೆ ನಮ್ಮ ಸಮಾಜ ಹೀಗಿದೆ ? ಯಾಕೆ ನಮ್ಮ ಜನ ಹೀಗಿದ್ದಾರೆ ? ಯಾಕೆ ನಾವು ಹೀಗಿದ್ದೇವೆ  ? ಕೇವಲ ಮುರೂ ನೂರು ವರುಷಗಳ ಹಿಂದೆ ಅಂದರೆ ಬ್ರಿಟಿಷರು ನಮ್ಮ ನೆಲವನ್ನು ಹೊಕ್ಕು ಲೂಟಿ  ಮಾಡುವ ಮೊದಲಿದ್ದ ವೈಭವದ ಹಿಂದೂ, ಮುಘಲ್ , ಫ್ರೆಂಚ್, ಪೊರ್ತುಗಿಸ್ ಸಮಾಜದಲ್ಲಿದ್ದ ಆಡಳಿತ ವ್ಯವಸ್ತೆ ಶಿಥಿಲಗೊಂಡು   ಇಂದಿನ   ಹೀನ ಸ್ತಿತಿ   ತಲುಪಲು ಏನು ಕಾರಣ ?  ಜಗತ್ತಿಗೆ ಶಾಂತಿ ಮಂತ್ರ ನೀಡಿದ ಈ ನಾಡಿನಲ್ಲೇಕೆ ಮನುಷ್ಯ ಮೃಗೀಯ ಕಾಮನೆಗೊಳಗಾಗಿ ಮನುಷ್ಯ ಸಂಭಂದಗಳನ್ನೇ ಮರೆತು , ತನ್ನ ರಕ್ತ ಸಂಭಂದಿಗಳನ್ನೇ, ತನ್ನ ಒಡ ನಾಡಿಗಳನ್ನೇ , ತನ್ನ ಸಹ ಜೀವಿಗಳನ್ನೇ ಕಾಮುಕತೆಯಿಂದ ನೋಡುವ ಚಪಲತೆ, ಆಕ್ರಮಣ ಶೀಲತ್ವ, ಹಿಂಸಾ ಮನೋಭಾವ ಬೆಳೆಸಿಕೊಳ್ಳುತ್ತಿದ್ದಾನೆ, ಯಾವುದೇ ಭಯ , ಭಾಧೆಗಳಿಲ್ಲದೆ  ಅಭಯಂಕರನಾಗಿ  ಯಮ ಕಿಂಕರನಾಗಿ ಬದಲಾವಣೆ ಹೊಂದುತ್ತಿದ್ದಾನೆ?



photo , courtesy: Internet





ನಮ್ಮ ಇಂದಿನ ಸಾರ್ವಜನಿಕ ಜೀವನವನ್ನೊಮ್ಮೆ ಅವಲೋಕಿಸಿದರೆ , ಸಾರ್ವಜನಿಕವಾಗಿ ಮಹತ್ವದ ಸ್ತಾನಗಳೆಂದು ಈ ಸಮಾಜ ಯಾವ ಯಾವ ಅಧಿಕಾರದ ಹುದ್ದೆಗಳನ್ನು ಪರಿಗಣಿಸಿದೆಯೋ , ಆ ಸ್ತಾನಗಳನ್ನೆಲ್ಲಾ ವಿಕ್ಷಿಪ್ತ ಮನೋಭಾವದ ಜನರು ಆಕ್ರಮಿಸಿದ್ದಾರೆ ಅಥವಾ ಅಂತಹ ಸ್ತಾನಗಳಲ್ಲಿರುವವರು ಅಸಹಾಯಕರಾಗಿ , ವಿವೇಚನಾ ರಹಿತರಾಗಿ ವಿಕ್ಷಿಪ್ತ ಮನೋಭಾವನೆಯ ಜನಗಳಿಗೆ , ಸ್ವಾರ್ಥ ಲೋಲುಪತೆಯಿಂದ ಸಹಕರಿಸುತ್ತಿದ್ದಾರೆ.  ಈ ವಾಕ್ಯದ ಜೊತೆ ಎಲ್ಲರೂ ಅಲ್ಲ ಎಂದು ಪದ ಪುಂಜ ಸೇರಿಸಲು ನಾಚಿಕೆ ಪಡುವಂತ ಪರಿಸ್ತಿತಿ ಇದೆ.  ಸಮಾಜದಲ್ಲಿ ಸಾಂಸ್ಕ್ರತಿಕ ಹೆಗ್ಗುರುತುಗಳಾದ ಸಂಘ ಸಂಸ್ತೆಗಳಲ್ಲಿ ಮುಖಂಡತ್ವ ವಹಿಸುವವರ ವೈಯಕ್ತಿಕ   ಜೀವನದ ಆಚಾರ ವಿಚಾರಗಳಿಗೂ , ಅವರ ಕಾರ್ಯ ವಿಧಾನಗಳಿಗೂ ಅಜಗಜಾಂತರ ವ್ಯತ್ಯಾಸ ಇಂದಿನದಾಗಿದೆ. ಒಂದು ಉದಾಹರಣೆಯಾಗಿ ಯೋಚಿಸುವದಾದರೆ , ರಸ್ತೆಯಲ್ಲಿ ನಿಂತು ಸಿಗಾರ್ ಸೇದಿ  ಹೊಗೆ  ಉಗುಳುವ, ಸ್ತ್ರಿಲೋಲುಪನಾಗಿರುವ , ಮದಿರಾ ಸೇವನೆಯಲ್ಲಿ ಮುಳುಗೇಳುವ , ಕಲೆಯ ಗಂಧ ಗಾಳಿಯೇ ಇಲ್ಲದಿರುವ ವ್ಯಕ್ತಿಯೊಬ್ಬ ನಾಲ್ಕಾರು ಪೇಂಟಿಂಗ್ ಗಳನ್ನು ಚಿತ್ರಿಸಿ , ತನ್ನ ಆಶ್ರಯದಾತ ( godfather) ನ   ಕ್ರಪೆಯಿಂದ ಜಗದಲ್ಲೆಲ್ಲ ತನ್ನ   ಈ ಪೇಂಟಿಂಗ್  ಪ್ರದರ್ಶಿಸಿ , ಹಿಂದೂ ಸಂಸ್ಕೃತಿಯನ್ನು ಪ್ರತಿನಿಧಿಸುವ ಶ್ರೇಷ್ಟ ಜಗದ್ವಿಕ್ಯಾತ ಸಂಸ್ತೆಯೊಂದರ ಅಧಿಪತಿಯಾಗಿ ಪ್ರತಿಸ್ತಾಪನೆಯಾದಾಗ, ಸಮಾಜದ ಶ್ರೇಷ್ಟರೆಲ್ಲ   ಉಘೆ ಉಘೆ ಎಂದು ತಲೆಬಾಗಿ " ಕುರಿಗಳು ಸಾರ್ ಕುರಿಗಳು  " ಎಂಬ ಜನಾನುರಾಗಿ ಹಾಡನ್ನು ನೆನಪಿಸುವಂತಹ ಸ್ತಿತಿಗೆ ಇಂದು ಈ ಸಮಾಜ ತಲುಪಿದೆ ಎಂದಾದರೆ ಇವಕ್ಕೆಲ್ಲ ಕಾರಣೀಕರ್ತರಾರು   ಎಂದು  ಧೀರ್ಘವಾಗಿ ಯೋಚಿಸುವ ಹಂತ ಇದಾಗಿದೆ.



photo , courtesy: Internet




ನೆನಪಿಸಿಕೊಳ್ಳಿ . ಜೀವನ ನಿರ್ವಹಣೆಗೆ ಅವಶ್ಯಕತೆ   ಎಂದು ಕೆಲಸವನ್ನರಸಿ ದಿನಾಲು ಇಪ್ಪತ್ತೈದು ಮೂವತ್ತು ಕಿಲೋಮೀಟರು ಸಾಗುತ್ತ ತನ್ನ ಅವಲಂಬಿತರಿಗೊಂದು ನೆಮ್ಮದಿಯ ಜೀವನ ನೀಡಬಯಸುವ ಹೆಣ್ಣು ಮಗಳೊಂದು , ದಿನ ನಿತ್ಯ ತಾನು ನೋಡುವ, ತನಗೆ , ತನ್ನ ಕೆಲಸಕ್ಕೆ ಸಹಕಾರಿಯಾಗುಳ್ಳ ವಾಹನ ಚಾಲಕನಿಂದಲೇ ಅತ್ಯಾಚಾರಕ್ಕೆ ಒಳಗಾಗಿದ್ದ ಘಟನೆಯನ್ನು ಸಮಾಜ ಹದಿನೈದು ಇಪತ್ತು   ದಿವಸಗಳಲ್ಲೇ ಮರೆತುಬಿಡುತ್ತದೆ. ನ್ಯಾಯ ವ್ಯವಸ್ತೆಯ೦ತೂ ,  ನ್ಯಾಯಾನ್ಯಾಯ ವಿಮರ್ಶೆಯುನ್ನು ಹಲವಾರು ವರ್ಷಗಳ ಕಾಲ ಎಳೆದು ಎಳೆದು , ಯಾವುದೋ ಅಧಿಕಾರಿ ಸರಿಯಾಗಿ ಕೆಲಸ ನಿರ್ವಹಿಸದಿದ್ದರೆ , ಹೆಣ್ಣು ಮಗಳಿಗಾದ ಅನ್ಯಾಯಕ್ಕೊಂದು ಶಮನ ನಿeಡುವಂಥ, ಸಮಾಜಘಾತುಕರಿಗೊಂದು ಪಾಠ ಪ್ರದರ್ಶಿಸುವಂತಹ  ಅವಕಾಶದಿಂದಲೇ ವಂಚಿತವಾಗುತ್ತದೆ. ಇಂತಾದರೆ ನಾವು ಎಂತಹ ಹೀನಾಯ ಸ್ತಿತಿ ತಲುಪಿರುವ ಸಮಾಜದಲ್ಲಿಂದು ಜೀವಿಸುತ್ತಿದ್ದೇವೆ ಎಂದು ಚಿಂತನೆ ಮಾಡಬೇಕಾಗಿದೆ.



ಈ ಎಲ್ಲ ಅಮಾನವೀಯ ಸ್ತಿತಿ ತಲುಪಿಹ ಸಮಾಜದ ಧನಾತ್ಮಕ ಬದಲಾವಣೆಗೆ ದಾರಿಯಿಲ್ಲವೇ ? ದಾರಿಯಿದೆ. ತಾಯಂದಿರು ಮನಸ್ಸು ಮಾಡಬೇಕು. ಸಮಸ್ಯೆಯ ಆಳ , ಹರಿವುಗಳ ಅರಿವು ಮಾಡಿಕೊಳ್ಳಬೇಕು. ಪರಿಹಾರ ತಮ್ಮಲ್ಲಿದೆ ಎಂಬ ಖಚಿತ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಮಕ್ಕಳು   ದ್ರಢ , ಧನಾತ್ಮಕ, ಸಹನೆಯ ವ್ಯಕ್ತಿತ್ವ ವಾಗಿ ರೂಪುಗೊಳ್ಳಲು   ತಾಯಿ ತನ್ನನ್ನು ಅಣಿಗೊಳ್ಳಿ ಸಬೇಕು  .  ಹದಗೆಟ್ಟ ಸಮಾಜದಲ್ಲಿ ತನ್ನ ಮಗುವಿನ ಜೀವನ ಶೊeಚನೀಯವಾಗಬಾರದೆ೦ಬ  ಆಸೆಯನ್ನು  ತನ್ನ ಮನ ತುಂಬಿಕೊಳ್ಳಬೇಕು ಆ ಮಹಾ ತಾಯಂದಿರು. ಬಾಲ್ಯದಲ್ಲೇ ಮಗುವಿನ ಮನಸ್ಸನ್ನು ಹದಗೊಳಿಸಬೇಕು. ಬಾಲ್ಯದಲ್ಲಿ ಮಗುವಿನ ಮನಸ್ಸನ್ನು ತೀಡಿ ತಿದ್ದುವದು ಸುಲಭ . ಒಮ್ಮೆ  ಹದ ಗೊಂಡ ಮನಸ್ಸು ಎಂದೂ ಬುದ್ಧಿಯ ಮೇಲೆ ಸವಾರಿ ಮಾಡಲಾಗದು ಎಂಬ ಸತ್ಯವನ್ನು ತಾಯಂದಿರು ಅರಿಯಬೇಕು ಮತ್ತು ತಮ್ಮ ತ್ಯಾಗ, ಶ್ರಮದಿಂದ ರೂಪುಗೊಳ್ಳುವ ತಮ್ಮ ಮಕ್ಕಳ ಭವಿಷ್ಯವನ್ನು ನೋಡಿ ಆನಂದತುಲಿತರಾಗುವ ಭಾಗ್ಯವಂತರಾಗಲು ಪಣತೊಡಬೇಕು.



ಇಂದಿನ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ , ವಯಸ್ಸಿಗೆ ಬಂದವರೆಲ್ಲ ಮತ ಹಾಕಿ ಪ್ರತಿನಿಧಿಯನ್ನಾರಿಸುವ ರೂಡ್ಹಿಯಲ್ಲಿ  , ಅಷಿಕ್ಷಿತರೆe ಹೆಚ್ಚಿರುವಾಗ ಹಾಗೂ ಇಂದಿನ ಶಿಕ್ಷಣ ಕೇವಲ ಉದ್ಯೋಗಕ್ಕೊಂದೆ ದಾರಿಯಾಗಿ, ಜೀವನ ಮೌಲ್ಯಗಳು ಇಲ್ಲದಾಗುತ್ತಿರುವ ಕಾಲದಲ್ಲಿ ಮತದಾರರಿಂದೇನು ಬದಲಾವಣೆ ನಿರೀಕ್ಷಿಸುವಂತಿಲ್ಲ. ಇನ್ನು ಹೆಚ್ಚಾಗಿ ರಾಜಕೀಯ ನೇತಾರರು ಮತ ಖರೀದಿಗೆ ಹೊಸ ಹೊಸ ವಿಧಾನಗಳನ್ನು ಅನುಸರಿಸುತ್ತಿರುವದರಿಂದ , ಮತದಾರರಿಂದ ಚುನಾಯಿಸಲ್ಪಡುವ ಈ ನೇತಾರರಿ೦ದಲೂ ಯಾವುದೇ ತೆರನಾದ ಸಾಮಾಜಿಕ ಮೌಲ್ಯ ನಿರೀಕ್ಷಿಸುವಂತಿಲ್ಲ.ಇಂತಿಪ್ಪ ಪರಿಸ್ತಿತಿಯಲ್ಲಿ ಪ್ರತಿ ಕುಟುಂಬದಲ್ಲಿರುವ ಮಾತೆಯರೇ ಇಂದಿನ, ನಾಳಿನ ಮತ್ತು ಎಂದೆಂದಿನ ಆಶಾಕಿರಣವಾಗಿ ಗೋಚರಿಸುತ್ತಾರೆ.  



ದೆಹಲಿಯ ರಸ್ತೆಯಲ್ಲಿ ಓಡುವ ವಾಹನವೊಂದರಲ್ಲಿ ಪುಂಡರ ಕಾಮ ತ್ರಷೆಗೊಳಗಾದ ಹೆಣ್ಣು ಮಗಳೊಬ್ಬಳು ಆಸ್ಪತ್ರೆಯಲ್ಲಿ ಜೀವನ ಮರಣ ಹೋರಾಟದಲ್ಲಿರುವ ಸುದ್ದಿಯ ತುಣುಕೊಂದನ್ನು ಓದಿದಾಗ ಮನಮಿಡಿದು ಈ ಪದ ಗುಚ್ಚಗಳು ಹೊರಬಂದಿವೆ. ಈ ರೀತಿ ಘಟನೆಗಳು ಮರುಕಳಿಸದಿರಲಿ ಎಂದು ಆಶಿಸಿ ದೈವದ ಮೊರೆ   ಹೋಗುವದನ್ನು ಉಳಿದು ಇನ್ನ್ಯಾವುದೇ ಪರಿಹಾರವಿಲ್ಲದ ಶೋಚನೀಯ ಸ್ತಿತಿ ಇಂದಿನದಾಗಿದೆ. ಮ್ರದು  ಮನಸ್ಸಿನವರಿಗನ್ತೂ  ಕಂಬನಿ ಮಿಡಿಯುವದೊಂದೇ ತೋಚುವ ದಾರಿ . ಆ ಹೆಣ್ಮಗಳ ಆರೋಗ್ಯ ಸುಧಾರಿಸಲೆಂದು ಕಂಬನಿ ಸುರಿಸಿ ಪ್ರಾರ್ಥಿಸಿಬಿಡಿ.



ಹರಿಹರ ಭಟ್, ಬೆಂಗಳೂರು.
ಶಿಕ್ಷಕ , ಚಿಂತಕ, ವಿಮರ್ಶಕ, ಫೇಸ್ ಬುಕ್ ಬರಹಗಾರ.
hariharbhat@gmail.com
December 20 , 2012.

Photograph of the writer.




Sunday, December 16, 2012

About Modi , Anantkumar.


ಓದಿ ,  ನಿಮ್ಮ ಪ್ರತಿಕ್ರಿಯೆ ನೀಡಿ:

______________________________________________________________


ಮೋದಿ ವರದಿ ಓದುತ್ತಿದ್ದೇನೆ. ಒಂದು ವಿಚಾರ . ಮೋದಿ ಯಾವುದೇ ವೋಟ್ ಬ್ಯಾಂಕ್ ಸಮುದಾಯಕ್ಕೆ ಸೇರಿದವರಲ್ಲ. ಆದರೂ ಗೆಲ್ಲುವ ಕುದುರೆಯಾಗಿದ್ದಾರೆ. ಕೇವಲ ಅಧಿಕಾರವೊಂದೆ ಅವರನ್ನು ಈ ಹಂತಕ್ಕೆ   ತಂದು ನಿಲ್ಲಿಸಿದೆ ಅನ್ನುವಂತಿಲ್ಲ. ಸಿಕ್ಕ ಅವಕಾಶಗಳನ್ನು ಬಳಸಿ ಎಲ್ಲೆಡೆ ವಿಜಯಿಯಾಗುತ್ತಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ ಆಗಲೇ ಅಮೆರಿಕಾದಿಂದ ವಾಪಸ್ಸಾದ ಉದ್ಯಮಿಯೊಬ್ಬರನ್ನು , ಭಾವಿ ಮುಖ್ಯಮಂತ್ರಿಯನ್ನಾಗಿಸಿ   , ಪ್ರಧಾನಮಂತ್ರಿ ಗದ್ದುಗೆಯತ್ತ ನೋಟವಿಟ್ಟಿದ್ದಾರೆ.


ಸಹಜವಾಗಿ ನಾವು ಕರ್ನಾಟಕದವರು ಈ ರೀತಿ ಚಟುವಟಿಕೆಗಳನ್ನು ಬೆಂಗಳೂರಿನ ಅನಂತಕುಮಾರರವರಿಂದ ನಿರೀಕ್ಷಿಸುತ್ತೇವೆ. ಮುಂದಾಳತ್ವದ ಗುಣಗಳಿಗೆ ಕೊರತೆಯಿಲ್ಲದ ಅನಂತಕುಮಾರರವರಲ್ಲಿ ಬೇಕಾದಷ್ಟು , ಸಾಕಾಗುವಸ್ಟು ಧನಲಕ್ಷ್ಮಿ ಸೇರಿದ್ದಾಳೆ.  ವಿಷಾದದ ವಿಷಯ , ಚುನಾವಣಾ ಸಮಯದಲ್ಲಿ ಕ್ಷೇತ್ರದಲ್ಲಿ ಗೆಲ್ಲಲು ಸಾಕಷ್ಟು ತಿಣುಕಾಡಬೇಕಾಯಿತು ನಮ್ಮ ಅನಂತಕುಮಾರರು.


ಮೋದಿಯಂತೆ ನಮ್ಮ ಅನಂತಕುಮಾರರವರು ವೋಟ್ ಬ್ಯಾಂಕ್ ಅಲ್ಲದ / ಆಗದ ಸಮುದಾಯಕ್ಕೆ ಸೇರಿದವರು. ಆದರೆ ಮೋದಿಯಂತೆ ಮೈ ಚಳಿ ಬಿಟ್ಟು ರಾಜಕೀಯ ಮಾಡುತ್ತಿಲ್ಲವೇ ಅನಿಸುತ್ತದೆ. ಒಂದು ರೀತಿ ಅಕ್ಕ ಬರಬೇಕು , ಅಕ್ಕಿ ಖರ್ಚಾಗಬಾರದು ಎಂಬಂತಹ ಮನಸ್ತಿತಿ ಹೊಂದಿದ್ದಾರೆಯೇ ಅನ್ನಿಸುವದಿಲ್ಲವೇ ?  


ಈಗ ಇರುವದು ಸುಸಮಯ. ಆಚೆ ಕೆ.ಜೆ.ಪಿ ಎಂದು ಒಂದು ವಿಘ್ನ  ಪರಿಹಾರವಾಗಿದೆ.  ಈಗ ಮಾಡು ಇಲ್ಲ ಓಡು ಎನ್ನುವಂತೆ ಅನಂತಕುಮಾರ ಕಾರ್ಯಪ್ರವತ್ತವಾಗಬೇಕಾಗಿದೆ. ಒಬ್ಬ ಸಜ್ಜನ ರಾಜಕೀಯ ಮುಖಂಡನ ಕೈಯಲ್ಲಿ ಅಧಿಕಾರ ಸಿಕ್ಕರೆ ಜನಸಾಮಾನ್ಯನಿಗೆ ಒಳಿತಾಗುವಂತಹ   ಹತ್ತಾರು ಕಾರ್ಯಕ್ರಮಗಳಾದಾವು , ಕಸದಂತಹ ಚಿಲ್ಲರೆ ಸಮಸ್ಯೆಗಳು ಬೆಟ್ಟದಂತಾಗದೆ , ಹತ್ತಾರು ವರ್ಷಗಳಲ್ಲೂ ನೆನಪಿನಲ್ಲುಳಿಯುವಂತಹ ಆಡಳಿತ ಕೊಟ್ಟಾರು ಎಂಬ ಚಿಕ್ಕದೊಂದು ಆಸೆ.


ಹರಿಹರ ಭಟ್ , ಬೆಂಗಳೂರು.
ಶಿಕ್ಷಕ , ಚಿಂತಕ , ವಿಮರ್ಶಕ , ಫೇಸ್ ಬುಕ್ ಬರಹಗಾರ.
ಡಿಸೆಂಬರ್ ೧೭ , ೨೦೧೨.

Prakash Hegde , Kalasi , Sagar.


ಹಳ್ಳಿಯಲ್ಲಿ ಹುಟ್ಟಿ ಬೆಳೆದು , ಉದ್ಯೋಗ ಅರಸಿ ಬೆಂಗಳೂರು ಸೇರುವದು ಸಾಮಾನ್ಯ. ಆದರೆ ಬೆಂಗಳೂರು ಸೇರಿ ಉದ್ಯೋಗ ಮಾಡುತ್ತಾ ತಮ್ಮ ನೆಲೆಯ ಸನಾತನ ಸಂಸ್ಕೃತಿಯ ಗುಣ ಲಕ್ಷಣಗಳನ್ನು ಉಳಿಸಿ ಬೆಳೆಸಿಕೊಳ್ಳುತ್ತಾ ಜೀವನದಲ್ಲಿ ಮುಂದೆ ಸಾಗುವದು ಎಲ್ಲರಿಗೂ ಸಿದ್ಧಿಸುವದಿಲ್ಲ. ಆ ರೀತಿ ಸಿದ್ಧಿ ಪಡೆದ ಇಂದಿನ ನವ ಜನಾಂಗದ ಪ್ರಮುಖರಲ್ಲೊಬ್ಬರು   ನಮ್ಮ ನಿಮ್ಮೆಲ್ಲರ ಮಧ್ಯೆ ಇದ್ದಾರೆ. ಅವರೇ ಸಾದಾ ಸೀದಾ ನಮ್ಮ ನಿಮ್ಮೆಲ್ಲರ ಜೊತೆ ಸ್ನೇಹ ಪ್ರೀತಿಯಿಂದ ಓಡಾಡುತ್ತಿರುವ ಪ್ರಕಾಶ್ ಹೆಗಡೆ ಕಲಸಿ ಇವರು.

ಪ್ರಕಾಶ್ ಬಟ್ಟೆ ತೊಟ್ಟು , ತಿಲಕ ಇಟ್ಟು ಸುಮ್ಮನೆ ಮೆರೆದಾಡುವ ವ್ಯಕ್ತಿಯಲ್ಲ, ತಂದೆ ತಾಯಿಯರಿಂದ ಬಳುವಳಿಯಾಗಿ ಬಂದ ಸನಾತನ ಸಂಸ್ಕೃತಿಯ ಗುಣ ಲಕ್ಷಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬೆಂಗಳೂರಿಗೆ ಬಂದವರು , ಸಮಾನ ಮನಸ್ಕ ಮಿತ್ರರಿನ್ದೊಡಗೂಡಿ ಕಳೆದ ಇಪ್ಪತ್ತೆರಡು ವರ್ಷಗಳಿಂದ , ಮಲ್ಲೇಶ್ವರದ ಸಿದ್ಧಿವಿನಾಯಕನ ಸೇವೆಯಾಗಿ ಕಾರ್ತೀಕ ಮಾಸದಲ್ಲಿ ಕಾರ್ತಿಕ ದೀಪೋತ್ಸವ ನಡೆಸುತ್ತ ಬಂದಿದ್ದಾರೆ. ಇಷ್ಟೇ ಅಲ್ಲ ಆ ದಿನ ತಮ್ಮ ಭಂದು ಮಿತ್ರರನ್ನೆಲ್ಲ ಆಮಂತ್ರಿಸಿ , ಪ್ರಸಾದ ವಿತರಣೆಯೊಂದಿಗೆ ಸಿಹಿ ಹಂಚುತ್ತಾ ಬಂದಿದ್ದಾರೆ. ಪ್ರಕಾಶ್ ಗಳಿಸಿದ ಜನ ಪ್ರೀತಿಯನ್ನರಿಯಲು ಆ ದಿನ ಸೇರುವ ನಾಲ್ಕು ನೂರರಿನ್ದ ಐದು ನೂರು ಜನರೇ ಸಾಕ್ಷಿ.  

ಪ್ರಕಾಶ್ ರವರ  ಪತ್ನಿ  ಕಸದಿಂದ ರಸ ತೆಗೆಯುವ ಕಲಾವಿದೆ . ಎತ್ತಿ ಬಿಸಾಕುವ ತರಕಾರಿ ತ್ಯಾಜ್ಯಗಳು , ಗಾಳಿಯಲ್ಲಿ ತೂರಿಹೊeಗುವ ಒಣ ಎಲೆಗಳು , ಹರಿದ ಅಂಗಿಯ ಗುಂಡಿಗಳು ಇತ್ಯಾದಿ.... ನಾವು ನೀವೆಲ್ಲ ಅನುಪಯೋಗಿ ಎಂದು ಭಾವಿಸುವ ವಸ್ತುಗಳನ್ನುಪಯೋಗಿಸಿ , ಮನಕ್ಕೆ ಮುದ ನೀಡುವ ರಂಗೋಲಿಗಳನ್ನು ಚಿತ್ತಾರವನ್ನಾಗಿಸುತ್ತಾರೆ .   ನಗು ಮುಖದ ಈ ಮಹಿಳೆ ತನ್ನ ಕಲಾಕೃತಿಗಳನ್ನು ವೀಕ್ಷಿಸಿದವರ ಮುಖದಲ್ಲಿ ಸಂತಸವನ್ನು ಸಂಮೊeಹಗೊಳಿ ಸುತ್ತಾರೆ.

ಈ ದಂಪತಿಗೆ   ಧನ್ಯತೆ  ನೀಡುವ ಮಗನೊಬ್ಬನಿದ್ದಾನೆ.  ಭರತನಾಟ್ಯ ಪ್ರವೀಣ , ಐಡಿಯಾ ಮೊಬೈಲ್ ಕಂಪನಿಯ  ರಾಜ್ಯ ಮಟ್ಟದ ಸ್ಪರ್ಧೆಯ ವಿಜಯಿ, ಹತ್ತನೇ ತರಗತಿಯ ಫಲಿತಾಂಶದಲ್ಲಿ ಶೇಕಡಾ ತೊಂಭತ್ತಾರು ಅಂಕ ಗಳಿಸಿ , ಮೂಡುಬಿದರೆಯ   ಆಳವಾಸ್ ನಲ್ಲಿ ಓದುತ್ತಿರುವ ಈತನ ಹೆಸರು  ಪ್ರಭವ . ಈ ಪ್ರಭವನನ್ನು ಪ್ರಕಾಶಿಸಿದ ಪ್ರಕಾಶ್ ದಂಪತಿ ಒಬ್ಬಳು ಚೈತ್ರಾಗೆ ಅವಕಾಶ ನೀಡಲಿಲ್ಲ ಎನ್ನುವದೇ ಸೋಜಿಗ !

ಈ ದಂಪತಿಯ  ಸ್ನೇಹಪೂರ್ವಕ ಮಾತುಗಳನ್ನಾಲಿಸಲು ಕರೆಮಾಡಬಹುದಾದ ಸಂಪರ್ಕ ಇಲ್ಲಿದೆ:
  Prakash Hegde , kalasi , Sagar  ( resident of Bangalore)
Kamadhenu Associates - 9886555162 - 7353218366 - 080 23326321 -
Tax Consultants and Auditors - Insurance Advisors - LIC and Star Health


written By :  ಹರಿಹರ ಭಟ್ , ಬೆಂಗಳೂರು
                      ಡಿಸೆಂಬರ್ ೧೭ , ೨೦೧೨.